ಅನ್ನದಾತರ ಅಂಗಳ

ಮುಂಗಾರು ಬಿದ್ದಾಗ ಮೂಲಂಗಿ ಬಿತ್ತಿ

• ರಮೇಶ್ ಪಿ.ರಂಗಸಮುದ್ರ

ಇತ್ತೀಚಿನ ವರ್ಷಗಳಲ್ಲಿ ಕೃಷಿ ಚಟುವಟಿಕೆಯ ಪದ್ಧತಿಗಳಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಸಾವಯವ ಕೃಷಿ, ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳ ಕೃಷಿ, ಕಾಡು ಕೃಷಿ, ಸಮಗ್ರ ಕೃಷಿ ಹೀಗೆ ಮಣ್ಣಿನ ಫಲವತ್ತತೆಯನ್ನು ಸುಸ್ಥಿರವಾಗಿಟ್ಟುಕೊಂಡು ಮಣ್ಣಿನ ಆರೋಗ್ಯದ ಮೂಲಕ ಪರಿಸರ ಹಾಗೂ ಜೀವಿಗಳ ಆರೋಗ್ಯವನ್ನು ಸುಧಾರಿಸುವ ಕೃಷಿಯತ್ತ ಎಲ್ಲರೂ ಮುಖ ಮಾಡುತ್ತಿರುವುದು ಶುಭಸೂಚಕ. ಮಣ್ಣು ಉಳಿದರೆ ಕೃಷಿ ಉಳಿಯುತ್ತದೆ. ಮಣ್ಣಿನ ಫಲವತ್ತತೆ ಸಮೃದ್ಧಿಗೊಂಡರೆ ಆಹಾರಗಳ ಗುಣಮಟ್ಟ ಉತ್ತಮವಾಗುತ್ತದೆ. ಇಳುವರಿ ಅಧಿಕವಾಗಿ ಲಾಭ ಕೈಗೆ ಬಂದರೆ ಕೃಷಿಕರು, ಅದರಲ್ಲಿಯೂ ಯುವ ಕೃಷಿಕರು ಕೃಷಿಯತ್ತ ಆಸಕ್ತಿ ತೋರುತ್ತಾರೆ.

2018ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ‘ಮೈಸೂರು ಜಿಲ್ಲಾ ಅತ್ಯುತ್ತಮ ಕೃಷಿಕ ಪ್ರಶಸ್ತಿ’ಯನ್ನು ನನಗೆ ನೀಡಿ ಗೌರವಿಸಿತು. ಆ ಸಮಯದಲ್ಲಿ ಕೃಷಿಕರ ಸಾಧನೆಗಳು ಮತ್ತು ಕೃಷಿಯಲ್ಲಿ ಹೊಸ ವಿಚಾರಗಳ ಆವಿಷ್ಠಾರ ಮತ್ತು ಅಳವಡಿಕೆ ವಿಭಾಗದಲ್ಲಿ ನನ್ನ ‘ಮೂಲಂಗಿ ಉಳುಮೆ ಸಿಹಿಗೆಣಸು ಅಗತ್ಯ’ ಎಂಬ ಸ್ವ-ಅನುಭವದ ವಿಚಾರಕ್ಕೆ ತಜ್ಞರ ಮೆಚ್ಚುಗೆ ಸಿಕ್ಕಿತು.

