ಇವರು ಮಂಡ್ಯ ಜಿಲ್ಲೆ ದುದ್ದ ಹೋಬಳಿ ಮಲ್ಲಾಯನಕಟ್ಟೆಯ ಹಾಡುಗಾರ್ತಿ ನಾಟಿ ಸಾಕಮ್ಮ. ನಾಟಿ ಸಾಕಮ್ಮ ಅಂತ ಇವರ ಹೆಸರು ಯಾಕೆ ಅಂದರೆ ಇವರ ಊರಿನಲ್ಲಿ ಬಹಳ ಮಂದಿ ಸಾಕಮ್ಮಂದಿರು ಇದ್ದಾರೆ. ಆದರೆ ನಾಟಿ ಹಾಕುವಾಗ ಹಾಡು ಹೇಳುವ ಸಾಕಮ್ಮ ಇವರೊಬ್ಬರೇ. ಹಾಗಾಗಿ. ಇವರಿಗೆ ಈಗ ಆಸುಪಾಸು ಅರವತ್ತರ ವಯಸ್ಸು. ಇವರ ತವರು ಮನೆ ಚನ್ನಪಟ್ಟಣದ ಬಳಿಯ ಸಿದ್ದನಹಳ್ಳಿ. ಸಣ್ಣ ವಯಸ್ಸಲ್ಲೇ ಮದುವೆಯಾಗಿ ಗಂಡನ ಮನೆಗೆ ಬಂದ ಸಾಕಮ್ಮ ಆಗಿನಿಂದ ತೊಡಗಿದ ಕೂಲಿ ಕೆಲಸ ಈಗಲೂ ಮುಂದುವರಿದಿದೆ. ನಾಟಿ ಸಾಕಮ್ಮ ಪ್ರಸಿದ್ಧರಾಗಿರುವುದು ಹಾಡುಗಾರ್ತಿಯಾಗಿ. ನಾಟಿ ಹಾಕುವಾಗ, ಕಳೆ ಕೀಳುವಾಗ, ಯಾರಾದರೂ ತೀರಿ ಹೋದಾಗ, ಮೈ ನೆರೆದಾಗ, ಮದುವೆಯಾಗುವಾಗ ಅಲ್ಲಿ ಸಾಕಮ್ಮ ಮತ್ತು ಸಂಗಡಿಗರ ಜಾನಪದ ಹಾಡುಗಳು ಇರಲೇಬೇಕು. ಹಾಗಾಗಿ ಹಾಡುಗಳು ಅಂದರೆ ಸಾಕಮ್ಮನಿಗೆ ಬದುಕಲು ಇರುವ ದಾರಿ ಮತ್ತು ಬಡತನವ ಮರೆಯಲು ಇರುವ ಸಂಗಾತಿ. ನಾಟಿ ಸಾಕಮ್ಮನಿಗೆ ಇರಲು ಮನೆಯಿಲ್ಲ, ಬೆಳೆಯಲು ಭೂಮಿಯಿಲ್ಲ. ಹೊಟ್ಟೆ ತುಂಬ ಅನ್ನ ಸಿಗುವಷ್ಟು ಕೂಲಿ ಕೆಲಸವೂ ಸಿಗುವುದಿಲ್ಲ. ಆದರೆ ಈ ಯಾವುದರ ಕುರಿತೂ ಈಕೆಗೆ ಸಿಟ್ಟೂ ಇಲ್ಲ ಬೇಸರವೂ ಇಲ್ಲ. ತನ್ನ ಮನೆದೇವರು ಮಂಚಮ್ಮ ತನ್ನನ್ನು ಎಲ್ಲದರಿಂದ ಕಾಪಾಡುತ್ತಾಳೆ ಎನ್ನುವ ಮುಗ್ಧ ನಂಬಿಕೆ ಆಕೆಯದ್ದು. ಆದರೆ ಇಂತಹ ಸಾವಿರ ಸಾವಿರ ಸಾಕಮ್ಮಂದಿರ ಮುಗ್ದತೆಯನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಅಧಿಕಾರಸ್ಥರಿಗೆ ಇಂತಹ ತಾಯಂದಿರ ನಿಟ್ಟುಸಿರುಗಳು ಕೇಳಿಸುವುದೂ ಇಲ್ಲ (mysoorininda@gmail.com)

andolana

Recent Posts

ರಾಜೀನಾಮೆ ಸಂಬಂಧ ಯಾವುದೇ ಚರ್ಚೆ ನಡೆದಿಲ್ಲ: ಸಚಿವ ನಾಗೇಂದ್ರ

ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…

4 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026: ಗಜಪಯಣಕ್ಕೆ ವಿದ್ಯುಕ್ತ ಚಾಲನೆ

ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ದಸರಾ ಗಜಪಯಣಕ್ಕೆ ಇಂದು ಅದ್ಧೂರಿ ಚಾಲನೆ ದೊರೆತಿದೆ. ಮೈಸೂರು ಜಿಲ್ಲಾ…

5 hours ago

ಓದುಗರ ಪತ್ರ: ಕಾವೇರಿ ನದಿ ನೀರಿನ ವಿವಾದಕ್ಕೆ ಮಾತುಕತೆಯೇ ಮದ್ದು

ತಮಿಳುನಾಡಿಗೆ ಮುಂದಿನ ಹದಿನೈದು ದಿನಗಳ ಕಾಲ ನಿತ್ಯ ಒಂಬತ್ತು ಸಾವಿರ ಕ್ಯುಸೆಕ್ಸ್ ಕಾವೇರಿ ನದಿ ನೀರು ಹರಿಸಬೇಕಾಗಿರುವುದು ಅಘಾತಕಾರಿ ಸಂಗತಿಯಾಗಿದೆ.…

6 hours ago

ಓದುಗರ ಪತ್ರ: ಈ ‘ಎರಡು’ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು

ಮೈಸೂರು ನಗರವು ‘ಸ್ವಚ್ಛ ನಗರಿ’, ‘ಸಾಂಸ್ಕೃತಿಕ ನಗರಿ’ ಮತ್ತು ‘ಪಾರಂಪರಿಕನಗರಿ’ ಎಂದೇ ಖ್ಯಾತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹೆಮ್ಮೆಯ…

6 hours ago

ಓದುಗರ ಪತ್ರ: ಸ್ಥಳ ಶುದ್ಧೀಕರಣಕ್ಕಿಂತ ಮನ ಶುದ್ಧೀಕರಣವಾಗಲಿ

ಎಐಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ, ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಖಂಡದ ಹಲ್ದ್ವಾನಿಯದಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ…

6 hours ago

ಮಳೆ ಕೊರತೆಯ ನಡುವೆಯೂ ಕೃಷಿಗೆ ಆತಂಕವಿಲ್ಲ

ನವೀನ್ ಡಿಸೋಜ ಕೊಡಗಿನಲ್ಲಿ ಇಲ್ಲಿಯವರೆಗೆ ಶೇ.೩೭ರಷ್ಟು ಮಳೆ ಕೊರತೆ; ಭರದಿಂದ ಸಾಗಿದ ಬಿತ್ತನೆ ಕಾರ್ಯ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ…

11 hours ago