ಹಾಡು ಪಾಡು

ಹಾಳೆ ಅಂಬುಲೆ ಉಯ್ಯಾಲೆ ಆಡಿ…

ನಾನು ಕೆಲಸ ಮಾಡುವ ಪಿರಿಯಾಪಟ್ಟಣದ ಶಾಲೆ ಮೈಸೂರು ಜಿಲ್ಲೆಯಲ್ಲೇ ವಿಶೇಷವಾದ ಶಾಲೆ. ಮೈಸೂರು ಜಿಲ್ಲೆಗೆ ಸೇರಿದ್ದರೂ ಕೊಡಗು ಜಿಲ್ಲೆಗೆ ಸಮೀಪ ಇದೆ. ವಾತಾವರಣ ಕೊಡಗಿನದೇ. ಹತ್ತಿರದಲ್ಲೇ ಜೇನುಕುರುಬರ ಹಾಡಿಗಳು, ಆನೆ ಕ್ಯಾಂಪ್, ಟಿಬೆಟಿಯನ್ ಕಾಲೋನಿ, ಒಂದೊಂದು ದಿಕ್ಕಿನಲ್ಲಿ ಸ್ವಲ್ಪವೇ ದೂರ ಹೋದರೂ ಬೇರೆಯದೇ ಸಂಸೃತಿ ಅನುಭವಕ್ಕೆ ಬರುತ್ತದೆ. ನಮ್ಮ ಶಾಲೆಗೆ ಕನ್ನಡ, ಉರ್ದು, ಮಲಯಾಳಂ, ಕೊಡವ, ತೆಲುಗು,ಜೇನುಕುರುಬರ ಭಾಷೆ ಮಾತನಾಡುವ ಮಕ್ಕಳು ಬರುತ್ತಾರೆ. ಒಟ್ಟಿಗೇ ಕಲಿಯುತ್ತಾರೆ. ಶಾಲಾ ಕಾರ್ಯಕ್ರಮಗಳು ಬಂದರಂತೂ ಜೇನುಕುರುಬರ

ಹಾಳೆ ಅಂಬುಲೆ ಉಯ್ಯಾಲೆ ಆಡಿ…….. ಎನ್ನುವ ನೃತ್ಯ ಮತ್ತು ಕೊಡವರ “ವಾಲಗ ನೃತ್ಯ ಇರಲೇ ಬೇಕು. ಮಸಣಿಕಮ್ಮ, ಕನ್ನಂಬಾಡಮ್ಮ ಜಾತ್ರೆ, ಕುಂಡೆ ಹಬ್ಬ, ರಂಝಾನ್ ಸಮಯದಲ್ಲಿ ಬರುವ ಅಂಗಡಿಗಳು..ಇವೆಲ್ಲವನ್ನೂ ಜಾತಿ ಧರ್ಮದ ಹಂಗಿಲ್ಲದೇ ಆಚರಿಸುತ್ತಾರೆ. ನಿಜವಾದ ಅರ್ಥದ ಬಹುತ್ವ ಇಲ್ಲಿದೆ. ಇವೆಲ್ಲವೂ ಸಾಧ್ಯವಾಗಿರುವುದು ಸಂವಿಧಾನ ಮತ್ತು ಅದನ್ನು ಅಂಗೀಕರಿಸಿ ನಮಗೆ ನಾವೇ ಅರ್ಪಿಸಿಕೊಂಡ ದಿನದಿಂದ.

