ಅನ್ನದಾತರ ಅಂಗಳ

ಕಿತ್ತೂರು ಭಾಸ್ಕರ್ ಅರ್ಚಕ ವೃತ್ತಿಯ ಜತೆಗೆ ಕೃಷಿ ಕಾಯಕ

ಡಿ.ಎನ್.ಹರ್ಷ
ಜನರಿಗೆ ಕುಡಿಯುವ ನೀರು, ಕೃಷಿ ಭೂಮಿಗೆ ನೀರು ಪೂರೈಸುವ ಸಲುವಾಗಿ ಸರ್ಕಾರ ಹರಿಯುವ ನದಿಗೆ ಜಲಾ ಶಯಗಳನ್ನು ನಿರ್ಮಿಸುತ್ತದೆ. ಈ ಜಲಾಶಯಗಳು ಸಾವಿರಾರು ಜನರಿಗೆ ಅನುಕೂಲವಾದರೂ ‘ದೀಪದ ಕೆಳಗೆ ಕತ್ತಲು ಎಂಬಂತೆ ಸಾವಿರಾರು ಕುಟುಂಬಗಳು ಹುಟ್ಟೂರನ್ನು ತೊರೆದು ಜಮೀನು, ಮನೆ-ಮಠ ಗಳನ್ನು ಬಿಟ್ಟು ಬೇರೆಡೆ ಸ್ಥಳಾಂತರಗೊಳ್ಳಬೇಕು
ಎಂಬುದು ನೋವಿನ ಸಂಗತಿ.

ಹೀಗೆ ಸ್ಥಳಾಂತರಗೊಂಡ ಪ್ರದೇಶಗಳಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಸಮೀಪವಿರುವ ಕಿತ್ತೂರು (ಈಗಿನ ತೆರಣಿ ಮುಂಟಿ) ಕೂಡ ಒಂದು. ಸ್ಥಳಾಂತರ ಗೊಂಡರೂ ಕೃಷಿ ಕಾಯಕವನ್ನು ಬಿಡದೆ ಮಾಡಿ ಸಾಧನೆಯ ಹಾದಿಯಲ್ಲಿದ್ದಾರೆ.

ತೆರಣಿಮುಂಟಿ ಗ್ರಾಮದ ಕೆ.ವಿ.ಭಾಸ್ಕರ್ ಮೂಲತಃ ಇಲ್ಲಿನ ರವಿರಾಮೇಶ್ವರ ದೇವಾಲಯದ ಪ್ರಧಾನ ಅರ್ಚಕರು. ಕಪಿಲಾ ನದಿಗೆ ಅಡ್ಡಲಾಗಿ ಬೀಚನಹಳ್ಳಿ ಸಮೀಪ ಕಬಿನಿ ಜಲಾಶಯ ನಿರ್ಮಿಸಿದಾಗ ಮನೆ, ತೋಟ ಕಳೆದುಕೊಂಡವರಲ್ಲಿ ಇವರೂ ಒಬ್ಬರು. ಈಗ ಅರ್ಚಕ ವೃತ್ತಿಯ ಜತೆಗೆ ತಮ್ಮ 6 ಎಕರೆ ಜಮೀನಿನಲ್ಲಿ ಮಳೆಯಾಶ್ರಿತ ಕೃಷಿ ಮಾಡುತ್ತಿದ್ದಾರೆ. ಹೆಚ್ಚಾಗಿ ರಾಗಿ, ಜೋಳ ಮುಂತಾದ ದ್ವಿದಳ ಧಾನ್ಯಗಳನ್ನು ಬೆಳೆಯುವ ಜತೆಗೆ ವಾಣಿಜ್ಯ ಬೆಳೆ ಹತ್ತಿ ಜತೆಗೆ ಕರಿ ಮುಂಡಗ, ಬಿಳಿ ಮುಂಡಗ ಎನ್ನುವ ನಾಟಿ ತಳಿಯ ರಾಗಿಯನ್ನೂ ಬೆಳೆಯುತ್ತಿದ್ದಾರೆ. ಹೈಬ್ರಿಡ್ ತಳಿಯ ರಾಗಿಗಿಂತ ನಾಟಿ ತಳಿಯ ರಾಗಿಯ ಮುದ್ದೆ ಬೇಗ ಹಳಸುವುದಿಲ್ಲ. ಹೀಗಾಗಿ ಅದನ್ನು ಸೇವಿಸು ವುದರಿಂದ ದೇಹಕ್ಕೆ ತಂಪು, ರಟ್ಟೆಗೆ ಬಲ. ಆ ಕಾರಣದಿಂದಲೇ ಬೆಳಿಗ್ಗೆಯಿಂದ ಸಂಜೆವರೆಗೂ ಬಿಸಿಲಿನಲ್ಲಿ ದುಡಿಯಬಹುದು ಎನ್ನುತ್ತಾರೆ ಭಾಸ್ಕರ್.

