ತಿರುಗುತ್ತಲೇ ಇರುವ ಬುಗುರಿ
ಬೆರಗು ಮೂಡಿಸಿ
ಬಣ್ಣದ ಬುಗುರಿ
ಬಚ್ಚಿಡಲಾಗದ
ಸೂರ್ಯನ ಹಾಗೆ
ಗಿರಗಿರನೆ ತಿರುಗುತ್ತ
ಗೆರೆಯದಾಟಿ ಮರೆತು ಕಕ್ಕುಲಾತಿ
ಆಗಾಗ ಹೊಡೆದು ಗುನ್ನ
ಮಾಡಿತ್ತು
ಘಾಸಿ
ವ್ಯಂಗ್ಯ ಕೀಟಲೆಗಳಲಿ
ನಗಿಸಿತ್ತು ಸುತ್ತ ನೆರೆದವರ
ಆಕಾಶಕ್ಕೆ ನೆಗೆದು
ಪಾತಾಳಕ್ಕೂ ಜಿಗಿದು
ಬಿಡಿಸಿ ಬಗೆಬಗೆ ಚಿತ್ತಾರ
ತನ್ನ ಸುತ್ತ ತಾನೇ ಬಲೆನೇಯ್ದು
ತಳಮಳದಿ ನಶೆಯೊಳಗೆ ತೇಲುತ್ತ
ತಕರಾರುಗಳ ಜೀಕುತ್ತ
ಅನಾದಿ ಏಕಾಂಗಿ ನಾದವ ನುಡಿಸುತ್ತ
ಯಾರ ಮಾತಿಗೂ ಕೇರು ಮಾಡದೆ
ಸುಡುಸಂಕಟ
ಭೂಮಿ ಸುತ್ತುತ್ತಲೇ ಇತ್ತು
– ಎಸ್.ನರೇಂದ್ರಕುಮಾರ್
ದಕ್ಷಿಣ ಕನ್ನಡ: ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣು ದೇವಸ್ಥಾನದ ಆದಾಯ 2025ರ ನವೆಂಬರ್ ಹಾಗೂ…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ…
ಜಾರ್ಖಂಡ್: ಜಾರ್ಖಂಡ್ನ ಸಾರಂಡಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 10 ಮಂದಿ ನಕ್ಸಲರು…
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ತೋಡಿಕೆ ಮತ್ತು ನಿರ್ಮಾಣ ಕಾರ್ಯಗಳ ವಿರುದ್ಧ ಮೈಸೂರಿನ ಹಲವು ನಾಯಕರು, ಚಿಂತಿತ ನಾಗರಿಕರು…
ಬೆಂಗಳೂರು: ಇಂದು ಕರಾಳ ದಿನ. ಕರಾಳ ರೀತಿಯಲ್ಲಿ ಈ ಅಧಿವೇಶನವನ್ನು ಕಾಂಗ್ರೆಸ್ ನಡೆಸಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.…
ಬೆಂಗಳೂರು: ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಜನವರಿ.28ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ…