ತಿರುಗುತ್ತಲೇ ಇರುವ ಬುಗುರಿ
ಬೆರಗು ಮೂಡಿಸಿ
ಬಣ್ಣದ ಬುಗುರಿ
ಬಚ್ಚಿಡಲಾಗದ
ಸೂರ್ಯನ ಹಾಗೆ
ಗಿರಗಿರನೆ ತಿರುಗುತ್ತ
ಗೆರೆಯದಾಟಿ ಮರೆತು ಕಕ್ಕುಲಾತಿ
ಆಗಾಗ ಹೊಡೆದು ಗುನ್ನ
ಮಾಡಿತ್ತು
ಘಾಸಿ
ವ್ಯಂಗ್ಯ ಕೀಟಲೆಗಳಲಿ
ನಗಿಸಿತ್ತು ಸುತ್ತ ನೆರೆದವರ
ಆಕಾಶಕ್ಕೆ ನೆಗೆದು
ಪಾತಾಳಕ್ಕೂ ಜಿಗಿದು
ಬಿಡಿಸಿ ಬಗೆಬಗೆ ಚಿತ್ತಾರ
ತನ್ನ ಸುತ್ತ ತಾನೇ ಬಲೆನೇಯ್ದು
ತಳಮಳದಿ ನಶೆಯೊಳಗೆ ತೇಲುತ್ತ
ತಕರಾರುಗಳ ಜೀಕುತ್ತ
ಅನಾದಿ ಏಕಾಂಗಿ ನಾದವ ನುಡಿಸುತ್ತ
ಯಾರ ಮಾತಿಗೂ ಕೇರು ಮಾಡದೆ
ಸುಡುಸಂಕಟ
ಭೂಮಿ ಸುತ್ತುತ್ತಲೇ ಇತ್ತು
– ಎಸ್.ನರೇಂದ್ರಕುಮಾರ್
ಕೊಡಗು : ಕಳೆದ ಕೆಲ ದಿನಗಳಿಂದ ಉಪಟಳ ನೀಡುವ ಜತೆಗೆ ವ್ಯಕ್ತಿಯ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದ ಕಾಡಾನೆಯನ್ನು…
ಬೆಂಗಳೂರು : ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ…
ಬೆಂಗಳೂರು : ಸಾಹಿತ್ಯದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಸಾಕಷ್ಟು ಅಪಾಯಗಳು ಎದುರಾಗುತ್ತವೆ, ಮನುಷ್ಯನ ಸೃಜನಶೀಲ ಚಿಂತನೆಗೆ ಎಐ ತಂತ್ರಜ್ಞಾನ ಮಾರಕವಾಗಲಿದೆ…
ಬೆಂಗಳೂರು : ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ…
ಮೈಸೂರು : ಹುಬ್ಬಳ್ಳಿಯ ಹರ್ಷ ಎಂಬುವವರಿಗೆ ಕೈ ಸಾಲವಾಗಿ 25 ಕೋಟಿ ರೂ. ನೀಡುತ್ತೇವೆ ಎಂದು ಆಮಿಷವೊಡ್ಡಿ ಮೈಸೂರು ಮೂಲದ…
ಮೈಸೂರು : ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಋತುಚಕ್ರದ ರಜೆ ಕಡ್ಡಾಯವಾಗಿ ಕೊಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ…