ಡಿ.ಎನ್‌ ಹರ್ಷ

ದೇಶದಲ್ಲಿ ಕೈತುಂಬಾ ಸಂಬಳ, ವಾಸ ಮಾಡಲು ಉತ್ತಮ ಮನೆ, ಓಡಾಡಲು ಕಾರು, ಹೀಗೆ ಎಲ್ಲಾ ಸೌಕರ್ಯಗಳನ್ನು ಹೊಂದಿದ್ದರೂ ಮನದಲ್ಲಿ ತನ್ನ ದೇಶಕ್ಕೆ ಮರಳ ಬೇಕೆನ್ನುವ ತುಡಿತ ಹೊಂದಿರುತ್ತಾರೆ ಬೆರಳೆಣಿಕೆ ಮಂದಿ. ಅಮೆರಿಕದಲ್ಲಿ ತಿಂಗಳಿಗೆ ಆರು ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಸುರೇಶ್ ದೇವಾಂಗರವರು, ಹತ್ತು ವರ್ಷಗಳ ಹಿಂದೆ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಬಂದು ಮೈಸೂರು ಜಿಲ್ಲೆ ಎಚ್. ಡಿ. ಕೋಟೆ ತಾಲ್ಲೂಕು ಹಂಪಾಪುರ ಹೋಬಳಿ ಆಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ ಗ್ರಾಮದಲ್ಲಿ ‘ಹೊಸ ಚಿಗುರು’ ಎನ್ನುವ ಅದ್ಭುತ ತೋಟ ಮಾಡಿದ್ದಾರೆ.

ಕೆಲವರ ಹತ್ತಿರ, ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಮರಳಿ ಮಣ್ಣಿಗೆ, ಮರಳಿ ಗೂಡಿಗೆ ಬಂದೆ ಎನ್ನುವ ವಾಕ್ಯವನ್ನು ಪ್ರೀತಿಯಿಂದ ಹೇಳುತ್ತಾರೆ. ಸುರೇಶ್ ಕಂಪ್ಯೂಟರ್ ಇಂಜಿನಿಯರ್ ಪದವೀಧರರಾಗಿದ್ದು, ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ೧೧ ವರ್ಷಗಳು ಸೇರಿದಂತೆ, ೨೦ ವರ್ಷಗಳ ಕಾಲ ದೇಶ ಮತ್ತು ವಿದೇಶಗಳಲ್ಲಿ ಕೆಲಸ ಮಾಡಿ, ಈಗ ಕೃಷಿ ಕ್ಷೇತ್ರವನ್ನು ಮುಖ್ಯ ಕಸುಬಾಗಿಸಿಕೊಂಡು ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ.

ತಮ್ಮ ೬ ಎಕರೆ ೧೬ ಗುಂಟೆ ನೀರಾವರಿ ಜಮೀನನ್ನು ೧೩ ಭಾಗಗಳಾಗಿ ವಿಂಗಡಣೆ ಮಾಡಿದ್ದಾರೆ. ‘ಹೊಸ ಚಿಗುರು’ ತೋಟದಲ್ಲಿ ಮುಖ್ಯವಾಗಿ ಕೃಷಿ ಸಂರಕ್ಷಣೆಗಾಗಿ ಕೃಷಿ ಬೆಳೆಗಳು, ತೋಟಗಾರಿಕೆ ಬೆಳೆಗಳು, ಕೃಷಿ ಅರಣ್ಯದ ಜೊತೆಗೆ ಹೈನುಗಾರಿಕೆ ಮತ್ತು ಮೇಕೆ ಸಾಕಾಣಿಕೆಯನ್ನು ಕೂಡ ಮಾಡುತ್ತಾ ಇದ್ದಾರೆ. ತೋಟಗಾರಿಕೆ ಬೆಳೆಗಳಲ್ಲಿ ಮುಖ್ಯವಾಗಿ ಅಡಕೆ, ತೆಂಗು, ಬಾಳೆ, ಮಾವು, ಕಾಳು ಮೆಣಸು, ಸೀಬೆ, ನಿಂಬೆ, ದಾಳಿಂಬೆ, ಸೀತಾಫಲ, ಸಪೋಟ, ರಾಮಫಲ, ಚಕ್ಕೋತ ಇದ್ದು, ತರಕಾರಿ ಹಾಗೂ ಸೊಪ್ಪಿನ ಬೆಳೆಗಳು, ಏಕದಳ ಬೆಳೆಗಳು, ದ್ವಿದಳ ಬೆಳೆಗಳು, ಎಣ್ಣೆಕಾಳು ಬೆಳೆಗಳನ್ನು ಬೆಳೆಯುತ್ತಾ ಇದ್ದು, ಅಜೋಲ ಮತ್ತು ಜೇನು ಸಾಕಾಣಿಕೆ ಕೂಡ ಮಾಡುತ್ತಾ ಇದ್ದಾರೆ. ಭೂಮಿಯ ಕೊನೆಯ ಭಾಗದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದ್ದು, ಅದರ ಸುತ್ತ ವಿವಿಧ ಜಾತಿಗಳ ಮರಗಳನ್ನು ಬೆಳೆಸುತ್ತಾ ,ಜಲ ಮರುಪೂರಣದ ಮೂಲಕ ನೀರಿನ ಸದ್ಬಳಕೆ ಮಾಡಿಕೊಂಡಿದ್ದಾರೆ. ಹಾಗೆ ಹೂವಿನ ಗಿಡಗಳು, ಬಹುಪಯೋಗಿ ಮರಗಳು, ಔಷಧೀಯ ಹಾಗೂ ಸುಗಂಧ ಸಸ್ಯಗಳು, ಪುದೀನ, ತುಳಸಿ, ದೊಡ್ಡಪತ್ರೆ, ಸಾಗವಾನಿ, ಅಡಕೆ, ಸಂಪಿಗೆ, ಹಲಸು, ನೇರಳೆ, ಬಿದಿರು, ಕಿತ್ತಳೆ, ಚಕ್ಕೆ-ಲವಂಗ, ಏಲಕ್ಕಿ, ನೆಲ್ಲಿಕಾಯಿ ಇತ್ಯಾದಿಗಳನ್ನೂ ಬೆಳೆದಿರು ವುದು ಇಲ್ಲಿನ ವಿಶೇಷ.

ಎರೆಗೊಬ್ಬರ ಘಟಕ, ಅಜೋಲ, ಕುಟೀರ (ಸಭಾಂಗಣ) ಕೃಷಿ ಹೊಂಡ, ಕೈ ತೋಟದ ಜೊತೆ ಮಕ್ಕಳ ಉದ್ಯಾನ ಕೂಡ ಇದ್ದು, ನೂರಾರು ಮಕ್ಕಳು ‘ಹೊಸ ಚಿಗುರು’ಫಾರ್ಮ್‌ಗೆ ಬಂದು ಹೋಗುವುದು ಸಹಜವಾಗಿದೆ. ಭವಿಷ್ಯದಲ್ಲಿ ಶಾಲಾ ವಿದ್ಯಾರ್ಥಿ ಗಳಿಗೆ ಪ್ರಾಕ್ಟಿಕಲ್ ಆಗಿ ಕೃಷಿಯ ಬಗ್ಗೆ ತಿಳಿಸಿಕೊಡಬೇಕು ಎನ್ನುವ ತುಡಿತ ಹೊಂದಿದ್ದು, ಮೈಸೂರು ನಗರಕ್ಕೆ ಹತ್ತಿರ ಇದ್ದು, ಹಸಿರಿನಿಂದ ಕಂಗೊಳಿಸುತ್ತಾ ಇರುವ ‘ಹೊಸ ಚಿಗುರು’ ತೋಟವನ್ನು ಕೃಷಿ ಪ್ರವಾಸೋದ್ಯಮ ತಾಣವಾಗಿ ಮಾರ್ಪಾಟು ಮಾಡಬೇಕು ಎನ್ನುವ ಆಲೋಚನೆ ಹೊಂದಿದ್ದಾರೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮವನ್ನ ಹೊಸ ಚಿಗುರು ತೋಟದಲ್ಲಿ ಆಯೋಜನೆ ಮಾಡಿದ್ದರಿಂದ, ಆಸಕ್ತ ಆರು ನೂರಕ್ಕೂ ಹೆಚ್ಚು ಜನ ಕೃಷಿಕರು, ಗ್ರಾಹಕರು ಸುರೇಶ್ ದೇವಾಂಗರ ತೋಟಕ್ಕೆ ಭೇಟಿ ಕೊಟ್ಟು, ಪರಸ್ಪರ ಕೃಷಿ ಬಗೆಗಿನ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ಮೂಲತಃ ಶಿವಮೊಗ್ಗದ ಚಿನ್ನಮನೆ ಗ್ರಾಮದವರಾಗಿರುವ ಸುರೇಶ್ ದೇವಾಂಗ ಅವರು, ಸಾಲುಮರದ ತಿಮ್ಮಕ್ಕರವರ ಕಾಯಕದಿಂದ ಸ್ಛೂರ್ತಿ ಹೊಂದಿ, ಇಲ್ಲಿಗೆ ಬಂದು ಆರೋಗ್ಯ – ಆಹಾರ, ಕೃಷಿ – ಕಾಡು, ಮಳೆ-ಬೆಳೆ ಎನ್ನುವ ತತ್ವದಡಿ ಕೃಷಿ ಮಾಡುತ್ತಾ ಇರುವುದು ವಿಶೇಷವೇ ಸರಿ. ಪತ್ನಿ ಸ್ಮಿತಾ ದೇವಾಂಗ ಹಾಗೂ ಮಕ್ಕಳಾದ ಅಭಿಜ್ಞಾ ದೇವಾಂಗ, ಅಧೀರ ದೇವಾಂಗ ಸಹಕಾರದಿಂದ ಅಂದುಕೊಂಡ ಹಾಗೆ ಕೃಷಿ ಮಾಡಲು ಸಾಧ್ಯವಾಗಿದೆ ಎಂದು ಗೌರವ ದಿಂದ ನೆನೆಯುತ್ತಾರೆ.

