ಹಾಡು ಪಾಡು

ಈಗ ಗಣರಾಜ್ಯೋತ್ಸವದಲ್ಲೂ ದ್ವೇಷದ ಉರಿಗಾಳಿ

ಗಣರಾಜ್ಯೋತ್ಸವ ಅಂದರೆ ನನಗೆ ನೆನಪಾಗೋದು ಶಾಲಾ ದಿನಗಳು. ಗಣರಾಜ್ಯದ ಹಿಂದಿನ ಎರಡು ಮೂರು ದಿನಗಳು ಯಾವುದೇ ತರಗತಿ ನಡೆಯುತ್ತಿರ ಲಿಲ್ಲ. ಮೇಡಂ ಬಂದು ಹಾಡು, ನೃತ್ಯ, ನಾಟಕ ಅಂತ್ಹೇಳಿ ಯರ‍್ಯಾರು ಭಾಗವಹಿಸುತ್ತೀರ? ಎಂದು ಕೇಳಿ ಅಂದಿನಂದಲೇ ತಯಾರಿ ಶುರುವಾಗುತ್ತಿತ್ತು.

ವಿವಿಧ ತರಗತಿ ವಿದ್ಯಾರ್ಥಿಗಳೆಲ್ಲ ಹೆಸರು ಕೊಡುತ್ತಿದ್ದರು. ಹೆಚ್ಚಿಗೆ ದೇಶಭಕ್ತಿ ಗೀತೆಗಳಿಗೆ ನೃತ್ಯ ಇರುತ್ತಿತ್ತು. ನಾನು ರಾಷ್ಟ್ರನಾಯಕರ ಬಗ್ಗೆ ಕಿರು ಪರಿಚಯ ಮಾಡುತ್ತಿದ್ದೆ. ಗಣರಾಜ್ಯದ ಹಿಂದಿನ ದಿನ ಶಾಲಾ ಆವರಣದ ಸ್ವಚ್ಛತೆ ಮಾಡಿ ನೀರೆರಚಿ ಧೂಳು ಏಳದ ಹಾಗೆ ಮಾಡಿ ಧ್ವಜ ಕಂಬದ ಸುತ್ತ ಹುಡುಗಿಯರು ರಂಗೋಲಿ ಬಿಟ್ಟಿದ್ದರೆ, ಹುಡುಗರು ಗುಡ್ಡಮಠಕ್ಕೆ ಹೋಗಿ ಚೆಂಡುಹೂ, ರೋಜ್ಯದ ಹೂ, ದಾಸವಾಳ, ನೆಲಗುಲಾಬಿ ತಂದು ಅಲಂಕರಿಸುತ್ತಿದ್ದೆವು. ನಾನು ಭಾರತದ ಭೂಪಟ ಬಿಡಿಸಿ ಉಪ್ಪಿಗೆ ಕೇಸರಿ, ಹಸಿರು ಬಣ್ಣ ಮಿಶ್ರ ಮಾಡಿ ಮಿಂಚಿಸುತ್ತಿದ್ದೆ. ಈಗ ರಾಷ್ಟ್ರೀಯ ಹಬ್ಬಗಳಿಗೂ ಧರ್ಮ, ಜಾತಿ ದ್ವೇಷದ ಬಿಸಿ ತಗುಲಿ ಸವೆಯುತ್ತಿವೆ. ಯಾವಾಗ ಬೇಕಾದರೂ ಹೊತ್ತಿ ಉರಿಯಬಹುದಾಗಿದೆ. ಗಣರಾಜ್ಯೋತ್ಸವದಲ್ಲಿ ‘ಆ ಫೋಟೋ ಇಟ್ಟಿಲ್ಲ’ ಅಂತ ಒಬ್ಬರು. ‘ಇಡಲ್ಲ’ ಅಂತ ಇನ್ನೊಬ್ಬರು. ಆ ಮಗೂಗೆ ಆ ವೇಷ ಹಾಕಿಸಿದ್ದು ಸರಿಯಿಲ್ಲ ಅಂತಲೂ ಜಗಳ ಮಾಡುವರು. ಸಹಿಷ್ಣುತೆ ಯಾರಲ್ಲೂ ಇಲ್ಲ. ಬಣ್ಣಗಳ ಬಗ್ಗೆಯೂ ದ್ವೇಷವಿದೆ. ಆ ಬಣ್ಣ ಬೇಡ ಅಂತ ಒಬ್ಬರಾದರೆ ಇನ್ನೊಬ್ಬರಿಗೆ ಮತ್ತೊಂದು ಬಣ್ಣ ಬೇಕಾಗಿದೆ. ಬಟ್ಟೆ, ಕ್ಯಾಪು, ಉಡುಪಿಗೂ ವಿರೋಧವಿದೆ. ಧ್ವಜವನ್ನು ಹಾರಿಸಿದವರ‍್ಯಾರು ಎಂಬುದಕ್ಕೂ ಕಾರಣ ನೀಡಬೇಕಾಗಿದೆ.

ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಡುವ ನುಡಿಗಳೇ ಇಂದಿನ ದಿನಗಳಲ್ಲಿ ಕೇಳಿಸುತ್ತಿವೆ. ಎಲ್ಲಾ ಗಡಿಗಳನ್ನು ಮೀರಿ ಭಾರತದ ಸಮಸ್ತ ಜನತೆಯು ಕೂಡಿ ಆಚರಿಸಬೇಕಿದ್ದ ಗಣ ರಾಜ್ಯವು ಇಂದು ಜಾತಿ, ಮತಗಳ ಅಂತರದ ಜನಗಳ ಮಧ್ಯೆ ಬಡವಾಗುತ್ತಿದೆ. ಸೊಗಸು ಕುಂದುತ್ತಿದೆ. ಒಂದೇ ತೋಟದ ಹೂಗಳೆಂಬ ಏಕತೆ ನಶಿಸುತ್ತ ‘ನಾನೇ ಬೇರೆ-ನೀನೇ ಬೇರೆ’ ಎಂಬಂತಿರುವುದು ಶೋಚನೀಯ. ಇತ್ತೀಚೆಗೆ ಹೆಚ್ಚಿನ ಜನರಲ್ಲಿ ಜಾತಿ- ಧರ್ಮದ ಅಮಲು ಏರಿ ರಾಷ್ಟ್ರೀಯತೆ, ದೇಶಪ್ರೇಮ ಇವುಗಳನ್ನು ಬುಡಮೇಲು ಮಾಡಲು ಕಾಯುತ್ತ ಸಮಾಜದಲ್ಲಿ ಖುಷಿಯ ವಾತಾವರಣ ಕೆಡಿಸುತ್ತಿವೆ.

ಅಜಯ್ ಕುಮಾರ್ ಎಂ ಗುಂಬಳ್ಳಿ, ಯುವಕಥೆಗಾರ, ಯಳಂದೂರು ತಾಲ್ಲೂಕು

ಆಂದೋಲನ ಡೆಸ್ಕ್

Recent Posts

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಅಂತ್ಯ

5,54,32,314 ಎನ್ಯುಮರೇಷನ್ ಫಾರಂ ಹಂಚಿಕೆ ; ಶೇ.100 ರಷ್ಟು ಡಿಜಿಟಲೀಕರಣ ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)…

4 hours ago

ಮೈಸೂರು | ದಸರಾ ವೇಳೆಗೆ ಫುಟ್‌ಪಾತ್‌ಗಳ ದುರಸ್ತಿಗೆ ಸೂಚನೆ

ಮೈಸೂರು‌ : ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದ್ದು,…

4 hours ago

ಪ.ಬಂಗಾಳ | ಬೆಂಕಿ ಅವಘಡದಲ್ಲಿ ಏಳು ಮಂದಿ ಸಾವು, ಹಲವರು ಗಂಭೀರ

ತಾರಾಪಿತ್ (ಪಶ್ಚಿಮ ಬಂಗಾಳ) : ಬೆಂಕಿ ಅವಘಡದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಪಶ್ಚಿಮ…

5 hours ago

ಯಳಂದೂರು | ಚಿರತೆ ದಾಳಿಗೆ ಕರು ಬಲಿ

ಯಳಂದೂರು : ಚಿರತೆ ದಾಳಿಗೆ ಕರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಯರಗಂಬಳ್ಳಿ ಗ್ರಾಮದ ಶೋಭಾ ಕೋಂ…

6 hours ago

ಸಿಡಬ್ಲ್ಯುಎಂಎ ಆದೇಶ ಪಾಲಿಸಿ ; ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧದ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾವೇರಿ ನೀರು ನಿರ್ವಹಣಾ…

7 hours ago

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಚ್1ಎನ್1‌ ಸೋಂಕು ದೃಢ

ಬೆಂಗಳೂರು : ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 (H1N1) ದೃಢಪಟ್ಟಿದ್ದು ಆತಂಕ ಮೂಡಿಸಿದೆ. ಸದ್ಯಕ್ಕೆ ಹೈಸ್ಕೂಲ್ ಮಾತ್ರ…

7 hours ago