ಹಾಡು ಪಾಡು

ರಾಗಿ ಒಕ್ಕಣೆ ಮತ್ತು ಬರ್ಲು ಪೂಜೆ

• ಚೇತನ್ ಎಸ್.ಪೊನ್ನಾಚಿ

ರಾಗಿ ಒಕ್ಕಣೆಯ ಕಾಲ ಬಂತೆಂದರೆ ಸಾಕು ನಮಗೆ ಎಲ್ಲಿಲ್ಲದ ಸಂಭ್ರಮ. ಮನೆಯವರೆಲ್ಲ ಒಕ್ಕಣೆ ಕೆಲಸದಲ್ಲಿ ಮಗ್ನರಾಗಿರುತ್ತಿದ್ದರಿಂದ ಶಾಲೆಗೆ ಹೋಗುತ್ತಿದ್ದುದ್ದು… ತಪ್ಪಿಸಿಕೊಳ್ಳುತ್ತಿದ್ದರ ಕಡೆಗಿನ ಗಮನ ಸ್ವಲ್ಪ ಕಡಿಮೆ ಇರೋದು. ನನಗೋ ಎಲ್ಲಿಲ್ಲದ ಸಂಭ್ರಮ… ಸಡಗರ… ಶಾಲೆ ತಪ್ಪಿಸಿಕೊಳ್ಳುವುದಕ್ಕೆ ಏನಾದರೂ ಮಾಡಬೇಕಲ್ಲ ಅಂದುಕೊಂಡು ಆ ದಿನ ರಾತ್ರಿಯಿಂದಲೇ ಜ್ವರ ಬಂದವನಂತೆ ಹೋಗಿ ಒಲೆ ಮುಂದೆ ಸಪ್ಪಗೆ ಕುಳಿತುಕೊಳ್ಳುವುದು… ಮಲಗುವುದು… ಮುಲುಗುವುದು… ಮಾಡುತ್ತಿದ್ದೆ.

ಬೆಳಿಗ್ಗೆ ನಮ್ಮ ಅವ್ವ ಬಂದವಳೆ ಜ್ವರ ಏನಾದರೂ ಬಂದಿರಬಹುದೆನೋ ಅಂತ ಕುತ್ತಿಗೆ ಹಣೆಯನ್ನೆಲ್ಲ ಮುಟ್ಟಿ ನೋಡಿದಳಾದರೂ ವ್ಯತ್ಯಾಸ ಕಾಣಿಸಲಿಲ್ಲ.
ಮೈ ಬಿಸಿ ಇಲ್ಲ ಆದರೂ ಸಪ್ಪಗಿದ್ದಾನಲ್ಲ ಏಕೆ..? “ಏನನ್ನಾದರೂ ನೋಡಿ ಅಂಜಿಕೊಂಡೇನೋ’ ಅಂತ ಕೇಳಿದರು,
‘ಇಲ್ಲ’ ಅಂದೆ.
ಎಲ್ಲಾದರೂ ಬಿದ್ದ ಅಂತ ಕೇಳಿದರು,
‘ಇಲ್ಲ’ ಅಂದೆ.
ಯಾಕೋ..? ಏನೋ..? ಅನ್ನುವ
ಗೊಂದಲದಲ್ಲಿಯೇ ಒಂದು ಕಬ್ಬಿಣದ ಗುಳವನ್ನು ಒಲೆಗೆ ಹಾಕಿ ಅದು ಚೆನ್ನಾಗಿ ಕಾಯುತ್ತಿದ್ದಂತೆ ತೆಗೆದುಕೊಂಡು ಬಂದು ನನಗೆ ದೃಷ್ಟಿ ತೆಗೆದು ಅದನ್ನು ತಟ್ಟೆಯಲ್ಲಿಟ್ಟು ನೀರಾಕುತ್ತಿದ್ದಂತೆ ಅದು ಜೋರಾಗಿ ಸೊ‌.. ಸೊರ್.. ಅಂತ ಸದ್ದಾಗುತ್ತಿರುವುದನ್ನು ಕಂಡು ಯಾರದ್ದೋ ಕಣ್ಣಿನ ದೃಷ್ಟಿ ಆಗಿದೆ ನನ್ನ ಮಗಿಗೆ ಅಂತೇಳಿ ಆ ಗುಳ ಕಾಯಿಸಿದ ನೀರನ್ನು ಕುಡಿಸಿ ಇವತ್ತು ಇಸ್ಮಲ್ಲಿಗೆ ಹೋಗುವುದು ಬೇಡ, ಕಣಕ್ಕೆ ಬಂದು ಪಾಕೆಯಲ್ಲಿ ಮಲಗಿರು ಅಂದಳು.

ನನಗೋ ನಮ್ಮವ್ವನ ಮಾತು ಕೇಳಿ ಸಾಕ್ಷಾತ್ ಕಬ್ಬಾಳಮ್ಮನೇ ಎದುರು ನಿಂತಿರುವಂತೆ ಭಾಸವಾಗುತ್ತಿತ್ತು.

