ಇವರು ಮೈಸೂರಿನ ಕಾಷ್ಠಶಿಲ್ಪಿ ಕುವಾರ್ ಚಂದ್ರನ್. ಐದು ವರ್ಷದ ಬಾಲಕನಿರುವಾಗ ಕೇರಳದ ತಿರುವನಂತಪುರದಿಂದ ತಂದೆ ನಾಗಪ್ಪ ಆಚಾರಿಯವರೊಂದಿಗೆ ಮೈಸೂರಿಗೆ ಬಂದು ಮರಕ್ಕೆ ಉಳಿ ಹಿಡಿಯಲು ತೊಡಗಿದ ಇವರಿಗೆ ಈಗ ಐವತ್ತಾರು ವರ್ಷ. ದೇವಾನುದೇವತೆಗಳನ್ನೂ, ಶಿಲಾಬಾಲಿಕೆಯರನ್ನೂ ಕಣ್ಣಿಗೆ ಕಟ್ಟುವ ಹಾಗೆ ಒಣಮರದಲ್ಲಿ ಜೀವ ತುಂಬುವ ಇವರಿಗೆ ಇರಲು ಒಂದು ಸ್ವಂತ ಮನೆಯೂ ಇಲ್ಲ. ಮೈಸೂರಿನ ಬಿ.ಎಂ.ಶ್ರೀ ನಗರದಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಸಾಕುತ್ತಾ ಬಾಡಿಗೆ ಮನೆಯಲ್ಲಿ ತಾವು ಕಡೆದ ವಿಗ್ರಹಗಳೊಂದಿಗೆ ಬದುಕುತ್ತಿರುವ ಇವರು ಸಿಕ್ಕಾಪಟ್ಟೆ ಸ್ವಾಭಿವಾನಿ. ‘ನಾನು ಕಲಾವಿದ. ದೇವರನ್ನು ಬಿಟ್ಟರೆ ಬೇರೆ ಯಾರ ಮುಂದೆಯೂ ತಲೆ ಬಾಗುವುದಿಲ್ಲ, ಹಾಗಾಗಿ ಪ್ರಧಾನ ಮಂತ್ರಿಗಳ ವಸತಿ ಯೋಜನೆಯಲ್ಲಿ ನನಗೆ ಮನೆಯೊಂದು ಮಂಜೂರಾಗಿದ್ದರೂ ಅದು ನನಗೆ ಇನ್ನೂ ಸಿಕ್ಕಿಲ್ಲ. ಪರವಾಗಿಲ್ಲ. ನಾನು ಯಾರ ಬಳಿಯೂ ಕೈ ಒಡ್ಡಿ ಕೇಳಿಕೊಳ್ಳುವುದಿಲ್ಲ. ನಾನು ಕಡೆದ ದೇವರ ಮೂರ್ತಿಗಳು ಹಾಗೆ ಬಯಸಿದರೆ ಹಾಗೇ ಆಗಲಿ. ನಾನು ಸ್ವಂತ ಸೂರಿಲ್ಲದವನಾಗಿಯೇ ಈ ಮೈಸೂರಿನಲ್ಲಿ ಬದುಕುತ್ತೇನೆ’ ಎಂದು ಮತ್ತೆ ಮೂರ್ತಿಗಳನ್ನು ಕೆತ್ತಲು ತೊಡಗುತ್ತಾರೆ. ಈ ಚಿತ್ರದಲ್ಲಿ ನೀವು ನೋಡುತ್ತಿರುವ ಬೇಲೂರ ಶಿಲಾಬಾಲಿಕೆಯನ್ನು ಸತತ ಮೂರು ತಿಂಗಳುಗಳ ಕಾಲ ಕೆತ್ತಿ ಮುಗಿಸಿ, ಈಗ ಶಯನಶೀಲನಾಗಿರುವ ಗಣಪತಿಯ ಮೂರ್ತಿಯನ್ನು ಇವರು ಮರದಲ್ಲಿ ಮೂಡಿಸಲು ತೊಡಗಿದ್ದಾರೆ. ಇವರು ಕೆತ್ತಿರುವ ಸರಸ್ವತಿ,ಗಣಪ, ಶ್ರೀ ಕೃಷ್ಣ, ಬುದ್ದ, ಏಸು, ಗಾಂಧಿಯರ ಮೂರ್ತಿಯರು ವಿಗ್ರಹದ ಅಂಗಡಿಗಳವರಿಗೆ ಸಾವಿರಾರು ರೂಪಾಯಿಗಳ ಲಾಭ ತಂದುಕೊಟ್ಟಿದೆ. ಪ್ರಧಾನ ಮಂತಿಗಳವರೆಗೂ ತಲುಪಿವೆ. ಆದರೆ ಇವರ ಶ್ರಮಕ್ಕೆ ಕನಿಷ್ಟ ಸಂಬಳವೂ ದೊರಕುವುದಿಲ್ಲ. ಅದೊಂದು ಸಾತ್ವಿಕ ಸಿಟ್ಟು ಬಿಟ್ಟರೆ ಇವರಿಗೆ ತಾನೊಬ್ಬ ಕಲಾವಿದ ಎಂಬುದರ ಕುರಿತು ಆತ್ಮ ಸಂತೃಪ್ತಿಯಿದೆ. ತನ್ನ ಜೀವನದ ಅರ್ಧ ದಶಕವನ್ನು ಮರದ ದೇವದೇವತೆಗಳೊಂದಿಗೆ ಮೈಸೂರಿನಲ್ಲೇ ಕಳೆದಿರುವ ಇವರಿಗೆ ಇರಲೊಂದು ನೆಲೆ ಸಿಗಲು ಮೈಸೂರಿಗರು ಹಕ್ಕೊತ್ತಾಯ ಮಾಡಬೇಕಾಗಿದೆ.
( mysoorininda@gmail.com )

