ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 26 ಮಂಗಳವಾರ 2022

ಆಡಳಿತಾರೂಢರ ಕೈಗೊಂಬೆಯಾಗದಿರಲಿ!

‘ಅಸ್ಪೃಶ್ಯ ಮಹಿಳೆ ತನ್ನ. ಕಾಲೂರಿ ನಿಲ್ಲಬೇಕಾದರೆ ಅವಳಿಗೆ ಸ್ವಾವಲಂಬನೆ ಬೇಕು. ಮುಕ್ತ ಹಾಗೂ ಸ್ವತಂತ್ರ ಶಿಕ್ಷಣ ಅವಳಿಗೆ ಲಭಿಸಬೇಕು..
ಮಹಿಳೆಯರ ಸಹಯೋಗವಿಲ್ಲದೆ ಏಕತೆ ಅರ್ಥಹೀನ.’

‘ಶಿಕ್ಷಿತ ಮಹಿಳೆಯರಿಲ್ಲದೆ ಶಿಕ್ಷಣವು ಫಲಪ್ರದವಾಗುವುದಿಲ್ಲ ಮತ್ತು ಮಹಿಳೆಯರ ಶಕ್ತಿಯಿಲ್ಲದೆ ಹೋರಾಟವು ಅಪೂರ್ಣವಾಗುತ್ತದೆ. ದೇಶ/ಸಮಾಜ/ ಸಮುದಾಯದ ಪ್ರಗತಿಯನ್ನು ಅಲ್ಲಿನ ಮಹಿಳೆಯರು ಸಾಧಿಸಿರುವ ಪ್ರಗತಿಯ ಮಟ್ಟ ನೋಡಿ ಅಳೆಯುತ್ತೇನೆ.’

ಮೇಲಿನ ಎರಡು ಸಂದೇಶಗಳನ್ನು ಹೇಳಿದ್ದು ಅಂಬೇಡ್ಕರ್. ಆದಿವಾಸಿ ಬುಡಕಟ್ಟು ಮಹಿಳೆ ದ್ರೌಪದಿ ಮೂರ್ಮ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ದೇಶದ ೧೫ನೇ ರಾಷ್ಟ್ರಪತಿ ಆಗಿ ಆಯ್ಕೆಯಾಗುವ ಮೂಲಕ ದೇಶಾದ್ಯಂತ ಹೊಸ ಭರವಸೆ ಮೂಡಿಸಿದ್ದಾರೆ!
ಓಡಿಸ್ಸಾದ ಬುಡಕಟ್ಟು ಕುಗ್ರಾಮದಿಂದ ದೇಶದ ಅತ್ಯುನ್ನತವಾದ ಶ್ರೇಷ್ಟ ಪದವಿವರೆಗೆ ಸಾಗಿದ ದ್ರೌಪದಿ ಮುರ್ಮು ಅವರ ಮೇಲೆ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನದ ಮೂಲ ಆಶಯಗಳು ಅಧಃಪತನಕ್ಕೆ ಇಳಿಯದಂತೆ ರಕ್ಷಿಸುವ ಹೊಣೆ ಮತ್ತು ಅದರ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿದು ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಕ್ಕೆ ಪಾರದರ್ಶಕ ಸಂದೇಶ ರವಾನಿಸಬೇಕಿದೆ. ತಮ್ಮ ಕೆಲಸ, ಕಾರ್ಯಗಳ ಸಮರ್ಪಣೆಯಿಂದ ದೇಶಾದ್ಯಂತ ಕೋಟ್ಯಂತರ ಮಹಿಳೆಯರು, ಸಮಸ್ತ ಕಾರ್ಮಿಕ ವರ್ಗ ಮತ್ತು ಖಿನ್ನತೆಗೆ ಒಳಗಾದ ವರ್ಗದ ಜನರಿಗೆ ಸ್ಫೂರ್ತಿ ನೀಡಬೇಕಿದೆ.

