ಹಾಡು ಪಾಡು

ಆ ಕಾಲದ ಮೈಸೂರಿನ ಚಳಿಗೆ ಎಂಥಾ ಮುದವಿತ್ತು!

ಈಗ ಬಿಸಿಲು, ಮಳೆ, ಚಳಿ ಎಲ್ಲವೂ ಇದೆ. ಆದರೆ, ಕಾಲಕ್ಕೆ ತಕ್ಕಂತಿಲ್ಲ. ವಾತಾವರಣಕ್ಕೇ ಗೊಂದಲ ಆಗುವಷ್ಟು ಪರಿಸರ ಮಲಿನಗೊಂಡಿದೆ. 

ಬಾಪು ಸತ್ಯನಾರಾಯಣ

ನಾನು ಹುಟ್ಟಿದ್ದು ೧೯೩೨ನೇ ಇಸವಿಯಲ್ಲಿ. ೬೦ನೇ ದಶಕದ ತನಕ ವಾತಾವರಣ ಬಹಳ ಚೆನ್ನಾಗಿತ್ತು. ಸುತ್ತಲೂ ಮುಕ್ತ ಜಾಗಗಳಿದ್ದವು, ಉದ್ಯಾನಗಳಿದ್ದವು. ಅಂದು ಕಾಂಕ್ರೀಟ್ ಮನೆಗಳ ಸಂಖ್ಯೆ ಕಡಿಮೆ. ಹಂಚಿನ ಮನೆಗಳಲ್ಲಿನ ಚಳಿ ತುಂಬಾ ಚೆನ್ನಾಗಿತ್ತು. ಆ ದಿನಗಳಲ್ಲಿ ಚಳಿಯನ್ನು ತಡೆದುಕೊಳ್ಳುವ ಶಕ್ತಿಯೂ ಇತ್ತು.

ಹೊದ್ದುಕೊಂಡು ಮಲಗಿದರೆ ಸಮಯದ ಪರಿವೆಯೂ ಇರುತ್ತಿರಲಿಲ್ಲ. ನಾನು ದೆಹಲಿಯಲ್ಲಿದ್ದಾಗ ಚಳಿಗಾಲದಲ್ಲೂ ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದೆ, ಕಷ್ಟವೆನಿಸುತ್ತಿರಲಿಲ್ಲ. ಮನಸ್ಸಿಗೆ ಬಹಳ ಮುದ ಕೊಡುತ್ತಿದ್ದ ಚಳಿಯಾಗಿತ್ತು.

೧೯೭೦ – ೮೦ರ ದಶಕದ ನಂತರ ಚಳಿಗಾಲದ ಸಂಪೂರ್ಣ ಚಿತ್ರಣವೇ ಬದಲಾಯಿತು. ವಾಹನ- ಕಟ್ಟಡಗಳು ತುಂಬಿಕೊಂಡು ಅಧ್ವಾನವಾಯಿತು. ೧೯೫೦ರಲ್ಲಿ ನಮ್ಮ ದೇಶದಲ್ಲಿ ಕೇವಲ ಮೂರು ಲಕ್ಷಗಳಷ್ಟಿದ್ದ ವಾಹನಗಳ ಸಂಖ್ಯೆ ಈಗ ಬರೋಬ್ಬರಿ ೬೬ ಲಕ್ಷಕ್ಕೇರಿದೆ. ೧೯೧೫ರಲ್ಲಿ ೨೪,೦೦೦ ಕಿಲೋಮೀಟರ್ ಇದ್ದ ರಸ್ತೆ ಈಗ ೩೫೪ ಮಿಲಿಯನ್ ಕಿಲೋಮೀಟರ್‌ಗಳಷ್ಟಾಗಿದೆ. ಶೇಕಡಾ ೩೩ರಷ್ಟು ಅರಣ್ಯಗಳಿರಬೇಕಾದಲ್ಲಿ ಈಗ ಉಳಿದಿರುವುದು ಕೇವಲ ೨೪ – ೨೫ ಪ್ರತಿಶತಕಾಡುಗಳು. ಎಲ್ಲ ಕಡೆಗಳಲ್ಲೂ ನಗರ ಎಂಬ ಕಾಂಕ್ರೀಟು ಕಾಡಿನೊಳಗೆ ಹಿಡಿ ಮಣ್ಣು ಹುಡುಕುವುದಕ್ಕೂ ಹರಸಾಹಸ ಪಡಬೇಕಾಗಿರುವುದರಿಂದ ಹವಾಮಾನ ವ್ಯತ್ಯಯಕ್ಕೆ ನೇರ ಪರಿಣಾಮವನ್ನುಂಟು ಮಾಡಿದೆ.

