ಇವರು ಮೈಸೂರಿನ ಕಾಷ್ಠಶಿಲ್ಪಿ ಕುವಾರ್ ಚಂದ್ರನ್. ಐದು ವರ್ಷದ ಬಾಲಕನಿರುವಾಗ ಕೇರಳದ ತಿರುವನಂತಪುರದಿಂದ ತಂದೆ ನಾಗಪ್ಪ ಆಚಾರಿಯವರೊಂದಿಗೆ ಮೈಸೂರಿಗೆ ಬಂದು ಮರಕ್ಕೆ ಉಳಿ ಹಿಡಿಯಲು ತೊಡಗಿದ ಇವರಿಗೆ ಈಗ ಐವತ್ತಾರು ವರ್ಷ. ದೇವಾನುದೇವತೆಗಳನ್ನೂ, ಶಿಲಾಬಾಲಿಕೆಯರನ್ನೂ ಕಣ್ಣಿಗೆ ಕಟ್ಟುವ ಹಾಗೆ ಒಣಮರದಲ್ಲಿ ಜೀವ ತುಂಬುವ ಇವರಿಗೆ ಇರಲು ಒಂದು ಸ್ವಂತ ಮನೆಯೂ ಇಲ್ಲ. ಮೈಸೂರಿನ ಬಿ.ಎಂ.ಶ್ರೀ ನಗರದಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಸಾಕುತ್ತಾ ಬಾಡಿಗೆ ಮನೆಯಲ್ಲಿ ತಾವು ಕಡೆದ ವಿಗ್ರಹಗಳೊಂದಿಗೆ ಬದುಕುತ್ತಿರುವ ಇವರು ಸಿಕ್ಕಾಪಟ್ಟೆ ಸ್ವಾಭಿವಾನಿ. ‘ನಾನು ಕಲಾವಿದ. ದೇವರನ್ನು ಬಿಟ್ಟರೆ ಬೇರೆ ಯಾರ ಮುಂದೆಯೂ ತಲೆ ಬಾಗುವುದಿಲ್ಲ, ಹಾಗಾಗಿ ಪ್ರಧಾನ ಮಂತ್ರಿಗಳ ವಸತಿ ಯೋಜನೆಯಲ್ಲಿ ನನಗೆ ಮನೆಯೊಂದು ಮಂಜೂರಾಗಿದ್ದರೂ ಅದು ನನಗೆ ಇನ್ನೂ ಸಿಕ್ಕಿಲ್ಲ. ಪರವಾಗಿಲ್ಲ. ನಾನು ಯಾರ ಬಳಿಯೂ ಕೈ ಒಡ್ಡಿ ಕೇಳಿಕೊಳ್ಳುವುದಿಲ್ಲ. ನಾನು ಕಡೆದ ದೇವರ ಮೂರ್ತಿಗಳು ಹಾಗೆ ಬಯಸಿದರೆ ಹಾಗೇ ಆಗಲಿ. ನಾನು ಸ್ವಂತ ಸೂರಿಲ್ಲದವನಾಗಿಯೇ ಈ ಮೈಸೂರಿನಲ್ಲಿ ಬದುಕುತ್ತೇನೆ’ ಎಂದು ಮತ್ತೆ ಮೂರ್ತಿಗಳನ್ನು ಕೆತ್ತಲು ತೊಡಗುತ್ತಾರೆ. ಈ ಚಿತ್ರದಲ್ಲಿ ನೀವು ನೋಡುತ್ತಿರುವ ಬೇಲೂರ ಶಿಲಾಬಾಲಿಕೆಯನ್ನು ಸತತ ಮೂರು ತಿಂಗಳುಗಳ ಕಾಲ ಕೆತ್ತಿ ಮುಗಿಸಿ, ಈಗ ಶಯನಶೀಲನಾಗಿರುವ ಗಣಪತಿಯ ಮೂರ್ತಿಯನ್ನು ಇವರು ಮರದಲ್ಲಿ ಮೂಡಿಸಲು ತೊಡಗಿದ್ದಾರೆ. ಇವರು ಕೆತ್ತಿರುವ ಸರಸ್ವತಿ,ಗಣಪ, ಶ್ರೀ ಕೃಷ್ಣ, ಬುದ್ದ, ಏಸು, ಗಾಂಧಿಯರ ಮೂರ್ತಿಯರು ವಿಗ್ರಹದ ಅಂಗಡಿಗಳವರಿಗೆ ಸಾವಿರಾರು ರೂಪಾಯಿಗಳ ಲಾಭ ತಂದುಕೊಟ್ಟಿದೆ. ಪ್ರಧಾನ ಮಂತಿಗಳವರೆಗೂ ತಲುಪಿವೆ. ಆದರೆ ಇವರ ಶ್ರಮಕ್ಕೆ ಕನಿಷ್ಟ ಸಂಬಳವೂ ದೊರಕುವುದಿಲ್ಲ. ಅದೊಂದು ಸಾತ್ವಿಕ ಸಿಟ್ಟು ಬಿಟ್ಟರೆ ಇವರಿಗೆ ತಾನೊಬ್ಬ ಕಲಾವಿದ ಎಂಬುದರ ಕುರಿತು ಆತ್ಮ ಸಂತೃಪ್ತಿಯಿದೆ. ತನ್ನ ಜೀವನದ ಅರ್ಧ ದಶಕವನ್ನು ಮರದ ದೇವದೇವತೆಗಳೊಂದಿಗೆ ಮೈಸೂರಿನಲ್ಲೇ ಕಳೆದಿರುವ ಇವರಿಗೆ ಇರಲೊಂದು ನೆಲೆ ಸಿಗಲು ಮೈಸೂರಿಗರು ಹಕ್ಕೊತ್ತಾಯ ಮಾಡಬೇಕಾಗಿದೆ.
( mysoorininda@gmail.com )

andolana

Recent Posts

ಶೂಟೌಟ್ ಪ್ರಕರಣ | ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ : ಸಿಎಂ ಡಿ.ಕೆ.ಶಿವಕುಮಾರ್

ವಸ್ತುಗಳು, ಬಂದೂಕು ಸೇರಿ ಸಾಕ್ಷಿಗಳು ಲಭ್ಯ ಬೆಂಗಳೂರು : ಹನೂರಿನಲ್ಲಿ ನಡೆದಿರುವ ಶೂಟೌಟ್ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ…

6 hours ago

ಮುಂದಿನ ಆಗಸ್ಟ್‌ ಒಳಗೆ ಮೇಕೆದಾಟುಗೆ ಶಂಕುಸ್ಥಾಪನೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೂರದೃಷ್ಠಿಯ ಮೇಕೆದಾಟು ಯೋಜನೆಗೆ 2027ರ ಸ್ವಾತಂತ್ರ ದಿನಾಚರಣೆ ವೇಳೆಗೆ ಶಂಕುಸ್ಥಾಪನೆ ನೆರವೇರಿಸಿ ಅಣೆಕಟ್ಟು…

11 hours ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ

ಮೈಸೂರು: ಮೂವರು ಬೇಟೆಗಾರರ ಎನ್‌ಕೌಂಟರ್‌ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ…

12 hours ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಚಿವ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ

ಮೈಸೂರು: ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪು ಆಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಈ…

12 hours ago

ಕಾಡಿನಲ್ಲಿ ಗುಂಡಿನ ಮೊರೆತ: ಮೂವರು ಸ್ಥಳದಲ್ಲೇ ಸಾವು- ಉದ್ರಿಕ್ತರಿಂದ ಕಚೇರಿ ಪೀಠೋಪಕರಣ ಧ್ವಂಸ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಅಸುನೀಗಿದ ಘಟನೆ…

12 hours ago

ಕಾವೇರಿ ಅಭಯಾರಣ್ಯದಲ್ಲಿ ಎನ್‌ಕೌಂಟರ್: ಅಕ್ರಮ ಬೇಟೆ ವೇಳೆ ಗುಂಡಿನ ದಾಳಿ, 3 ಮಂದಿ ಮೃತ್ಯು

ಮಹಾದೇಶ್‌ ಎಂ ಗೌಡ; ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಕಾವೇರವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ…

13 hours ago