ಹಾಡು ಪಾಡು

ಹಾಡೇ ಬದುಕಾದ ರಂಗಸಮುದ್ರದ ಹೊನ್ನಮ್ಮ

ತಾಯಿ ಪದ ಹೇಳುವುದಕ್ಕೆಂದು ಹೊರಟಲ್ಲೆಲ್ಲ, ಇವರು ಕದ್ದು ಮುಚ್ಚಿಯಾದರೂ ಹಾಜರಾಗುತ್ತಿದ್ದರು.

ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಹೊನ್ನಮ್ಮ ಅವರ ತವರು ಮನೆಯಷ್ಟೇ ಅಲ್ಲ, ಮದುವೆಯಾಗಿ ಬಂದ ಗಂಡನ ಮನೆ ಕೂಡ. ಸೋದರ ಮಾವನನ್ನೇ ಮದುವೆಯಾದ ಕಾರಣ ಊರ ತೊರೆವ ಪ್ರಸಂಗವೇ ಇವರಿಗೆ ಎದುರಾಗಲಿಲ್ಲ.

ತಂದೆಯನ್ನು ಕಳೆದುಕೊಂಡಾಗ ಹೊನ್ನಮ್ಮ ಐದನೇ ತರಗತಿಯಲ್ಲಿ ಓದುತ್ತಿದ್ದರು. ತಾಯಿಯೊಬ್ಬರೇ ಮನೆಗೆ
ಆಧಾರ. ಓದಿಸೆಂದು ಕೇಳುವುದಾದರೂ ಹೇಗೆ! ಆದರೆ, ತಾಯಿ ಸೋಬಾನೆ ಪದವನ್ನು ಎಷ್ಟು ಇಂಪಾಗಿ
ಹಾಡುತ್ತಿದ್ದರೆಂದರೆ, ಜನಪದ ಹಾಡುಗಳನ್ನು ಕಲಿಯಲು ಹೊನ್ನಮ್ಮ ಅವರಿಗೆ ಆಸಕ್ತಿ ಮೂಡಿದ್ದೇ ಅವರಿಂದ. ಹಾಗೆಂದು ತಾಯಿಗೆ ಮಗಳು ಸೋಬಾನೆ ಪದಗಳನ್ನು ಕಲಿಯುವುದು ಸ್ವಲ್ಪವೂ ಇಷ್ಟವಿರಲಿಲ್ಲ.

‘ನೀ ಬರ್ಬ್ಯಾಡ. ಹೋಗು’ ಎಂದು ಗದರುತ್ತಿದ್ದರಂತೆ. ಹೊನ್ನಮ್ಮ ಅವರಿಗೆ ಪದ ಕಲಿವ ಆಸೆ. ತಾಯಿ ಪದ ಹೇಳುವುದಕ್ಕೆಂದು ಹೊರಟಲ್ಲೆಲ್ಲ, ಇವರು ಕದ್ದು ಮುಚ್ಚಿಯಾದರೂ ಹಾಜರಾಗುತ್ತಿದ್ದರು. ಹೀಗೆ ಮರೆಯಲ್ಲಿ ನಿಂತು ಕೇಳಿದ ಹಾಡುಗಳೆಲ್ಲ ಮನೆಗೆಲಸದ ಸಾಂಗತ್ಯದಲ್ಲಿ ಇವರಿಗೆ ಬಾಯಿಪಾಠವಾಗುತ್ತಿದ್ದವು.

ಸೋಬಾನೆ ಪದವನ್ನೇನೊ ಹೊನ್ನಮ್ಮ ತಾಯಿಯ ಸಂಗದಲ್ಲಿ ಕಲಿತುಬಿಟ್ಟರು. ದೇವರ ಪದಗಳು, ಮಾದೇಶ್ವರ ಹಾಡು, ಮಂಟೇಸ್ವಾಮಿ ಹಾಡು, ಜೋಗುಳ ಪದಗಳನ್ನೆಲ್ಲ ಕಲಿತದ್ದು, ನಾಟಿ ಕೆಲಸಕ್ಕೆಂದು ಗದ್ದೆಗೆ ಹೋಗುತ್ತಿದ್ದಾಗ. ಆಗೆಲ್ಲ ಜನಪದ ಹಾಡನ್ನು ಹೇಳಿದರೆ ಮುಖ್ಯ ಹಾಡುಗಾರರಿಗೆ ಮಾತ್ರವಲ್ಲ
ಸೊಲ್ಲು ಹಾಕಿದವರಿಗೂ ಐದೊ ಹತ್ತೊ ಪೈಸೆಗಳನ್ನು ಕೊಡುತ್ತಿದ್ದರು. ಹಾಗಾಗಿ ಕೆಲಸ, ಪದ್ಯ ಕಲಿಕೆ ಎರಡಕ್ಕೂ ಊರ ಗದ್ದೆಯೇ ವೇದಿಕೆಯಾಯಿತು.

ಹಾಡುವುದಕ್ಕೆ ತಾಯಿ ಮೊದಲ ಗುರು. ಜೋಗುಳ ಹಾಡು, ಧಾರೆಯೆರೆವ ಹಾಡುಗಳನ್ನೆಲ್ಲ ಇವರಿಗೆ ಕಲಿಸಿಕೊಟ್ಟವರು, ಸಂಬಂಧಿಕರೇ ಆಗಿದ್ದ ಹನುಮಮ್ಮ ಅವರು. ತಾಯಿ ಪ್ರೀತಿಯ ಪಡಿಯಚ್ಚಾಗಿದ್ದ ಹನುಮಮ್ಮ ಅವರು ಹೊನ್ನಮ್ಮ ಅವರ ಎರಡನೇ ಗುರು.

‘ಹಾಡು ನನ್ ತಾಯಿ. ಪದ ಕಲ್ಕ್ತಂಡು ನನ್ ಹೆಸ್ರು ಉಳ್ಸೇ ನನ್ನವ್ವ’ ಎಂದು ಸೊಲ್ಲು ಹಾಕುವುದಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತಾನು ಪಡೆದ ಜನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆಲ್ಲ ಇವರೇ ಕಾರಣ ಎಂದು ಹೊನ್ನಮ್ಮ ಅವರಿಬ್ಬರನ್ನೂ ನೆನಪಿಸಿಕೊಳ್ಳುತ್ತಾರೆ.

ಕೆಲಸಕ್ಕೆ ಬರುವ ಹೆಂಗಸರ ಗುಂಪೊಂದನ್ನು ಕಟ್ಟಿಕೊಂಡು, ಹಾಡು ಹೇಳುವುದಕ್ಕೆ ತಯಾರಾಗೇಬಿಟ್ಟರು. ಏನಾದರೂ ಕೂಲಿ ಕೆಲಸ ಮಾಡಲೇಬೇಕಿತ್ತು. ನಡುವೆ, ಕೆಲ ಕಾರ್ಯಕ್ರಮಗಳು ದೊರೆಯಿತು. ಅರಮನೆಯನ್ನು ಕಟ್ಟಿಕೊಳ್ಳುವಷ್ಟು ದುಡ್ಡಾಗದಿದ್ದರೂ ತಕ್ಕ ಮಟ್ಟಿಗೆ ಬದುಕಿಗೆ ನೆರವಾಯಿತು. ಹೊಟ್ಟೆ – ಬಟ್ಟೆಗೆ ಪರವಾಗಿಲ್ಲ ಎನ್ನುವ ಹೊತ್ತಿಗೆ ಗಂಡ ಮತ್ತು ತಾಯಿಯನ್ನು ಕಳೆದುಕೊಂಡರು. ಜೀವನ ಕಂಗೆಟ್ಟ ಆ ಸಂದರ್ಭವನ್ನು ನೆನೆದಾಗ ಇಂದಿಗೂ ಹೊನ್ನಮ್ಮ ಅವರ ಕಣ್ಣಾಲಿಗಳು ನೀರ ಹರಿಸುತ್ತವೆ!