ಸಾಸಿವೆ, ನವಣೆ, ಸಜ್ಜೆ ಮುಂತಾದ ಕಿರು ಧಾನ್ಯಗಳನ್ನೂ ಬೆಳೆಯುವ ಭಾಸ್ಮರ್‌ರವರಿಗೆ ನಾಟಿ ಹಸುಗಳು ಎಂದರೆ ಬಹಳ ಪ್ರೀತಿ. ತಮ್ಮ ಮನೆಯಲ್ಲಿಯೇ 5-6 ಹಸುಗಳನ್ನು ಸಾಕಿಕೊಂಡಿರುವ ಇವರು, ಮನೆಗೆ ಬೇಕಾದ ಹಾಲು, ಮೊಸರು, ತುಪ್ಪ, ಬೆಣ್ಣೆ ಜತೆಗೆ ಭೂಮಿಗೆ ಬೇಕಾದ ಸಾವಯವ ಗೊಬ್ಬರವನ್ನೂ ಪಡೆದುಕೊಳ್ಳುತ್ತಾರೆ.
ಪಶು ಸಂರಕ್ಷಣೆಗಾಗಿ ವಿನೂತನ ಪದ್ಧತಿ ಯೊಂದನ್ನು ಭಾಸ್ಟರ್ ರೂಢಿಸಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಹೆಣ್ಣು ಕರುವಿನ ಜನನ ವಾದರೆ ಅದನ್ನು ಕೆಲವು ತಿಂಗಳು ಬೆಳೆಸಿ, ನಂತರ ಸಾಕುವ ಇಚ್ಛೆ ಇರುವವರಿಗೆ ಕೊಡುತ್ತಾರೆ. ಅವರು ಮುಂದೆ, ಕರು ಹಸುವಾಗಿ, ಅದು ಹಾಕಿದ ಹೆಣ್ಣು ಕರುವನ್ನು ಭಾಸ್ಟರ್‌ರವರಿಗೆ ವಾಪಸ್ಸು ಕೊಡಬೇಕು. ಆ ಕರು ಬೇರೆ ಸಾಕುವ ವರಿಗೆ ಕೊಡಲ್ಪಡುತ್ತದೆ. ಹೀಗೆ ಹಸುವಿನ ಸಂತತಿ ಮುಂದುವರಿಸುವುದು ಭಾಸ್ಕರ್ ರ ಪ್ರಯತ್ನವಾಗಿದೆ.

ಕೃಷಿಕರಾದ ನಾವು ನಮ್ಮ ಸೋಮಾರಿತನ ದಿಂದ ಎತ್ತು, ಹಸು, ಎಮ್ಮೆಗಳನ್ನು ಸಾಕುವುದನ್ನು ಕಡಿಮೆ ಮಾಡಿದ್ದೇವೆ. ಬೆಳೆ ಬೆಳೆಯಲು ಹೆಚ್ಚು ಹಣ ತೆತ್ತು ಸುಲಭವಾಗಿ ಎರಚಬಹುದು ಅಂತಾ ರಾಸಾಯನಿಕ ಗೊಬ್ಬರ ತಂದು ಭೂಮಿಗೆ ಹಾಕಿ ಹಾಳು ಮಾಡುತ್ತಿದ್ದೇವೆ. ಬೆಳೆದು ತಿನ್ನುತ್ತಿದ್ದ ರೈತರಾದ ನಾವು ಈಗ ಸರ್ಕಾರದಿಂದ ಅಕ್ಕಿ ಪಡೆಯುವ ಸ್ಥಿತಿಗೆ ಬಂದಿದ್ದೇವೆ. ಅನ್ನ ಕೊಡುತ್ತಿದ್ದ ಕೈ ಬೇಡುವ ಸ್ಥಿತಿ ತಲುಪುತ್ತಿರುವುದಕ್ಕೆ ಗೋ ಸಾಕಣೆಯನ್ನು ಮರೆತಿರುವುದೇ ಕಾರಣ ಎಂಬ ಅಭಿಪ್ರಾಯವನ್ನು ಭಾಸ್ಕರ್ ಹಂಚಿಕೊಳ್ಳುತ್ತಾರೆ.

ಹಲವು ವರ್ಷಗಳ ಹಿಂದೆ ಮಾಡಿದ ಗೋಬ‌ರ್ ಗ್ಯಾಸ್‌ ಘಟಕ ಈಗಲೂ ಚೆನ್ನಾಗಿ ಕಾರ್ಯನಿರ್ವಸುತ್ತಿದೆ. ಅಲ್ಲದೆ ಈಗಲೂ ಮರದ ಗಾಡಿ ಕಟ್ಟಿಕೊಂಡು ಮೇಲೆ ನೀರು ತುಂಬುವ ಪೀಪಾಯಿ ಇಟ್ಟುಕೊಂಡು, ಬೆಳಿಗ್ಗೆಯೇ ಕಪಿಲ ನದಿಗೆ ಹೋಗಿ ನೀರು ತರುತ್ತಾರೆ.‌

ಪುರಾಣ ಪ್ರಸಿದ್ಧ ರವಿರಾಮೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿರುವ ಇವರ ನೇತೃತ್ವದಲ್ಲಿ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವ ವೇಳೆ ಸಂಪೂರ್ಣ ಪೂಜಾ ವಿಧಿ ವಿಧಾನಗಳು ಜರುಗುವುದು ವಿಶೇಷ.

