ಹಾಡು ಪಾಡು

ಸಂವಿಧಾನ ನಮ್ಮ ಬಳಿ ಇದೆ, ಆದರೆ ಅದರ ಧ್ವನಿ ಎಲ್ಲಿದೆ?

ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ವಾಸ್ತವದಲ್ಲಿ ನಾವು ಎಷ್ಟು ಮುಕ್ತರಾಗಿದ್ದೇವೆ? ಭ್ರಷ್ಟಾಚಾರ, ಪರಿಸರ ನಾಶ, ಮಾಲಿನ್ಯ ಹಾಗೂ ಆಡಳಿತ ವೈಫಲ್ಯಗಳ ಕುರಿತು ಸಾರ್ವಜನಿಕ ಚರ್ಚೆಗಳು ಕೆಲವೇ ದಿನಗಳಿಗೆ ಸೀಮಿತವಾಗುತ್ತವೆ. ಸಾಮಾಜಿಕ ಮಾಧ್ಯಮ ಗಳಲ್ಲಿ ಆರಂಭವಾಗುವ ಚರ್ಚೆಗಳು ಶೀಘ್ರದಲ್ಲೇ ಬೇರೆ ವಿಷಯಗಳತ್ತ ತಿರುಗಿಬಿಡುತ್ತವೆ. ಇದು ಸಹಜ ಮರೆವೆಯೇ, ಅಥವಾ ಉದ್ದೇಶಿತ ಮೌನವೇ ಎಂಬ ಪ್ರಶ್ನೆ ಅನಿವಾರ್ಯವಾಗಿ ಎದುರಾಗುತ್ತದೆ.

ಯುವಜನತೆಗೆ ಉದ್ಯೋಗ ಒದಗಿಸುವ ವಿಷಯದಲ್ಲಿ ಸರ್ಕಾರದ ಭರವಸೆಗಳು ಚುನಾವಣಾ ಭಾಷಣಗಳ ಮಟ್ಟದಲ್ಲೇ ಉಳಿದಿವೆ. ಶಿಕ್ಷಣ ಪೂರ್ಣಗೊಳಿಸಿದ ನಂತರ ಅರ್ಹತೆಯಿದ್ದರೂ ಯುವಕರು ಉದ್ಯೋಗವಿಲ್ಲದೆ ಅಲೆ ದಾಡುತ್ತಿರುವುದು ಕಟುವಾದ ವಾಸ್ತವ. ಕೇವಲ ಭರವಸೆಗಳಲ್ಲ, ಕಾನೂನಿನಲ್ಲೇ ಯುವ ಜನತೆಗೆ ಉದ್ಯೋಗ ಒದಗಿಸುವ ಸ್ಪಷ್ಟ ಯೋಜನೆ ಇರಬೇಕಲ್ಲವೇ?

ಯುವಕರಲ್ಲಿ ಕೌಶಲವಿಲ್ಲ ಎಂಬ ಸಮಸ್ಯೆಗೆ ಕಾರಣ ಕೌಶಲಾಭಿವೃದ್ಧಿಗೆ ಅಗತ್ಯವಿರುವ ಸ್ಪಷ್ಟ ನೀತಿ, ಹೂಡಿಕೆ ಮತ್ತು ಮಾರ್ಗದರ್ಶನದ ಕೊರತೆ. ಓದಿದವರು ನಿರುದ್ಯೋಗಿಗಳಾಗುತ್ತಿರುವಾಗ, ಓದನ್ನು ಬಿಟ್ಟು ಡಿಜಿಟಲ್ ಕಂಟೆಂಟ್ ಸೃಷ್ಟಿ ಅಥವಾ ವ್ಯಾಪಾರ ದಲ್ಲಿ ತೊಡಗಿದವರು ಯಶಸ್ಸು ಕಾಣುತ್ತಿರುವುದು ವ್ಯಕ್ತಿಗತ ಆಯ್ಕೆಯಲ್ಲ; ವ್ಯವಸ್ಥೆಯ ವೈಫಲ್ಯವನ್ನು ಸೂಚಿಸುತ್ತದೆ. ಕಂಟೆಂಟ್ ಸೃಷ್ಟಿಯೂ ಒಂದು ಕೌಶಲವೇ; ಆದರೆ ಅದಕ್ಕೂ ಸೂಕ್ತ ತರಬೇತಿ ಮತ್ತುನಿಯಂತ್ರಣ ಅಗತ್ಯ. ನನ್ನನ್ನು ಇನ್ನೂ ಕಾಡುವ ಪ್ರಶ್ನೆಗಳು ವೈಯಕ್ತಿಕವಾಗಿಯೂ ಸಮಾಜಮುಖಿಯಾಗಿಯೂ ಇವೆ. ಒಬ್ಬ ಮಹಿಳೆಯಾಗಿರುವ ಕಾರಣ ಇಂದಿಗೂ ಕತ್ತಲಾಗುವ ಮೊದಲು ಮನೆ ತಲುಪಬೇಕೆಂಬ ಅಲಿಖಿತ ನಿಯಮ ಏಕೆ? ಸುರಕ್ಷತೆ ಎನ್ನುವುದು ಮಹಿಳೆಯ ಹೊಣೆಗಾರಿಕೆಯೇ? ಅದು ರಾಜ್ಯದ ಜವಾಬ್ದಾರಿಯಲ್ಲವೇ?

ಅಲ್ಪಸಂಖ್ಯಾತಳಾಗಿರುವ ಕಾರಣ ಎಷ್ಟು ದಿನಗಳವರೆಗೆ ನಮ್ಮ ದೇಶಭಕ್ತಿಯನ್ನು ಪ್ರಶ್ನಿಸಲಾಗುತ್ತದೆ? ಯಾವ ತಪ್ಪಿಗೂ ನಾವು ‘ಪಾಕಿಸ್ತಾನದ ಬೆಂಬಲಿಗರು’ ಎಂಬ ಆರೋಪವನ್ನು ಹೊರುವ ಪರಿಸ್ಥಿತಿ ಯಾವ ಸಂವಿಧಾನಾತ್ಮಕ ಮೌಲ್ಯಕ್ಕೆ ಸೇರಿದೆ? ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಂವಿಧಾನಾತ್ಮಕ ಹಾಗೂ ಕಾನೂನು ರಕ್ಷಣೆಗಳಿದ್ದಂತೆ, ಮುಸ್ಲಿಮರ ಸಾಮಾಜಿಕ, ಮಾನಸಿಕ ಮತ್ತು ನಾಗರಿಕ ಭದ್ರತೆಯನ್ನು ಖಚಿತಪಡಿಸುವ ಸ್ಪಷ್ಟ ಕಾನೂನುಗಳು ಏಕೆ ಕಾಣುತ್ತಿಲ್ಲ?

ಡಾ. ಶಾಫಿಯಾ ಫರ್ಹಿನ್, ಅನುವಾದಕಿ ಮತ್ತು ಹಿಂದಿ ಉಪನ್ಯಾಸಕಿ, ಮಂಡ್ಯ

 

 

ಆಂದೋಲನ ಡೆಸ್ಕ್

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

4 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

5 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

5 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

5 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

6 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

7 hours ago