andolana

Recent Posts

ಮಳವಳ್ಳಿ ದರೋಡೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ಮಳವಳ್ಳಿ : ತಾಲೂಕಿನ ಹಲಗೂರು ಸಮೀಪದ ಜೂಗನಹಳ್ಳಿ ವ್ಯಾಪ್ತಿಯ ತೋಟದ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಚಿನ್ನ ದೋಚಿ ಪರಾರಿಯಾಗಿದ್ದ…

1 hour ago

ಪ್ರಚೋದನಕಾರಿ ಭಾಷಣ ; ಯತ್ನಾಳ್, ಅನಂತ್ ಕುಮಾರ್ ಹೆಗ್ಡೆ ವಿರುದ್ಧ ದೂರು ದಾಖಲು

ಮದ್ದೂರು : ಹಿಂದೂ ಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬಲಿದಾನ್‌ ದಿವಾಸ್ ಕಾರ್ಯಕ್ರಮದಲ್ಲಿ ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆ ತರುವ…

2 hours ago

ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ : ಸಚಿವ ಖಂಡ್ರೆ ಭರವಸೆ

ಬೆಂಗಳೂರು : ಗ್ರಾಮಗಳಿಗೆ ನುಗ್ಗಿ ಬೆಳೆಹಾನಿ, ಜೀವಹಾನಿ ಮಾಡುತ್ತಿರುವ ಆನೆಗಳ ಸೆರೆಗೆ ಆದೇಶ ನೀಡಿದ್ದು, ಈಗಾಗಲೇ 2 ಆನೆ ಸೆರೆ…

2 hours ago

ಭದ್ರಾ ಅಭಯಾರಣ್ಯ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲು ಕ್ರಮ : ಈಶ್ವರ ಖಂಡ್ರೆ

ಬೆಂಗಳೂರು : ಭದ್ರಾ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ನಿಗದಿ ಪಡಿಸುವ ಕುರಿತಂತೆ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ…

2 hours ago

ಎಲ್‌ಪಿಜಿ ರಿಫಿಲಿಂಗ್‌ ಅವಧಿ ಹೆಚ್ಚಳ ; ವದಂತಿ ನಿರಾಕರಿಸಿದ ಕೇಂದ್ರ

ಹೊಸದಿಲ್ಲಿ : ಎಲ್‌ಪಿಜಿ ಸಿಲಿಂಡರ್ ರಿಫಿಲಿಂಗ್‌ ಸಮಯ ಮಿತಿ ಬದಲಾವಣೆ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದು, ಇದೀಗ ಪೆಟ್ರೋಲಿಯಂ ಮತ್ತು…

2 hours ago

ಆಕಸ್ಮಿಕ ಬೆಂಕಿ; ಸ್ಕೂಟಿ ಭಸ್ಮ, ಮಹಿಳೆ ಪಾರು

ನಾಪೋಕ್ಲು : ದ್ವಿಚಕ್ರ ವಾಹನವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಚೈಯಂಡಾಣೆಯ ನರಿಯಂದಡ ಗ್ರಾಮದಲ್ಲಿ ಜರುಗಿದೆ. ಸ್ಥಳೀಯ…

2 hours ago