ಹಾಡು ಪಾಡು

ತಾಯಂದಿರ ದಿನ ವಿಶೇಷ | ನನ್ನ ಕರುಳ ಕುಡಿ ನನ್ನದೇ ಆಯ್ಕೆ

ಸಂಗಾತಿಯ ಹಂಗಿಲ್ಲದೆ ಅಮ್ಮನಾದ ಖ್ಯಾತ ಚಿತ್ರತಾರೆ ಭಾವನಾ ರಾಮಣ್ಣ ಜೊತೆ ಮಾತುಕತೆ

 

  •  ನಿಮ್ಮ ವೃತ್ತಿಪರ ಒತ್ತಡಗಳ ನಡುವೆ ತಾಯ್ತನವನ್ನು ಹೇಗೆ ಸಂಭ್ರಮಿಸಿದ್ರಿ?

ಸಂಭ್ರಮಿಸುವುದು ಅನ್ನೋದಕ್ಕಿಂತ ಮಕ್ಳು ಆರೋಗ್ಯಕರವಾಗಿ ಇರ್ಬೇಕು ಅನ್ನೋ ಕನಸಿತ್ತು. ಇನ್ನೊಂದು ಜೀವವನ್ನು ಹೊತ್ತು ಬದುಕೋದು ಅಂದ್ರೆ ಹೊಂದಿಕೆಯ ಜೀವನಕ್ಕೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವುದು. ಮಗುವನ್ನು ನೋಡಿದ ಮೇಲೆ ನಾನು ಅಮ್ಮನಾದೆ ಅನ್ನೋದನ್ನು ನಂಬಿದೆ. ಗರ್ಭಿಣಿಯಾಗಿದ್ದಾಗ ಮಗುವನ್ನು ಆರೋಗ್ಯ ಪೂರ್ಣವಾಗಿ ಹೆರುವುದಷ್ಟೇ ಮುಖ್ಯವಾಗಿರುತ್ತೆ.

  • ಮಗುವನ್ನು ಮೊದಲು ನೋಡಿದ ಆ ಕ್ಷಣದ ಬಗ್ಗೆ ಏನು ಹೇಳ್ತೀರಿ?

ಎರಡು ಮಕ್ಕಳಲ್ಲಿ ಒಂದು ಮಗುವನ್ನು ಕಳೆದು ಕೊಂಡ ಬೇಜಾರಿತ್ತು. ಒಂದು ಮಗುವನ್ನು ಬಟ್ಟೆ ಯಲ್ಲಿ ಸುತ್ತಿ ತಂದುಕೊಟ್ರು. ಇನ್ನೊಂದು ಮಗು ಐಸಿಯುನಲ್ಲಿತ್ತು. ಹೋಗಿ ಮಗುವನ್ನು ಮುಟ್ಟಿದ ತಕ್ಷಣ ಪ್ರತಿಕ್ರಿಯಿಸಿದಳು ಮಗ್ಳು. ಇಂತಹ ಕ್ಷಣ ತಾಯಿಯಾದವಳಿಗೆ ಮಾತ್ರ ದಕ್ಕುವ ಅನುಭವ. ಮಗುವಿನ ಮೊದಲ ಸ್ಪರ್ಶ ‘ಹೆಣ್ಣಾಗಿ ಹುಟ್ಟಿದ್ದಕ್ಕೆ ಧನ್ಯಳು’ ಎಂಬ ಭಾವವನ್ನು ಹುಟ್ಟಿಸಿತು. ಗಂಡಿಗೂ ಈ ಸುಖ ಏನಾದ್ರೂ ದಕ್ಕಿದ್ರೆ ಆತ ದೇವತಾ ಪುರುಷನಾಗಿರುತ್ತಿದ್ದ.

  • ಪುರುಷ ಸಾಂಗತ್ಯವಿಲ್ಲದೆ ಮಗುವನ್ನು ಪಡೆದುಕೊಂಡರೆ ಸಮಾಜ ಏನನ್ನಬಹುದು ಎಂಬ ಅಂಜಿಕೆ ಇತ್ತೇ?

