ಕೆ.ಆರ್.ನಗರ ತಾಲ್ಲೂಕು ಮಾಸ್ತಳ್ಳಿ ಪೋಸ್ಟು, ಮೂಲೆಪೆಟ್ಲು ಗ್ರಾಮ ಎಂಬುದು ಮೀನು ಹಿಡಿದು ಬದುಕುವ ಮಂದಿೆುೀಂ ಹೆಚ್ಚಾಗಿ ಇರುವ ಪುಟ್ಟ ಊರು. ಈ ಫೋಟೋದಲ್ಲಿ ನೀವು ನೋಡುತ್ತಿರುವ ರತ್ನ ಎಂಬ ಈ ಹೆಣ್ಣು ಜೀವ ಕಳೆದ ೨೮ ವರ್ಷಗಳಿಂದ ತೆಪ್ಪ ನಡೆಸುತ್ತಾ ಮೀನು ಹಿಡಿಯುತ್ತಾ ಕಾವೇರಿ ಹಿನ್ನೀರ ಮೇಲೆ ಮತ್ಸ್ಯಕನ್ಯೆಯ ಹಾಗೆ ತೇಲುತ್ತಿರುತ್ತಾರೆ. ಮೂಲೆಪೆಟ್ಲು ಗ್ರಾಮದ ಮೀನು ಹಿಡಿಯುವ ಏಕೈಕ ಹೆಣ್ಣು ಮಗಳು ಈಕೆ. ಬೆಳೆದ ಇಬ್ಬರು ಮಕ್ಕಳ ತಾಯಿ ರತ್ನ ತೆಪ್ಪ ನಡೆಸುವ ಮೀನುಗಾರ್ತಿಯಾಗಿದ್ದು ಅನಿವಾರ್ಯತೆಯಿಂದ. ತೆಪ್ಪ ನಡೆಸುತ್ತಿದ್ದ ಗಂಡ ಕಾಯಿಲೆ ಬಿದ್ದಾಗ ಈಕೆಯ ಹೊಟ್ಟೆಯಲ್ಲಿದ್ದ ಹೆಣ್ಣು ಕೂಸಿಗೆ ಐದು ತಿಂಗಳು. ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಮನೆಗೆ ಬಂದವಳು ಸ್ವಾಮಿ ನಂಜುಂಡೇಶ್ವರನಿಗೆ ಅಲ್ಲಿಂದಲೇ ಕೈ ಮುಗಿದು, ‘ನನ್ನ ಗಂಡನ್ನ ಬದುಕಿಸು ಮತ್ತು ನನಗೆ ಬದುಕುವ ಧೈರ್ಯ ಕೊಡು’ ಎಂದು ಬೇಡಿಕೊಂಡವರು ಆ ಎರಡನ್ನೂ ಪಡಕೊಂಡು ಅಂದಿನಿಂದ ತೆಪ್ಪ ಓಡಿಸಲು ತೊಡಗಿದ್ದಾರೆ. ಇಂದಿಗೂ ಅದೇ ಧೈರ್ಯ ಮತ್ತು ಅದೇ ನಂಬಿಕೆಯಿಂದ ತೆಪ್ಪ ನಡೆಸುತ್ತಾರೆ. ಈ ನಡುವೆ ಆಕೆಯ ತೆಪ್ಪ ಮತ್ತು ಬಲೆಗಳು ಪದೇ ಪದೇ ಕಳ್ಳರ ಪಾಲಾಗುತ್ತಿರುತ್ತವೆ. ಈಕೆ ಮತ್ತೆ ಸಾಕ- ಸೋಲ, ಚೀಟಿ, ಸ್ಕೀಮುಗಳ ಸಹಾಯದಿಂದ ಹೊಸ ತೆಪ್ಪ, ಹೊಸ ಬಲೆಗಳನ್ನು ಖರೀದಿಸಿ ಬದುಕಿನ ದೋಣಿ ನಡೆಸುತ್ತಿರುತ್ತಾರೆ.

‘ನದಿಯಲ್ಲಿ ಆಗಾಗ ಜೋರು ಗಾಳಿ ಬೀಸಿದಾಗ ಏನು ಮಾಡುತ್ತೀರಿ ರತ್ನಾ’ ಎಂದು ಕೇಳಿದರೆ ‘ಏನೂ ಮಾಡುವುದಿಲ್ಲ. ಹುಟ್ಟು ಕೂಡ ಹಾಕದೆ ತೆಪ್ಪದ ನಡುವೆ ಸುಮ್ಮನೆ ಕೂತುಕೊಳ್ಳುತ್ತೇನೆ. ಆಗ ಆ ಗಾಳಿಯೇ ತೆಪ್ಪವನ್ನು ದಡಕ್ಕೆ ತಂದು ಬಿಡುತ್ತದೆ’ ಎನ್ನುತ್ತಾರೆ.
ನಾಳೆ ನಮ್ಮ ದೇಶದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ. ಬಹುಶಃ ನಾಳೆಯೂ ಕೂಡ ರತ್ನ ಸಾಗರಕಟ್ಟೆಯ ಕಾವೇರಿ ನೀರಿನಲ್ಲಿ ತೆಪ್ಪದ ಮೇಲೆ ತೇಲುತ್ತಿರುತ್ತಾರೆ. ನೀವೇನಾದರೂ ರಜಾ ನಿಮಿತ್ತ ಆ ಕಡೆ ವಿಹಾರ ಹೋದರೆ ಈ ಸ್ತ್ರೀರತ್ನಳಿಗೊಂದು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಶುಭಾಶಯ ಕೋರಲು ಮರೆಯಬೇಡಿ.

Mysoorininda@gmail.com

andolanait

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

14 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

15 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

16 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

16 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

22 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

22 hours ago