ಕೃಷಿಯಲ್ಲಿ ಸುಸ್ಥಿರ ಸಮಗ್ರ ಕೃಷಿಯನ್ನು ರೂಢಿಸಿಕೊಂಡಿರುವ ಇವರಿಗೆ ಪತ್ನಿ ನಾಗರತ್ನ ರವರ ಸಹಕಾರವೂ ಇದೆ. ಬಾನುಲಿ ಕೃಷಿಕರ ಬಳಗದ ಮುಂಚೂಣಿ ಸದಸ್ಯರಾಗಿರುವ ಭಾಸ್ಟರ್ ಉತ್ತಮ ನಿರೂಪಕರಾಗಿದ್ದು, ನಿತ್ಯ ಜಾಲತಾಣಗಳಲ್ಲಿ ಕೃಷಿ ಸಂಬಂಧಿತ ಉಪಯುಕ್ತ ಮಾಹಿತಿ ಹಂಚಿಕೊಳ್ಳುವ ಇವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ.
ಇವರನ್ನು ಭೇಟಿ ಮಾಡಲು ಮೊಬೈಲ್‌ ಸಂಖ್ಯೆ 9945616044ಗೆ ಸಂಪರ್ಕಿಸಬಹುದು.

ಆಂದೋಲನ ಡೆಸ್ಕ್

Recent Posts

ಮಳೆ ಕೊರತೆಯ ನಡುವೆಯೂ ಕೃಷಿಗೆ ಆತಂಕವಿಲ್ಲ

ನವೀನ್ ಡಿಸೋಜ ಕೊಡಗಿನಲ್ಲಿ ಇಲ್ಲಿಯವರೆಗೆ ಶೇ.೩೭ರಷ್ಟು ಮಳೆ ಕೊರತೆ; ಭರದಿಂದ ಸಾಗಿದ ಬಿತ್ತನೆ ಕಾರ್ಯ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ…

4 hours ago

ರಸ್ತೆ ಕಾಮಗಾರಿ ಕಳಪೆ: ಸಾರ್ವಜನಿಕರ ಆರೋಪ

ದಾಸೇಗೌಡ ಸರಗೂರು ಸರಗೂರು: ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆಗ್ರಹ ಸರಗೂರು: ಪಟ್ಟಣದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ…

4 hours ago

20 ದಿನಗಳಿಂದ ಕುಡಿಯುವ ನೀರಿಲ್ಲದೆ ಪರದಾಟ

ಮಹಾದೇಶ್ ಎಂ.ಗೌಡ ಅಧಿಕಾರಿಗಳ ವಿರುದ್ಧ ಕೌದಳ್ಳಿ ಗ್ರಾಮದ ಮಹಿಳೆಯರ ಆಕ್ರೋಶ  ಹನೂರು: ಕುಡಿಯುವ ನೀರಿಗಾಗಿ ಕಳೆದ ಹಲವು ದಿನಗಳಿಂದ ಪರಿತಪಿಸುತ್ತಿದ್ದರೂ…

4 hours ago

ಲಿಂಗಾಂಬುಧಿ ಕೆರೆ ಪ್ರವೇಶಕ್ಕೆ ಶುಲ್ಕ ನಿಗದಿ

ಚಿರಂಜೀವಿ ಸಿ ಹುಲ್ಲಹಳ್ಳಿ ಸೆಪ್ಟೆಂಬರ್ ೧ರಿಂದ ಜಾರಿ; ಮಾಸಿಕ ಪಾಸ್ ಸೌಲಭ್ಯ ವಾಯುವಿಹಾರಿಗಳ ಅಸಮಾಧಾನ ವಯಸ್ಕರಿಗೆ ೧೦ ರೂ., ಮಕ್ಕಳಿಗೆ…

4 hours ago

ಮಾಲೀಕರು ಒಪ್ಪಿದರೆ ಪರಿಹಾರ ನೀಡಿ, ಇಲ್ಲವೇ ಭೂಮಿ ಹಿಂತಿರುಗಿಸಿ

ಕೆ.ಬಿ.ರಮೇಶನಾಯಕ ಮೈಸೂರು: ಸರ್ಕಾರದ ನಿರ್ದೇಶನ ಉಲ್ಲಂಸಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಹಿಂದಿನ ಮುಡಾ) ಮಂಜೂರು ಮಾಡಿದ್ದ ಬದಲಿ ನಿವೇಶನಗಳ ಹಂಚಿಕೆ…

5 hours ago

ಮೈಸೂರು ಜಿಲ್ಲೆ: ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು!

ಕೆ.ಬಿ.ರಮೇಶನಾಯಕ ಮೈಸೂರು: ೨೦೨೯ರ ಲೋಕಸಭಾ ಚುನಾವಣೆಗೂ ಮುನ್ನ ಕ್ಷೇತ್ರಗಳ ಪುನರ್ ವಿಂಗಡಣೆ, ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರ ಪ್ರಯತ್ನ…

5 hours ago