ಸಾಮಾನ್ಯವಾಗಿ ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಭತ್ತ ಬೆಳೆಯುವ ಜಮೀನಿಗೆ ಮುಂಗಾರು ಮಳೆ ಬಿದ್ದಾಗ, ಹಸಿರೆಲೆ ಗೊಬ್ಬರಕ್ಕಾಗಿ ಹುರುಳಿ, ಹೆಸರು ಕಾಳು, ಹಲಸಂದೆ, ಚಂಬೆ, ಗೊಡಮಂಜಿಗಳ ಜೊತೆಗೆ ಯಾವು ದಾದರೊಂದು ತರಕಾರಿ ಬೀಜವನ್ನು ಬಿತ್ತುವುದು ರೂಢಿ, ನಾನು ಬೀನ್ಸ್, ಮೂಲಂಗಿ, ಗೆಡ್ಡೆಕೋಸು, ಶೇಂಗಾ ಮೊದಲಾದ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದೆ. ಇದು ಕೆಲವೊಮ್ಮೆ ಉತ್ತಮ ಲಾಭವನ್ನು ತಂದುಕೊಡುತ್ತಿತ್ತು. 2013-14ರಲ್ಲಿ ಹೀಗೆ ಹಸಿರೆಲೆ ಬಿತ್ತನೆ ಬೀಜಗಳ ಜತೆ ಎಕರೆಗೆ 4 ಕೆಜಿ ಯಂತೆ ಮೂಲಂಗಿ ಬೀಜವನ್ನು ಬಿತ್ತಿದ್ದೆ. ಸರಿಯಾದ ಬೆಲೆ ಸಿಗದ ಪರಿಣಾಮ ಭೂಮಿಯಲ್ಲೇ ಬಿಟ್ಟು ನೀರು ಹಾಯಿಸಿ ಭತ್ತದ ನಾಟಿಗೆ ಸಿದ್ಧಪಡಿಸಿದೆ. ಆ ಕೃಷಿ ಅಂಕಣ ವರ್ಷ 9ರಿಂದ 12 ಇಂಚು ಉದ್ದವಾದ ಮೂಲಂಗಿ ಮಣ್ಣಿನ ಆಳಕ್ಕೆ ಇಳಿದು ಭೂಮಿ ಒಳಗೆ ನೈಸರ್ಗಿಕವಾಗಿ ಉಳುಮೆ ಪ್ರಾರಂಭಿಸಿತ್ತು.

ಸಾಮಾನ್ಯವಾಗಿ ಕಬ್ಬಿಣದ ನೇಗಿಲು, ಟ್ರಾಕ್ಟರ್, ಟಿಲ್ಲರ್ ಉಳುಮೆ ಕೇವಲ 6 ಇಂಚು ಆಳ ಉಳುಮೆ ಮಾಡುತ್ತದೆ. ನಮ್ಮ ಮೂಲಂಗಿ 12 ಇಂಚು ಆಳದವರೆಗೆ ಭೂಮಿಯನ್ನು ಸೀಳಿ ಒಳಗೆ ಇಳಿದು, ಕಳಿತು, ಹಸಿರೆಲೆ ಗೊಬ್ಬರದ ಜತೆ ಬೆರೆತು ನಮ್ಮ ಜಮೀನಿಗೆ ಒಂದು ಪರಿಮಳ ತಂದಿತ್ತು. ಹಾಗೆಯೇ ನನ್ನ 20 ಗುಂಟೆ ಜಮೀನಿಗೆ ಸಿಹಿ ಗೆಣಸು ಬಳ್ಳಿಯನ್ನು ನಾಟಿ ಮಾಡಿದ್ದು, ಸಸ್ಯಜನ್ಯ ಗೊಬ್ಬರದ ಪೋಷಕಾಂಶಗಳು ದೊರೆತು, ಒಂದು ಗುಂಟೆಗೆ 110 ಕೆಜಿಯ ಇಳುವರಿಯನ್ನು ನೀಡಿತ್ತು. ಈಗಲೂ 3-4 ವರ್ಷಗಳಿಗೊಮ್ಮೆ ಈ ಉಪಾಯ ಮಾಡುತ್ತಲೇ ಬರುತ್ತಿದ್ದೇನೆ. ಯಾವುದೇ ತರಕಾರಿ ಹಾಗೂ ಭತ್ತ, ರಾಗಿ, ಕಬ್ಬು ಬೆಳೆಗಳ ಇಳುವರಿ ಸುಸ್ಥಿರವಾಗಿದೆ.
rameshprangasamudra@gmail.com

