ಹಾಡು ಪಾಡು

ಸಂವಿಧಾನ ನಮ್ಮ ಬಳಿ ಇದೆ, ಆದರೆ ಅದರ ಧ್ವನಿ ಎಲ್ಲಿದೆ?

ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ವಾಸ್ತವದಲ್ಲಿ ನಾವು ಎಷ್ಟು ಮುಕ್ತರಾಗಿದ್ದೇವೆ? ಭ್ರಷ್ಟಾಚಾರ, ಪರಿಸರ ನಾಶ, ಮಾಲಿನ್ಯ ಹಾಗೂ ಆಡಳಿತ ವೈಫಲ್ಯಗಳ ಕುರಿತು ಸಾರ್ವಜನಿಕ ಚರ್ಚೆಗಳು ಕೆಲವೇ ದಿನಗಳಿಗೆ ಸೀಮಿತವಾಗುತ್ತವೆ. ಸಾಮಾಜಿಕ ಮಾಧ್ಯಮ ಗಳಲ್ಲಿ ಆರಂಭವಾಗುವ ಚರ್ಚೆಗಳು ಶೀಘ್ರದಲ್ಲೇ ಬೇರೆ ವಿಷಯಗಳತ್ತ ತಿರುಗಿಬಿಡುತ್ತವೆ. ಇದು ಸಹಜ ಮರೆವೆಯೇ, ಅಥವಾ ಉದ್ದೇಶಿತ ಮೌನವೇ ಎಂಬ ಪ್ರಶ್ನೆ ಅನಿವಾರ್ಯವಾಗಿ ಎದುರಾಗುತ್ತದೆ.

ಯುವಜನತೆಗೆ ಉದ್ಯೋಗ ಒದಗಿಸುವ ವಿಷಯದಲ್ಲಿ ಸರ್ಕಾರದ ಭರವಸೆಗಳು ಚುನಾವಣಾ ಭಾಷಣಗಳ ಮಟ್ಟದಲ್ಲೇ ಉಳಿದಿವೆ. ಶಿಕ್ಷಣ ಪೂರ್ಣಗೊಳಿಸಿದ ನಂತರ ಅರ್ಹತೆಯಿದ್ದರೂ ಯುವಕರು ಉದ್ಯೋಗವಿಲ್ಲದೆ ಅಲೆ ದಾಡುತ್ತಿರುವುದು ಕಟುವಾದ ವಾಸ್ತವ. ಕೇವಲ ಭರವಸೆಗಳಲ್ಲ, ಕಾನೂನಿನಲ್ಲೇ ಯುವ ಜನತೆಗೆ ಉದ್ಯೋಗ ಒದಗಿಸುವ ಸ್ಪಷ್ಟ ಯೋಜನೆ ಇರಬೇಕಲ್ಲವೇ?

ಯುವಕರಲ್ಲಿ ಕೌಶಲವಿಲ್ಲ ಎಂಬ ಸಮಸ್ಯೆಗೆ ಕಾರಣ ಕೌಶಲಾಭಿವೃದ್ಧಿಗೆ ಅಗತ್ಯವಿರುವ ಸ್ಪಷ್ಟ ನೀತಿ, ಹೂಡಿಕೆ ಮತ್ತು ಮಾರ್ಗದರ್ಶನದ ಕೊರತೆ. ಓದಿದವರು ನಿರುದ್ಯೋಗಿಗಳಾಗುತ್ತಿರುವಾಗ, ಓದನ್ನು ಬಿಟ್ಟು ಡಿಜಿಟಲ್ ಕಂಟೆಂಟ್ ಸೃಷ್ಟಿ ಅಥವಾ ವ್ಯಾಪಾರ ದಲ್ಲಿ ತೊಡಗಿದವರು ಯಶಸ್ಸು ಕಾಣುತ್ತಿರುವುದು ವ್ಯಕ್ತಿಗತ ಆಯ್ಕೆಯಲ್ಲ; ವ್ಯವಸ್ಥೆಯ ವೈಫಲ್ಯವನ್ನು ಸೂಚಿಸುತ್ತದೆ. ಕಂಟೆಂಟ್ ಸೃಷ್ಟಿಯೂ ಒಂದು ಕೌಶಲವೇ; ಆದರೆ ಅದಕ್ಕೂ ಸೂಕ್ತ ತರಬೇತಿ ಮತ್ತುನಿಯಂತ್ರಣ ಅಗತ್ಯ. ನನ್ನನ್ನು ಇನ್ನೂ ಕಾಡುವ ಪ್ರಶ್ನೆಗಳು ವೈಯಕ್ತಿಕವಾಗಿಯೂ ಸಮಾಜಮುಖಿಯಾಗಿಯೂ ಇವೆ. ಒಬ್ಬ ಮಹಿಳೆಯಾಗಿರುವ ಕಾರಣ ಇಂದಿಗೂ ಕತ್ತಲಾಗುವ ಮೊದಲು ಮನೆ ತಲುಪಬೇಕೆಂಬ ಅಲಿಖಿತ ನಿಯಮ ಏಕೆ? ಸುರಕ್ಷತೆ ಎನ್ನುವುದು ಮಹಿಳೆಯ ಹೊಣೆಗಾರಿಕೆಯೇ? ಅದು ರಾಜ್ಯದ ಜವಾಬ್ದಾರಿಯಲ್ಲವೇ?

ಅಲ್ಪಸಂಖ್ಯಾತಳಾಗಿರುವ ಕಾರಣ ಎಷ್ಟು ದಿನಗಳವರೆಗೆ ನಮ್ಮ ದೇಶಭಕ್ತಿಯನ್ನು ಪ್ರಶ್ನಿಸಲಾಗುತ್ತದೆ? ಯಾವ ತಪ್ಪಿಗೂ ನಾವು ‘ಪಾಕಿಸ್ತಾನದ ಬೆಂಬಲಿಗರು’ ಎಂಬ ಆರೋಪವನ್ನು ಹೊರುವ ಪರಿಸ್ಥಿತಿ ಯಾವ ಸಂವಿಧಾನಾತ್ಮಕ ಮೌಲ್ಯಕ್ಕೆ ಸೇರಿದೆ? ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಂವಿಧಾನಾತ್ಮಕ ಹಾಗೂ ಕಾನೂನು ರಕ್ಷಣೆಗಳಿದ್ದಂತೆ, ಮುಸ್ಲಿಮರ ಸಾಮಾಜಿಕ, ಮಾನಸಿಕ ಮತ್ತು ನಾಗರಿಕ ಭದ್ರತೆಯನ್ನು ಖಚಿತಪಡಿಸುವ ಸ್ಪಷ್ಟ ಕಾನೂನುಗಳು ಏಕೆ ಕಾಣುತ್ತಿಲ್ಲ?

ಡಾ. ಶಾಫಿಯಾ ಫರ್ಹಿನ್, ಅನುವಾದಕಿ ಮತ್ತು ಹಿಂದಿ ಉಪನ್ಯಾಸಕಿ, ಮಂಡ್ಯ

 

 

ಆಂದೋಲನ ಡೆಸ್ಕ್

Recent Posts

ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯ ಬಂಧನ: ಇಬ್ಬರ ರಕ್ಷಣೆ

ಕುಶಾಲನಗರ: ಮುಳ್ಳುಸೋಗೆಯಲ್ಲಿ ವೇಶ್ಯಾವಾಟಿಕೆ ಪ್ರಕರಣ ಬೇಧಿಸಿದ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ. ಸೆಲೆಕ್ಟ್ ಸಾಮಿಲ್ ಬಳಿಯ ಮನೆಯೊಂದನ್ನು ಬಾಡಿಗೆ ಪಡೆದ…

11 hours ago

ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ

ಬೆಂಗಳೂರು: ಎಲ್ಲೆಂದರಲ್ಲಿ ಹಳೆಯ ವಾಹನಗಳನ್ನು ನಿಲ್ಲಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಈ ಕುರಿತು ಮಾಧ್ಯಮಗಳೊಂದಿಗೆ…

11 hours ago

ಪ್ರೀಮಿಯಂ ಪೆಟ್ರೋಲ್‌ ದರ 2 ರೂ ಏರಿಕೆ

ನವದೆಹಲಿ: ಇರಾನ್‌ ಯುದ್ಧದ ಬಿಸಿ ಸವಾರರಿಗೆ ತಟ್ಟಿದೆ. ತೈಲ ಕಂಪನಿಗಳು ಪ್ರೀಮಿಯಂ ಪೆಟ್ರೋಲ್‌ ದರವನ್ನು 2 ರೂಗೆ ಏರಿಕೆ ಮಾಡಿದೆ.…

12 hours ago

ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್:‌ ಸವಾರ ಸಾವು

ಸುಂಟಿಕೊಪ್ಪ: ಮಾದಾಪುರ ರಾಜ್ಯ ಹೆದ್ದಾರಿ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವಿಗೀಡಾಗಿ ಹಿಂಬದಿ ಸವಾರ…

12 hours ago

ಚಿಕ್ಕಮಗಳೂರು| ಹೊತ್ತಿ ಉರಿಯುತ್ತಿರುವ ಶೋಲಾರಣ್ಯ: ಅಪರೂಪದ ಸಸ್ಯ ಸಂಪತ್ತು ನಾಶ

ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಶೃಂಗೇರಿಯ ಕೆರೆಕಟ್ಟೆ…

12 hours ago

ಇರಾನ್‌ ಮೇಲೆ ಅಮೇರಿಕಾ-ಇಸ್ರೇಲ್‌ ವೈಮಾನಿಕ ದಾಳಿ: ಇರಾನ್‌ ಗುಪ್ತಚರ ಸಚಿವ ಸಾವು

ಟೆಹರಾನ್:‌ ಇರಾನ್‌ ಮೇಲೆ ಅಮೇರಿಕಾ ಹಾಗೂ ಇಸ್ರೇಲ್‌ ಜಂಟಿ ದಾಳಿ ಮುಂದುವರಿಸಿದ್ದು, ಇರಾನ್‌ ಗುಪ್ತಚರ ಸಚಿವ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.…

13 hours ago