ಇವರು ಗುಂಡ್ಲುಪೇಟೆ ತಾಲ್ಲೂಕು, ಬೇಗೂರು ಹೋಬಳಿ, ನಿಟ್ರೆ ಗ್ರಾಮ, ಬಾಬು ಜಗಜೀವನರಾಂ ಬಡಾವಣೆ ದೊಡ್ಡಮ್ಮ ತಾಯಿ ಜಗುಲಿಯ ಪಕ್ಕ ಬದುಕುತ್ತಿರುವ ಮಾದಯ್ಯ ಬಿನ್ ಮೂಗಯ್ಯ. ವಯಸ್ಸು ಸುಮಾರು ಎಂಬತ್ತರ ಆಚೆ ಮತ್ತು ಈಚೆ. ನೀವೇನಾದರೂ ಗುಂಡ್ಲುಪೇಟೆ ಬಳಿಯ ಗೋಪಾಲಸ್ವಾಮಿ ಬೆಟ್ಟಕ್ಕೆ ಶನಿವಾರ ಭಾನುವಾರಗಳಂದು ಹೋದರೆ ಅಲ್ಲಿ ಗುಡಿಯ ಮುಂದೆ ತಂಬೂರಿ ಮೀಟಿಕೊಂಡು, ‘ಗೋವಿಂದಾ.. ಗೋಪಾಲಾ..’ ಎಂದು ಭಿಕ್ಷಕ್ಕೆ ಕೂತಿರುತ್ತಾರೆ. ಇಂದಿರಾಗಾಂಧಿಯ ಕಾನೂನಿನಿಂದಾಗಿ ಇಪ್ಪತ್ತು ವರ್ಷಗಳ ಜೀತ ಮುಗಿಸಿ ಅದರಿಂದ ಹೊರಬಂದವರು ಇವರು. ಜೀತದಿಂದ ಹೊರಬಂದು, ಆಮೇಲೆ ಮದುವೆಯಾಗಿ, ಇಬ್ಬರು ಮಕ್ಕಳೂ ಆಗಿ, ಅದರಲ್ಲಿ ಒಬ್ಬ ಮಗ ಅಂಧನಾಗಿ ದಮ್ಮಡಿ ಬಾರಿಸಿಕೊಂಡು, ಇನ್ನೊಬ್ಬ ಮಗನೂ ಕಂಸಾಳೆ ಹಾಡುಗಾರನಾಗಿದ್ದಾನೆ. ಮಡದಿ ಸಾಕಮ್ಮ ಈ ಮೂವರಿಗೂ ಬಡಿಸಿ ಹಾಕುತ್ತಾರೆ.

ಮಾದಯ್ಯನವರು ಬಾಯಿಬಿಟ್ಟರೆ ಗಂಟೆಗಟ್ಟಲೆ ಜಾನಪದ ಕಾವ್ಯಗಳನ್ನು ಹಾಡಬಲ್ಲರು. ಮಾದೇಶ್ವರನ ಹಾಡು, ಬೇವಿನ ಕಾಳಮ್ಮನ ಕಥೆ, ಸಂಕಮ್ಮನವರ ಸಾಲು, ನಂಜುಂಡೇಶ್ವರನ ಹಾಡು ಇವರ ಕಂಠದಿಂದ ಪುಂಖಾನುಪುಂಖವಾಗಿ ಹೊರಬಂದರೆ ನಿಮ್ಮಂತಹವರು ಕೊಡುವ ಹತ್ತೋ ಇಪ್ಪತ್ತೋ ಐವತ್ತೋ ರೂಪಾಯಿಗಳು ಇವರ ಬದುಕಿನ ಗಾಡಿಯನ್ನು ಮುಂದಕ್ಕೆ ಓಡಿಸುತ್ತದೆ.

ಸರ್ಕಾರ ಕೊಟ್ಟಿರುವ ಎರಡೆಕೆರೆ ಭೂಮಿಯನ್ನು ಇರುವ ಎರಡು ಮಕ್ಕಳಿಗೆ ಹಂಚಿ ತಾವು ಮಾತ್ರ ಹಾಡುಗಳ ಹಾಡುತ್ತಾ ನಿಸೂರಾಗಿ ಕಳೆಯುವ ಮಾದಯ್ಯನವರು ಮಾತಾಡಲು ತೊಡಗಿದರೆ ಕಣ್ಣೀರುಗರೆಯುತ್ತಾರೆ. ಈ ಕಣ್ಣೀರು ಅವರ ಈ ಇಳಿವಯಸ್ಸಿನ ಪರಿಣಾಮವೋ ಅಥವಾ ಅವರ ಯೌವನವನ್ನೆಲ್ಲ ಕಬಳಿಸಿದ ಜೀತದ ಬದುಕಿನ ಹೆಪ್ಪುಗಟ್ಟಿದ ನೆನಪುಗಳ ಪರಿಣಾಮವೋ ಎಂದು ಗೊತ್ತಾಗದೆ ನೀವೂ ಕಂಗಾಲಾಗುತ್ತೀರಿ.

andolana

Recent Posts

ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಅಮಿತ್‌ ಶಾ ಗಂಭೀರ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಸ್ಥಾಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌…

5 mins ago

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

17 mins ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

8 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.…

9 hours ago

ಮೈಸೂರು: ಬೆಳವಾಡಿ ರಾಯಲ್‌ ಬ್ರದರ್ಸ್‌ ವತಿಯಿಂದ 13ಅಡಿ ಗಣಪ ಪ್ರತಿಷ್ಠಾಪನೆ

ಮೈಸೂರು: ನಗರದಲ್ಲಿ ವಿನಾಯಕ ಚೌತಿ ಹಬ್ಬದ ಆಚರಣೆ ಚೋರಾಗಿಯೇ ನಡೆಯುತ್ತಿದೆ. ನಗರದ ಬೆಳವಾಡಿಯ ರಾಯಲ್‌ ಬ್ರದರ್ಸ್‌ ವತಿಯಿಂದ ಸತತ ಎಂಟು…

15 hours ago