ಮೂಲಂಗಿ ಉಳುಮೆ, ಗೆಡ್ಡೆಗೆಣಸು ಅಗೆತ ಉಪಯೋಗಗಳು
• ನೀರು ಹಾಯಿಸಿ ಉಳುಮೆ ಮಾಡುವ ಭತ್ತ, ರಾಗಿ, ಮುಂತಾದ ಗದ್ದೆಗಳಿಗೆ ಹೆಚ್ಚು ಅನುಕೂಲ.
• ಉಳುಮೆ ಕೈಬಿಟ್ಟಿರುವ ನೈಸರ್ಗಿಕ ಹಾಗೂ ಶೂನ್ಯ ಬಂಡವಾಳ ಕೃಷಿ ಭೂಮಿಗೆ ಸೂಕ್ತ.
• ದೊಡ್ಡ ಹಿಡುವಳಿದಾರರಿಗೆ ಅನುಕೂಲ,
• ಸಾವಯವ ಇಂಗಾಲ ವೃದ್ಧಿಗೆ ಅನುಕೂಲ
• ಕಲ್ಲುಭೂಮಿಯಲ್ಲಿ ಆಳವಾಗಿ ನೀರು ಇಂಗಿ ಮಣ್ಣು ಮೃದುವಾಗಿ ಹೂಮಸ್ ವೃದ್ಧಿಯಾಗಲು ಸೂಕ್ತ
· ಮಣ್ಣಿನ ಆಳದಲ್ಲಿರುವ ಎರೆಹುಳು, ಸೂಕ್ಷಾಣು ಜೀವಿಗಳಿಗೆ ವಿಪುಲ ವಾದ ಸಸ್ಯಜನ್ಯ ಪೋಷಕಾಂಶಗಳು ವೃದ್ಧಿಯಾಗಿ ನೈಸರ್ಗಿಕ ಉಳುಮೆ ಚಾಲನೆಯಲ್ಲಿರುತ್ತದೆ.
• ಗಿಡಗಳು ಸದೃಢವಾಗಿ ಬೆಳೆಯಲು ಸಹಕಾರಿ.
• ಮಣ್ಣಿನಲ್ಲಿ ಕ್ಷಾರತೆ ಕುಗ್ಗಿ, ಹೂಮಸ್ ಹೆಚ್ಚಾಗುತ್ತದೆ ಹಾಗೂ ಪಿಎಚ್‌ ಮೌಲ್ಯ ಸಮಸ್ಥಿತಿಗೆ ಬರುತ್ತದೆ.
• ಟ್ರ್ಯಾಕ್ಟರ್, ಟಿಲ್ಲರ್ ಉಳುಮೆಯಿಂದ ತೋಟಗಳ ಗಿಡದ ಬೇರಿಗೆ ಹಾನಿಯಾಗುವುದು ನಿಲ್ಲುತ್ತದೆ.

ಮೂಲಂಗಿ, ಕ್ಯಾರೆಟ್, ಬೀಟ್ ರೊಟ್, ಸಿಹಿಗೆಣಸು, ಮರ ಗೆಣಸು, ಕೆಸುವಿನ ಗೆಡ್ಡೆ, ಗೆಡ್ಡೆ ಕೋಸು, ಕೀರೆ ಸೊಪ್ಪು, ದಂಟಿನ ಸೊಪ್ಪು ಮುಂತಾದ ಗೆಡ್ಡೆ ಗೆಣಸು ಜಾತಿಯ ಸಸ್ಯವರ್ಗಗಳನ್ನು ನೈಸರ್ಗಿಕ, ಉಳುಮೆ ಅಗತೆಗೆ
ಬಳಸಬಹುದು.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಅಮಿತ್‌ ಶಾ ಗಂಭೀರ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಸ್ಥಾಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌…

35 seconds ago

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

13 mins ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

8 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.…

9 hours ago

ಮೈಸೂರು: ಬೆಳವಾಡಿ ರಾಯಲ್‌ ಬ್ರದರ್ಸ್‌ ವತಿಯಿಂದ 13ಅಡಿ ಗಣಪ ಪ್ರತಿಷ್ಠಾಪನೆ

ಮೈಸೂರು: ನಗರದಲ್ಲಿ ವಿನಾಯಕ ಚೌತಿ ಹಬ್ಬದ ಆಚರಣೆ ಚೋರಾಗಿಯೇ ನಡೆಯುತ್ತಿದೆ. ನಗರದ ಬೆಳವಾಡಿಯ ರಾಯಲ್‌ ಬ್ರದರ್ಸ್‌ ವತಿಯಿಂದ ಸತತ ಎಂಟು…

15 hours ago