ಹಾಡು ಪಾಡು

ಹಾದಿ ಬದಿಯಲ್ಲೊಂದು ಪುಟ್ಟ ಲೈಬ್ರರಿ…

ಸಿರಿ ಮೈಸೂರು

ಮೈಸೂರಿನ ಓಮರ್ ಹಕ್ ಮತ್ತು ಸಮಾನ ಮನಸ್ಸಿನ ಸ್ನೇಹಿತರು ಈ ರೀತಿಯ ವಿನೂತನ ಪ್ರಯತ್ನಗಳ ಮೂಲಕ ಪುಸ್ತಕ ಪ್ರಿಯರನ್ನು ಸೃಷ್ಟಿ ಮಾಡುತ್ತಿರುವುದು ಶ್ಲಾಘನೀಯ ಸಂಗತಿ

ಹೀಗೇ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಚೆಂದದ ಪುಟ್ಟದೊಂದು ಮರದ ಗೂಡು ಕಾಣಿಸಿತು. ಒಂದು ಮನೆಯ ಮುಂದಿದ್ದ ಆ ಮರದ ಗೂಡಿನ ಆಕಾರ ಪುಟ್ಟದೊಂದು ಮನೆಯಂತೆಯೇ ಇತ್ತು. ಪೇಂಟಿಂಗ್ ಮಾಡಿಸಿಕೊಂಡು ಆಕರ್ಷಕವಾಗಿ ಕಾಣುತ್ತಿದ್ದ ಆ ಗೂಡು ತನ್ನ ಒಡಲಲ್ಲಿ ಇರಿಸಿಕೊಂಡಿದ್ದೆಲ್ಲಾ ಜ್ಞಾನಭಂಡಾರ. ಅರ್ಥಾತ್ ವಿವಿಧ ಪುಸ್ತಕಗಳು. ಆನಂತರ ಕಾಣಿಸಿದ್ದು ಅದರ ಮೇಲಿನ ಹೆಸರು. ಅದು ಫ್ರೀ ಲಿಟಲ್ ಲೈಬ್ರರಿ.

ಸಾಮಾನ್ಯವಾಗಿ ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ವಸ್ತುಗಳನ್ನು ಇಡುವ, ಅದನ್ನು ಜನರಿಗೆ ಮುಕ್ತವಾಗಿ ಬಳಸಿಕೊಳ್ಳಲು ಅವಕಾಶ ನೀಡುವ ಪರಿಕಲ್ಪನೆ ಪಾಶ್ಚಾತ್ಯ ದೇಶಗಳಲ್ಲಿ ಜಾರಿಯಲ್ಲಿದೆ. ಭಾರತದಲ್ಲಿ ಬಹಳವೇ ಕಡಿಮೆ. ಆದರೆ ನಮ್ಮ ಮೈಸೂರಿನಲ್ಲಿ ಈಗ ಒಂದು ತಿಂಗಳಿಗೂ ಕಡಿಮೆ ಸಮಯದಿಂದ ಒಂದಷ್ಟು ಯುವಜನರಿಂದ ಇಂತಹ ಅದ್ಭುತ ಪ್ರಯತ್ನ ಆರಂಭವಾಗಿದೆ. ಜ್ಞಾನವನ್ನು ಹಂಚುವ ಈ ಪರಿಕಲ್ಪನೆ ನೋಡಿದಾಕ್ಷಣ ಪುಸ್ತಕಪ್ರಿಯರಿಗೆ ತುಸು ಹೆಚ್ಚೇ ಆಪ್ತ ಎನಿಸುತ್ತದೆ. ಇದರ ಹಿಂದಿನ ರೂವಾರಿ ಬ್ರಿಟಿಷ್ ಲೈಬ್ರರಿಯಲ್ಲಿ ಕೆಲಸ ಮಾಡುತ್ತಿದ್ದ, ಮೈಸೂರಿನಲ್ಲೇ ಹುಟ್ಟಿ ಬೆಳೆದು ಹಲವು ಸಮಯ ಇಂಗ್ಲೆಂಡ್‌ನಲ್ಲಿ ನೆಲೆಸಿ ಈಗ ಮತ್ತೆ ಸದ್ಯಕ್ಕೆ ಮೈಸೂರಿನಲ್ಲಿರುವ ಓಮರ್ ಹಕ್ ಮತ್ತು ಆತನ ಸ್ನೇಹಿತರದ್ದು. ಇದಕ್ಕೆ ಆರ್ಥಿಕ ಸಹಕಾರ ನೀಡಿರುವುದು ಟಾಸ್ಕ್ ಟ್ರಸ್ಟ್ ಎಂಬ ಸಂಸ್ಥೆ.

