ಕ್ರೀಡೆ

ಮನೀಶ್ ಪಾಂಡೆ ಏಕಾಂಗಿ ಹೋರಾಟ: ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ

ಸೂರತ್ : ಗುಜರಾತಿನ ಸೂರತ್‌ನಲ್ಲಿ ಭಾನುವಾರ ನಡೆದ 2024ರ ರಣಜಿ ಟ್ರೋಫಿ ಪಂದ್ಯಾವಳಿಯ ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಕರ್ನಾಟಕ ತಂಡವು ಒಂದು ವಿಕೆಟ್‌ ಅಂತರದ ರೋಚಕ ಗೆಲುವು ಸಾಧಿಸಿದೆ.

ಒತ್ತಡದಲ್ಲಿಯೂ ಕರ್ನಾಟಕ ತಂಡದ ಗೆಲುವಿಗೆ ಸ್ಟಾರ್ ಬ್ಯಾಟರ್ ಮನೀಶ್ ಪಾಂಡೆ ಏಕಾಂಗಿ ಹೋರಾಟ ನಡೆಸಿ ಪಂದ್ಯವನ್ನು ಗೆಲ್ಲಿಸಿದರು.

ಗೆಲುವಿಗೆ ರೈಲ್ವೇಸ್ ನೀಡಿದ 226 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಮನೀಶ್ ಪಾಂಡೆ 121 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ ಅಜೇಯ 67 ರನ್ ಗಳಿಸಿ ಆಸರೆಯಾದರು.

ಎದುರಾಳಿ ತಂಡದ ಬೌಲರ್ಗಳು 6 ವಿಕೆಟ್‌ಗೆ 99 ರನ್‌ಗಳಿಸಿ ತಗ್ಗಿಸಿದ ನಂತರ, ಮನೀಶ್ ಪಾಂಡೆ ಅವರು ಶ್ರೀನಿವಾಸ್ ಶರತ್ ಮತ್ತು ವಿಜಯ್ಕುಮಾರ್ ವೈಶಾಕ್ ಅವರೊಂದಿಗೆ ನಿರ್ಣಾಯಕ ಜೊತೆಯಾಟದ ಮೂಲಕ ಕರ್ನಾಟಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು. ಅಲ್ಲದೆ ಕೊನೆಯಲ್ಲಿ ವಿದ್ವತ್ ಕಾವೇರಪ್ಪ ಮತ್ತು ವಾಸವಿ ಕೌಶಿಕ್ ಜೊತೆಗೂಡಿ ಮನೀಶ್ ಪಾಂಡೆ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕರ್ನಾಟಕ ತಂಡದ ಇನ್ನಿಂಗ್ಸ್ ಆರಂಭಿಸಿದ ಡಿ. ನಿಶ್ಚಲ್ ಮತ್ತು ರವಿಕುಮಾರ್ ಸಮರ್ಥ್ ಉತ್ತಮ ಆರಂಭ ನೀಡಲಿಲ್ಲ. ಕೇವಲ 1 ರನ್ ಗಳಿಸಿದ್ದ ಡಿ. ನಿಶ್ಚಲ್ ಔಟಾದರು. ನಂತರ ಬಂದ ಕೆವಿ ಅನೀಶ್ ಮತ್ತೊಂದು ಕಡೆಯಿಂದ ಸಮರ್ಥ್ ಉತ್ತಮ ಸಾಥ್ ನೀಡಿದರು.

ಕೆವಿ ಅನೀಶ್ ನಿರ್ಗಮಿಸಿದ ಬಳಿಕ ಒಂದರ ಹಿಂದೆ ಒಂದು ವಿಕೆಟ್ಗಳು ಬೀಳಲು ಪ್ರಾರಂಭಿಸಿದವು. ಟರ್ನ್ ಮತ್ತು ಬೌನ್ಸ್ ಕರ್ನಾಟಕದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಹೆಣಗಾಡಿದರು. ನಿಕಿನ್ ಜೋಸ್ ಸೊನ್ನೆ ಸುತ್ತಿದರೆ, ಹಾರ್ದಿಕ್ ರಾಜ್ 14 ರನ್ ಗಳಿಸಿದರು. ಕಿಶನ್ ಬೆದರೆ ಸೊನ್ನೆಗೆ ಔಟಾದರು. ಆಗ ಕರ್ನಾಟಕವು ಸೋಲಿನತ್ತ ಮುಖ ಮಾಡಿತ್ತು. ಆಗ ಬಂದ ಶ್ರೀನಿವಾಸ್ ಶರತ್ 23 ರನ್ ಗಳಿಸಿ ಮನೀಶ್ ಪಾಂಡೆಗೆ ಬೆಂಬಲ ನೀಡಿದರೆ, ವಿಜಯ್ ಕುಮಾರ್‌ ವೈಶಾಕ್ 38 ರನ್ ಗಳಿಸಿದರು. ಕೊನೆಯಲ್ಲಿ ವಿಧ್ವತ್ ಕಾವೇರಪ್ಪ 8 ರನ್ ಮತ್ತು ವಾಸುಕಿ ಕೌಶಿಕ್ 1 ರನ್ ಗಳಿಸಿ ಕರ್ನಾಟಕ ಗೆಲ್ಲಲು ನೆರವಾದರು.

