ತಿರುಗುತ್ತಲೇ ಇರುವ ಬುಗುರಿ
ಬೆರಗು ಮೂಡಿಸಿ
ಬಣ್ಣದ ಬುಗುರಿ
ಬಚ್ಚಿಡಲಾಗದ
ಸೂರ್ಯನ ಹಾಗೆ
ಗಿರಗಿರನೆ ತಿರುಗುತ್ತ
ಗೆರೆಯದಾಟಿ ಮರೆತು ಕಕ್ಕುಲಾತಿ
ಆಗಾಗ ಹೊಡೆದು ಗುನ್ನ
ಮಾಡಿತ್ತು
ಘಾಸಿ
ವ್ಯಂಗ್ಯ ಕೀಟಲೆಗಳಲಿ
ನಗಿಸಿತ್ತು ಸುತ್ತ ನೆರೆದವರ
ಆಕಾಶಕ್ಕೆ ನೆಗೆದು
ಪಾತಾಳಕ್ಕೂ ಜಿಗಿದು
ಬಿಡಿಸಿ ಬಗೆಬಗೆ ಚಿತ್ತಾರ
ತನ್ನ ಸುತ್ತ ತಾನೇ ಬಲೆನೇಯ್ದು
ತಳಮಳದಿ ನಶೆಯೊಳಗೆ ತೇಲುತ್ತ
ತಕರಾರುಗಳ ಜೀಕುತ್ತ
ಅನಾದಿ ಏಕಾಂಗಿ ನಾದವ ನುಡಿಸುತ್ತ
ಯಾರ ಮಾತಿಗೂ ಕೇರು ಮಾಡದೆ
ಸುಡುಸಂಕಟ
ಭೂಮಿ ಸುತ್ತುತ್ತಲೇ ಇತ್ತು
– ಎಸ್.ನರೇಂದ್ರಕುಮಾರ್
ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೃಷಿ…
ಬೆಂಗಳೂರು: ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದ ವೇಳೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ…
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್ಘಾಟ್ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…