ಸುಶಿಕ್ಷಿತ ಮಹಿಳೆ ಸುಶಿಕ್ಷಿತ ದೇಶದ ಸಂಕೇತ ಎಂದೇ ಹೇಳುತ್ತಾರೆ. ಸದ್ಯ ಆಯ್ಕೆಯಾಗಿರುವ ಮೂರ್ಮು ಅವರು ಕೆ.ಆರ್. ನಾರಾಯಣ್ ಹಾಗೂ ಅಬ್ದುಲ್ ಕಲಾಂ ರೀತಿಯಲ್ಲಿ ಕಾರ್ಯ ನಿರ್ವಹಿಸಲಿ. ದೇಶದ ಸಮಗ್ರ ಒಳಿತಿಗಾಗಿ ಸಂದರ್ಭ, ಸನ್ನಿವೇಶ ಅವಲೋಕಿಸಿ ಅಧಿಕಾರದಲ್ಲಿರುವ ಪಕ್ಷದ ಕೈಗೊಂಬೆಯಾಗದೆ ಸ್ವಯಂ ನಿರ್ಧಾರ ಕೈಗೊಳ್ಳುತ್ತ ಜನರ ರಾಷ್ಟ್ರಪತಿಯಾಗಿ ತಮಗೆ ಸಿಕ್ಕ ಸಂವಿಧನಾತ್ಮಕ ಅಧಿಕಾರ ಸಮರ್ಪಕವಾಗಿ ಬಳಸಲಿ. ದೇಶದ ಒಳಿತಿಗಾಗಿ ಶ್ರಮಿಸಲಿ
– ಅನಿಲ್ ಕುಮಾರ್, ನಂಜನಗೂಡು.


ನೀರಜ್ ಚೋಪ್ರಾಗೆ ಅಭಿನಂದನೆ

ಅಥ್ಲೆಟಿಕ್ ಚಾಂಪಿಯನ್ ಶಿಪ್ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಚಾರಿತ್ರಿಕ ಸಾಧನೆಗೈದ ನೀರಜ್ ಚೋಪ್ರಾಗೆ ಅಭಿನಂದನೆಗಳು. ಅಥ್ಲೆಟಿಕ್ ವಿಶ್ವಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಜಾವಲಿನ್ ಎಸೆತಗಾರನೊಬ್ಬ ಪದಕ ಗೆದ್ದಿದ್ದು ಇದೆ ಮೊದಲ ಪ್ರಯತ್ನದಲ್ಲೆ ಭಾರತಕ್ಕೆ ಬೆಳ್ಳಿ ಪದಕದ ಉಡುಗೊರೆಯನ್ನೇ ನೀಡಿದ್ದಾರೆ. ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ೧೯ ವರ್ಷಗಳ ಬಳಿಕ ಭಾರತಕ್ಕೆ ಒಲಿದ ಮೊದಲ ಪದಕ ಇದು. ಇದು ಭಾರತೀಯರ ಪಾಲಿಗೆ ವಿಶೇಷ ಕ್ಷಣವಾಗಿದೆ. ನೀರಜ್ ಅವರ ಮುಂಬರುವ ಪ್ರಯತ್ನಗಳಿಗೆ ಶುಭ ಹಾರೈಕೆಗಳು.
-ದೀಕ್ಷಾ. ಹೆಚ್, ಮಹಾರಾಜ ಕಾಲೇಜು, ಮೈಸೂರು.


