ಸಂಗಾತಿಯ ಹಂಗಿಲ್ಲದೆ ಅಮ್ಮನಾದ ಖ್ಯಾತ ಚಿತ್ರತಾರೆ ಭಾವನಾ ರಾಮಣ್ಣ ಜೊತೆ ಮಾತುಕತೆ
ಸಂಭ್ರಮಿಸುವುದು ಅನ್ನೋದಕ್ಕಿಂತ ಮಕ್ಳು ಆರೋಗ್ಯಕರವಾಗಿ ಇರ್ಬೇಕು ಅನ್ನೋ ಕನಸಿತ್ತು. ಇನ್ನೊಂದು ಜೀವವನ್ನು ಹೊತ್ತು ಬದುಕೋದು ಅಂದ್ರೆ ಹೊಂದಿಕೆಯ ಜೀವನಕ್ಕೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವುದು. ಮಗುವನ್ನು ನೋಡಿದ ಮೇಲೆ ನಾನು ಅಮ್ಮನಾದೆ ಅನ್ನೋದನ್ನು ನಂಬಿದೆ. ಗರ್ಭಿಣಿಯಾಗಿದ್ದಾಗ ಮಗುವನ್ನು ಆರೋಗ್ಯ ಪೂರ್ಣವಾಗಿ ಹೆರುವುದಷ್ಟೇ ಮುಖ್ಯವಾಗಿರುತ್ತೆ.
ಎರಡು ಮಕ್ಕಳಲ್ಲಿ ಒಂದು ಮಗುವನ್ನು ಕಳೆದು ಕೊಂಡ ಬೇಜಾರಿತ್ತು. ಒಂದು ಮಗುವನ್ನು ಬಟ್ಟೆ ಯಲ್ಲಿ ಸುತ್ತಿ ತಂದುಕೊಟ್ರು. ಇನ್ನೊಂದು ಮಗು ಐಸಿಯುನಲ್ಲಿತ್ತು. ಹೋಗಿ ಮಗುವನ್ನು ಮುಟ್ಟಿದ ತಕ್ಷಣ ಪ್ರತಿಕ್ರಿಯಿಸಿದಳು ಮಗ್ಳು. ಇಂತಹ ಕ್ಷಣ ತಾಯಿಯಾದವಳಿಗೆ ಮಾತ್ರ ದಕ್ಕುವ ಅನುಭವ. ಮಗುವಿನ ಮೊದಲ ಸ್ಪರ್ಶ ‘ಹೆಣ್ಣಾಗಿ ಹುಟ್ಟಿದ್ದಕ್ಕೆ ಧನ್ಯಳು’ ಎಂಬ ಭಾವವನ್ನು ಹುಟ್ಟಿಸಿತು. ಗಂಡಿಗೂ ಈ ಸುಖ ಏನಾದ್ರೂ ದಕ್ಕಿದ್ರೆ ಆತ ದೇವತಾ ಪುರುಷನಾಗಿರುತ್ತಿದ್ದ.
ಖಂಡಿತಾ ಇತ್ತು. ಯೋಚನೆ ಮಾಡ್ತಾ ಆರೇಳು ವರ್ಷ ಕಳೆದಿದ್ದೀನಿ. ಸಿಂಗಲ್ ಪೇರೆಂಟಿಂಗ್ ಕಷ್ಟವನ್ನು ಹತ್ತಿರದಿಂದ ನೋಡಿದ್ದೆ. ಹಾಗಾಗಿ ಮಕ್ಳ ಮೇಲೆ ಪರಿಣಾಮ ಬೀರಬಾರದೆಂಬ ಕಾಳಜಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಅಂತಹ ಸಂದರ್ಭ ನಂಗೆ ಬರಲಿಲ್ಲ. ಸಮಾಜದ ಎಲ್ಲಾ ವರ್ಗದವರು ತಾಯ್ತನಕ್ಕೆ ಒತ್ತು ಕೊಡುವುದನ್ನು ನೋಡಿದೆ.
