ಇದು ಚಾಮರಾಜನಗರದ ಬಳಿಯ ಹರವೆಯ ಮಾಧ್ಯಮಿಕ ಶಾಲಾಕಟ್ಟಡದ ಶಿಲಾನ್ಯಾಸ ಫಲಕ. ಆಗಿನ ಮೈಸೂರು ರಾಜ್ಯದ ಪ್ರಥಮ ಪ್ರಧಾನ ಸಚಿವರಾದ(ಮುಖ್ಯಮಂತ್ರಿಗಳಿಗೆ ಅಂದು ಪ್ರಧಾನ ಸಚಿವರೆಂದು ಕರೆಯುತ್ತಿದ್ದರಂತೆ) ಕೆ. ಸಿ. ರೆಡ್ಡಿಯವರೆ ಗ್ರಾಮಕ್ಕೆ ಆಗಮಿಸಿದ್ದು ಇತಿಹಾಸ.
ಹರವೆ ಗ್ರಾಮದ ಸುತ್ತಲಿನ ಇಪ್ಪತ್ತು ಮೂವತ್ತು ಗ್ರಾಮಗಳ ಮಕ್ಕಳು ಓದಿಗಾಗಿ ಮುಖ ಮಾಡಿ ಇತ್ತ ಬರಲಾರಂಭಿಸಿದ್ದರು. ಈ ಶಾಲೆ ಈ ಮೊದಲು ಮಹಾರಾಜರ ಕಾಲದಲ್ಲಿ ಪ್ರಾಥಮಿಕ ಶಾಲೆಯಾಗಿ ಶುರುವಾಗಿತ್ತಂತೆ. ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದು ಸದ್ಯ ಹರವೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಕವಿ, ಲೇಖಕ ಮಹೇಶ್ ಹರವೆಯವರು ಶಾಲೆಯಲ್ಲಿನ ತಮ್ಮ ಓದಿನ ದಿನಗಳನ್ನು ಸಂಭ್ರಮದಿಂದ ಹಂಚಿಕೊಳ್ಳುತ್ತಾರೆ.
ಮಕ್ಕಳಿಗೆ ಹರಿಹರನ ರಗಳೆಗಳನ್ನು, ಶರಣರ ಕತೆಗಳನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಹೇಳಿಕೊಡುತ್ತಿದ್ದ ಸೋಮಣ್ಣ ಮೇಷ್ಟ್ರು, ಭೈರಪ್ಪರ ಪರ್ವ, ಗೃಹಭಂಗ ಕಾದಂಬರಿಗಳನ್ನ ಓದಿ ಮಕ್ಕಳಿಗೆ ಕತೆ ಹೇಳುತ್ತಿದ್ದ ಎಚ್. ನಾಗರಾಜು ಮೇಷ್ಟ್ರು, ಇಂಗ್ಲಿಷ್ ಕಲಿಸುತ್ತಿದ್ದ ಪುಟ್ಟಸ್ವಾಮಿ ಮೇಷ್ಟ್ರು ಹೀಗೆ ಸೃಜನಶೀಲ ಗುರು ಪರಂಪರೆಯನ್ನು ಪ್ರೀತಿಯಿಂದ ನೆನೆಯುವ ಮಹೇಶ್ ಹರವೆಯವರು ತಮ್ಮ ಸೃಜನಶೀಲ ನೆಲೆಯ ತಳಪಾಯ ಪ್ರೈಮರಿ ಶಾಲೆಯದ್ದು ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಮತ್ತು ಪ್ರಖರ ವೈಚಾರಿಕ ಪ್ರಜ್ಞೆಯ ಲೇಖಕರಾಗಿದ್ದ ದೇವಯ್ಯ ಹರವೆಯವರು ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದವರು ಎಂದು ನೆನಪಿಸಿಕೊಳ್ಳುತ್ತಾರೆ. ಇತ್ತೀಚಿಗೆ ಹಲವು ಕಾರಣದಿಂದಾಗಿ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿರುವಾಗ ಒಂದೇ ಶೈಕ್ಷಣಿಕ ವರ್ಷದಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳು ದಾಖಲಾಗಿರುವ ಇತಿಹಾಸ ಶಾಲೆಯದು.
ಮಾಹಿತಿ: ಅನಿಲ್ ಕುಮಾರ್ ಹೊಸೂರು, ಶಿಕ್ಷಕರು, ಚಾಮರಾಜನಗರ
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸುತ್ತದೆ. ಈ…
ಮೈಸೂರು: ಚಾಮುಂಡಿಬೆಟ್ಟದ ಸುತ್ತಮುತ್ತ ಇದೀಗ ಬೆಟ್ಟದ ಅಸ್ತಿತ್ವಕ್ಕೆ ಗಂಡಾಂತರ ತರುವ ರೀತಿಯಲ್ಲಿ ಸುಮಾರು ೮ ಅಂತಸ್ತಿನ ಕಾಂಕ್ರೀಟ್ ಕಟ್ಟಡಗಳು ತಲೆ…
ಇದು ಕಳೆದ ಒಂದು ವರ್ಷದಿಂದೀಚಿನ ಬೆಳವಣಿಗೆ. ಬೇರೆ ರಾಜ್ಯಗಳಲ್ಲಿ ಇದು ನಡೆದಿತ್ತೋ ಏನೋ ಮಾಹಿತಿ ಇಲ್ಲ. ಆದರೆ ಕೇರಳದಲ್ಲಿ ಈ…
ಮೈಸೂರು: ದಸರಾ ಹಬ್ಬ ಮುಗಿದಿದೆ... ಚಿನ್ನದ ಅಂಬಾರಿ ಹೊತ್ತ ಜಂಬೂಸವಾರಿಯೂ ಸಂಪನ್ನವಾಗಿದೆ. ಆದರೆ, ನಗರದಲ್ಲಿ ಈಗಲೂ ‘ಅಂಬಾರಿ’ಯೊಂದರಲ್ಲಿ ಸಂಚರಿಸಲು ಪ್ರವಾಸಿಗರು…
ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ…
ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ…