ದಿವಾಕ‌ರ್ ಅವರ ಒಡನಾಟದಿಂದ ನನಗೆ ವಿಶ್ವ ಸಾಹಿತ್ಯದ ಬಾಗಿಲುಗಳು ತೆರೆದವು. ನೊಬೆಲ್ ಪ್ರಶಸ್ತಿ ಪಡೆದ ಐವತ್ತು ಲೇಖಕರ ಒಂದೊಂದು ಕಥೆಯನ್ನು ಆಯ್ದು ಅನುವಾದಿಸಿ ಒಂದು ಸಂಕಲನವಾಗಿ ಪ್ರಕಟಿಸುವುದು ಸರಳವಾದ ಮಾತೇನೂ ಅಲ್ಲ. ಹೀಗೇ ‘ಕಥಾಜಗತ್ತು’ ಎನ್ನುವ ಮಹತ್ವದ ಪುಸ್ತಕವನ್ನು ದಿವಾಕರ್ ರೂಪಿಸಿದ್ದರು. ಅದರ ಜೊತೆಗೆ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ ‘ವಿಶ್ವ ಸಾಹಿತ್ಯ ಮಾಲೆ’ಯಲ್ಲಿ ಕೆಲವು ಕಾದಂಬರಿಗಳನ್ನೂ ದಿವಾಕರ್ ಅನುವಾದಿಸಿ ಕೊಟ್ಟಿದ್ದರು. ಸಾಹಿತ್ಯದ ಬಗೆಗಲ್ಲದೇ, ಅನುವಾದದ ಬಗ್ಗೆ ನನ್ನ ಧೋರಣೆ ರೂಪುಗೊಳ್ಳಲೂ ದಿವಾಕರ್ ಅವರೇ ಕಾರಣವೆನ್ನಬಹುದು. ಅವರಿಗೆ ಲೇಖಕರ ಹೆಸರುಗಳು ಎಷ್ಟು ಸರಳವಾಗಿ ನೆನಪಿರುತ್ತಿದ್ದುವೋ, ಅಷ್ಟೇ ಗಟ್ಟಿಯಾಗಿ ಅನುವಾದಕರ ಹೆಸರು- ಶೈಲಿಗಳನ್ನು ನೆನಪು ಮಾಡಿಟ್ಟುಕೊಂಡಿರುತ್ತಿದ್ದರು.
ಎಂಬತ್ತರ ಕ್ಲಬ್ಬಿಗೆ