ಅವಳೊಡನೆ ಇರುವ ಪ್ರತೀ ಕ್ಷಣವನ್ನೂ ಸಂಭ್ರಮಿಸುತ್ತಿದ್ದೇನೆ. ನನ್ನಮ್ಮನ ಹೆಸರು ಶಕುಂತಳಾ, ಅವ್ರ ಅಮ್ಮ ಅಂದ್ರೆ ಅಜ್ಜಿಯ ಹೆಸ್ರು ರುಕ್ಮಿಣಿ. ಅವ್ರು ಭೌತಿಕವಾಗಿ ಅಗಲಿ ವರ್ಷಗಳಾದ್ರೂ ಮಾನಸಿಕ ವಾಗಿ ಬಿಟ್ಟು ಹೋಗಿಲ್ಲ.
ವೃತ್ತಿಜೀವನದಲ್ಲಿ ಅವಕಾಶಗಳಿಗಾಗಿ ಅರಸುವ ಸ್ಪರ್ಧಾತ್ಮಕ ಮನೋಭಾವನೆ ನನ್ನಲ್ಲಿ ಇಲ್ಲ. ನನ್ನ ವಯಸ್ಸೂ ಅದಲ್ಲ. ನನ್ನ ನಿರ್ಧಾರಗಳ ಬಗ್ಗೆ ನಂಗೆ ಗಟ್ಟಿಯಾದ ನಂಬಿಕೆಯಿದೆ. ಅಭದ್ರತೆಯ ಭಯ ಇಲ್ಲ. ಸಣ್ಣ ವಯಸ್ಸಿನಲ್ಲಿ ಮಗು ಮಾಡ್ಕೊಂಡಿದ್ರೆ ಆ ಭಯ ಇರ್ತಿತ್ತು.
ಅಂತಹದ್ದೇನಿಲ್ಲ. ರಸ್ತೆಯಲ್ಲಿ ಹೋಗುವವರೂ ‘ಮಗು ಹೇಗಿದೆ? ’ ಎಂದು ಕೇಳ್ತಾರಲ್ಲ ಅದುವೇ ಆಶೀರ್ವಾದ ಎಂದು ಭಾವಿಸುತ್ತೇನೆ. ಇದಕ್ಕೆ ನಾನು ದೇವರಿಗೆ ಋಣಿಯಾಗಿರಬೇಕು.
ಮೈಸೂರು: ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಬಳಿ ಮಾಜಿ ಸಿಎಂ ದೇವರಾಜ ಅರಸು ಅವರ ನೂತನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.…
ವಿಜಯನಗರ: ತುಂಗಭದ್ರಾ ಜಲಾಶಯದಲ್ಲಿ ಅಳವಡಿಸಲಾಗಿರುವ ನೂತನ ಕ್ರೆಸ್ಟ್ ಗೇಟ್ಗಳನ್ನು ಮೂವರು ಮುಖ್ಯಮಂತ್ರಿಗಳು ಉದ್ಘಾಟಿಸಿದ ಅಪರೂಪದ ಸಮಾರಂಭಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.…
ನವದೆಹಲಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಮಂತ್ರಿಗಳಾದ ಶಿವರಾಜ್ ಸಿಂಗ್…
ಬೆಂಗಳೂರು: ರಾಜ್ಯದಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಸಚಿವರಿಗೆ ವಿವಿಧ ಜಿಲ್ಲೆಗಳ ಮೇಲುಸ್ತುವಾರಿಯನ್ನು ಹಂಚಿಕೆ ಮಾಡಿ ಅಧಿಸೂಚನೆ…
ವೆನಿಜುವೆಲಾ: ವೆನಿಜುವೆಲಾ ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಭೂಕಂಪ ಸಂಭವಿಸಿ ಸಾವಿರಾರು ಜನ ಸಾವನ್ನಪ್ಪಿದ್ದು, ಭಾರೀ ಪ್ರಮಾಣದ ಜನರು…
ಕ್ಯಾರಕಾಸ್ : ವೆನೆಜುವೆಲಾ ಕರಾವಳಿಯ ಸಮೀಪ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ದೇಶವನ್ನು ಬೆಚ್ಚಿಬೀಳಿಸಿವೆ. ರಿಕ್ಟರ್ ಮಾಪಕದಲ್ಲಿ…