ಖಂಡಿತಾ ಇತ್ತು. ಯೋಚನೆ ಮಾಡ್ತಾ ಆರೇಳು ವರ್ಷ ಕಳೆದಿದ್ದೀನಿ. ಸಿಂಗಲ್ ಪೇರೆಂಟಿಂಗ್ ಕಷ್ಟವನ್ನು ಹತ್ತಿರದಿಂದ ನೋಡಿದ್ದೆ. ಹಾಗಾಗಿ ಮಕ್ಳ ಮೇಲೆ ಪರಿಣಾಮ ಬೀರಬಾರದೆಂಬ ಕಾಳಜಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಅಂತಹ ಸಂದರ್ಭ ನಂಗೆ ಬರಲಿಲ್ಲ. ಸಮಾಜದ ಎಲ್ಲಾ ವರ್ಗದವರು ತಾಯ್ತನಕ್ಕೆ ಒತ್ತು ಕೊಡುವುದನ್ನು ನೋಡಿದೆ.

  • ಮಗಳು ರುಕ್ಮಿಣಿ ಜೊತೆ ಒಡನಾಟ ಹೇಗಿದೆ? ಮಗಳಿಗೆ ರುಕ್ಮಿಣಿ ಎಂದು ಹೆಸರು ಇಡಲು ಕಾರಣ?

ಅವಳೊಡನೆ ಇರುವ ಪ್ರತೀ ಕ್ಷಣವನ್ನೂ ಸಂಭ್ರಮಿಸುತ್ತಿದ್ದೇನೆ. ನನ್ನಮ್ಮನ ಹೆಸರು ಶಕುಂತಳಾ, ಅವ್ರ ಅಮ್ಮ ಅಂದ್ರೆ ಅಜ್ಜಿಯ ಹೆಸ್ರು ರುಕ್ಮಿಣಿ. ಅವ್ರು ಭೌತಿಕವಾಗಿ ಅಗಲಿ ವರ್ಷಗಳಾದ್ರೂ ಮಾನಸಿಕ ವಾಗಿ ಬಿಟ್ಟು ಹೋಗಿಲ್ಲ.

 

  • ಬದುಕಿನಲ್ಲಿ ಬ್ಯುಸಿ ಇರುವ ನೀವು ಹೇಗೆ ಸಮಯ ಹೊಂದಿಸಿಕೊಳ್ಳುತ್ತೀರಿ?

ವೃತ್ತಿಜೀವನದಲ್ಲಿ ಅವಕಾಶಗಳಿಗಾಗಿ ಅರಸುವ ಸ್ಪರ್ಧಾತ್ಮಕ ಮನೋಭಾವನೆ ನನ್ನಲ್ಲಿ ಇಲ್ಲ. ನನ್ನ ವಯಸ್ಸೂ ಅದಲ್ಲ. ನನ್ನ ನಿರ್ಧಾರಗಳ ಬಗ್ಗೆ ನಂಗೆ ಗಟ್ಟಿಯಾದ ನಂಬಿಕೆಯಿದೆ. ಅಭದ್ರತೆಯ ಭಯ ಇಲ್ಲ. ಸಣ್ಣ ವಯಸ್ಸಿನಲ್ಲಿ ಮಗು ಮಾಡ್ಕೊಂಡಿದ್ರೆ ಆ ಭಯ ಇರ್ತಿತ್ತು.

 

  • ಸಾಮಾನ್ಯವಾಗಿ ತಾಯಂದಿರಿಗೆ ಬಾಲ್ಯದಲ್ಲಿ ತಮಗೆ ಸಿಗದಿರುವುದು ತಮ್ಮ ಮಕ್ಳಿಗೆ ಸಿಗಬೇಕು ಅನ್ನೋ ಹಠ ಇರುತ್ತೆ. ನಿಮ್ಗೆ ಆ ತರಹದ್ದು ಏನಿದೆ?

