ಸಂಗಾತಿಯ ಹಂಗಿಲ್ಲದೆ ಅಮ್ಮನಾದ ಖ್ಯಾತ ಚಿತ್ರತಾರೆ ಭಾವನಾ ರಾಮಣ್ಣ ಜೊತೆ ಮಾತುಕತೆ
ಸಂಭ್ರಮಿಸುವುದು ಅನ್ನೋದಕ್ಕಿಂತ ಮಕ್ಳು ಆರೋಗ್ಯಕರವಾಗಿ ಇರ್ಬೇಕು ಅನ್ನೋ ಕನಸಿತ್ತು. ಇನ್ನೊಂದು ಜೀವವನ್ನು ಹೊತ್ತು ಬದುಕೋದು ಅಂದ್ರೆ ಹೊಂದಿಕೆಯ ಜೀವನಕ್ಕೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವುದು. ಮಗುವನ್ನು ನೋಡಿದ ಮೇಲೆ ನಾನು ಅಮ್ಮನಾದೆ ಅನ್ನೋದನ್ನು ನಂಬಿದೆ. ಗರ್ಭಿಣಿಯಾಗಿದ್ದಾಗ ಮಗುವನ್ನು ಆರೋಗ್ಯ ಪೂರ್ಣವಾಗಿ ಹೆರುವುದಷ್ಟೇ ಮುಖ್ಯವಾಗಿರುತ್ತೆ.
ಎರಡು ಮಕ್ಕಳಲ್ಲಿ ಒಂದು ಮಗುವನ್ನು ಕಳೆದು ಕೊಂಡ ಬೇಜಾರಿತ್ತು. ಒಂದು ಮಗುವನ್ನು ಬಟ್ಟೆ ಯಲ್ಲಿ ಸುತ್ತಿ ತಂದುಕೊಟ್ರು. ಇನ್ನೊಂದು ಮಗು ಐಸಿಯುನಲ್ಲಿತ್ತು. ಹೋಗಿ ಮಗುವನ್ನು ಮುಟ್ಟಿದ ತಕ್ಷಣ ಪ್ರತಿಕ್ರಿಯಿಸಿದಳು ಮಗ್ಳು. ಇಂತಹ ಕ್ಷಣ ತಾಯಿಯಾದವಳಿಗೆ ಮಾತ್ರ ದಕ್ಕುವ ಅನುಭವ. ಮಗುವಿನ ಮೊದಲ ಸ್ಪರ್ಶ ‘ಹೆಣ್ಣಾಗಿ ಹುಟ್ಟಿದ್ದಕ್ಕೆ ಧನ್ಯಳು’ ಎಂಬ ಭಾವವನ್ನು ಹುಟ್ಟಿಸಿತು. ಗಂಡಿಗೂ ಈ ಸುಖ ಏನಾದ್ರೂ ದಕ್ಕಿದ್ರೆ ಆತ ದೇವತಾ ಪುರುಷನಾಗಿರುತ್ತಿದ್ದ.
ಖಂಡಿತಾ ಇತ್ತು. ಯೋಚನೆ ಮಾಡ್ತಾ ಆರೇಳು ವರ್ಷ ಕಳೆದಿದ್ದೀನಿ. ಸಿಂಗಲ್ ಪೇರೆಂಟಿಂಗ್ ಕಷ್ಟವನ್ನು ಹತ್ತಿರದಿಂದ ನೋಡಿದ್ದೆ. ಹಾಗಾಗಿ ಮಕ್ಳ ಮೇಲೆ ಪರಿಣಾಮ ಬೀರಬಾರದೆಂಬ ಕಾಳಜಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಅಂತಹ ಸಂದರ್ಭ ನಂಗೆ ಬರಲಿಲ್ಲ. ಸಮಾಜದ ಎಲ್ಲಾ ವರ್ಗದವರು ತಾಯ್ತನಕ್ಕೆ ಒತ್ತು ಕೊಡುವುದನ್ನು ನೋಡಿದೆ.
ಅವಳೊಡನೆ ಇರುವ ಪ್ರತೀ ಕ್ಷಣವನ್ನೂ ಸಂಭ್ರಮಿಸುತ್ತಿದ್ದೇನೆ. ನನ್ನಮ್ಮನ ಹೆಸರು ಶಕುಂತಳಾ, ಅವ್ರ ಅಮ್ಮ ಅಂದ್ರೆ ಅಜ್ಜಿಯ ಹೆಸ್ರು ರುಕ್ಮಿಣಿ. ಅವ್ರು ಭೌತಿಕವಾಗಿ ಅಗಲಿ ವರ್ಷಗಳಾದ್ರೂ ಮಾನಸಿಕ ವಾಗಿ ಬಿಟ್ಟು ಹೋಗಿಲ್ಲ.
ವೃತ್ತಿಜೀವನದಲ್ಲಿ ಅವಕಾಶಗಳಿಗಾಗಿ ಅರಸುವ ಸ್ಪರ್ಧಾತ್ಮಕ ಮನೋಭಾವನೆ ನನ್ನಲ್ಲಿ ಇಲ್ಲ. ನನ್ನ ವಯಸ್ಸೂ ಅದಲ್ಲ. ನನ್ನ ನಿರ್ಧಾರಗಳ ಬಗ್ಗೆ ನಂಗೆ ಗಟ್ಟಿಯಾದ ನಂಬಿಕೆಯಿದೆ. ಅಭದ್ರತೆಯ ಭಯ ಇಲ್ಲ. ಸಣ್ಣ ವಯಸ್ಸಿನಲ್ಲಿ ಮಗು ಮಾಡ್ಕೊಂಡಿದ್ರೆ ಆ ಭಯ ಇರ್ತಿತ್ತು.
ಅಂತಹದ್ದೇನಿಲ್ಲ. ರಸ್ತೆಯಲ್ಲಿ ಹೋಗುವವರೂ ‘ಮಗು ಹೇಗಿದೆ? ’ ಎಂದು ಕೇಳ್ತಾರಲ್ಲ ಅದುವೇ ಆಶೀರ್ವಾದ ಎಂದು ಭಾವಿಸುತ್ತೇನೆ. ಇದಕ್ಕೆ ನಾನು ದೇವರಿಗೆ ಋಣಿಯಾಗಿರಬೇಕು.
ವಾಷಿಂಗ್ಟನ್: ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಆಹ್ವಾನದ ಮೇರೆಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇ.13ರಿಂದ 15ರವರೆಗೆ ಚೀನಾಗೆ…
ಚೆನ್ನೈ : ಜೋಸೆಫ್ ವಿಜಯ್ ತಮಿಳುನಾಡಿನ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಅವರ ಆಪ್ತ ಸ್ನೇಹಿತೆ, ನಟಿ…
ಹೈದರಾಬಾದ್ : ಅಮೆರಿಕ-ಇರಾನ್ ಸಂಘರ್ಷವು ಜಾಗತಿಕ ತೈಲ ಮಾರುಕಟ್ಟೆ ಹಾಗೂ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಜಾಗತಿಕ ತೈಲ…
ಶುಭಾ ಖಟಾವಕರ ಮ್ಹೆತ್ರಸ್ 72,000 ಕೋಟಿ ರೂ.ಗಳಿಂದ 90,000 ಕೋಟಿ ರೂ.ವೆಚ್ಚದ ಯೋಜನೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ…
ರಾಜಕಾರಣಿಗಳು ಕೊನೆಗೂ ಕೇಳಿಕೊಳ್ಳಬೇಕಿರುವುದು ನೀವು ಯಾರೋ ಒಬ್ಬರ ಬದುಕು ಚಂದವಾಗಲು ಕಾರಣವಾದಿರಾ ಎಂಬ ಪ್ರಶ್ನೆ ಮಾತ್ರವೇ. ಅದೊಂದೇ ಸತ್ಯ. ಉಳಿದದ್ದೆಲ್ಲ…
ಮಡಿಕೇರಿ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ನಗರಸಭೆಯಲ್ಲಿ ಖಾಯಂ ಸಿಬ್ಬಂದಿ ಸಂಖ್ಯೆ ಕಡಿಮೆಯಿದ್ದು,…