ಹಾಡು ಪಾಡು

ಮನುಷ್ಯರ ಕಥೆ ಹೇಳುವ ಹುಲಿಬೇಟೆ ಕಲ್ಲುಗಳು

ಇಲ್ಲಿರುವ 4 ಹುಲಿ ಬೇಟೆ ವೀರಗಲ್ಲುಗಳು ಒಂದು ಕಾಲದಲ್ಲಿ ಈ ಪ್ರದೇಶ ದೊಡ್ಡದಾದ ಹುಲಿ ಕಾಡಾಗಿತ್ತು ಎಂದು ಹೇಳುತ್ತವೆ. ವೀರಗಲ್ಲುಗಳನ್ನು ಹುಡುಕಾಡುತ್ತಾ ತಿರುಗುವ ನನ್ನಲ್ಲಿ ಈ ಕಲ್ಲುಗಳು ವಿಶೇಷ ಕುತೂಹಲವನ್ನು ಮೂಡಿಸಿವೆ.

ಸಂತೇಬಾಚಹಳ್ಳಿ ರಂಗಸ್ವಾಮಿ
ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲೂಕಿನ ಸಂತೆಬಾಚಳ್ಳಿ ಹೋಬಳಿಯ ನಾಯಕನಹಳ್ಳಿ ಗ್ರಾಮದಲ್ಲಿ ಅಪರೂಪದ ನಾಲ್ಕು ಹುಲಿ ಬೇಟೆ ವೀರಗಲ್ಲುಗಳಿವೆ. ಕರ್ನಾಟಕದಲ್ಲಿ ಸುಮಾರು ೫೦ ಹುಲಿ ಬೇಟೆ ವೀರಗಲ್ಲುಗಳಿರುವ ದಾಖಲೆಗಳಿವೆ. ಆದರೆ ಒಂದು ಪುಟ್ಟ ಗ್ರಾಮದಲ್ಲಿ ಒಂದೇ ಜಾಗದಲ್ಲಿ ನಾಲ್ಕು ಹುಲಿ ಬೇಟೆ ವೀರಗಲ್ಲುಗಳಿರುವುದು ಬಹಳ ಕುತೂಹಲಕಾರಿಯಾಗಿದೆ.

ನಾಯಕನಹಳ್ಳಿಯ ಬೋರಿದೇವರ ದೇವಾಲಯದ ಆವರಣದಲ್ಲಿ ಸುಮಾರು ೪೦ಕ್ಕೂ ಹೆಚ್ಚು ವೀರಗಲ್ಲುಗಳಿವೆ. ಗ್ರಾಮಸ್ಥರು ಹಬ್ಬ ಹರಿದಿನಗಳಲ್ಲಿ ಈ ವೀರಗಲ್ಲುಗಳಿಗೆ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ. ಈ ವೀರಗಲ್ಲುಗಳು ಸುಮಾರು ೧೨ನೇ ಶತಮಾನದ ಸುತ್ತಮುತ್ತಲಿನ ಕಾಲಕ್ಕೆ ಸೇರಿದ ಹಾಗೆ ಕಾಣುತ್ತದೆ. ಅಂದರೆ ಹೊಯ್ಸಳರ ಕಾಲಘಟ್ಟದಲ್ಲಿ ಈ ವೀರಗಲ್ಲುಗಳನ್ನು ಸ್ಥಾಪಿಸಿರುವ ಬಗ್ಗೆ ತಿಳಿಯುತ್ತದೆ.

ಮೊದಲ ಸಾಲಿನಲ್ಲಿರುವ ಹುಲಿ ಬೇಟೆ ವೀರಗಲ್ಲು ಬಿಲ್ಲುಧಾರಿಯು ಹುಲಿಗೆ ಬಿಟ್ಟ ಬಾಣವನ್ನು ಚಿತ್ರಿಸುತ್ತದೆ. ಘಾಸಿಗೊಂಡ ಹುಲಿ ಬಿಲ್ಲು ಹಿಡಿದ ವೀರನ ಮೇಲೆ ಆಕ್ರಮಣ ಮಾಡುತ್ತಿರುವ ಚಿತ್ರವೂ ಇದೆ. ಎರಡನೇ ಸಾಲಿನಲ್ಲಿ ದೇವ ಕನ್ಯೆಯರು ಹುತಾತ್ಮ ಬೇಟೆಗಾರನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುವ ಚಿತ್ರಣವಿದೆ.

ಮೂರನೇ ಸಾಲು ಆತ ಶಿವೈಕ್ಯವಾಗುವ ಚಿತ್ರಣವನ್ನು ತೋರಿಸುತ್ತದೆ. ಎರಡನೆಯ ಹುಲಿ ಬೇಟೆ ವೀರಗಲ್ಲಿನ ಮೊದಲ ಸಾಲು ಕರುವೊಂದರ ಮೇಲೆ ಹುಲಿ ದಾಳಿ ಇಟ್ಟಿದ್ದನ್ನು ಕಂಡು ಬಿಡಿಸಲು ಹೋದ ಬಿಲ್ಲುಗಾರ ಹುಲಿಯ ದಾಳಿಗೆ ತುತ್ತಾಗಿರುವುದನ್ನೂ ಹಾಗೂ ಆತನ ಮಡದಿ ಆತನೊಡನೆ ಸಾವಿನಲ್ಲಿ ಐಕ್ಯವಾಗಿರುವ ಚಿತ್ರಣವನ್ನು ತೋರಿಸುತ್ತದೆ.

ಮೂರನೆಯ ಹುಲಿ ಬೇಟೆ ವೀರಗಲ್ಲೂ ಕೂಡ ಹುಲಿಯಿಂದ ಹತನಾದ ವೀರ ಆತನ ಹೆಂಡತಿಯು ಜೊತೆ ಸ್ವರ್ಗಸ್ತವಾಗುವುದನ್ನು ಚಿತ್ರಿಸುತ್ತದೆ. ನಾಲ್ಕನೆಯ ಹುಲಿ ಬೇಟೆಯ ವೀರಗಲ್ಲು ಹಸುವಿನ ದಾಳಿಯಲ್ಲಿ ರಕ್ಷಿಸುವ ವೀರ ಹುಲಿಯ ಎದೆಗೆ ಬಾಣ ಬಿಟ್ಟಿರುವ ಚಿತ್ರಣವಿದ್ದು, ನಂತರ ವೀರನು ಹುಲಿಯಿಂದ ಹತನಾಗುವ ದೃಶ್ಯವನ್ನು ತೋರಿಸುತ್ತದೆ.

 

 

ಆಂದೋಲನ ಡೆಸ್ಕ್

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

4 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago