ಹಾಡು ಪಾಡು

ಹಾಡೇ ಬದುಕಾದ ರಂಗಸಮುದ್ರದ ಹೊನ್ನಮ್ಮ

ತಾಯಿ ಪದ ಹೇಳುವುದಕ್ಕೆಂದು ಹೊರಟಲ್ಲೆಲ್ಲ, ಇವರು ಕದ್ದು ಮುಚ್ಚಿಯಾದರೂ ಹಾಜರಾಗುತ್ತಿದ್ದರು.

ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಹೊನ್ನಮ್ಮ ಅವರ ತವರು ಮನೆಯಷ್ಟೇ ಅಲ್ಲ, ಮದುವೆಯಾಗಿ ಬಂದ ಗಂಡನ ಮನೆ ಕೂಡ. ಸೋದರ ಮಾವನನ್ನೇ ಮದುವೆಯಾದ ಕಾರಣ ಊರ ತೊರೆವ ಪ್ರಸಂಗವೇ ಇವರಿಗೆ ಎದುರಾಗಲಿಲ್ಲ.

ತಂದೆಯನ್ನು ಕಳೆದುಕೊಂಡಾಗ ಹೊನ್ನಮ್ಮ ಐದನೇ ತರಗತಿಯಲ್ಲಿ ಓದುತ್ತಿದ್ದರು. ತಾಯಿಯೊಬ್ಬರೇ ಮನೆಗೆ
ಆಧಾರ. ಓದಿಸೆಂದು ಕೇಳುವುದಾದರೂ ಹೇಗೆ! ಆದರೆ, ತಾಯಿ ಸೋಬಾನೆ ಪದವನ್ನು ಎಷ್ಟು ಇಂಪಾಗಿ
ಹಾಡುತ್ತಿದ್ದರೆಂದರೆ, ಜನಪದ ಹಾಡುಗಳನ್ನು ಕಲಿಯಲು ಹೊನ್ನಮ್ಮ ಅವರಿಗೆ ಆಸಕ್ತಿ ಮೂಡಿದ್ದೇ ಅವರಿಂದ. ಹಾಗೆಂದು ತಾಯಿಗೆ ಮಗಳು ಸೋಬಾನೆ ಪದಗಳನ್ನು ಕಲಿಯುವುದು ಸ್ವಲ್ಪವೂ ಇಷ್ಟವಿರಲಿಲ್ಲ.

‘ನೀ ಬರ್ಬ್ಯಾಡ. ಹೋಗು’ ಎಂದು ಗದರುತ್ತಿದ್ದರಂತೆ. ಹೊನ್ನಮ್ಮ ಅವರಿಗೆ ಪದ ಕಲಿವ ಆಸೆ. ತಾಯಿ ಪದ ಹೇಳುವುದಕ್ಕೆಂದು ಹೊರಟಲ್ಲೆಲ್ಲ, ಇವರು ಕದ್ದು ಮುಚ್ಚಿಯಾದರೂ ಹಾಜರಾಗುತ್ತಿದ್ದರು. ಹೀಗೆ ಮರೆಯಲ್ಲಿ ನಿಂತು ಕೇಳಿದ ಹಾಡುಗಳೆಲ್ಲ ಮನೆಗೆಲಸದ ಸಾಂಗತ್ಯದಲ್ಲಿ ಇವರಿಗೆ ಬಾಯಿಪಾಠವಾಗುತ್ತಿದ್ದವು.

ಸೋಬಾನೆ ಪದವನ್ನೇನೊ ಹೊನ್ನಮ್ಮ ತಾಯಿಯ ಸಂಗದಲ್ಲಿ ಕಲಿತುಬಿಟ್ಟರು. ದೇವರ ಪದಗಳು, ಮಾದೇಶ್ವರ ಹಾಡು, ಮಂಟೇಸ್ವಾಮಿ ಹಾಡು, ಜೋಗುಳ ಪದಗಳನ್ನೆಲ್ಲ ಕಲಿತದ್ದು, ನಾಟಿ ಕೆಲಸಕ್ಕೆಂದು ಗದ್ದೆಗೆ ಹೋಗುತ್ತಿದ್ದಾಗ. ಆಗೆಲ್ಲ ಜನಪದ ಹಾಡನ್ನು ಹೇಳಿದರೆ ಮುಖ್ಯ ಹಾಡುಗಾರರಿಗೆ ಮಾತ್ರವಲ್ಲ
ಸೊಲ್ಲು ಹಾಕಿದವರಿಗೂ ಐದೊ ಹತ್ತೊ ಪೈಸೆಗಳನ್ನು ಕೊಡುತ್ತಿದ್ದರು. ಹಾಗಾಗಿ ಕೆಲಸ, ಪದ್ಯ ಕಲಿಕೆ ಎರಡಕ್ಕೂ ಊರ ಗದ್ದೆಯೇ ವೇದಿಕೆಯಾಯಿತು.

ಹಾಡುವುದಕ್ಕೆ ತಾಯಿ ಮೊದಲ ಗುರು. ಜೋಗುಳ ಹಾಡು, ಧಾರೆಯೆರೆವ ಹಾಡುಗಳನ್ನೆಲ್ಲ ಇವರಿಗೆ ಕಲಿಸಿಕೊಟ್ಟವರು, ಸಂಬಂಧಿಕರೇ ಆಗಿದ್ದ ಹನುಮಮ್ಮ ಅವರು. ತಾಯಿ ಪ್ರೀತಿಯ ಪಡಿಯಚ್ಚಾಗಿದ್ದ ಹನುಮಮ್ಮ ಅವರು ಹೊನ್ನಮ್ಮ ಅವರ ಎರಡನೇ ಗುರು.

‘ಹಾಡು ನನ್ ತಾಯಿ. ಪದ ಕಲ್ಕ್ತಂಡು ನನ್ ಹೆಸ್ರು ಉಳ್ಸೇ ನನ್ನವ್ವ’ ಎಂದು ಸೊಲ್ಲು ಹಾಕುವುದಕ್ಕೆ ಕರೆದುಕೊಂಡು ಹೋಗುತ್ತಿದ್ದರು. ತಾನು ಪಡೆದ ಜನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆಲ್ಲ ಇವರೇ ಕಾರಣ ಎಂದು ಹೊನ್ನಮ್ಮ ಅವರಿಬ್ಬರನ್ನೂ ನೆನಪಿಸಿಕೊಳ್ಳುತ್ತಾರೆ.

ಕೆಲಸಕ್ಕೆ ಬರುವ ಹೆಂಗಸರ ಗುಂಪೊಂದನ್ನು ಕಟ್ಟಿಕೊಂಡು, ಹಾಡು ಹೇಳುವುದಕ್ಕೆ ತಯಾರಾಗೇಬಿಟ್ಟರು. ಏನಾದರೂ ಕೂಲಿ ಕೆಲಸ ಮಾಡಲೇಬೇಕಿತ್ತು. ನಡುವೆ, ಕೆಲ ಕಾರ್ಯಕ್ರಮಗಳು ದೊರೆಯಿತು. ಅರಮನೆಯನ್ನು ಕಟ್ಟಿಕೊಳ್ಳುವಷ್ಟು ದುಡ್ಡಾಗದಿದ್ದರೂ ತಕ್ಕ ಮಟ್ಟಿಗೆ ಬದುಕಿಗೆ ನೆರವಾಯಿತು. ಹೊಟ್ಟೆ – ಬಟ್ಟೆಗೆ ಪರವಾಗಿಲ್ಲ ಎನ್ನುವ ಹೊತ್ತಿಗೆ ಗಂಡ ಮತ್ತು ತಾಯಿಯನ್ನು ಕಳೆದುಕೊಂಡರು. ಜೀವನ ಕಂಗೆಟ್ಟ ಆ ಸಂದರ್ಭವನ್ನು ನೆನೆದಾಗ ಇಂದಿಗೂ ಹೊನ್ನಮ್ಮ ಅವರ ಕಣ್ಣಾಲಿಗಳು ನೀರ ಹರಿಸುತ್ತವೆ!

 

ಆಂದೋಲನ ಡೆಸ್ಕ್

Recent Posts

ಭಟ್ಕಳ ದುರಂತ | ಕಪ್ಪೆ ಚಿಪ್ಪು ಆರಿಸಲು ಹೋಗಿದ್ದ 8 ಮಂದಿ ಸಾವು!

ನದಿಗೆ ಇಳಿದು ಕೊಚ್ಚಿ ಹೋದ ಕುಟುಂಬ ಭಟ್ಕಳ : ಭಟ್ಕಳದಲ್ಲಿ ಚಪ್ಪೆಕಲ್ಲು ಆರಿಸಲು ಹೋಗಿದ್ದ ಒಂದೇ ಕುಟುಂಬದ 8 ಜನರು…

7 hours ago

ಬಲೂಚಿಸ್ತಾನ | ಸೇನಾ ಸಿಬ್ಬಂದಿ ಇದ್ದ ರೈಲು ಗುರಿಯಾಗಿಸಿ ಸ್ಫೋಟ ; 24 ಸಾವು

ಪೇಶಾವರ : ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ನಡೆಸಿದ ಸ್ಪೋಟದಲ್ಲಿ 24 ಮಂದಿ ಸಾವು ಸೇರಿದಂತೆ…

10 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಜನಸಂಖ್ಯೆ ಏರುಪೇರು : ಆಂಧ್ರದ ನೀತಿ ಅನುಕರಣೀಯವೇ?

ದೇಶದ ಜನಸಂಖ್ಯೆಯಲ್ಲಾಗುತ್ತಿರುವ ಏರುಪೇರು ರಾಷ್ಟ್ರೀಯ ಜನಸಂಖ್ಯೆ ನಿರ್ವಹಣೆಯ ನೀತಿಯ ದಿಕ್ಕನ್ನೇ ಬದಲಿಸುತ್ತಿದೆ. ಉತ್ತರ ಭಾರತದ ಜನಸಂಖ್ಯೆ ಪ್ರಮಾಣ ಲಂಗು ಲಗಾಮಿಲ್ಲದೆ…

11 hours ago

ಮೆಲೊಡಿ ಖಾವೋ ; ಕುಚ್‌ ಜಾನ್‌ ಜಾವೋ!

ರಾಜಾರಾಂ ತಲ್ಲೂರು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ತಿಕ್ಕಿ ಮುಖ ತೊಳೆಯಬೇಕು ಎಂದು ದೇಶದ ಸಂವಿಧಾನದಲ್ಲಿ ಬರೆದಿದೆಯೇನ್ರಿ? . .…

12 hours ago

ಭಾನುವಾರದ ಹಾಡುಪಾಡು | ಈ ಮೋಹ, ಈ ಬಯಕೆ ಮತ್ತು ಇದೆಲ್ಲಾ ಯಾಕೆ ಹೀಗೆ?

ಮೋಹಿತ್‌ ಎಸ್‌ ಗೌಡ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ‘ಲಿಂಗ ಬದಲಿಸಿ ಬರೆಯಿರಿ’ ಅಥವಾ ‘ವಿರುದ್ಧ ಪದ…

12 hours ago

ಭಾನುವಾರದ ಹಾಡುಪಾಡು | ಒಂದು ಸುಂದರ ಸಂಸಾರ ಮುರಿದುಹೋದ ಕಥೆ

ರೇಣುಕಾ ನಿಡಗುಂದಿ  ಕಾಲೇಜಿನ ದಿನಗಳಲ್ಲಿ ಅವರಿಬ್ಬರೂ ಭೇಟಿಯಾದಾಗಲೇ ಆಕೆ ತಾನು ಬೈ ( Bisexual) ಎಂದು ಹೇಳಿಕೊಂಡಿದ್ದಳು. ಹೊಸತಲೆಮಾರಿನ ಹುಡುಗ…

12 hours ago