ಅನ್ನದಾತರ ಅಂಗಳ

ಸಿರಿಧಾನ್ಯಗಳ ರೋಗ ನಿರೋಧಕ ಗುಣಗಳು

ಸಿರಿಧಾನ್ಯಗಳು ಮಾನವರಿಗೆ ತಿಳಿದಿರುವ ಅತ್ಯಂತ ಹಳೆಯ ಆಹಾರಗಳಲ್ಲಿ ಒಂದಾಗಿದ್ದು, ಇವು ಒಣ ಭೂಮಿಯಲ್ಲಿ ಬೆಳೆಯುವ ಬರ ನಿರೋಧಕ ಬೆಳೆಗಳಾಗಿವೆ. ಇವು ಹೆಚ್ಚು ಸುಲಭವಾಗಿ ಬೆಳೆಯಲು ಮತ್ತು ಸಂರಕ್ಷಿಸಲು ಸಾಧ್ಯವಾದ ಕಾರಣದಿಂದ ಕೃಷಿಯ ಮುಖ್ಯ ಜೀವನೋದ್ದೇಶವಾಗಿವೆ.

ಇತಿಹಾಸ: ಸಿರಿಧಾನ್ಯಗಳನ್ನು ಪ್ರಪಂಚದಾದ್ಯಂತ ಏಕದಳ ಬೆಳೆಗಳು ಅಥವಾ ಧಾನ್ಯಗಳಾಗಿ ಮಾನವನ ಆಹಾರಕ್ಕಾಗಿ ಮತ್ತು ಮೇವಿಗೆ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಕೊರಿಯನ್ ಪರ್ಯಾಯ ದ್ವೀಪದಲ್ಲಿ ಇವುಗಳ ಕೃಷಿಯ ಪುರಾವೆಗಳಿವೆ.

(೩೫೦೦-೨೦೦೦ ಆ.ಇ) ಭಾರತದಲ್ಲಿ ಇವುಗಳನ್ನು ಕೆಲವು ಹಳೆಯ ಯಜುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಸಿರಿಧಾನ್ಯಗಳು ಒಟ್ಟು ಒಂಬತ್ತು. ಅವುಗಳಲ್ಲಿ ರಾಗಿ, ಬಿಳಿ ಜೋಳ, ಸಜ್ಜೆ, ಸಾ , ಕೊರಲೆ, ನವಣೆ, ಊದಲು, ಹಾರಕ, ಹಾಗೂ ಬರಗು. ಇವುಗಳನ್ನು ಸಾಂಪ್ರದಾಯಿಕವಾಗಿ ೫೦೦ ವರ್ಷಗಳಿಂದ ಭಾರತೀಯ ಉಪಖಂಡದಲ್ಲಿ ಬೆಳೆಯುಲಾಗುತ್ತಿದೆ ಮತ್ತು ಸೇವಿಸಲಾಗುತ್ತಿದೆ.

ಉತ್ಪಾದನೆ ಮತ್ತು ವ್ಯಾಪಾರ ಕಾರ್ಯಕ್ಷಮತೆ:

*  ಸಿರಿಧಾನ್ಯಗಳ ಒಟ್ಟು ಜಾಗತಿಕ ವಿಸ್ತೀರ್ಣವು ೩,೧೮,೩೫,೦೩೯ ಹೆಕ್ಟೇರ್ ಆಗಿದ್ದು, ೨೦೨೧ರಲ್ಲಿ ೩,೨೭,೯೦,೧೨೩.೬ ಟನ್‌ಗಳಷ್ಟುಉತ್ಪಾದನೆಯಾಗಿದೆ.(FAO ಅಂಕಿ-ಅಂಶ ಪ್ರಕಾರ).

* ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಿರಿಧಾನ್ಯಗಳನ್ನು ಉತ್ಪಾದಿಸುವ ದೇಶವಾಗಿದೆ. ಭಾರತದಲ್ಲಿ ಸಿರಿಧಾನ್ಯಗಳನ್ನು ಸುಮಾರು ೨೧ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಈ ರಾಜ್ಯಗಳು ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಶೇ.೬೫ ಪ್ರತಿಶತಕ್ಕಿಂತ ಹೆಚ್ಚು ಆಕ್ರಮಿಸಿಕೊಂಡಿವೆ.

* ಭಾರತವು ಸಿರಿಧಾನ್ಯದಲ್ಲಿ ೧೨.೫ ಮಿಲಿಯನ್ ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು ೧೫.೫೩ ಮಿಲಿಯನ್ ಟನ್‌ಗಳಷ್ಟು ಉತ್ಪಾದಿಸುತ್ತದೆ ಮತ್ತು ೧೨೪೭ಕೆಜಿ/ಹೆಕ್ಟೇರ್ ಇಳುವರಿಯನ್ನು ಹೊಂದಿದೆ. ಜೋಳವು ಭಾರತದ ನಾಲ್ಕನೇ ಪ್ರಮುಖ ಆಹಾರ ಧಾನ್ಯವಾಗಿದೆ. ಇದರ ವಿಸ್ತೀರ್ಣ ೩.೮೪ ಮಿಲಿಯನ್ ಹೆಕ್ಟೇರ್ ಆಗಿದ್ದು ೪.೩೧ ಮಿಲಿಯನ್ ಮೆಟ್ರಿಕ್‌ಟನ್‌ಗಳಷ್ಟು ಉತ್ಪಾದನೆಯಾಗಿದೆ.

* ಸಜ್ಜೆ ಮತ್ತು ಜೋಳ ಒಟ್ಟಾಗಿ ವಿಶ್ವ ಉತ್ಪಾದನೆಯಲ್ಲಿ ಸರಿ ಸುಮಾರು ಶೇ.೧೯ರಷ್ಟು ಕೊಡುಗೆ ನೀಡುತ್ತಿವೆ.

* ಸಿರಿಧಾನ್ಯಗಳ ವಿಧಗಳಾದ ಊದಲು (ಶೇ. ೯೯.೯), ರಾಗಿ (ಶೇ. ೫೩.೩), ಹಾರಕ (ಶೇ. ೧೦೦), ಸಾಮೆ (ಶೇ. ೧೦೦) ಮತ್ತು ಸಜ್ಜೆ (ಶೇ. ೪೪.೫), ಒಟ್ಟಾಗಿ ೮.೮೭ ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೧೨.೪೬ ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆಯಾಗಿದೆ.

* ಭಾರತದಿಂದ ಸಿರಿಧಾನ್ಯಗಳ ರಫ್ತು ೨೦೨೧-೨೨ ರ ಅವಧಿಯಲ್ಲಿ ಏರಿಕೆ ಪ್ರವೃತ್ತಿಯನ್ನು ಮುಂದುವರಿಸಿದೆ ಮತ್ತು ಸಿರಿಧಾನ್ಯಗಳ ರಫ್ತು ಇತಿಹಾಸದಲ್ಲಿ ಮೊದಲ ಬಾರಿಗೆ ಅಮೆರಿಕನ್ ಡಾಲರ್ ೬೨.೯೫ ಮಿಲಿಯನ್ ಸಾರ್ವಕಾಲಿಕ ಗರಿಷ್ಟ ಮಟ್ಟವನ್ನು ತಲುಪಿದೆ. ೨೦೨೨-೨೩ ರಲ್ಲಿ ದೇಶದಿಂದ ಸಿರಿಧಾನ್ಯಗಳು ಮತ್ತು ಸಿರಿಧಾನ್ಯ ಸಂಬಂಽತ ಉತ್ಪನ್ನಗಳ ರಫ್ತು ೧,೬೯,೦೪೯.೧೧ ಟನ್‌ಗಳು ಮತ್ತು ಇದರ ಮೌಲ್ಯ ೬೦೮.೧೨ ಕೋಟಿ ರೂ.ಆಗಿದೆ. ೨೦೨೨-೨೩ರಲ್ಲಿ ಸಜ್ಜೆ-೮೧,೭೦೯ ಟನ್, ಜೋಳ-೪೭,೨೪೯ ಟನ್, ರಾಗಿ-೨೧,೪೩೯ ಟನ್‌ಗಳಷ್ಟು ರಫ್ತು ಆಗಿದೆ.