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಿ

ಬಂಡೀಪುರ ಉಷ್ಟ್ರೀಯ ಉದ್ಯಾನದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧವನ್ನು ರಾಜಕೀಯ ಮುಖಂಡರ ಒತ್ತಡಕ್ಕೆ…

2 hours ago

IPL 2025: 159ಕ್ಕೆ ರಾಜಸ್ಥಾನ್‌ ಆಲೌಟ್: ಗುಜರಾತ್‌ಗೆ 58 ರನ್‌ಗಳ ಭರ್ಜರಿ ಗೆಲುವು

ಅಹಮದಾಬಾದ್‌: ಸಂಘಟಿತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಸಹಾಯದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮಣಿಸಿದ ಗುಜರಾತ್‌ ಟೈಟನ್ಸ್‌ 2025ರ 18 ಆವೃತ್ತಿಯ…

3 hours ago

ಯಡಿಯೂರಪ್ಪ ಸರ್ಕಾರವಿದ್ದರೆ ನೆಟ್ಟಾರು ಹಂತಕನಿಗೆ ಮುತ್ತಿಕ್ಕಿದವನಿಗೆ ಗುಂಡಿಕ್ಕುತ್ತಿದ್ದೆವು: ಬಿ.ವೈ.ವಿಜಯೇಂದ್ರ

ಮಂಗಳೂರು: ಪ್ರವೀಣ್ ನೆಟ್ಟಾರು ಹಂತಕ ದೇಶದ್ರೋಹಿಗೆ ಮತ್ತೊಬ್ಬ ದೇಶದ್ರೋಹಿ ಮುತ್ತಿಡುತ್ತಾನೆ. ನಮ್ಮ ಸರ್ಕಾರ, ಯಡಿಯೂರಪ್ಪ ಸರ್ಕಾರವಿದ್ದಿದ್ದರೆ ಆ ದೇಶದ್ರೋಹಿಗೆ ಅಲ್ಲೇ…

4 hours ago

ಮಂಡ್ಯ ಮೈಶುಗರ್ ಕಾರ್ಖಾನೆಗೆ ನೂತನ‌ ಎಂ‌ಡಿ ಆಗಿ ಮಂಗಲ್‌ ದಾಸ್‌ ನೇಮಕ

ಮಂಡ್ಯ: ಮಂಡ್ಯ ಮೈಶುಗರ್ ಕಾರ್ಖಾನೆಗೆ ನೂತನ ಎಂಡಿಯಾಗಿ ಮಂಗಲ್‌ ದಾಸ್‌ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.…

5 hours ago

ಏಪ್ರಿಲ್‍.16ರಿಂದ ಶುರುವಾಗಲಿದೆ ಸುದೀಪ್‍ ಅಭಿನಯದ ‘ಬಿಲ್ಲ ರಂಗ ಭಾಷಾ’

‘ಏಪ್ರಿಲ್‍ 16’ ಎಂದಷ್ಟೇ ಬರೆದು ಕಿಚ್ಚ ಸುದೀಪ್‌ ಮೂರು ಫೋಟೋಗಳನ್ನು ಕೆಲವು ದಿನಗಳ ಹಿಂದೆ ಸೋಷಿಯಲ್‍ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಏಪ್ರಿಲ್‍.16ರಂದು…

5 hours ago

ಇದು ‘ಪ್ರೀತಿಯ ಹುಚ್ಚ’ನ ಕಥೆ: ನೈಜ ಘಟನೆ ಆಧರಿಸಿದ ಚಿತ್ರ ಏಪ್ರಿಲ್.18ಕ್ಕೆ ತೆರೆಗೆ

‘ಪ್ರೀತಿಯ ಹುಚ್ಚ’ ಎಂದರೆ ಮೊದಲಿಗೆ ನೆನಪಿಗೆ ಬರುವುದು ‘ಹುಚ್ಚ’ ಚಿತ್ರದ ಸುದೀಪ್‍ ಪಾತ್ರ. ಆ ನಂತರ ‘ಚೆಲುವಿನ ಚಿತ್ತಾರ’ ಚಿತ್ರದ…

5 hours ago