ಪಾತಾಳದಲ್ಲೂ ವಾಸ್ತವ್ಯ ಹೂಡುವಷ್ಟು ಮನುಷ್ಯ ಮುಂದುವರಿದಿದ್ದಾನೆ. ಇದೇ ಕಾರಣಕ್ಕೆ ವಾತಾವರಣದಲ್ಲಿ ಏರುಪೇರಾಗಿ ಮಳೆ – ಬಿಸಿಲು- ಚಳಿಗೆ ನಿರ್ದಿಷ್ಟ ಕಾಲಮಾನವೇ ಇಲ್ಲದಂತಾಗಿದೆ.

ಕಾಲಮಾನದ ಏರುಪೇರಿಗೆ ಮುಖ್ಯ ಕಾರಣ ಪರಿಸರ ಮಾಲಿನ್ಯ. ಕಾಡುಗಳು ನಾಶವಾಗಿ ಪ್ರಾಣಿಗಳು, ಉರಗಗಳು ಮನುಷ್ಯರೊಡನೆ ನೇರಾನೇರ ಸಂಘರ್ಷಕ್ಕಿಳಿದಿವೆ. ಕಾಡುಪ್ರಾಣಿಗಳು ನಾಡಿಗೆ ದಾಳಿಯಿಡುವುದು ಪರಿಸರ ಕಲುಷಿತಗೊಂಡಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಮಾಲಿನ್ಯದ ತೊಂದರೆಗಳನ್ನು ಕುರಿತು ಮಾತನಾಡುವ ಮೊದಲು ಸಂರಕ್ಷಣೆಯ ಬಗ್ಗೆ ಯೋಚಿಸಬೇಕು. ಸರಕಾರ ಹಸಿ ಕಸ, ಒಣಕಸ, ಎಲೆಕ್ಟ್ರಾನಿಕ್ ವೇಸ್ಟ್ ಇತ್ಯಾದಿಯಾಗಿ ವಿಂಗಡಿಸಿ ವಿಲೇವಾರಿಗೆ ಕ್ರಮ ಕೈಗೊಂಡಿದ್ದರೂ ಸುತ್ತಮುತ್ತ ಕಸ ಚೆಲ್ಲುವವರ ಸಂಖ್ಯೆ ಕಡಿಮೆಯಾಗಿಲ್ಲ.

ಮುಂದೊಂದು ದಿನ ಎಲೆಕ್ಟ್ರಾನಿಕ್ ತ್ಯಾಜ್ಯವೇ ಪ್ಲಾಸ್ಟಿಕ್‌ನಂತೆ ಬಹುದೊಡ್ಡ ಸಮಸ್ಯೆಯಾಗಿಹವಾಮಾನದ ಮೇಲೆ ಪರಿಣಾಮ ಬೀರುತ್ತದೆ. ಸ್ವಚ್ಛತೆಯ ಬಗ್ಗೆ ನಮಗಿರುವ ಉದಾಸೀಭಾವ ಶುದ್ಧ ಗಾಳಿಯ ಅಭಾವವನ್ನು ಸೃಷ್ಟಿಸುತ್ತಿದೆ. ಪ್ರತಿ ವರ್ಷ ಸರಾಸರಿ ೪೪ ಲಕ್ಷ ಜನರು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಗಾಳಿಯಲ್ಲಿ ವಿಷಕಾರಿ ದೂಳಿನ ಕಣಗಳಿಂದ ಉಸಿರಾಡುವುದೇ ಕಷ್ಟವಾಗಿದೆ. ಈಗ ಬಿಸಿಲು, ಮಳೆ, ಚಳಿ ಎಲ್ಲವೂ ಇದೆ. ಆದರೆ, ಕಾಲಕ್ಕೆ ತಕ್ಕಂತಿಲ್ಲ. ವಾತಾವರಣಕ್ಕೇ ಗೊಂದಲ ಆಗುವಷ್ಟು ಪರಿಸರ ಮಲಿನಗೊಂಡಿದೆ.

ಅಂದಿನ ಹೆಂಚಿನ ಮನೆಗಳು, ಮಣ್ಣಿನ ರಸ್ತೆಗಳು, ಸೈಕಲ್ – ಎತ್ತಿನ ಗಾಡಿಗಳು ಕಣ್ಮರೆಯಾಗಿ ಕಾಂಕ್ರೀಟಿನೊಳಗೆ ಕಳೆದು ಹೋಗಿದ್ದೇವೆ. ಬಣ್ಣ ಬಣ್ಣದ ಹೊದೆವ ಕಂಬಳಿಗಳಿವೆ. ಆದರೆ ಇಂದಿನ ಚಳಿ, ಕನಸಿಗೆ ಬಣ್ಣ ತುಂಬುವ ಬದಲಾಗಿ ದೇಹಾರೋಗ್ಯದ ಕುರಿತು ಭಯ ಹುಟ್ಟಿಸುತ್ತಿದೆ.

ಆಂದೋಲನ ಡೆಸ್ಕ್

Recent Posts

ಹೋಟೆಲ್,ರೆಸ್ಟೋರೆಂಟ್‌ಗಳ ಮೇಲೆ ಮುಂದುವರೆದ ದಾಳಿ

ಬೆಂಗಳೂರು ನಂತರ ಮೈಸೂರು, ಮಂಗಳೂರಿನಲ್ಲೂ ಕಾರ್ಯಾಚರಣೆ ಬೆಂಗಳೂರು : ರಾಜ್ಯದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕುರಿತು ಸಾರ್ವಜನಿಕರಿಂದ ಹೆಚ್ಚುತ್ತಿರುವ…

3 hours ago

ನಂ.ಗೂಡು | ಮತ್ತೆ ಕಳಚಿ ಬೀಳುತ್ತಿರುವ ಸೇತುವೆಯ ಸೀಲಿಂಗ್ ಕಾಂಕ್ರೀಟ್

ಮೂರೂ ದಿನಗಳಿಂದಲೂ ಸೇತುವೆಯತ್ತ ಮುಖ ಮಾಡದ ರೈಲ್ವೆ ಇಲಾಖೆ ನಂಜನಗೂಡು : ಮಹಾತ್ಮಾಗಾಂಧಿ ಶತಾಬ್ಧಿ ರಸ್ತೆಗೆ ನಿರ್ಮಿಸಿರುವ ರೈಲ್ವೆ ಕೆಳ…

5 hours ago

ರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ಯಾರೂ ಮಾಡಲು ಸಾಧ್ಯವಿಲ್ಲ : ಯಶ್

ಮುಂಬೈ : ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ನಿರತರಾಗಿರುವ ಯಶ್, ‘ರಾಮಾಯಣ’ ಸಿನಿಮಾದಲ್ಲಿ ಕೇವಲ ಸಹ-ನಿರ್ಮಾಪಕರಾಗಿ ಮಾತ್ರವಲ್ಲದೆ ʻರಾವಣʼನ…

5 hours ago

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ : ಸಿಎಜಿ ವರದಿ

ಬೆಂಗಳೂರು : ಭೂಕುಸಿತ, ಬರದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ…

6 hours ago

ಶಾಸಕರ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆತ : ಮೃತರ ಕುಟುಂಬಕ್ಕೆ ತಲಾ ₹15 ಲಕ್ಷ ಪರಿಹಾರ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಗೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ಸೂಕ್ತ…

9 hours ago

ವಾರಣಾಸಿ ಏರ್‌ಫೋರ್ಟ್‌ | ಶಸ್ತ್ರಾಸ್ತ್ರ ತಪಾಸಣೆ ವೇಳೆ ಆಕಸ್ಮಿಕ ಗುಂಡಿನ ದಾಳಿ ; ಇಬ್ಬರಿಗೆ ಗಾಯ

ವಾರಣಾಸಿ : ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಶಸ್ತ್ರಾಸ್ತ್ರ ತಪಾಸಣೆಯ…

9 hours ago