ವಿಶ್ವ ಸಾಹಿತ್ಯದಲ್ಲಿ ದಿವಾಕರ್ ಅವರಿಗೆ ಪ್ರಿಯವಾದದ್ದು ಲ್ಯಾಟಿನ್ ಅಮೆರಿಕನ್ ಸಾಹಿತ್ಯ. ಲ್ಯಾಟಿನ್ ಅಮೆರಿಕನ್ ಸಾಹಿತ್ಯ ಮತ್ತು ‘ಮ್ಯಾಜಿಕ್ ರಿಯಲಿಸಂ’ ಎಂದರೆ ತಕ್ಷಣಕ್ಕೆ ಮನಸ್ಸಿಗೆ ಬರುತ್ತಿದ್ದ ಹೆಸರು ಗೇಬ್ರಿಯಲ್ ಗಾರ್ಸಿಯಾ ಮಾರ್ಕೇಸನದ್ದು. ಆದರೆ ದಿವಾಕರ್ ಇನ್ನೂ ವಿಸೃತವಾದ ಸಾಹಿತ್ಯವನ್ನು ಓದಿದ್ದಲ್ಲದೇ, ನಮ್ಮಲ್ಲಿ ಹಂಚಿಕೊಳ್ಳುತ್ತಿದ್ದರು. ದಿವಾಕ‌ರ್ ಅವರ ಸ್ನೇಹವಲಯದಲ್ಲಿ ಸೇರಿದ ನಂತರ ಅವರು ತಮ್ಮಲ್ಲಿದ್ದ ಹಲವು ಉತ್ತಮ ಪುಸ್ತಕಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ವಾಕ್ಲಾವ್‌ ಹವೆಲ್, ಹಾರ್ಹೆ ಲೂಯಿ ಬೊರ್ಹೆಸ್, ಇಸಾಬೆಲ್ ಅಯೆಂಡೆ, ಯಆವೋ ರೋಸಾ,ಇಸಿಡರೋ ಬ್ಲಾಸ್ಟಿನ್ – ಈ ಎಲ್ಲ ಹೆಸರುಗಳನ್ನೂ ನಮಗೆ ಪರಿಚಯಿಸಿದವರೇ ದಿವಾಕರ್, ಅಯೆಂಡೆಯ ‘ಹೌಸ್ ಆಫ್ ದ ಸ್ಪಿರಿಟ್ಸ್’ ಯಾವ ರೀತಿಯಲ್ಲಿ ಮಾರ್ಕೇಸಿಯನ್ ಪರಂಪರೆಗೆ ಸೇರುತ್ತದೆ ಎನ್ನುವುದನ್ನು ಎಷ್ಟು ಪ್ಯಾಷನೇಟ್ ಆಗಿ ಹೇಳುತ್ತಿದ್ದರು ಎನ್ನುವುದನ್ನು ಮರೆಯಲು ಸಾಧ್ಯವೇ ಇಲ್ಲ. ದಿವಾಕರ್‌ಗೆ ಈ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಇದ್ದ ಆಸಕ್ತಿ, ಅವರನ್ನು ಸ್ಪ್ಯಾನಿಷ್ ಭಾಷೆ ಕಲಿಯಲು ಪ್ರೇರೇಪಿಸಿತ್ತು. ಆ ಲೇಖಕರ ಹೆಸರಿನ ಸರಿ ಉಚ್ಚಾರ ಹೇಗಿರಬೇಕೆಂದು ನಮಗೆ ಸರಿಯಾಗಿ ತಿಳಿಹೇಳುತ್ತಿದ್ದರು.

ಈ ಎಲ್ಲ ಲೇಖಕರೂ ಒಂದೆಡೆಗಿದ್ದರೆ, ದಿವಾಕರ್ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದವನು ಅಮೆರಿಕದ ದಕ್ಷಿಣಭಾಗಕ್ಕೆ ಸಂದಿದ್ದ ವಿಲಿಯಂ ಫಾಕ್ನರ್. ಫಾಕ್ನರ್ನ ಕಾದಂಬರಿ ಮತ್ತು ಐಹಿತ್ಯ-ಸಂಗೀತ ಕಥೆಗಳ ಕಟ್ಟುವಿಕೆಯ ಬಗ್ಗೆ ನಮಗೆ ಹೊಸ ಒಳನೋಟಗಳು ವಿಶೇಷ ಆಸಕ್ತಿ ಬಂದದ್ದೇ ದಿವಾಕರ್ ಅವರ ಜೊತೆಗಿನ ಒಡನಾಟದಿಂದ. ಕನ್ನಡ ಸಾರಸ್ವತ ಲೋಕದಲ್ಲಿ ವಿಶ್ವ ಸಾಹಿತ್ಯದ ಓದು, ಮುಖ್ಯವಾಗಿ ಕಮೂ, ಕಾಪ್ಕಾ, ಸಾರ್ತ್ ಮತ್ತು ಅಸ್ತಿತ್ವವಾದದತ್ತ ಕೇಂದ್ರೀಕೃತವಾಗಿದ್ದ ಸಮಯದಲ್ಲಿ ದಿವಾಕರ್ ನಮಗೆ ಮ್ಯಾಜಿಕ್ ರಿಯಲಿಸಂ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು. ಅವರು ನಿಜಕ್ಕೂ ಆ ಬಗ್ಗೆ ಹೆಚ್ಚಿನ ಟಿಪ್ಪಣಿಗಳನ್ನು ಬರೆದು ಮೀಮಾಂಸೆಯ ಮೂಲಕ ಆ ಸಾಹಿತ್ಯವನ್ನು ಪರಿಚಯಿಸಿದವರಲ್ಲ. ಬದಲಿಗೆ ಅನುವಾದಗಳ ಮೂಲಕ ಆ ಕೃತಿಗಳನ್ನು ಒದಗಿಸಿಕೊಟ್ಟು ನೇರವಾಗಿ ಆ ಕೃತಿಗಳನ್ನು ಆಸ್ವಾದಿಸಲು ಕಾರಣೀಭೂತರಾದರು. mssriram@pm.me

lokesh

Recent Posts

ಬಂಧನದಲ್ಲಿರುವ ಮುನಿರತ್ನ ಆರೋಗ್ಯದಲ್ಲಿ ದಿಢೀರ್‌ ಏರುಪೇರು: ಜಯದೇವ ಆಸ್ಪತ್ರೆಗೆ ದಾಖಲು

ಬೆಂಗಳೂರು: ಲಂಚ ಬೇಡಿಕೆ, ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಬಿಜೆಪಿ ಶಾಸಕ ಮುನಿರತ್ನ…

1 hour ago

ದಸರಾ ಚಲನಚಿತ್ರೋತ್ಸವ- 2024| ಉತ್ತಮ ಕಿರುಚಿತ್ರ ಆಯ್ಕೆಗೆ ಪರಿಣಿತರಿಂದ ವೀಕ್ಷಣೆ

ಐನಾಕ್ಸ್ ಚಿತ್ರಮಂದಿರದಲ್ಲಿ ಆಯ್ಕೆಯಾದ ಅತ್ಯುತ್ತಮ ಕಿರು ಚಿತ್ರಗಳ ಪ್ರದರ್ಶನ ಮೈಸೂರು : ದಸರಾ ಚಲನ ಚಿತ್ರೋತ್ಸವ 2024ರ ಅಂಗವಾಗಿ ಕಿರು ಚಿತ್ರಗಳ…

2 hours ago

ಮೈಶುಗರ್: 2.5 ಲಕ್ಷ ಟನ್‌ನಷ್ಟು ಕಬ್ಬು ಅರೆಯಲು ಯಾವುದೇ ತೊಂದರೆ ಇಲ್ಲ: ಡಾ: ಹೆಚ್.ಎಲ್ ನಾಗರಾಜು

ಮಂಡ್ಯ: ಮೈ ಶುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಕೆಲಸ ನಡೆಯುತ್ತಿದ್ದು, ಪ್ರತಿದಿನ ಸುಮಾರು 3000 ಟನ್ ನಷ್ಟು…

2 hours ago

ಹನೂರು: ಬಿಆರ್‌ಟಿ ವನ್ಯಜೀವಿ ವ್ಯಾಪ್ತಿಯಲ್ಲಿ ಆನೆ ಸಾವು

ಹನೂರು: ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಬೈಲೂರು ವನ್ಯಜೀವಿ ವಲಯದ ಪಿ.ಜಿ ಪಾಳ್ಯ ಶಾಖೆ ಮಾವತ್ತೂರು…

2 hours ago

ಕೋಮುಗಲಭೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿ: ಆರ್‌.ಅಶೋಕ ಆಗ್ರಹ

ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ರಾಜಕಾರಣ: ವಿಪಕ್ಷ ನಾಯಕ ಬೆಂಗಳೂರು: ನಾಗಮಂಗಲದ ಕೋಮುಗಲಭೆ, ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್‌ ಧ್ವಜ ಹಾರಿಸಿದ ಘಟನೆ ಹಾಗೂ…

3 hours ago

ಜೊತೆಗಿದ್ದ ಯುವತಿಗೆ ಲೈಂಗಿಕ ಕಿರುಕುಳ: ಕೊರಿಯೋಗ್ರಾಫರ್‌ ವಿರುದ್ಧ ದೂರು ದಾಖಲು

ಮೈಸೂರು: ಬಾಲಿವುಡ್‌ನಿಂದ ಸ್ಯಾಂಡಲ್‌ವುಡ್‌ ವರೆಗೂ ಅನೇಕ ದಕ್ಷಿಣ ಭಾರತದ ಸ್ಟಾರ್‌ ನಟರಿಗೆ ಕೊರಿಯೋಗ್ರಾಫರ್‌ ಮಾಡಿರುವ ಹೆಸರಾಂತ ತೆಲುಗು ಡ್ಯಾನ್ಸ್ ಕೊರಿಯೋಗ್ರಾಫರ್‌…

3 hours ago