ಅನ್ನದಾತರ ಅಂಗಳ

ಆಧುನಿಕ ಕೃಷಿಯೋ ಅಥವಾ ಊಟದ ತಟ್ಟೆಗೆ ವಿಷವೋ

ಐವತ್ತು-ಅರವತ್ತು ವರ್ಷಗಳ ಹಿಂದೆ ಕೃಷಿ ಎನ್ನುವುದು ಜೀವ ಸಂಕುಲವನ್ನು ಸಲಹುವ ಸಹಜ ಕೃಷಿಯಾಗಿತ್ತು. ಮೌಲ್ಯಾಧಾರಿತವಾಗಿತ್ತು. ಜೈವಿಕ ಸಮತೋಲನ ವನ್ನು ಕಾಪಾಡುತ್ತಿತ್ತು. ಆಗ ಆಹಾರವೇ ಔಷಧವಾಗಿತ್ತು. ಅಡುಗೆ ಮನೆಯೇ ಆಯುರ್ವೇದ ಔಷಧಾಲಯವಾಗಿತ್ತು. ಭತ್ತದ ಗದ್ದೆಗಳು ಅನ್ನದ ಬಟ್ಟಲುಗಳಾಗಿದ್ದವು. ಆದರೆ ಇಂದಿನ ಕೃಷಿ ಪದ್ಧತಿಗಳಿಂದ ಆಹಾರ ಪದಾರ್ಥಗಳು ವಿಷ ರಾಸಾಯನಿಕಗಳಿಂದ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಎಲ್ಲೆಡೆ ಕಾಣುತ್ತಿದ್ದೇವೆ.

ಕೆಲ ತಿಂಗಳುಗಳ ಹಿಂದೆ ವಿಜಯಪುರ ಜಿಲ್ಲೆಯ ರೈತನೊಬ್ಬ ಹತ್ತಿ ಬೆಳೆಗೆ ಕೀಟ ನಾಶಕ ಸಿಂಪಡಿಸಿ ನಂತರ ತುಸು ದೂರದಲ್ಲಿದ್ದ ಗೋರಿಕಾಯಿಗಳನ್ನು ಬಿಡಿಸಿ ತಂದು ಪಲ್ಯ ಮಾಡಿ ತನ್ನ ಇಬ್ಬರು ಮಕ್ಕಳು, ಮಡದಿಯೊಂದಿಗೆ ಊಟ ಮಾಡಿ ಮಲಗಿದವರು ಮತ್ತೆ ಮೇಲೇಳಲೇ ಇಲ್ಲ. ಅದಕ್ಕೆ ಕಾರಣ ಹತ್ತಿಗೆ ಸಿಂಪಡಿಸಿದ್ದ ವಿಷ ತರಕಾರಿ ಬೆಳೆಯ ಮೇಲೂ ಹರಡಿದ್ದು, ಅದನ್ನು ತಿಂದ ರೈತ ಕುಟುಂಬ ಸಾವನ್ನಪ್ಪಿದೆ ಎಂದು ನಂತರ ತಿಳಿದುಬಂತು.