ಅಂದ ಹಾಗೆ ಈ ಲಿಟಲ್ ಫ್ರೀ ಲೈಬ್ರರಿಯಲ್ಲಿ ಏನು ಮಾಡಬಹುದು ಅಂದರೆ, ನಿಮಗೆ ಬೇಕಾದ ಪುಸ್ತಕಗಳನ್ನು ಈ ಲೈಬ್ರರಿಯಿಂದ ತೆಗೆದುಕೊಂಡು ಓದಬಹುದು. ಅದನ್ನು ಬೇಕಿದ್ದರೆ ಓದಿದ ನಂತರ ಹಿಂದಿರುಗಿಸಬಹುದಾದರೂ ಕಡ್ಡಾಯವೇನಿಲ್ಲ. ನಿಮ್ಮಲ್ಲಿ ಪುಸ್ತಕಗಳಿದ್ದರೆ ಅದನ್ನು ಇಲ್ಲಿ ತಂದಿಡಬಹುದು. ಈ ಯಾವ ಕೆಲಸಗಳಿಗೂ ಯಾವುದೇ ಹಣ ಪಾವತಿಸಬೇಕಿಲ್ಲ, ಯಾವ ರೀತಿ-ರಿವಾಜುಗಳನ್ನೂ ಪಾಲಿಸಬೇಕಿಲ್ಲ. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳು ಸಿಗುತ್ತವಾದರೂ ಕಟ್ಟುಪಾಡುಗಳು ಹೆಚ್ಚು. ಅದರ ಬದಲು ಈ ರೀತಿಯ ಪರಿಕಲ್ಪನೆ ಜನರಿಗೆ ಹೆಚ್ಚು ಸರಳವಾಗುತ್ತದೆ ಎಂಬ ಕಾರಣಕ್ಕೆ ಲಿಟಲ್ ಫ್ರೀ ಲೈಬ್ರರಿ ಆರಂಭವಾಗಿದೆ. ಇದನ್ನು ಆರಂಭಿಸಿರುವ ಹುರುಪಿನ ಹುಡುಗರ ಪ್ರಕಾರ ಇದೊಂದು ಸಾಮಾಜಿಕ ಕಳಕಳಿಯ ವಿಶಿಷ್ಟ ಹೆಜ್ಜೆ. ಇದರ ಪೂರ್ತಿ ಜವಾಬ್ದಾರಿ, ನಿರ್ವಹಣೆ, ಉಪಯೋಗ ಎಲ್ಲವೂ ಜನರಿಗೆಂದೇ ಹಾಗೂ ಜನರಿಂದಲೇ ಆರಂಭವಾದ ಇಪ್ಪತ್ತೇ ದಿನಗಳಲ್ಲಿ ಈ ಲಿಟಲ್ ಲೈಬ್ರರಿಯಲ್ಲಿ ೪೦೦ಕ್ಕೂ ಹೆಚ್ಚು ಪುಸ್ತಕಗಳು ಬಂದು ಹೋಗಿವೆ. ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಪ್ರಸ್ತುತ ಕುವೆಂಪುನಗರದಲ್ಲಿ, ಬುಕ್ಸ್ ಅಂಡ್ ಬ್ರೂಸ್ ಹಾಗೂ ಟೀನಾ ಕೆಫೆಯ ಮುಂಭಾಗ ಈ ಲಿಟಲ್ ಫ್ರೀ ಲೈಬ್ರರಿ ಕಾಣಸಿಗುತ್ತದೆ. ಆಯಾ ಸ್ಥಳಗಳಲ್ಲಿ ಇರುವವರು ಇದರ ನಿರ್ವಹಣೆ ಮಾಡುತ್ತಿದ್ದಾರೆ. ಪುಸ್ತಕಗಳನ್ನು ಓದುತ್ತಿರುವ ಜನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿರುವ ಈ ದಿನಗಳಲ್ಲಿ ಓದುವವರು ಸಿಗುವುದೇ ಕಷ್ಟ. ಇನ್ನು ಎಲ್ಲ ಕೆಲಸಗಳೂ ಆನ್‌ಲೈನ್‌ನಲ್ಲೇ ನಡೆಯುವ ಕಾರಣ ವೈಯಕ್ತಿಕವಾಗಿ ಹೋಗಿ ಪುಸ್ತಕ ಕೊಳ್ಳಲು ಜನರಿಗೆ ಸಮಯವೂ ಇಲ್ಲ. ಇಂತಹ ಒತ್ತಡದ ಜೀವನಶೈಲಿಯ ನಡುವೆ ಈ ರೀತಿಯ ಲೈಬ್ರರಿ ಪರಿಕಲ್ಪನೆ ಆರಂಭವಾಗಿರುವುದು ಸ್ವಾಗತಾರ್ಹ ಎನ್ನುವುದು ಪುಸ್ತಕ ಪ್ರಿಯರ ಅಭಿಪ್ರಾಯ.

ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ಇನ್ನೂ ಸಾಕಷ್ಟು ಪಾಶ್ಚಾತ್ಯ ದೇಶಗಳಲ್ಲಿ ಲಿಟಲ್ ಫ್ರೀ ಲೈಬ್ರರಿ ಬಹಳವೇ ಪ್ರಸಿದ್ಧ. ಮೈಸೂರಿನಲ್ಲಿ ಈ ಪುಟ್ಟ ಗ್ರಂಥಾಲಯ ಆರಂಭವಾಗಿರುವುದರ ಪರಿಣಾಮ ಏನಾಗಬಹುದು ಎಂದು ಪ್ರಶ್ನಿಸಿದರೆ, ಪುಸ್ತಕಪ್ರಿಯರು ಒಬ್ಬರಿಗೊಬ್ಬರು ಪರಿಚಯ ಆಗುತ್ತಾರೆ. ನಾವು ಎಂದೂ ನೋಡಿರದ, ಕೇಳಿರದ ಪುಸ್ತಕಗಳು ಈ ಲಿಟಲ್ ಫ್ರೀ ಲೈಬ್ರರಿಯಲ್ಲಿ ಸಿಗಬಹುದು, ನಮ್ಮ ಬಳಿ ಇರುವ ಪುಸ್ತಕಗಳು ಇನ್ಯಾವುದೋ ಆಸಕ್ತರ ಕೈಸೇರಬಹುದು. ಹೀಗೆ ದಿನಕಳೆದಂತೆ ಬೇರೆ ಬೇರೆ ದೇಶಗಳು, ನಗರಗಳಂತೆ ನಮ್ಮ ನಗರದಲ್ಲೂ ಪುಸ್ತಕಪ್ರಿಯರ ಗುಂಪೊಂದು ಸೃಷ್ಟಿಯಾಗಬಹುದು. ಜನರು ಇಂತಹ ಪ್ರಯತ್ನಗಳನ್ನು ಸೂಕ್ತವಾಗಿ ಹಾಗೂ ಜವಾಬ್ದಾರಿಯುತವಾಗಿ ಬಳಸಿಕೊಂಡರೆ, ಬೆಳೆಸಿದರೆ ಇವೆಲ್ಲವೂ ಆಗುತ್ತವೆ.

ಓಮರ್ ಹಕ್ ಮತ್ತು ಆತನ ಸ್ನೇಹಿತರಂತಹ ಯುವಜನರು ಈ ರೀತಿ ವಿನೂತನ ಪ್ರಯತ್ನಗಳ ಮೂಲಕ ಪುಸ್ತಕ ಓದುವವರನ್ನು ಒಟ್ಟುಗೂಡಿಸಿಹೀಗೊಂದು ಜನರ ಗುಂಪು ಸೃಷ್ಟಿ ಮಾಡುತ್ತಿರು ವುದು ಶ್ಲಾಘನೀಯ ಸಂಗತಿ. ಅದರಲ್ಲೂ ಮೈಸೂರಿನಲ್ಲಿ ಇಂತಹ ಪ್ರಯತ್ನ ನಡೆದಿರುವುದು ಮೈಸೂರಿನ ಮುಕುಟಕ್ಕೆ ಮತ್ತೊಂದು ಗರಿ.

ಆಂದೋಲನ ಡೆಸ್ಕ್

Recent Posts

ಸಿಡಬ್ಲ್ಯುಎಂಎ ಆದೇಶ ಪಾಲಿಸಿ ; ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧದ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾವೇರಿ ನೀರು ನಿರ್ವಹಣಾ…

11 mins ago

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಚ್1ಎನ್1‌ ಸೋಂಕು ದೃಢ

ಬೆಂಗಳೂರು : ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 (H1N1) ದೃಢಪಟ್ಟಿದ್ದು ಆತಂಕ ಮೂಡಿಸಿದೆ. ಸದ್ಯಕ್ಕೆ ಹೈಸ್ಕೂಲ್ ಮಾತ್ರ…

42 mins ago

ವಿಧಾನಸಭೆಯಲ್ಲಿ ಹನೂರು ಎನ್‌ಕೌಂಟರ್‌ ಸದ್ದು: ಗದ್ದಲ ಕೋಲಾಹಲ

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿಂದು ಹನೂರು ಎನ್‌ಕೌಂಟರ್‌ ಪ್ರಕರಣ ಭಾರೀ ಚರ್ಚೆಗೆ ಕಾರಣವಾಯಿತು. ಕಲಾಪ ಆರಂಭವಾದ ತಕ್ಷಣವೇ ವಿಷಯ ಪ್ರಸ್ತಾಪಿಸಿದ ಆರ್.ಅಶೋಕ್‌,…

5 hours ago

ಕಾರ್ಮಿಕರ ಮೇಲೆ ಕಾಡಾನೆ ದಾಳಿ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…

8 hours ago

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೃತ 3 ಕುಟುಂಬಗಳಿಗೆ ಶಾಸಕ ಎಂ.ಆರ್. ಮಂಜುನಾಥ್ 15 ಲಕ್ಷ ಪರಿಹಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…

8 hours ago

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

9 hours ago