ಹಾಡು ಪಾಡು

ಮೂಗಿನ ನೇರಕ್ಕೆ ಇತಿಹಾಸವನ್ನು ತಿರುಚುವುದಿದೆಯಲ್ಲಾ….

‘ಕುಸೂ ಕುಸೂ ಹೇಳಪ್ಪ ಹೇಳು ನನ್ನ ಕಂದಾ. ಅವ್ವಾ… ನಾಳಕ ಬಾವುಟದ ಹಬ್ಬ. ಬಾವುಟ ಏರಿಸೋ ಹಬ್ಬ. ಇಸ್ಕೂಲಿಗೆ ಹೊತ್ತಿಗೆ ಮುಂಚೆಯೇ ಹೋಗಬೇಕು. ಹಾಗಾಗಿ ನೀನು ಹೊತ್ತಿಗೆ ಮುಂಚೆಯೇ ನನ್ನನ್ನು ಎದ್ದೇಳಿಸಬೇಕು. ಬಾವುಟ ಏರಿಸಿದ ಮೇಲೆ ಶಾಲೆಗೆ ರಜೆ ಕೋಳಿಗೆ ಮಜೆ.

ಚಾಕಲೇಟು ಚಾಕಲೇಟು ಕೊಡುತ್ತಾರೆ. ಅಂತ ನಿನ್ನ ಎಲ್ಲಾ ಅದೆಷ್ಟು ಬಾರಿ ಹೇಳಿದೆಯೋ ಏನೋ ! ಐದು ಗಂಟೆ ಆಯ್ತು ಎದ್ದೇಳು,ಎದ್ದೇಳು ನನ್ನಪ್ಪನೇ ಎದ್ದೇಳು.‘ ಹೀಗೆ ರಜೆ, ಚಾಕುಲೇಟಿನ ಮಾತುಗಳು ಅವ್ವನ ಬಾಯಿಂದ ಬಂದದ್ದೇ ತಡ. ದಡಬೋಡನೆ ಎದ್ದು ನಿತ್ಯ ಕರ್ಮಗಳನ್ನು ತೀರಿಸುತ್ತಿದ್ದೆವೋ ಏನೋ? ಕಣ್ಣನ್ನು ಉಜ್ಜುತ್ತಲೇ,ಆಕಳಿಸುತ್ತಲೇ ಮೂರೇ ಮೂರು ನೀರಲ್ಲಿ ಮುಖವನ್ನು ಸೀಟಿಕೊಂಡು ಚಂಗು ಚಂಗನೆ ಇಸ್ಕೂಲಿನ ಹಾದಿಯನ್ನು ಹಿಡಿದರೆ ಮುಗೀತು. ಅವ್ವ ಅಷ್ಟು ಹೊತ್ತಿಗೇ ಎದ್ದು ಒಲೆ ಒಟ್ಟಿ ಇದ್ದ ಬದ್ದ ತಂಗಳನ್ನು ಬಿಸಿ ಮಾಡಿ ತುತ್ತು ಹಾಕಲು ಕರೆದರೂ ಅದನ್ನು ಕೇಳಿಸಿಕೊಳ್ಳುವ ದೊಡ್ಡಸ್ತಿಕೆ ತಾನೇ ನಮಗೆ ಎಲ್ಲಿಂದ ಬರುತ್ತಿತ್ತು?

ಇನ್ನು ಇಸ್ಕೂಲಿಗೆ ಹೋದೇವೆಂದರೆ – ತಲೆಯ ಮೇಲೆಯೇ ಬಣ್ಣ ಬಣ್ಣದ ದಾಳ. ಅಲ್ಲಲ್ಲಿ ಸೊಕ್ಕು ನೀರಿಟ್ಟು ಮಣ್ಣನ್ನು ಘಮಗರೆಸಿ ಗುಡಿಸುವ ಅಕ್ಕ- ಅಣ್ಣಂದಿರು. ವೈಟ್ ಅಂಡ್ ವೈಟ್ ಹಾಕಿಕೊಂಡು ಹದಿನಾರು ಸಾರಿ ಒಳಗೊಳಗೇ ಲೆಕ್ಕ ಹಾಕಿ ಧ್ವಜಸ್ತಂಭಕ್ಕೆ ಬಾವುಟ ಕಟ್ಟುತ್ತಾ ನಿಂತ ಪೀಟಿ ಮೇಷ್ಟರು. ಎಲ್ಲ ಶಾಲೆಗಳಲ್ಲೂ ಒಬ್ಬೊಬ್ಬ ಇರುವಂತೆ ಧ್ವಜ ಸ್ತಂಭವನ್ನು ಬೇಕು ಬೇಕಂತಲೇ ಎಲ್ಲರೂ ನೋಡಲಿ ಎಂದೇ ಚಕಚಕ ಅಂತ ಹತ್ತು ಸಾರಿ ಹತ್ತಿ – ಇಳಿದು ಪೀಟಿ ಮೇಷ್ಟರ ಆಜ್ಞೆಯನ್ನು ಪಾಲಿಸುವ ಗುಂಡ. ಅಪರೂಪಕ್ಕೆ ಎಣ್ಣೆ ಹಾಕಿ ಕರಾಪು ತೆಗೆದ ಗಂಡು ತಲೆಗಳು. ಎರಡೆರಡು ಜಡೆ ಹೆಣೆದು ರಿಬ್ಬನ್ ಬಿಗಿದ ಹೆಣ್ಣುಗಳು. ಗಡಿಬಿಡಿಯಲ್ಲಿ ಎಡತಾಕುವ ಸೆಂಟು ಘಮಲಿನ ಶಿಕ್ಷಕರು. ಅತಿಥಿಗಳ ಮಾತುಕತೆಯಲ್ಲಿ ಮುಳುಗುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರು. ಉದ್ದುದ್ದ ಭಾಷಣಗಳು.