ಮಣ್ಣಿನ ಮಕ್ಕಳು ಮೇಲ್ಮೆಗೆ

ಓಡಿಸ್ಸಾ ರಾಜ್ಯದ ಕಾಂಗ್ರೆಸ್ ಶಾಸಕರೊಬ್ಬರು, ತಮ್ಮ ಪಕ್ಷದ ಹೈಮಾಂಡ್ ನಿರ್ದೇಶನವನ್ನು ಧಿಕ್ಕರಿಸಿ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಜಪದ ಆ್ಯಭ್ಯರ್ಥಿ ದ್ರೌಪದಿ ಮುರ್ಮುರವರಿಗೆ ಮತ ಹಾಕಿದ್ದಾಗಿ ಹೇಳಿಕ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಣ್ಣಿನ ಮಕ್ಕಳು ಪರಿಕಲ್ಪನೆಯನ್ನು ಪಾಲಿಸಿದ್ದಾಗಿ ಹೇಳಿದ್ದಾರೆ. ದಶಕಗಳಕ ಹಿಂದೆ ಮಹಾರಾಷ್ಟ್ರದ ಪ್ರತಿಭಾ ಪಾಟೀಲರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದಾಗ ವಿರೋಧಪಕ್ಷಗಳ ಕರೆಯನ್ನು ಧಿಕ್ಕರಿಸಿ ಶಿವಸೇನೆಯವರು ಮರಾಠಾ ಅಸ್ಮಿತೆಯನ್ನು ಪಾಲಿಸಿದ್ದರು. ವರ್ಷಗಳ ಹಿಂದೆ ಕರ್ನಾಟಕದಲ್ಲಿ ವೆಂಕಯ್ಯನಾಯ್ಡು ಮತ್ತು ಶಕುಂತಲಾ ಹೆಗಡೆಯವರು ರಾಜ್ಯಭೆಗೆ ಸ್ಪರ್ದಿಸಿದಾಗ, ಕರ್ನಾಟಕದ ಶಾಸಕರು ಹೈಕಮಾಂಡನ್ನು ಧಿಕ್ಕರಿಸಲಾಗದೆ ತಮ್ಮ ಪ್ರಥಮ ಪ್ರಾಶಸ್ತ್ಯ ಮತವನ್ನು ವೆಂಕಯ್ಯ ನಾಯ್ಡು ಅವರಿಗೆ ನೀಡಿದರು. ದೇಶದ ಎಲ್ಲಾ ಕಡೆ ಪಾಲಿಸುವ ಮಣ್ಣಿನ ಮಕ್ಕಳು ಪಾಲಿಸಿ ಕರ್ನಾಟಕದಲ್ಲಿ ಅಘೋಷಿತವಾಗಿ ನಿಷೇಧಿಸಲಾಗಿದಂತೆ ಕಾಣುತ್ತದೆ.

-ರಮಾನಂದ ಶರ್ಮಾ, ಬೆಂಗಳೂರು.

 

 

andolana

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ ; ಜೂನ್‌ 4 ಗುರುವಾರ

32 mins ago

ವಿಧಾನಪರಿಷತ್‌ ಚುನಾವಣೆ: ಹರಿಪ್ರಸಾದ್‌ ಸೇರಿ ನಾಲ್ವರಿಗೆ ಕಾಂಗ್ರೆಸ್‌ ಟಿಕೆಟ್‌

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್‌ ನಾಲ್ಕು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಒಟ್ಟು ಏಳು ಸ್ಥಾನಗಳು ಖಾಲಿ ಇದ್ದು, 4…

12 hours ago

ನೂತನ ಸಿಎಂ ಡಿ.ಕೆ.ಶಿವಕುಮಾರ್‌ಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ

ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ…

13 hours ago

ಡಿಸಿಎಂ ಆಗಿ ಪರಮೇಶ್ವರ್‌ ಮತ್ತು 12 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಅವರಿಂದು ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ 13 ಮಂದಿ ಶಾಸಕರು(ಓರ್ವ ಎಂಎಲ್‌ಸಿ…

14 hours ago

ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದ ಸಂಭ್ರಮದ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರು ರಾಜ್ಯದ 25ನೇ…

16 hours ago

ಸೋನಿಯಾ ಗಾಂಧಿ ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವೆ: ಡಿಕೆಶಿ

ಬೆಂಗಳೂರು: ಸೋನಿಯಾ ಗಾಂಧಿ ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ. ಈ ಕುರಿತು ಮಾತನಾಡಿದ…

16 hours ago