ಈ ಘಟನೆ ಕೃಷಿಕರು ಹಾಗೂ ತರಕಾರಿ ಕೊಳ್ಳುವ ಗ್ರಾಹಕರನ್ನು ಬೆಚ್ಚಿ ಬೀಳಿಸಿತ್ತು. ವಿವೇಚನೆ ಇಲ್ಲದೆ, ಇತಿ ಮಿತಿಯಿಲ್ಲದೆ ಬಳಸುತ್ತಿರುವ ವಿಷ, ರಾಸಾಯನಿಕಗಳ ಕಪಿಮುಷ್ಟಿಯಿಂದ ಕೃಷಿಕರು ಹೊರಬರದಿದ್ದರೆ ಜೀವ ರಕ್ಷಕ ಆಹಾರವೇ ವಿಷವಾಗಿ ಪರಣಮಿಸಿ ಪ್ರಾಣ ತೆಗೆಯುವ ಹಂತಕ್ಕೆ ತಲುಪುವ ದಿನಗಳು ದೂರ ಉಳಿದಿಲ್ಲ. ಈ ಸಂದರ್ಭದಲ್ಲಿ ಮೈಸೂರು ಆಕಾಶವಾಣಿಗಾಗಿ, ಸಾವಯವ ಕೃಷಿ ಗೀತೆಗಾಗಿ ಬರೆದ ಕವಿತೆಯ ಸಾಲುಗಳು ಇಲ್ಲಿ ತುಂಬಾ ಪ್ರಸ್ತುತವೆನ್ನಿಸಿ ಅದನ್ನು ಇಲ್ಲಿ ತುಂಬಾ ಕಾಳಜಿಯಿಂದ ಉಲ್ಲೇಖಿಸುತ್ತಿದ್ದೇನೆ. ಕೃಷಿ ಎಂದರೆ ಬರಿ ಕೃಷಿಯಲ್ಲ ಕೃಷಿ ಸಂಸ್ಕೃತಿಯ ಹುಟ್ಟು ಜಗವ ಪೊರೆಯುತ್ತಿದೆ ಅನುದಿನವು ಅನ್ನಾಹಾರಗಳ ಕೊಟ್ಟು ಈ ಮಣ್ಣಿಗೆ ನಾವು ಬಡೆಯರಲ್ಲ ಬರಿ ಗೇಣಿದಾರರಷ್ಟೇ ಈ ನಿಜವ ತಿಳಿಯುತ ಕೃಷಿಯ ಮಾಡು ವಿಷವಿಕ್ಕದೆ ಇಳೆ-ಬೆಳೆಗೆ ಕೀಟವ ಕೊಲ್ಲಲು ಬಳಸುವ ವಿಷವೇ ನಮ್ಮನು ಕೊಲ್ಲುವುದು ಮೆಲ್ಲ ಮೆಲ್ಲಗೆ ಮನುಷ್ಯ ಸತ್ತರೆ ಮಣ್ಣಿಗೆ ಅಲ್ಲವೆ ಮಣ್ಣೇ ಸತ್ತರೆ ನಾವೆಲ್ಲ ಎಲ್ಲಿಗೆ ?? ವಿಷ ಮುಕ್ತ ಮತ್ತು ರಾಸಾಯನಿಕ ಮುಕ್ತ ಸಾವಯವ ಕೃಷಿಯ ಮಹತ್ವವನ್ನು ಈ ಕವಿತೆಯ ಸಾಲುಗಳು ಚೆನ್ನಾಗಿ ಅಭಿವ್ಯಕ್ತಪಡಿಸುತ್ತವೆ.

ಆಹಾರ ಧಾನ್ಯಗಳು, ಹಣ್ಣು -ತರಕಾರಿಗಳು ವಿಷಯುಕ್ತವಾಗುತ್ತಿರುವುದಕ್ಕೆ ಕಾರಣಗಳು” 

೧. ವಿವೇಚನಾ ರಹಿತವಾಗಿ, ಇತಿ ಮಿತಿ ಇಲ್ಲದೆ, ಅವೈಜ್ಞಾನಿಕವಾಗಿ ವಿಷ ರಾಸಾಯನಿಕಗಳನ್ನು ಕೃಷಿಯಲ್ಲಿ ಬಳಸುತ್ತಿರುವುದು

೨. ರೋಗ, ಕೀಟ, ಬೆಳೆಗಳು, ವಿಸ್ತೀರ್ಣಕ್ಕೆ ಎಷ್ಟು ಪ್ರಮಾಣದಲ್ಲಿ ವಿಷ ರಾಸಾಯನಿಕಗಳನ್ನು ಬಳಸಬೇಕೆಂಬ ಅರಿವಿಲ್ಲದಿರುವುದು

೩. ವಿಷದ ತೀವ್ರತೆ, ಬಳಸಬೇಕಾದ ನೀರಿನ ಮಿಶ್ರಣ ಸಿಂಪಡಣೆ ಸಲಕರಣೆಗಳ ವೇಗ, ಇದನ್ನು ತಿಳಿಯದಿರುವುದು

೪. ಔಷಧಿ, ಕೀಟನಾಶಕ ಮಾರಾಟಗಾರರ ಅವೈಜ್ಞಾನಿಕ ಸಲಹೆ, ಮಾರ್ಗದರ್ಶನ ಪಡೆದು ಮೋಸ ಹೋಗುತ್ತಿರುವುದು

೫. ಕೃಷಿ, ತರಕಾರಿ ಬೆಳೆಗಳಲ್ಲಿ ವೈಜ್ಞಾನಿಕತೆ, ಆಧುನಿಕ ಪದ್ಧತಿಗಳನ್ನು ಅಳವಡಿಸದಿರುವುದು

೬.ಕೃಷಿಯಲ್ಲಿ ಪಶು ಸಾಕಾಣಿಕೆಯನ್ನು ಕೈ ನಿಲ್ಲಿಸಿ ಕೊಟ್ಟಿಗೆ ಗೊಬ್ಬರ, ಸಾವಯವ ಪದ್ಧತಿಗಳನ್ನು ಕೃಷಿಕರು ಕೈ ಬಿಟ್ಟಿರುವುದು