ಅಂತಹದ್ದೇನಿಲ್ಲ. ರಸ್ತೆಯಲ್ಲಿ ಹೋಗುವವರೂ ‘ಮಗು ಹೇಗಿದೆ? ’ ಎಂದು ಕೇಳ್ತಾರಲ್ಲ ಅದುವೇ ಆಶೀರ್ವಾದ ಎಂದು ಭಾವಿಸುತ್ತೇನೆ. ಇದಕ್ಕೆ ನಾನು ದೇವರಿಗೆ ಋಣಿಯಾಗಿರಬೇಕು.

ಆಂದೋಲನ ಡೆಸ್ಕ್

Recent Posts

ಮೇ.13 ರಿಂದ 3 ದಿನಗಳ ಕಾಲ ಟ್ರಂಪ್‌ ಚೀನಾ ಪ್ರವಾಸ

ವಾಷಿಂಗ್ಟನ್:‌ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಆಹ್ವಾನದ ಮೇರೆಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇ.13ರಿಂದ 15ರವರೆಗೆ ಚೀನಾಗೆ…

2 mins ago

ʻಪ್ರೀತಿ ಎಲ್ಲಕ್ಕಿಂತ ಶಕ್ತಿಶಾಲಿʼ ವಿಜಯ್‌ ಮುಖ್ಯಮಂತ್ರಿ ಆದ ಬೆನ್ನಲ್ಲೇ ತ್ರಿಶಾ ಪೋಸ್ಟ್‌

ಚೆನ್ನೈ : ಜೋಸೆಫ್‌ ವಿಜಯ್ ತಮಿಳುನಾಡಿನ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಅವರ ಆಪ್ತ ಸ್ನೇಹಿತೆ, ನಟಿ…

42 mins ago

ಚಿನ್ನ ಖರೀದಿ ನಿಲ್ಸಿ ; ಇಂಧನ ಕಡಿಮೆ ಬಳಸಿ : ಬೆಲೆ ಏರಿಕೆ ಮುನ್ಸೂಚನೆ ಕೊಟ್ರಾ ಪ್ರಧಾನಿ ಮೋದಿ?

ಹೈದರಾಬಾದ್‌ : ಅಮೆರಿಕ-ಇರಾನ್‌ ಸಂಘರ್ಷವು ಜಾಗತಿಕ ತೈಲ ಮಾರುಕಟ್ಟೆ ಹಾಗೂ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಜಾಗತಿಕ ತೈಲ…

2 hours ago

ದ ಗ್ರೇಟ್‌ ನಿಕೋಬಾರ್‌ ಯೋಜನೆ : ವಿಕಾಸವೋ? ವಿನಾಶವೋ?

ಶುಭಾ ಖಟಾವಕರ ಮ್ಹೆತ್ರಸ್‌ 72,000 ಕೋಟಿ ರೂ.ಗಳಿಂದ 90,000 ಕೋಟಿ ರೂ.ವೆಚ್ಚದ ಯೋಜನೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ…

3 hours ago

ಕಳೆದ ಚುನಾವಣೆ : ಇಬ್ಬರು ಪರಿಣಿತರ ವಿಶ್ಲೇಷಣೆ

ರಾಜಕಾರಣಿಗಳು ಕೊನೆಗೂ ಕೇಳಿಕೊಳ್ಳಬೇಕಿರುವುದು ನೀವು ಯಾರೋ ಒಬ್ಬರ ಬದುಕು ಚಂದವಾಗಲು ಕಾರಣವಾದಿರಾ ಎಂಬ ಪ್ರಶ್ನೆ ಮಾತ್ರವೇ. ಅದೊಂದೇ ಸತ್ಯ. ಉಳಿದದ್ದೆಲ್ಲ…

4 hours ago

ಮಡಿಕೇರಿ | ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ; ಸಾರ್ವಜನಿಕೆ ಕೆಲಸ ವಿಳಂಬ

ಮಡಿಕೇರಿ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ನಗರಸಭೆಯಲ್ಲಿ ಖಾಯಂ ಸಿಬ್ಬಂದಿ ಸಂಖ್ಯೆ ಕಡಿಮೆಯಿದ್ದು,…

4 hours ago