ಅನೇಕ ಭಿನ್ನಾಭಿಪ್ರಾಯಗಳನ್ನು, ಬೇರೆ ಬೇರೆ ನಂಬಿಕೆ, ಸಂಪ್ರದಾಯಗಳನ್ನು ಇಟ್ಟುಕೊಂಡೂ ಸಹ ಒಂದಾಗಲು ಸಾಧ್ಯವಿರುವುದೇ ಇದರ ಶಕ್ತಿ. ಸಂವಿಧಾನವನ್ನು ಬದಲಾಯಿಸಲು ಬಂದಿ ದ್ದೇವೆ ಎಂದಾಗ, ದೇಶದ ರಾಜಧಾನಿಯಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟ ಪರಿಣಾಮ ಕರ್ನಾ ಟಕದ ಪ್ರತಿ ಶಾಲೆಯ ಮಕ್ಕಳ ಬಾಯಲ್ಲಿ ಇಂದು ಸಂವಿಧಾನದ ಪ್ರಸ್ತಾವನೆ ಕೇಳಿಬರುತ್ತಿದೆ. ಅದರ ಪ್ರತಿಯೊಂದು ಅಕ್ಷರವೂ ನಮ್ಮ ದಿನ ದಿನದ ಬದುಕಿಗೆ ಬಂದಾಗಲೇ, ಆಚರಣೆಗೆ ಬಂದಾಗಲೇ ನಿಜ ಅರ್ಥದಲ್ಲಿ ಗಣರಾಜ್ಯ ದಿನ.

ಚಿತ್ರಾ ವೆಂಕಟರಾಜು, ರಂಗನಟಿ ಮತ್ತು ಶಿಕ್ಷಕಿ, ಚಾಮರಾಜನಗರ 

ಆಂದೋಲನ ಡೆಸ್ಕ್

Recent Posts

ಟಿವಿಕೆ ಗೆಲುವು : ಹನೂರಲ್ಲಿ ಸಂಭ್ರಮಾಚರಣೆ

ಹನೂರು : ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿರುವುದಕ್ಕೆ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ…

1 hour ago

ಪ.ಬಂಗಾಳ | ವಿಟೋ ಅಧಿಕಾರ ಬಳಸಿ ಮಂತ್ರಿಮಂಡಳ ವಿಸರ್ಜಿಸಿದ ರಾಜ್ಯಪಾಲ ; ದೀದಿಗೆ ಹಿನ್ನೆಡೆ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಹು ಮತ ಗಳಿಸದೇ ಸೋಲನ್ನು ಅನುಭವಿಸಿದರೂ ಮುಖ್ಯಮಂತ್ರಿ…

1 hour ago

ಹನೂರು | ಕಾಡು ಹಂದಿ ದಾಳಿ ; ರೈತನಿಗೆ ಗಂಭೀರ ಗಾಯ

ಹನೂರು : ತಾಲ್ಲೂಕಿನ ದಿನ್ನಳ್ಳಿ ರಸ್ತೆಯ ಸಮೀಪದ ಜಮೀನೊಂದರಲ್ಲಿ ಕಾಡು ಹಂದಿ ದಾಳಿ ನಡೆಸಿ ರೈತನಿಗೆ ಗಂಭೀರ ಗಾಯಗೊಳಿಸಿರುವ ಘಟನೆ…

2 hours ago

ಡಿಎಂಕೆ-ಎಐಎಡಿಎಂಕೆ ಮೈತ್ರಿ ವದಂತಿ ; ಸ್ಟಾಲಿನ್‌ ಹೇಳಿದ್ದೇನು?

ಚೆನ್ನೆ : ತಮಿಳುನಾಡಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ. 108 ಸ್ಥಾನಗಳೊಂದಿಗೆ ಅತಿ ದೊಡ್ಡ…

2 hours ago

ಮೇಲು-ಕೀಳು ಕಳೆಯಲಿ ; ಸರ್ವರೂ ಒಂದೇ ಎಂಬ ಮನೋಭಾವ ಮೂಡಲಿ : ಮೋಹನ್‌ ಭಾಗವತ್‌

ಮೈಸೂರು : ಮೇಲು-ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕ ಭಾವ ಭಾರತೀಯರಲ್ಲಿ ಮೂಡಬೇಕು ಎಂದು ರಾಷ್ಟ್ರೀಯ…

2 hours ago

ಬೆಂಗಳೂರು ಕೈತಪ್ಪಿದ ಐಪಿಎಲ್‌ ಫೈನಲ್‌ ಪಂದ್ಯ : ಕೆಎಸ್‌ಸಿಎ ಹೇಳಿದ್ದೇನು?

ಬೆಂಗಳೂರು : ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್) 2026ರ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಧಿಕೃತವಾಗಿ ಸ್ಥಳಾಂತರಿಸಿದ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್…

2 hours ago