ಇವೆಲ್ಲ ದೃಶ್ಯ ವೈಭವವನ್ನು ನೋಡುತ್ತಾ… ಕೇಳುತ್ತಾ… ಕೋಣೆಯಲ್ಲಿ ಶಿವಪೂಜೆ ಮಾಡಿಕೊಂಡು ಕುಳಿತಿದ್ದ ತಾತಯ್ಯ;

ಅವನಿಗೆ ಏನಾಗಿದೆ ಅಂತ ನನಗೆ ಸೆಂದಾಗಿ ಗೊತ್ತು, ಅವನು ಎಲ್ಲಿಗೂ ಬರುವುದು ಬೇಡ ಅವನಿಗೆ ಹಿಡಿದಿರುವ ಗಾಳಿಯನ್ನು ಬಿಡಿಸ್ತೀನಿ ಇರಮ್ಮಿ ಅಂತೇಳಿ ಎಮ್ಮೆ ಕೊಟ್ಟಿಗೆಗೆ ಹೋಗಿ ಒಂದು ಬರ್ಲು ತಂದವರೆ…

ನಮಗಂತು ಓದು-ಬರಹ ಇಲ್ಲ. ನಿಮ್ಮಪ್ಪ ಓದಲಿ ಅಂದುಕೊಂಡರೆ ಅವನೂ ಒಂದೆರಡು ವರ್ಷಕ್ಕೆಲ್ಲ ಶಾಲೆಗೆ ಬೆನ್ನು ತೋರಿಸಿಬಿಟ್ಟ. ಈಗ ನೀನೂ ಅದೇ ದಾರಿಯಲ್ಲಿದ್ದೀಯಲ್ಲ. ನೀನು ಮಾಡುತ್ತಿರೋ ನಾಟಕ ಇದು ಅಂತ ನನಗೆ ಗೊತ್ತಾಗುವುದಿಲ್ಲ ಅಂದುಕೊಂಡ್ಯ’ ಅನ್ನುತ್ತಾ ರಸ್ತೆಯುದ್ದಕ್ಕೂ ಬಡಿಯುತ್ತಾ ಶಾಲೆಗಟ್ಟಿ ಬಂದಿದ್ದರು.
Chetanponnachi@gmail.com

andolanait

Recent Posts

ನಾಳೆ ಭಾರತ ಬಂದ್‌ : ಶಾಲಾ, ಕಾಲೇಜು ಬಂದ್? ಏನಿರುತ್ತೇ, ಏನಿರಲ್ಲ?

ಹೊಸದಿಲ್ಲಿ : ಕೇಂದ್ರ ಸರ್ಕಾರದ ಕೃಷಿ, ಕಾರ್ಮಿಕ ಮತ್ತು ಆರ್ಥಿಕ ನೀತಿಗಳನ್ನು ವಿರೋಧಿಸಿ ನಾಳೆ(ಫೆ.12) ಭಾರತ್‌ ಬಂದ್‌ಗೆ ಕರೆ ನೀಡಲಾಗಿದೆ.…

14 mins ago

ರಾಷ್ಟ್ರಗೀತೆಗೂ ಮುನ್ನ ‘ವಂದೇ ಮಾತರಂ’ ಕಡ್ಡಾಯ ; ವಂದೇ ಮಾತರಂಗೂ ಶಿಷ್ಟಾಚಾರ ಗೌರವ!

ಹೊಸದಿಲ್ಲಿ : ‘ರಾಷ್ಟ್ರಗೀತೆ’ಗೂ ಮುನ್ನ ‘ವಂದೇ ಮಾತರಂ’ ಹಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದ್ದು, ಕಾಂಗ್ರೆಸ್ ಕೈಬಿಟ್ಟಿದ್ದ ಚರಣಗಳ ಮರುಸೇರ್ಪಡೆಗೊಳಿಸಿದೆ.…

45 mins ago

ವಿದ್ಯಾರ್ಥಿಗಳು ಹೊಸ ಹೊಸ ವಿಷಯಗಳ ಕಡೆ ಗಮನಹರಿಸಿ : ಕುಲಪತಿ ಲೋಕನಾಥ್‌ ಸಲಹೆ

ಮೈಸೂರು : ಇಂದಿನ ಯುವಜನತೆ ಪುಸ್ತಕಗಳಿಗೆ ಸೀಮಿತವಾಗದೆ, ಮಹಾತ್ಮರ ಚಿಂತನೆಗಳಿಂದ ಪ್ರೇರಣೆ ಪಡೆದು ಆತ್ಮಸ್ಥೈರ್ಯದಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ಮೈಸೂರು…

57 mins ago

ಸೈಬರ್‌ ವಂಚನೆ ಕೇವಲ ಆರ್ಥಿಕ ಅಪರಾಧವಲ್ಲ. ರಾಷ್ಟ್ರೀಯ ಭದ್ರತೆಗೆ ಸವಾಲು: ಅಮಿತ್‌ ಶಾ

ನವದೆಹಲಿ: ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸೈಬರ್‌ ಅಪರಾಧಗಳ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದೆ. ಸೈಬರ್‌ ಭದ್ರತೆಯು ಈಗ ಕೇವಲ…

2 hours ago

ಬೆಂಗಳೂರಿನಲ್ಲಿ ಭೀಕರ ಅಪಘಾತ: ಶಾಲಾ ಬಸ್‌ ಹರಿದು ಇಬ್ಬರು ಪುಟ್ಟ ಮಕ್ಕಳ ದಾರುಣ ಸಾವು

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಶಾಲಾ ಬಸ್ಸೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.…

2 hours ago

ಮಲೆಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರಿಂದ ಪಾದಯಾತ್ರೆ: ಪೊಲೀಸರಿಂದ ಬ್ಯಾರಿಕೇಡ್‌ ಹಾಕಿ ಜಾಗೃತಿ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆಮಾದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆಯ…

3 hours ago