೭. ಮಣ್ಣಿನ ಪರೀಕ್ಷೆ ಕೈಗೊಳ್ಳದೆ, ವಿಜ್ಞಾನಿ, ತಂತ್ರಜ್ಞರು, ಕೃಷಿ ಅಽಕಾರಿಗಳ ಸಲಹೆ, ಮಾರ್ಗದರ್ಶನ ಪಡೆಯಲು ಹಿಂಜರಿಯುವುದು

೮. ಕೃಷಿ ಇಲಾಖೆ ಹಾಗೂ ಸರ್ಕಾರಗಳ ಆಶಯದಂತೆ ಕೃಷಿಕರು  ವ್ಯವಸ್ಥೆಯನ್ನು ಬಳಸದಿರುವುದು

ವಿಷಮುಕ್ತ, ರಾಸಾಯನಿಕ ಮುಕ್ತ ಕೃಷಿಗೆ ಪೂರಕ ಅಂಶಗಳು: 

೧. ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ನೀರು, ಸೂರ್ಯನ ಶಾಖ, ಬೆಳಕುಗಳನ್ನು ಬಳಸಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದು

೨. ವಿಷ ರಾಸಾಯನಿಕಗಳ ಬಳಕೆಯು ಕೃಷಿ ನಿಸರ್ಗವನ್ನು ನಾಶ ಮಾಡುತ್ತದೆ ಎಂದು ಜರೂರಾಗಿ ತಿಳಿದುಕೊಳ್ಳಬೇಕು

ನಿಸರ್ಗದ ಆಶಯಕ್ಕೆ ತಕ್ಕಂತೆ ಬಹು ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು

೪. ಸಕಲ ಜೀವ ಸಂಕುಲವನ್ನು ಸಲಹುವ ಸಹಜ, ನೈಸರ್ಗಿಕ, ಸಾವಯವ, ಶೂನ್ಯ ಬಂಡವಾಳದ ಕೃಷಿಯೆಡೆಗೆ ಒಲವು ಬೆಳೆಸಿಕೊಳ್ಳುವತ್ತ ಸರ್ಕಾರ ಹಾಗೂ ಕೃಷಿಕರು ಚಿಂತನೆ ಮಾಡಬೇಕು

೫. ಕೃಷಿ ಇಲಾಖೆ, ಕೃಷಿ ವಿಜ್ಞಾನಿಗಳು, ಅಽಕಾರಿಗಳು ರೈತರ ಜಮೀನುಗಳಿಗೆ ಭೇಟಿ ಕೊಟ್ಟು ಕೃಷಿಗೆ ಜೀವ ಚೈತನ್ಯ ತುಂಬ ಬೇಕು

೬. ಕೃಷಿ ಚಟುವಟಿಕೆ, ಮಾರುಕಟ್ಟೆ, ಮೌಲ್ಯವರ್ಧನೆ, ಸಹಕಾರ-ಸಹಾಯಗಳ ಬಗ್ಗೆ ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು

೭. ಪ್ರತಿ ಕೃಷಿ ಭೂಮಿಯ ಮಣ್ಣಿನ ಪರೀಕ್ಷೆ ಮಾಡಿಸುವುದು, ವಿಷ, ಕೀಟನಾಶಕಗಳ ತಯಾರಿಕಾ ಸಂಸ್ಥೆಗಳ ಬಗ್ಗೆ ಆರೋಗ್ಯಕರ ಕಾನೂನುಗಳನ್ನು ತಂದು ನಿಯಂತ್ರಣದಲ್ಲಿಡುವುದು

೮. ಸಮ ಸಮಾಜ, ಕಲ್ಯಾಣ ಜನ ಕರ್ನಾಟಕ, ಆರೋಗ್ಯಯುತ ಕರ್ನಾಟಕ, ರೋಗಮುಕ್ತ ಸಮಾಜ ಕುರಿತು ಕೃಷಿ ಇಲಾಖೆ ಹಾಗೂ ಸರ್ಕಾರ ಗಮನ ಕೊಡುವುದು

೯. ಕೀಟನಾಶಕಗಳ ವಿಷ ತೀವ್ರತೆಯನ್ನು ತಿಳಿಸುವ ಕೀಟನಾಶಕಗಳ ಬಾಟಲಿಗಳ ಮೇಲೆ ಬಳಸಿರುವ ನೀಲಿ, ಹಳದಿ, ಹಸಿರು, ಕೆಂಪು, ಕಿತ್ತಲೆ ಬಣ್ಣಗಳ ಕುರಿತು ಕೀಟ ವಿಜ್ಞಾನಿಗಳು ರೈತರಿಗೆ ಪ್ರತಿ ವರ್ಷ ತರಬೇತಿ ಕೊಡುವಂತಾಗಬೇಕು

-ರಮೇಶ್ ಪಿ.ರಂಗಸಮುದ್ರ

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

3 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

4 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

5 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

6 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

7 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

7 hours ago