ಹಾಡು ಪಾಡು

ಹಾಳೆ ಅಂಬುಲೆ ಉಯ್ಯಾಲೆ ಆಡಿ…

ನಾನು ಕೆಲಸ ಮಾಡುವ ಪಿರಿಯಾಪಟ್ಟಣದ ಶಾಲೆ ಮೈಸೂರು ಜಿಲ್ಲೆಯಲ್ಲೇ ವಿಶೇಷವಾದ ಶಾಲೆ. ಮೈಸೂರು ಜಿಲ್ಲೆಗೆ ಸೇರಿದ್ದರೂ ಕೊಡಗು ಜಿಲ್ಲೆಗೆ ಸಮೀಪ ಇದೆ. ವಾತಾವರಣ ಕೊಡಗಿನದೇ. ಹತ್ತಿರದಲ್ಲೇ ಜೇನುಕುರುಬರ ಹಾಡಿಗಳು, ಆನೆ ಕ್ಯಾಂಪ್, ಟಿಬೆಟಿಯನ್ ಕಾಲೋನಿ, ಒಂದೊಂದು ದಿಕ್ಕಿನಲ್ಲಿ ಸ್ವಲ್ಪವೇ ದೂರ ಹೋದರೂ ಬೇರೆಯದೇ ಸಂಸೃತಿ ಅನುಭವಕ್ಕೆ ಬರುತ್ತದೆ. ನಮ್ಮ ಶಾಲೆಗೆ ಕನ್ನಡ, ಉರ್ದು, ಮಲಯಾಳಂ, ಕೊಡವ, ತೆಲುಗು,ಜೇನುಕುರುಬರ ಭಾಷೆ ಮಾತನಾಡುವ ಮಕ್ಕಳು ಬರುತ್ತಾರೆ. ಒಟ್ಟಿಗೇ ಕಲಿಯುತ್ತಾರೆ. ಶಾಲಾ ಕಾರ್ಯಕ್ರಮಗಳು ಬಂದರಂತೂ ಜೇನುಕುರುಬರ

ಹಾಳೆ ಅಂಬುಲೆ ಉಯ್ಯಾಲೆ ಆಡಿ…….. ಎನ್ನುವ ನೃತ್ಯ ಮತ್ತು ಕೊಡವರ “ವಾಲಗ ನೃತ್ಯ ಇರಲೇ ಬೇಕು. ಮಸಣಿಕಮ್ಮ, ಕನ್ನಂಬಾಡಮ್ಮ ಜಾತ್ರೆ, ಕುಂಡೆ ಹಬ್ಬ, ರಂಝಾನ್ ಸಮಯದಲ್ಲಿ ಬರುವ ಅಂಗಡಿಗಳು..ಇವೆಲ್ಲವನ್ನೂ ಜಾತಿ ಧರ್ಮದ ಹಂಗಿಲ್ಲದೇ ಆಚರಿಸುತ್ತಾರೆ. ನಿಜವಾದ ಅರ್ಥದ ಬಹುತ್ವ ಇಲ್ಲಿದೆ. ಇವೆಲ್ಲವೂ ಸಾಧ್ಯವಾಗಿರುವುದು ಸಂವಿಧಾನ ಮತ್ತು ಅದನ್ನು ಅಂಗೀಕರಿಸಿ ನಮಗೆ ನಾವೇ ಅರ್ಪಿಸಿಕೊಂಡ ದಿನದಿಂದ.

ಅನೇಕ ಭಿನ್ನಾಭಿಪ್ರಾಯಗಳನ್ನು, ಬೇರೆ ಬೇರೆ ನಂಬಿಕೆ, ಸಂಪ್ರದಾಯಗಳನ್ನು ಇಟ್ಟುಕೊಂಡೂ ಸಹ ಒಂದಾಗಲು ಸಾಧ್ಯವಿರುವುದೇ ಇದರ ಶಕ್ತಿ. ಸಂವಿಧಾನವನ್ನು ಬದಲಾಯಿಸಲು ಬಂದಿ ದ್ದೇವೆ ಎಂದಾಗ, ದೇಶದ ರಾಜಧಾನಿಯಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟ ಪರಿಣಾಮ ಕರ್ನಾ ಟಕದ ಪ್ರತಿ ಶಾಲೆಯ ಮಕ್ಕಳ ಬಾಯಲ್ಲಿ ಇಂದು ಸಂವಿಧಾನದ ಪ್ರಸ್ತಾವನೆ ಕೇಳಿಬರುತ್ತಿದೆ. ಅದರ ಪ್ರತಿಯೊಂದು ಅಕ್ಷರವೂ ನಮ್ಮ ದಿನ ದಿನದ ಬದುಕಿಗೆ ಬಂದಾಗಲೇ, ಆಚರಣೆಗೆ ಬಂದಾಗಲೇ ನಿಜ ಅರ್ಥದಲ್ಲಿ ಗಣರಾಜ್ಯ ದಿನ.

ಚಿತ್ರಾ ವೆಂಕಟರಾಜು, ರಂಗನಟಿ ಮತ್ತು ಶಿಕ್ಷಕಿ, ಚಾಮರಾಜನಗರ 

ಆಂದೋಲನ ಡೆಸ್ಕ್

Recent Posts

ಅಯೋಧ್ಯೆ ರಾಮಮಂದಿರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಲಕ್ನೋ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ…

10 hours ago

ಮುಕ್ತಾಯ ಹಂತಕ್ಕೆ ತಲುಪಿದ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ

ಬೆಂಗಳೂರು: ಉದ್ಯಮಿ ಸಿಜೆ ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ…

10 hours ago

ರಾಮಚಂದ್ರರಾವ್‌ ರಾಸಲೀಲೆ ಪ್ರಕರಣ: ವಿಡಿಯೋ ಅಸಲಿ ಎಂದ ತನಿಖಾ ತಂಡ

ಬೆಂಗಳೂರು: ಕಚೇರಿಯಲ್ಲಿ ಮಹಿಳೆಯರೊಂದಿಗೆ ರಾಮಚಂದ್ರರಾವ್‌ ಅನುಚಿತ ವರ್ತನೆ ಕುರಿತ ವೈರಲ್‌ ವಿಡಿಯೋಗಳು ಅಸಲಿ ಎಂದು ತನಿಖಾ ತಂಡ ದೃಢಪಡಿಸಿದೆ. ಸಮವಸ್ತ್ರದಲ್ಲಿಯೇ…

10 hours ago

ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಪರಿಹಾರಕ್ಕೆ ಯತ್ನ: ಮ್ಯಾಕ್ರನ್‌ ಜೊತೆ ಮೋದಿ ಮಾತುಕತೆ

ನವದೆಹಲಿ: ಮಧ್ಯ ಏಷ್ಯಾದಲ್ಲಿ ಬಿಕ್ಕಟ್ಟು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಜೊತೆ…

10 hours ago

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ನಿಧನ

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಹೋದರಿ ಜವರಮ್ಮ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.…

13 hours ago

ರಾಜ್ಯದಲ್ಲಿ ಮತ್ತೆರಡು ದಿನ ಅಬ್ಬರಿಸಲಿದ್ದಾನೆ ವರುಣ

ಬೆಂಗಳೂರು: ಕರ್ನಾಟಕದ ಹಲವೆಡೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೀದರ್‌, ಕಲಬುರ್ಗಿ,…

13 hours ago