ಡಿ.ಎನ್‌ ಹರ್ಷ

ದೇಶದಲ್ಲಿ ಕೈತುಂಬಾ ಸಂಬಳ, ವಾಸ ಮಾಡಲು ಉತ್ತಮ ಮನೆ, ಓಡಾಡಲು ಕಾರು, ಹೀಗೆ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದರೂ ಮನದಲ್ಲಿ ತನ್ನ ದೇಶಕ್ಕೆ ಮರಳ ಬೇಕೆನ್ನುವ ತುಡಿತ ಹೊಂದಿರುತ್ತಾರೆ ಬೆರಳೆಣಿಕೆ ಮಂದಿ. ಅಮೆರಿಕದಲ್ಲಿ ತಿಂಗಳಿಗೆ ಆರು ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಸುರೇಶ್ ದೇವಾಂಗರವರು, ಹತ್ತು ವರ್ಷಗಳ ಹಿಂದೆ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಬಂದು ಮೈಸೂರು ಜಿಲ್ಲೆ ಎಚ್. ಡಿ. ಕೋಟೆ ತಾಲ್ಲೂಕು ಹಂಪಾಪುರ ಹೋಬಳಿ ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ ಗ್ರಾಮದಲ್ಲಿ ‘ಹೊಸ ಚಿಗುರು’ ಎನ್ನುವ ಅದ್ಭುತ ತೋಟ ಮಾಡಿದ್ದಾರೆ.

ಕೆಲವರ ಹತ್ತಿರ, ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಮರಳಿ ಮಣ್ಣಿಗೆ, ಮರಳಿ ಗೂಡಿಗೆ ಬಂದೆ ಎನ್ನುವ ವಾಕ್ಯವನ್ನು ಪ್ರೀತಿಯಿಂದ ಹೇಳುತ್ತಾರೆ. ಸುರೇಶ್ ಕಂಪ್ಯೂಟರ್ ಇಂಜಿನಿಯರ್ ಪದವೀಧರರಾಗಿದ್ದು, ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ೧೧ ವರ್ಷಗಳು ಸೇರಿದಂತೆ, ೨೦ ವರ್ಷಗಳ ಕಾಲ ದೇಶ ಮತ್ತು ವಿದೇಶಗಳಲ್ಲಿ ಕೆಲಸ ಮಾಡಿ, ಈಗ ಕೃಷಿ ಕ್ಷೇತ್ರವನ್ನು ಮುಖ್ಯ ಕಸುಬಾಗಿಸಿಕೊಂಡು ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ.

ತಮ್ಮ ೬ ಎಕರೆ ೧೬ ಗುಂಟೆ ನೀರಾವರಿ ಜಮೀನನ್ನು ೧೩ ಭಾಗಗಳಾಗಿ ವಿಂಗಡಣೆ ಮಾಡಿದ್ದಾರೆ. ‘ಹೊಸ ಚಿಗುರು’ ತೋಟದಲ್ಲಿ ಮುಖ್ಯವಾಗಿ ಕೃಷಿ ಸಂರಕ್ಷಣೆಗಾಗಿ ಕೃಷಿ ಬೆಳೆಗಳು, ತೋಟಗಾರಿಕೆ ಬೆಳೆಗಳು, ಕೃಷಿ ಅರಣ್ಯದ ಜೊತೆಗೆ ಹೈನುಗಾರಿಕೆ ಮತ್ತು ಮೇಕೆ ಸಾಕಾಣಿಕೆಯನ್ನು ಕೂಡ ಮಾಡುತ್ತಾ ಇದ್ದಾರೆ. ತೋಟಗಾರಿಕೆ ಬೆಳೆಗಳಲ್ಲಿ ಮುಖ್ಯವಾಗಿ ಅಡಕೆ, ತೆಂಗು, ಬಾಳೆ, ಮಾವು, ಕಾಳು ಮೆಣಸು, ಸೀಬೆ, ನಿಂಬೆ, ದಾಳಿಂಬೆ, ಸೀತಾಫಲ, ಸಪೋಟ, ರಾಮಫಲ, ಚಕ್ಕೋತ ಇದ್ದು, ತರಕಾರಿ ಹಾಗೂ ಸೊಪ್ಪಿನ ಬೆಳೆಗಳು, ಏಕದಳ ಬೆಳೆಗಳು, ದ್ವಿದಳ ಬೆಳೆಗಳು, ಎಣ್ಣೆಕಾಳು ಬೆಳೆಗಳನ್ನು ಬೆಳೆಯುತ್ತಾ ಇದ್ದು, ಅಜೋಲ ಮತ್ತು ಜೇನು ಸಾಕಾಣಿಕೆ ಕೂಡ ಮಾಡುತ್ತಾ ಇದ್ದಾರೆ. ಭೂಮಿಯ ಕೊನೆಯ ಭಾಗದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದು, ಅದರ ಸುತ್ತ ವಿವಿಧ ಜಾತಿಗಳ ಮರಗಳನ್ನು ಬೆಳೆಸುತ್ತಾ ,ಜಲ ಮರುಪೂರಣದ ಮೂಲಕ ನೀರಿನ ಸದ್ಬಳಕೆ ಮಾಡಿಕೊಂಡಿದ್ದಾರೆ. ಹಾಗೆ ಹೂವಿನ ಗಿಡಗಳು, ಬಹುಪಯೋಗಿ ಮರಗಳು, ಔಷಧೀಯ ಹಾಗೂ ಸುಗಂಧ ಸಸ್ಯಗಳು, ಪುದೀನ, ತುಳಸಿ, ದೊಡ್ಡಪತ್ರೆ, ಸಾಗವಾನಿ, ಅಡಕೆ, ಸಂಪಿಗೆ, ಹಲಸು, ನೇರಳೆ, ಬಿದಿರು, ಕಿತ್ತಳೆ, ಚಕ್ಕೆ-ಲವಂಗ, ಏಲಕ್ಕಿ, ನೆಲ್ಲಿಕಾಯಿ ಇತ್ಯಾದಿಗಳನ್ನೂ ಬೆಳೆದಿರು ವುದು ಇಲ್ಲಿನ ವಿಶೇಷ.

ಎರೆಗೊಬ್ಬರ ಘಟಕ, ಅಜೋಲ, ಕುಟೀರ (ಸಭಾಂಗಣ) ಕೃಷಿ ಹೊಂಡ, ಕೈ ತೋಟದ ಜೊತೆ ಮಕ್ಕಳ ಉದ್ಯಾನ ಕೂಡ ಇದ್ದು, ನೂರಾರು ಮಕ್ಕಳು ‘ಹೊಸ ಚಿಗುರು’ಫಾರ್ಮ್‌ಗೆ ಬಂದು ಹೋಗುವುದು ಸಹಜವಾಗಿದೆ. ಭವಿಷ್ಯದಲ್ಲಿ ಶಾಲಾ ವಿದ್ಯಾರ್ಥಿ ಗಳಿಗೆ ಪ್ರಾಕ್ಟಿಕಲ್ ಆಗಿ ಕೃಷಿಯ ಬಗ್ಗೆ ತಿಳಿಸಿಕೊಡಬೇಕು ಎನ್ನುವ ತುಡಿತ ಹೊಂದಿದ್ದು, ಮೈಸೂರು ನಗರಕ್ಕೆ ಹತ್ತಿರ ಇದ್ದು, ಹಸಿರಿನಿಂದ ಕಂಗೊಳಿಸುತ್ತಾ ಇರುವ ‘ಹೊಸ ಚಿಗುರು’ ತೋಟವನ್ನು ಕೃಷಿ ಪ್ರವಾಸೋದ್ಯಮ ತಾಣವಾಗಿ ಮಾರ್ಪಾಟು ಮಾಡಬೇಕು ಎನ್ನುವ ಆಲೋಚನೆ ಹೊಂದಿದ್ದಾರೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮವನ್ನ ಹೊಸ ಚಿಗುರು ತೋಟದಲ್ಲಿ ಆಯೋಜನೆ ಮಾಡಿದ್ದರಿಂದ, ಆಸಕ್ತ ಆರು ನೂರಕ್ಕೂ ಹೆಚ್ಚು ಜನ ಕೃಷಿಕರು, ಗ್ರಾಹಕರು ಸುರೇಶ್ ದೇವಾಂಗರ ತೋಟಕ್ಕೆ ಭೇಟಿ ಕೊಟ್ಟು, ಪರಸ್ಪರ ಕೃಷಿ ಬಗೆಗಿನ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ಮೂಲತಃ ಶಿವಮೊಗ್ಗದ ಚಿನ್ನಮನೆ ಗ್ರಾಮದವರಾಗಿರುವ ಸುರೇಶ್ ದೇವಾಂಗ ಅವರು, ಸಾಲುಮರದ ತಿಮ್ಮಕ್ಕರವರ ಕಾಯಕದಿಂದ ಸ್ಛೂರ್ತಿ ಹೊಂದಿ, ಇಲ್ಲಿಗೆ ಬಂದು ಆರೋಗ್ಯ – ಆಹಾರ, ಕೃಷಿ – ಕಾಡು, ಮಳೆ-ಬೆಳೆ ಎನ್ನುವ ತತ್ವದಡಿ ಕೃಷಿ ಮಾಡುತ್ತಾ ಇರುವುದು ವಿಶೇಷವೇ ಸರಿ. ಪತ್ನಿ ಸ್ಮಿತಾ ದೇವಾಂಗ ಹಾಗೂ ಮಕ್ಕಳಾದ ಅಭಿಜ್ಞಾ ದೇವಾಂಗ, ಅಧೀರ ದೇವಾಂಗ ಸಹಕಾರದಿಂದ ಅಂದುಕೊಂಡ ಹಾಗೆ ಕೃಷಿ ಮಾಡಲು ಸಾಧ್ಯವಾಗಿದೆ ಎಂದು ಗೌರವ ದಿಂದ ನೆನೆಯುತ್ತಾರೆ.

ಸುರೇಶ ದೇವಾಂಗರಿಗೆ ಕೃಷಿ ಪಂಡಿತ ಪ್ರಶಸ್ತಿ, ತಾಲ್ಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಮೈಸೂರಿನ ವಿಶ್ವೇಶ್ವರಯ್ಯ ಡೆವಲಪ್ ಮೆಂಟ್ ಆರ್ಗನೈಜೇಷನ್ ವತಿ ಯಿಂದ ಬಾನುಲಿ ಕೃಷಿ ಬೆಳಗು ಕಾರ್ಯ ಕ್ರಮದಲ್ಲಿ ಸುರೇಶ್-ಸ್ಮಿತಾ ದೇವಾಂಗ ದಂಪತಿಗೆ ‘ಕೃಷಿ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಆಸಕ್ತರು ಸುರೇಶ್ ದೇವಾಂಗ ಮೊ. ೯೪೮೦೯ ೮೮೪೮೭ ಸಂಪರ್ಕಿಸಬಹುದು.

 

ಆಂದೋಲನ ಡೆಸ್ಕ್

Recent Posts

ಮಕ್ಕಳನ್ನು ಪ್ರಚೋದಿಸಬೇಡಿ, ಸರಿಯಾದ ದಾರಿ ತೋರಿಸಿ: ಪ್ರಧಾನಿ ಮೋದಿ ಮಹತ್ವದ ಸಂದೇಶ

ನವದೆಹಲಿ: ನೀಟ್‌-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ನಡುವೆ ಪ್ರಧಾನಿ ನರೇಂದ್ರ ಮೋದಿ…

1 hour ago

ಪ್ರಧಾನಿ ನಿವಾಸದ ಎದುರು ರಾಹುಲ್‌, ಪ್ರಿಯಾಂಕಾ ಪ್ರತಿಭಟನೆ

ನವದೆಹಲಿ: ದೆಹಲಿಯಲ್ಲಿ ಸಿಜೆಪಿ ಬೆಂಬಲಿಗರ ಮೇಲಿನ ಪೊಲೀಸರ ಕ್ರಮ ಖಂಡಿಸಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರಿಂದು ಪ್ರಧಾನಿ…

2 hours ago

ಖಾಸಗಿ ಆಸ್ಪತ್ರೆಗೆ ಸೋನಮ್‌ ವಾಂಗ್ಚುಕ್‌ ಸ್ಥಳಾಂತರಕ್ಕೆ ದೆಹಲಿ ಹೈಕೋರ್ಟ್‌ ಸೂಚನೆ

ನವದೆಹಲಿ: ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಜೂನ್.‌28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್‌ ವಾಂಗ್ಚುಕ್‌ ಅವರನ್ನು ಇಲ್ಲಿನ ಸಫ್ದರ್‌ಜಂಗ್‌…

2 hours ago

ಹಾರಂಗಿ ಜಲಾಶಯ ಭರ್ತಿಗೆ 8 ಅಡಿ ಬಾಕಿ: ಅನ್ನದಾತರ ಮೊಗದಲ್ಲಿ ಮಂದಹಾಸ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೆ 3 ಸಾವಿರಕ್ಕೂ…

3 hours ago

ಹುಣಸೂರು: ಇಬ್ಬರು ಮಕ್ಕಳು, ಹೆಂಡತಿಯನ್ನು ಕೊಂದು ಪತಿ ಆತ್ಮಹತ್ಯೆ

ಮೈಸೂರು: ಇಬ್ಬರು ಮಕ್ಕಳು ಹಾಗೂ ಹೆಂಡತಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.…

3 hours ago

ಇಂದು ಚಲೋ ಸಂಸದ್ ಮುಂದುವರಿಯಲಿದೆ: ಅಭಿಜಿತ್‌ ದೀಪ್ಕೆ ಘೋಷಣೆ

ನವದೆಹಲಿ: ಇಂದು ತಮ್ಮ ಪ್ರತಿಭಟನೆ ಹಾಗು ಚಲೋ ಸಂಸದ್‌ ಮುಂದುವರಿಯಲಿದೆ ಎಂದು ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ…

6 hours ago