Government Subsidy
ಪಿಎಂ ಕುಸುಮ್-ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾಭಿಯಾನ್ (PM-KUSUM:
Pradhan Mantri Kisan Urja Suraksha evam Uttan Mahaabhiyan)ಕಾಂಪೋನೆಂಟ್-ಬಿ ಅಡಿಯಲ್ಲಿ ಜಾಲಮುಕ್ತ ಸೌರ ಚಾಲಿತ ಪಂಪ್ಸೆಟ್ ಗಳನ್ನು ಅಳವಡಿಸುವ ಯೋಜನೆಯನ್ನು ಕೆಆರ್ ಇಡಿಎಲ್ (KREDL) ಮೂಲಕ ರಾಜ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ವಿದ್ಯುತ್ ಸರಬರಾಜು ನಿಗಮಗಳ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ಸೌರ ಪಂಪ್ಸೆಟ್ಗೆ ಶೇ.೩೦ರಷ್ಟು ಕೇಂದ್ರದಿಂದ ಸಹಾಯಧನದೊಂದಿಗೆ ಗರಿಷ್ಟ ೭.೫ ಎಚ್ಪಿ (೭.೫ hp) ಸಾಮರ್ಥ್ಯವಿರುವ ಪಂಪ್ಸೆಟ್ಗಳನ್ನು ಪಡೆದುಕೊಳ್ಳಬಹದಾಗಿದೆ.
ರೈತರು ೧೦ ಎಚ್ಪಿ (೧೦ hp) ಸಾಮರ್ಥ್ಯ ವಿರುವ ಪಂಪ್ಸೆಟ್ಗಳನ್ನು ಕೂಡ ಅಳವಡಿಸಬಹುದು. ಆದರೆ, ಪ್ರತಿ ಪಂಪ್ಸೆಟ್ಗೆ ಕೇಂದ್ರದ ಸಹಾಯಧನ ೭.೫ ಎಚ್ಪಿ ಸಾಮ್ಯರ್ಥದ ಪಂಪ್ ಸೆಟ್ ದರದ ಶೇ.೩೦ಕ್ಕೆ ಸೀಮಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಶೇ. ೩೦ ಸಹಾಯಧನ ಹೊರತುಪಡಿಸಿ, ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದ ರೈತ ಫಲಾನುಭವಿಗಳಿಗೆ, ಕೊಳವೆ ಅಥವಾ ತೆರೆದ ಬಾವಿಗಳಿಗೆ ಸೌರ ಪಂಪ್ಸೆಟ್ ಒದಗಿಸಲು ಶೇ.೩೦ ಸಹಾಯಧನದ ಒದಗಿಸಲಾಗುತ್ತಿದೆ.
ಇದಲ್ಲದೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳ ರೈತರಿಗೆ ಶೇ.೫೦ ಸಹಾಯಧನದ ಒದಗಿಸಲಾಗುತ್ತಿದೆ. ಉಳಿದ ಮೊತ್ತವನ್ನು ರೈತರು ಪಾವತಿಸಬೇಕಾಗುತ್ತದೆ. (ಸಾಮಾನ್ಯ ವರ್ಗ ಶೇ.೪೦, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಶೇ.೨೦). ಅರ್ಹ ರೈತ ಫಲಾನುಭವಿಗಳು ಯಾವುದೇ ಕಚೇರಿಗಳಿಗೆ ಭೇಟಿ ನೀಡದೇ, ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಕೆಗೆ ನಿಯಮಗಳು:
* ರೈತರು ಜಮೀನಿನಲ್ಲಿ ಬಾವಿಯನ್ನು ಕೊರೆಸಿರಬೇಕು
* ಈ ಯೋಜನೆಯು ಹೊಸ ಕೃಷಿ ಪಂಪ್ಸೆಟ್ಗಳಿಗೆ ಮಾತ್ರ ಅನ್ವಯ
* ಹಾಲಿ ವಿದ್ಯುತ್ ಸಂಪರ್ಕ ಹೊಂದಿರುವ ಪಂಪ್ಸೆಟ್ಗಳು ಅರ್ಹವಿರುವುದಿಲ್ಲ
* ಈಗಾಗಲೇ ಗಂಗಾಕಲ್ಯಾಣ ಯೋಜನೆಯಡಿ ಲಾಭವನ್ನು ಪಡೆದಿರುವ ರೈತರು ಅರ್ಹರಲ್ಲ
* ಪಿಎಂ-ಕುಸುಮ್, ಕಾಂಪೋನೆಂಟ್-ಬಿ ಮಾರ್ಗಸೂಚಿಯ ಅನ್ವಯ ‘ಡಾರ್ಕ್ ಝೋನ್’ ಎಂದು ಘೋಷಿಸರುವ ಪ್ರದೇಶಗಳಲ್ಲಿ ಈ ಯೋಜನೆಯು ಅನ್ವಯಿಸುವುದಿಲ್ಲ
* ಅರ್ಜಿದಾರರು ಕೇವಲ ಒಂದು ಸೌರ ಪಂಪ್ಸೆಟ್ಗೆ ಅರ್ಜಿ ಸಲ್ಲಿಸಬಹುದು
* ಈಗಾಗಲೇ ಇತರೆ ಅನುದಾನಿತ ಸರ್ಕಾರಿ ಪ್ರಾಯೋಜಿತ ಯೋಜನೆಗಳಡಿ ಸೌರ ಪಂಪ್ಸೆಟ್ ಪಡೆದಿದ್ದರೆ ಅಂತಹ ಅರ್ಜಿದಾರರು ಈ ಯೋಜನೆಯ ಲಾಭವನ್ನು ಪಡೆಯಲು ಅರ್ಹರಿರುವುದಿಲ್ಲ
* ಎಲ್ಲ ವರ್ಗದ ಅರ್ಜಿಗಳಲ್ಲಿ ವಿಶೇಷಚೇತನರಿಗೆ ಶೇ.೫ ರಷ್ಟು ಮೀಸಲಾತಿ ಒದಗಿಸಲಾಗುತ್ತದೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
* ಭೂ ಮಾಲೀಕತ್ವ ಇರುವ ಅರ್ಜಿದಾರರ ಹೆಸರು
* ವಾಸಸ್ಥಳ ಮತ್ತು ವಿಳಾಸ, ಗ್ರಾಮ, ತಾಲ್ಲೂಕು, ಜಿಲ್ಲೆ
* ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ
* ಆರ್ಟಿಸಿ ಮತ್ತಿತರೆ ಅವಶ್ಯ ದಾಖಲೆಗಳು
* ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ https://kredlinfo.in/Applnoffgridswp
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…