ಇವರು ಮಂಡ್ಯ ಜಿಲ್ಲೆ ದುದ್ದ ಹೋಬಳಿ ಮಲ್ಲಾಯನಕಟ್ಟೆಯ ಹಾಡುಗಾರ್ತಿ ನಾಟಿ ಸಾಕಮ್ಮ. ನಾಟಿ ಸಾಕಮ್ಮ ಅಂತ ಇವರ ಹೆಸರು ಯಾಕೆ ಅಂದರೆ ಇವರ ಊರಿನಲ್ಲಿ ಬಹಳ ಮಂದಿ ಸಾಕಮ್ಮಂದಿರು ಇದ್ದಾರೆ. ಆದರೆ ನಾಟಿ ಹಾಕುವಾಗ ಹಾಡು ಹೇಳುವ ಸಾಕಮ್ಮ ಇವರೊಬ್ಬರೇ. ಹಾಗಾಗಿ. ಇವರಿಗೆ ಈಗ ಆಸುಪಾಸು ಅರವತ್ತರ ವಯಸ್ಸು. ಇವರ ತವರು ಮನೆ ಚನ್ನಪಟ್ಟಣದ ಬಳಿಯ ಸಿದ್ದನಹಳ್ಳಿ. ಸಣ್ಣ ವಯಸ್ಸಲ್ಲೇ ಮದುವೆಯಾಗಿ ಗಂಡನ ಮನೆಗೆ ಬಂದ ಸಾಕಮ್ಮ ಆಗಿನಿಂದ ತೊಡಗಿದ ಕೂಲಿ ಕೆಲಸ ಈಗಲೂ ಮುಂದುವರಿದಿದೆ. ನಾಟಿ ಸಾಕಮ್ಮ ಪ್ರಸಿದ್ಧರಾಗಿರುವುದು ಹಾಡುಗಾರ್ತಿಯಾಗಿ. ನಾಟಿ ಹಾಕುವಾಗ, ಕಳೆ ಕೀಳುವಾಗ, ಯಾರಾದರೂ ತೀರಿ ಹೋದಾಗ, ಮೈ ನೆರೆದಾಗ, ಮದುವೆಯಾಗುವಾಗ ಅಲ್ಲಿ ಸಾಕಮ್ಮ ಮತ್ತು ಸಂಗಡಿಗರ ಜಾನಪದ ಹಾಡುಗಳು ಇರಲೇಬೇಕು. ಹಾಗಾಗಿ ಹಾಡುಗಳು ಅಂದರೆ ಸಾಕಮ್ಮನಿಗೆ ಬದುಕಲು ಇರುವ ದಾರಿ ಮತ್ತು ಬಡತನವ ಮರೆಯಲು ಇರುವ ಸಂಗಾತಿ. ನಾಟಿ ಸಾಕಮ್ಮನಿಗೆ ಇರಲು ಮನೆಯಿಲ್ಲ, ಬೆಳೆಯಲು ಭೂಮಿಯಿಲ್ಲ. ಹೊಟ್ಟೆ ತುಂಬ ಅನ್ನ ಸಿಗುವಷ್ಟು ಕೂಲಿ ಕೆಲಸವೂ ಸಿಗುವುದಿಲ್ಲ. ಆದರೆ ಈ ಯಾವುದರ ಕುರಿತೂ ಈಕೆಗೆ ಸಿಟ್ಟೂ ಇಲ್ಲ ಬೇಸರವೂ ಇಲ್ಲ. ತನ್ನ ಮನೆದೇವರು ಮಂಚಮ್ಮ ತನ್ನನ್ನು ಎಲ್ಲದರಿಂದ ಕಾಪಾಡುತ್ತಾಳೆ ಎನ್ನುವ ಮುಗ್ಧ ನಂಬಿಕೆ ಆಕೆಯದ್ದು. ಆದರೆ ಇಂತಹ ಸಾವಿರ ಸಾವಿರ ಸಾಕಮ್ಮಂದಿರ ಮುಗ್ದತೆಯನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಅಧಿಕಾರಸ್ಥರಿಗೆ ಇಂತಹ ತಾಯಂದಿರ ನಿಟ್ಟುಸಿರುಗಳು ಕೇಳಿಸುವುದೂ ಇಲ್ಲ (mysoorininda@gmail.com)
ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…
ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…
ಮೈಸೂರು : ಎನ್ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…
ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…