ಸುರೇಶ ದೇವಾಂಗರಿಗೆ ಕೃಷಿ ಪಂಡಿತ ಪ್ರಶಸ್ತಿ, ತಾಲ್ಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಮೈಸೂರಿನ ವಿಶ್ವೇಶ್ವರಯ್ಯ ಡೆವಲಪ್ ಮೆಂಟ್ ಆರ್ಗನೈಜೇಷನ್ ವತಿ ಯಿಂದ ಬಾನುಲಿ ಕೃಷಿ ಬೆಳಗು ಕಾರ್ಯ ಕ್ರಮದಲ್ಲಿ ಸುರೇಶ್-ಸ್ಮಿತಾ ದೇವಾಂಗ ದಂಪತಿಗೆ ‘ಕೃಷಿ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಆಸಕ್ತರು ಸುರೇಶ್ ದೇವಾಂಗ ಮೊ. ೯೪೮೦೯ ೮೮೪೮೭ ಸಂಪರ್ಕಿಸಬಹುದು.

 

ಆಂದೋಲನ ಡೆಸ್ಕ್

Recent Posts

ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ; ಪುಷ್ಪವೃಷ್ಟಿಗೈದು ಶಿಕ್ಷಕರನ್ನು ಸ್ವಾಗತಿಸಿ, ಸನ್ಮಾನಿಸಿದ ವಿದ್ಯಾರ್ಥಿ ಬಳಗ

ಗುಂಡ್ಲುಪೇಟೆ : ಕಾಲದ ಚಕ್ರ ಉರುಳಿ 20 ವರ್ಷಗಳು ಕಳೆದರೂ, ಗುರು-ಶಿಷ್ಯರ ನಡುವಿನ ಪ್ರೀತಿ, ಗೌರವ ಮತ್ತು ಆತ್ಮೀಯತೆ ಮಾತ್ರ…

29 mins ago

ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಶೂ ವಿತರಣೆ: ರಾಜ್ಯ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿದ ಆರ್.‌ಅಶೋಕ್‌

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗಿರುವ ಶೂಗಳ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ರಾಜ್ಯ ಸರ್ಕಾರದ…

6 hours ago

ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಸರ್ಕಾರ

ಬೆಂಗಳೂರು: ಹಬ್ಬಗಳ ಸೀಸನ್ ಸಮೀಪಿಸುತ್ತಿದ್ದಂತೆ ರಾಜ್ಯ ಸರ್ಕಾರ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಪಿಒಪಿ ಗಣೇಶ ಮೂರ್ತಿಗಳ…

6 hours ago

ರಾಜ್ಯದಲ್ಲಿ ಕೈಕೊಟ್ಟ ಮುಂಗಾರು: ಸಂಕಷ್ಟದತ್ತ ಕೃಷಿ ವಲಯ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಕೃಷಿ ವಲಯ ಮತ್ತೊಂದು ಗಂಭೀರ ಸಂಕಷ್ಟದತ್ತ ಸಾಗುತ್ತಿದೆ. ಸತತ ಮೂರು ವಾರಗಳಿಂದ…

6 hours ago

ಮಳೆ ಕೈಕೊಟ್ಟಿದ್ದಕ್ಕೆ ರಾಜ್ಯದಲ್ಲಿ ತಾಪಮಾನ ಏರಿಕೆ – ಮಳೆಗಾಲದಲ್ಲೇ ಬೇಸಿಗೆಯಂತಹ ಬಿಸಿಲು

ಬೆಂಗಳೂರು: ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಬೆನ್ನಲ್ಲೇ ತಾಪಮಾನ ಏರಿಕೆಯಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲೂ ಬೇಸಿಗೆಯಂತಹ ಬಿಸಿಲಿನ ವಾತಾವರಣ ಕಂಡುಬರುತ್ತಿದೆ. ಸಾಮಾನ್ಯವಾಗಿ…

6 hours ago

SIR ನೋಟಿಸ್: ವಿಚಾರಣೆಗೆ ತೆರಳುವಾಗ ಈ ದಾಖಲೆಗಳು ನಿಮ್ಮ ಬಳಿ ಇರಲಿ

ಬೆಂಗಳೂರು: SIR ನೋಟಿಸ್‌ಗಳ ವಿಚಾರಣೆ ಅಧಿಕೃತವಾಗಿ ಆರಂಭವಾಗಿದೆ. ವಿಚಾರಣೆಗೆ ಹಾಜರಾಗುವ ವೇಳೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಕೊಂಡೊಯ್ಯುವುದು ಮುಖ್ಯವಾಗಿದೆ. ನಿಮ್ಮ…

9 hours ago