ಕಾಲ ಬದಲಾದಂತೆ ಹಬ್ಬದ ಆಚರಣೆಗಳು ವರ್ಷದಿಂದ ವರ್ಷಕ್ಕೆ ಆಡಳಿತದಿಂದ ಆಡಳಿತಕ್ಕೆ ಬದಲಾಗುತ್ತಾ ಹೋಗುತ್ತಿವೆ, ಮಾರ್ಪಾಟುಗಳಾಗುತ್ತಿವೆ. ಆಚರಣೆಗಳು ಬದಲಾದರೂ ಹಬ್ಬದ ನೈಜ ಇತಿಹಾಸಗಳು ಮಾತ್ರ ಬದಲಾಗಬಾರದು. ಬಿದ್ದು ತಮ್ಮ ಮೂಗಿನ ನೇರಕ್ಕೆ ಜಾತಿ, ಮತ, ಜನಾಂಗ, ಧರ್ಮ, ಭೌಗೋಳಿಕತೆಯ ಪ್ರತಿಷ್ಠೆಗೆ ಅನುಗುಣ ವಾಗಿ ಇತಿಹಾಸವನ್ನು ತಿರುಚುವುದಿದೆಯಲ್ಲಾ, ಸತ್ಯವೇ ದಂಗಾಗುವಂತೆ ಸತ್ಯದ ಮುಂದೆ ಸುಳ್ಳನ್ನು ಎತ್ತಿಕಟ್ಟು ವುದಿದೆ ಯಲ್ಲಾ, ವೈಭವೀಕರಿಸುವುದಿದೆ ಯಲ್ಲಾ ಅದು ನಿಜಕ್ಕೂ ಮಹಾಘಾತಕತನ.

ದಿಲೀಪ್ ಎನ್ಕೆ, ಯುವ ಕಥೆಗಾರ ಮತ್ತು ಅಧ್ಯಾಪಕ, ಕೊಳ್ಳೇಗಾಲ

ಆಂದೋಲನ ಡೆಸ್ಕ್

Recent Posts

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

3 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

3 hours ago

ರಾಜಸ್ಥಾನದಲ್ಲಿ ಪ್ಯಾರಾಮೆಡಿಕಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ನಾಲ್ವರು ಅರೆಸ್ಟ್‌

ಜೈಪುರ: ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ಯಾರಾಮೆಡಿಕಲ್‌ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆಯೇ ಪರೀಕ್ಷೆ ಹಾಲ್‌ ಮೇಲೆ ಪೊಲೀಸರು…

4 hours ago

ಎಸ್‌ಐಆರ್‌ ಬಗ್ಗೆ ಗಾಬರಿ ಬೇಡ: ಬಾನು ಮುಷ್ತಾಕ್‌

ಹಾಸನ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಆರಂಭವಾಗಿದೆ. ಹಾಸನದಲ್ಲಿ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌…

4 hours ago

ನಾಡಿನ ಖ್ಯಾತ ಕಲಾವಿದ ಕೆ.ಟಿ.ಶಿವಪ್ರಸಾದ್‌ ನಿಧನ

ಬೆಂಗಳೂರು: ನಾಡಿನ ಖ್ಯಾತ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ, ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತ ‌ಕೆ.ಟಿ. ಶಿವಪ್ರಸಾದ್(77) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.…

5 hours ago

ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲೇ ಮೂರನೇ ಬಾರಿ ದೇಶದಲ್ಲಿ ಮಳೆ ಕೊರತೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕಳೆದ 126 ವರ್ಷಗಳ ಇತಿಹಾಸದಲ್ಲೇ ಜೂನ್‌ ತಿಂಗಳಿನಲ್ಲಿ ಮೂರನೇ…

5 hours ago