ಗಣರಾಜ್ಯೋತ್ಸವ ಅಂದರೆ ನನಗೆ ನೆನಪಾಗೋದು ಶಾಲಾ ದಿನಗಳು. ಗಣರಾಜ್ಯದ ಹಿಂದಿನ ಎರಡು ಮೂರು ದಿನಗಳು ಯಾವುದೇ ತರಗತಿ ನಡೆಯುತ್ತಿರ ಲಿಲ್ಲ. ಮೇಡಂ ಬಂದು ಹಾಡು, ನೃತ್ಯ, ನಾಟಕ ಅಂತ್ಹೇಳಿ ಯರ್ಯಾರು ಭಾಗವಹಿಸುತ್ತೀರ? ಎಂದು ಕೇಳಿ ಅಂದಿನಂದಲೇ ತಯಾರಿ ಶುರುವಾಗುತ್ತಿತ್ತು.
ವಿವಿಧ ತರಗತಿ ವಿದ್ಯಾರ್ಥಿಗಳೆಲ್ಲ ಹೆಸರು ಕೊಡುತ್ತಿದ್ದರು. ಹೆಚ್ಚಿಗೆ ದೇಶಭಕ್ತಿ ಗೀತೆಗಳಿಗೆ ನೃತ್ಯ ಇರುತ್ತಿತ್ತು. ನಾನು ರಾಷ್ಟ್ರನಾಯಕರ ಬಗ್ಗೆ ಕಿರು ಪರಿಚಯ ಮಾಡುತ್ತಿದ್ದೆ. ಗಣರಾಜ್ಯದ ಹಿಂದಿನ ದಿನ ಶಾಲಾ ಆವರಣದ ಸ್ವಚ್ಛತೆ ಮಾಡಿ ನೀರೆರಚಿ ಧೂಳು ಏಳದ ಹಾಗೆ ಮಾಡಿ ಧ್ವಜ ಕಂಬದ ಸುತ್ತ ಹುಡುಗಿಯರು ರಂಗೋಲಿ ಬಿಟ್ಟಿದ್ದರೆ, ಹುಡುಗರು ಗುಡ್ಡಮಠಕ್ಕೆ ಹೋಗಿ ಚೆಂಡುಹೂ, ರೋಜ್ಯದ ಹೂ, ದಾಸವಾಳ, ನೆಲಗುಲಾಬಿ ತಂದು ಅಲಂಕರಿಸುತ್ತಿದ್ದೆವು. ನಾನು ಭಾರತದ ಭೂಪಟ ಬಿಡಿಸಿ ಉಪ್ಪಿಗೆ ಕೇಸರಿ, ಹಸಿರು ಬಣ್ಣ ಮಿಶ್ರ ಮಾಡಿ ಮಿಂಚಿಸುತ್ತಿದ್ದೆ. ಈಗ ರಾಷ್ಟ್ರೀಯ ಹಬ್ಬಗಳಿಗೂ ಧರ್ಮ, ಜಾತಿ ದ್ವೇಷದ ಬಿಸಿ ತಗುಲಿ ಸವೆಯುತ್ತಿವೆ. ಯಾವಾಗ ಬೇಕಾದರೂ ಹೊತ್ತಿ ಉರಿಯಬಹುದಾಗಿದೆ. ಗಣರಾಜ್ಯೋತ್ಸವದಲ್ಲಿ ‘ಆ ಫೋಟೋ ಇಟ್ಟಿಲ್ಲ’ ಅಂತ ಒಬ್ಬರು. ‘ಇಡಲ್ಲ’ ಅಂತ ಇನ್ನೊಬ್ಬರು. ಆ ಮಗೂಗೆ ಆ ವೇಷ ಹಾಕಿಸಿದ್ದು ಸರಿಯಿಲ್ಲ ಅಂತಲೂ ಜಗಳ ಮಾಡುವರು. ಸಹಿಷ್ಣುತೆ ಯಾರಲ್ಲೂ ಇಲ್ಲ. ಬಣ್ಣಗಳ ಬಗ್ಗೆಯೂ ದ್ವೇಷವಿದೆ. ಆ ಬಣ್ಣ ಬೇಡ ಅಂತ ಒಬ್ಬರಾದರೆ ಇನ್ನೊಬ್ಬರಿಗೆ ಮತ್ತೊಂದು ಬಣ್ಣ ಬೇಕಾಗಿದೆ. ಬಟ್ಟೆ, ಕ್ಯಾಪು, ಉಡುಪಿಗೂ ವಿರೋಧವಿದೆ. ಧ್ವಜವನ್ನು ಹಾರಿಸಿದವರ್ಯಾರು ಎಂಬುದಕ್ಕೂ ಕಾರಣ ನೀಡಬೇಕಾಗಿದೆ.
ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಡುವ ನುಡಿಗಳೇ ಇಂದಿನ ದಿನಗಳಲ್ಲಿ ಕೇಳಿಸುತ್ತಿವೆ. ಎಲ್ಲಾ ಗಡಿಗಳನ್ನು ಮೀರಿ ಭಾರತದ ಸಮಸ್ತ ಜನತೆಯು ಕೂಡಿ ಆಚರಿಸಬೇಕಿದ್ದ ಗಣ ರಾಜ್ಯವು ಇಂದು ಜಾತಿ, ಮತಗಳ ಅಂತರದ ಜನಗಳ ಮಧ್ಯೆ ಬಡವಾಗುತ್ತಿದೆ. ಸೊಗಸು ಕುಂದುತ್ತಿದೆ. ಒಂದೇ ತೋಟದ ಹೂಗಳೆಂಬ ಏಕತೆ ನಶಿಸುತ್ತ ‘ನಾನೇ ಬೇರೆ-ನೀನೇ ಬೇರೆ’ ಎಂಬಂತಿರುವುದು ಶೋಚನೀಯ. ಇತ್ತೀಚೆಗೆ ಹೆಚ್ಚಿನ ಜನರಲ್ಲಿ ಜಾತಿ- ಧರ್ಮದ ಅಮಲು ಏರಿ ರಾಷ್ಟ್ರೀಯತೆ, ದೇಶಪ್ರೇಮ ಇವುಗಳನ್ನು ಬುಡಮೇಲು ಮಾಡಲು ಕಾಯುತ್ತ ಸಮಾಜದಲ್ಲಿ ಖುಷಿಯ ವಾತಾವರಣ ಕೆಡಿಸುತ್ತಿವೆ.
ಅಜಯ್ ಕುಮಾರ್ ಎಂ ಗುಂಬಳ್ಳಿ, ಯುವಕಥೆಗಾರ, ಯಳಂದೂರು ತಾಲ್ಲೂಕು
ಮೈಸೂರಿನ ಕ್ರಾಫರ್ಡ್ ಹಾಲ್ ಎದುರಿನ ಓವೆಲ್ ಮೈದಾನದಲ್ಲಿ ಕ್ರೀಡಾಪಟುಗಳು ಪ್ರತಿನಿತ್ಯ ಕ್ರೀಡಾಭ್ಯಾಸ ನಡೆಸುತ್ತಾರೆ. ಸಾರ್ವಜನಿಕರೂ ಬೆಳಿಗ್ಗೆ ಹಾಗೂ ಸಂಜೆಯ ವೇಳೆ…
ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿಯಲ್ಲಿ ಎಡಗೈ ಮತ್ತು ಬಲಗೈ ಪಂಗಡಗಳಿಗೆ ಸಮಾನವಾಗಿ ಸೌಲಭ್ಯ ಕಲ್ಪಿಸಬೇಕು.…
ಮೈಸೂರಿನ ವಿವಿಧ ವೃತ್ತಗಳಲ್ಲಿ ಹೊಸದಾಗಿ ಸಿಗ್ನಲ್ ಲೈಟ್ಗಳನ್ನು ಅಳವಡಿಸಿದ್ದಾರೆ. ಆದರೆ ಚಾಮರಾಜಪುರಂನ ನ್ಯಾಯಾಲಯದ ಬಳಿ ವಾಹನ ಸಂಚಾರ ಹೆಚ್ಚಾಗಿದ್ದು, ನ್ಯಾಯಾಲಯದ…
ಚಾಮರಾಜನಗರ ಪಟ್ಟಣದಲ್ಲಿರುವ ನಂದಿ ಭವನದಲ್ಲಿ ಮದುವೆ ಮತ್ತು ಇತರ ಸಮಾರಂಭಗಳು ನಡೆಯುತ್ತವೆ. ಕಾರ್ಯಕ್ರಮಗಳು ಮುಗಿದ ಮೇಲೆ ಉಳಿದ ಆಹಾರ ಪದಾರ್ಥಗಳನ್ನು…
ನಕಲಿ ವಿಡಿಯೋಗಳ ಹಾವಳಿ, ಕೃತಕ ಬುದ್ಧಿಮತ್ತೆ ಬಳಸಿ ಡೀಪ್ಫೇಕ್, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವುದನ್ನು ತಡೆಯುವ…
ಮಹಾದೇಶ್ ಎಂ.ಗೌಡ ನಿರಂತರವಾಗಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರಲ್ಲಿ ಭೀತಿ ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ…