‘ವಯಸ್ಸಾಯಿತು’ ಎನ್ನುವ ಮಾತು ಸಹಜವಾಗಿ ಹೋಗಿದೆ. ವಯಸ್ಸಾದಂತೆ ಕ್ರಿಯೆಗೆ ಪ್ರತಿಕ್ರಿಯಿಸುವ ಶಕ್ತಿಯನ್ನು ದೇಹ ಕಳೆದುಕೊಳ್ಳುತ್ತಾ ಹೋಗುತ್ತದೆ.
ಕೆಲವರು ಮುಪ್ಪಿನ ಲಕ್ಷಣಗಳಲ್ಲಿ ಇದೂ ಒಂದು ಎನ್ನುತ್ತಾರೆ. ಇದಕ್ಕೆ ವಯೋ ಸಹಜವಾದ ಸಮಸ್ಯೆಗಳೇ ಕಾರಣ. ಜೀವನದಲ್ಲಿ ಉತ್ಸಾಹವೇ ಇರದಿದ್ದರೆ, ಬದುಕು ನೀರಸವೆನಿಸುತ್ತದೆ. ಹಾಗಾದರೆ ಜೀವ ಚೈತನ್ಯ, ಲವಲವಿಕೆಯನ್ನು ಕಾಪಾಡಿಕೊಳ್ಳುವ ಬಗೆ ಹೇಗೆ? ಸಾಧ್ಯವಾದಷ್ಟು ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ದೇಹ ನಿರೋಧಕ ವ್ಯವಸ್ಥೆ ಇನ್ನಷ್ಟು ಚೈತನ್ಯಶಾಲಿಯಾಗುತ್ತದೆ. ನಿಯಮಿತವಾಗಿ ವ್ಯಾಯಾಮವನ್ನು ಮಾಡುವುದು ಒಳ್ಳೆಯದು ಎಂದು ಅನೇಕ ಸಮೀಕ್ಷೆಗಳು ವರದಿ ನೀಡಿವೆ.
ಬೆಳಗಿನ ವೇಳೆ ನಡಿಗೆ, ಕುಳಿತುಕೊಂಡು ಮಾಡುವ ಸುಲಭ ಆಸನಗಳು ಇನ್ನೂ ಹಲವು ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಷ್ಟೂ ದೇಹ ಕ್ರಿಯಾಶೀಲವಾಗಿರುತ್ತದೆ. ಹವ್ಯಾಸಗಳಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡುವುದು ಸಹಕಾರಿ. ಅಂತೆಯೇ, ಇತರರೊಂದಿಗೆ ಬೆರೆತು, ಸಂತೋಷದ
ಕ್ಷಣಗಳನ್ನು ಕಾಪಾಡಿಕೊಳ್ಳುವುದು ಎಂದಿಗೂ ಮುಖ್ಯವಾದದ್ದು. ನೀವು ಗಮನಿಸಿರಬಹುದು, 80ರ ಆಸುಪಾಸಿನ ಅಜ್ಜನೋ ಅಜ್ಜಿಯೋ ಹೊಲದಲ್ಲಿ
ಕೆಲಸ ಮಾಡುತ್ತಿರುವುದು, ಸೊಪ್ಪು ಮಾರುತ್ತಿರುವುದು, ಉಣ್ಣೆಯ ಬಟ್ಟೆಗಳನ್ನು ನೇಯುತ್ತಿರುವುದು, ಹೂ ಕಟ್ಟುತ್ತಿರುವುದು ಹೀಗೆ ಹುಡುಕುತ್ತಾ ಹೋದರೆ ಸಾವಿರಾರು ದೃಶ್ಯಗಳು ನಮ್ಮ ಸುತ್ತಲೇ ಇವೆ.
ಬೆಂಗಳೂರು : ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಈ…
ಕಲಬುರಗಿ : ಮುಖ್ಯಮಂತ್ರಿಯಾಗಿ ನೇಮಕಗೊಂಡ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕದಲ್ಲಿ ನೂತನ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಪಕ್ಷದ ನಾಯಕತ್ವಕ್ಕೆ…
ಬೆಂಗಳೂರು : ಡಿ.ಕೆ.ಶಿವಕುಮಾರ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ ಡಿಸಿಎಂ ಹುದ್ದೆಗಾಗಿ ಒಂದೇ ಸಮುದಾಯದ ಪ್ರಬಲ ನಾಯಕರ ನಡುವೆ…
ವರ್ಷಕ್ಕೊಮ್ಮೆ ಎದುರುಗೊಳ್ಳುವ ಈ ಸುಂದರ ಕಾಲ ಹೊಸತೊಂದು ಯುಗದ ಆರಂಭಕ್ಕೆ ಭಾಷ್ಯ ಬರೆದಂತೆ ಭಾಸವಾಗುತ್ತದೆ. ಮಕ್ಕಳ ಹುಮ್ಮಸ್ಸನ್ನು ನೋಡುವುದೇ ಒಂದು…
ಕನಸುಗಂಗಳ ಈ ಹುಡುಗಿಯರ ಕಲರವದಿಂದಾಗಿ ಜಡವಾಗಿದ್ದ ಕಟ್ಟಡಗಳಿಗೆ ಜೀವ ಬರುತ್ತದೆ. ಅವರ ನಡಿಗೆಯ ಚುರುಕುತನದಿಂದ ಸುತ್ತಲಿನ ಪರಿಸರ ಚಲನಶೀಲವಾಗುತ್ತದೆ. ಸುಧಾ…
ವರ್ಷವಿಡೀ ಪಾಠ ಮಾಡಿ ಸುಸ್ತಾದ ಶಿಕ್ಷಕರು ಬೇಸಿಗೆ ರಜಕ್ಕಾಗಿ ಎಷ್ಟೇ ಹಂಬಲಿಸಿದರೂ ಕೂಡ ರಜೆ ಮುಗಿಯುವ ಹೊತ್ತಿಗೆ ಬೇಸರವಾಗಿ ಎಷ್ಟು…