ರೈಲ್ವೇಸ್ ತಂಡದ ಪರ ಆಕಾಶ್ ಪಾಂಡೆ 34.4 ಓವರ್ಗಳಲ್ಲಿ 94 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಹಿಮಾಂಶು ಸಂಗ್ವಾನ್ 2 ವಿಕೆಟ್, ಮೊಹಮ್ಮದ್ ಸೈಫ್ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ನಲ್ಲಿ ರೈಲ್ವೇಸ್ ತಂಡ 155 ರನ್ಗಳಿಗೆ ಆಲೌಟ್ ಆಗಿತ್ತು. ಪ್ರತ್ಯುತ್ತರವಾಗಿ, ಕರ್ನಾಟಕ ತಂಡ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿ 174 ರನ್‌ಗಳಿಗೆ ಸರ್ವಪತನ ಕಂಡಿತು ಮತ್ತು 19 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತು. ನಂತರ ತನ್ನ ಎರಡನೇ ಇನ್ನಿಂಗ್ಸ್ ಆಡಿದ ರೈಲ್ವೇಸ್ ತಂಡ 244 ರನ್‌ಗಳಿಗೆ ಮತ್ತೆ ಆಲೌಟ್ ಆಯಿತು. ಕೊನೆಯ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ 226 ರನ್‌ ಗುರಿ ಪಡೆ ಕರ್ನಾಟಕ ತಂಡ 9 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಈ ಮೂಲಕ 2024ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಆಡಿದ 5 ಪಂದ್ಯಗಳಲ್ಲಿ 3 ಗೆಲುವು, 1 ಸೋಲು ಮತ್ತು 1 ಡ್ರಾದೊಂದಿಗೆ ಅಂಕಪಟ್ಟಿಯಲ್ಲಿ 21 ಅಂಕಗಳನ್ನು ಕಲೆಹಾಕಿದ್ದು, ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

andolanait

Recent Posts

ಚಿಪ್ಪುಹಂದಿ ಬೇಟೆಯಾಡಿ ಮಾರಾಟಕ್ಕೆ ಯತ್ನ: ಓರ್ವ ಬಂಧನ

ಮೈಸೂರು : ಕಾಡುಪ್ರಾಣಿ ಬೇಟೆ ಹಾಗೂ ಅಕ್ರಮ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ…

1 hour ago

ʼದೃಷ್ಟಿ ಉಪಗ್ರಹʼ ಉಡಾವಣೆ ಯಶಸ್ವಿ

ಬೆಂಗಳೂರು : ಮೋಡ, ಕತ್ತಲೆ, ಮಳೆ... ಯಾವುದಕ್ಕೂ ಜಗ್ಗದ ಕಣ್ಣು ಹೊಂದಿರುವ ಭಾರತದ ಮೊದಲ ಖಾಸಗಿ ಉಪಗ್ರಹ ‘ದೃಷ್ಟಿ’ ಇಂದು…

2 hours ago

ಮೇ.6ರಂದು ಯಸಳೂರಿನ ಅರ್ಜುನ ಆನೆ ಸಮಾಧಿ ಸ್ಥಳದ ಸ್ಮಾರಕ ಉದ್ಘಾಟನೆ: ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು: ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಕಳೆದ 2023 ಡಿಸೆಂಬರ್.4ರಂದು ಆನೆ ಸೆರೆ ಕಾರ್ಯಾಚರಣೆ ವೇಳೆ ವೀರಾವೇಶದಿಂದ ಹೋರಾಡಿ, ಪಶುವೈದ್ಯರು,…

4 hours ago

ನಾಳೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ

ನವದೆಹಲಿ: ದೇಶದ ಗಮನ ಸೆಳೆದಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಹೊರಬೀಳಲಿದ್ದು, ಘಟಾನುಘಟಿ ರಾಜಕೀಯ ನಾಯಕರ ಭವಿಷ್ಯ…

4 hours ago

ಹಳಿ ಮೇಲೆ ಕೆಲಸ ಮಾಡುತ್ತಿದ್ದ ನೌಕರನಿಗೆ ರೈಲು ಡಿಕ್ಕಿ-ಗಂಭೀರ ಗಾಯ

ಹಾಸನ: ಹಳಿ ಮೇಲೆ ಕೆಲಸ ಮಾಡುತ್ತಿದ್ದ ನೌಕರನಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ನೌಕರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಕಲೇಶಪುರ…

6 hours ago

ಕೆ.ಆರ್‌.ನಗರ: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಕೆ.ಆರ್.‌ನಗರ: ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲ್ಲೂಕಿನ ಚೀನರಹಳ್ಳಿ ಗ್ರಾಮದಲ್ಲಿ ನಡೆದಿದೆ.…

7 hours ago