ಇವರು ಮಂಡ್ಯ ಜಿಲ್ಲೆ ದುದ್ದ ಹೋಬಳಿ ಮಲ್ಲಾಯನಕಟ್ಟೆಯ ಹಾಡುಗಾರ್ತಿ ನಾಟಿ ಸಾಕಮ್ಮ. ನಾಟಿ ಸಾಕಮ್ಮ ಅಂತ ಇವರ ಹೆಸರು ಯಾಕೆ ಅಂದರೆ ಇವರ ಊರಿನಲ್ಲಿ ಬಹಳ ಮಂದಿ ಸಾಕಮ್ಮಂದಿರು ಇದ್ದಾರೆ. ಆದರೆ ನಾಟಿ ಹಾಕುವಾಗ ಹಾಡು ಹೇಳುವ ಸಾಕಮ್ಮ ಇವರೊಬ್ಬರೇ. ಹಾಗಾಗಿ. ಇವರಿಗೆ ಈಗ ಆಸುಪಾಸು ಅರವತ್ತರ ವಯಸ್ಸು. ಇವರ ತವರು ಮನೆ ಚನ್ನಪಟ್ಟಣದ ಬಳಿಯ ಸಿದ್ದನಹಳ್ಳಿ. ಸಣ್ಣ ವಯಸ್ಸಲ್ಲೇ ಮದುವೆಯಾಗಿ ಗಂಡನ ಮನೆಗೆ ಬಂದ ಸಾಕಮ್ಮ ಆಗಿನಿಂದ ತೊಡಗಿದ ಕೂಲಿ ಕೆಲಸ ಈಗಲೂ ಮುಂದುವರಿದಿದೆ. ನಾಟಿ ಸಾಕಮ್ಮ ಪ್ರಸಿದ್ಧರಾಗಿರುವುದು ಹಾಡುಗಾರ್ತಿಯಾಗಿ. ನಾಟಿ ಹಾಕುವಾಗ, ಕಳೆ ಕೀಳುವಾಗ, ಯಾರಾದರೂ ತೀರಿ ಹೋದಾಗ, ಮೈ ನೆರೆದಾಗ, ಮದುವೆಯಾಗುವಾಗ ಅಲ್ಲಿ ಸಾಕಮ್ಮ ಮತ್ತು ಸಂಗಡಿಗರ ಜಾನಪದ ಹಾಡುಗಳು ಇರಲೇಬೇಕು. ಹಾಗಾಗಿ ಹಾಡುಗಳು ಅಂದರೆ ಸಾಕಮ್ಮನಿಗೆ ಬದುಕಲು ಇರುವ ದಾರಿ ಮತ್ತು ಬಡತನವ ಮರೆಯಲು ಇರುವ ಸಂಗಾತಿ. ನಾಟಿ ಸಾಕಮ್ಮನಿಗೆ ಇರಲು ಮನೆಯಿಲ್ಲ, ಬೆಳೆಯಲು ಭೂಮಿಯಿಲ್ಲ. ಹೊಟ್ಟೆ ತುಂಬ ಅನ್ನ ಸಿಗುವಷ್ಟು ಕೂಲಿ ಕೆಲಸವೂ ಸಿಗುವುದಿಲ್ಲ. ಆದರೆ ಈ ಯಾವುದರ ಕುರಿತೂ ಈಕೆಗೆ ಸಿಟ್ಟೂ ಇಲ್ಲ ಬೇಸರವೂ ಇಲ್ಲ. ತನ್ನ ಮನೆದೇವರು ಮಂಚಮ್ಮ ತನ್ನನ್ನು ಎಲ್ಲದರಿಂದ ಕಾಪಾಡುತ್ತಾಳೆ ಎನ್ನುವ ಮುಗ್ಧ ನಂಬಿಕೆ ಆಕೆಯದ್ದು. ಆದರೆ ಇಂತಹ ಸಾವಿರ ಸಾವಿರ ಸಾಕಮ್ಮಂದಿರ ಮುಗ್ದತೆಯನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಅಧಿಕಾರಸ್ಥರಿಗೆ ಇಂತಹ ತಾಯಂದಿರ ನಿಟ್ಟುಸಿರುಗಳು ಕೇಳಿಸುವುದೂ ಇಲ್ಲ (mysoorininda@gmail.com)
ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊಸದಾಗಿ ೮೦೦ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು…
ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಮೇ ೨೯ರಂದು ಪ್ರಾರಂಭವಾಗುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಸರ್ಕಾರ ಪ್ರತೀ ವರ್ಷ ಮಕ್ಕಳಿಗೆ ಉಚಿತ ಪಠ್ಯಪುಸ್ತಕ,…
ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಚಿತ್ರನಟ ಜೋಸೆಫ್ ವಿಜಯ್ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಒಂದೇ ರಸ್ತೆಯಲ್ಲಿ…
ನವೀನ್ ಡಿಸೋಜ ವಿಪತ್ತು ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ; ಸಂತ್ರಸ್ತರನ್ನು ರಕ್ಷಿಸುವ ವಿಧಾನ, ದೋಣಿ ಮೋಟಾರ್ಗಳನ್ನು ಚಾಲನೆ ಮಾಡುವ ಬಗ್ಗೆ…
ಬಾಪೂಜಿ ಮತ್ತು ವಾಜಪೇಯಿ ದಾರಿ ಬೇರೆಯಾಗಿದ್ದರೂ ನೈತಿಕತೆಗೆ ಮಾದರಿಯಾಗಿದ್ದರು ರಾಜೀವ ಹೆಗಡೆ ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿ ಆರಂಭಿ ಸಿದಾಗ…
ಸುಧಾರಣೆ ನೆಪದಲ್ಲಿ ಎಚ್ಚರ ತಪ್ಪಿದೆ. ಪ್ರೌಢಶಾಲೆಯಲ್ಲಿ ನನಗೆ ಆಪ್ತ ಸ್ನೇಹಿತರು ಬಹಳ ಕಡಿಮೆಯಿದ್ದರು. ಅಲ್ಲಿ ಬೇರೆ ಬೇರೆ ಕಾಲದಲ್ಲಿ ನನಗೆ…