ಔಷಧಿಯ ಪ್ರಾಮುಖ್ಯತೆ: 

* ಸಿರಿಧಾನ್ಯಗಳಲ್ಲಿ ನಮ್ಮ ದೇಹಕ್ಕೆ ಬೇಕಿರುವ ಪೌಷ್ಟಿಕ ಸತ್ವಗಳಾದ ತಾಮ್ರ, ಮೆಗ್ನೀಷಿಯಂ, ಪಾಸ್ಪರಸ್,ಮ್ಯಾಂಗನೀಸ್ ಮತ್ತು ಇತರ ಪೌಷ್ಟಿಕ ಸತ್ವಗಳು ಸಾಕಷ್ಟು ಹೇರಳವಾಗಿದೆ.

* ಸಮತೋಲನವಾದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳು ನಮಗೆ ಆರೋಗ್ಯಕರವಾದ ಜೀವನವನ್ನು ಒದಗಿಸುತ್ತದೆ. ಇದರಿಂದ ಹೃದಯದ ಸಮಸ್ಯೆಗಳು, ಪಾರ್ಶ್ವವಾಯು, ರಕ್ತದ ಒತ್ತಡ, ಮಧುಮೇಹ ಹೀಗೆ ಹಲವು ಬಗೆಯ ದೀರ್ಘಕಾಲ ಕಾಡುವ ಕಾಯಿಲೆಗಳಿಂದ ಮುಕ್ತಿ ಹೊಂದಬಹುದು.

* ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಿರಿ ಧಾನ್ಯಗಳು ಸಹಾಯ ಮಾಡುತ್ತವೆ ಏಕೆಂದರೆ ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ.

* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಿರಿಧಾನ್ಯಗಳಲ್ಲಿ ಕಂಡುಬರುವ ಕಡಿಮೆ ಗ್ಲಾಯ್ಸಮಿಕ್ ಇಂಡೆಕ್ಸ್ ನಿಮ್ಮನ್ನು ಸಕ್ಕರೆ ಕಾಯಿಲೆಯಿಂದ ತಕ್ಕಮಟ್ಟಿಗೆ ಪಾರು ಮಾಡುತ್ತದೆ.

* ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೃದಯ ಸಂಬಂಧಿ ಸಮಸ್ಯೆಗಳಿಂದ ಪಾರಾಗಲು ಸಿರಿಧಾನ್ಯಗಳು ಅತ್ಯವಶ್ಯ.

ಆರ್ಥಿಕ ಪ್ರಾಮುಖ್ಯತೆ: ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಸಿರಿಧಾನ್ಯಗಳನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ೫ನೇ ಅತಿದೊಡ್ಡ ದೇಶವಾಗಿದೆ. ಸಿರಿಧಾನ್ಯಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿರುವ ಕಾರಣ ಅದರ ರಫ್ತು ಅತಿಯಾಗಿ ಹೆಚ್ಚುತ್ತಿದೆ. ಸಿರಿಧಾನ್ಯಗಳ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಉದ್ಯಮಿಗಳಿಗೆ ಹೆಚ್ಚಿನ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ.

-ಎಸ್.ಎಸ್.ಗುಳೇದಗುಡ್ಡ (ಲೇಖಕರು-ಪ್ರಾಧ್ಯಾಪಕರು, ಕೃಷಿ ವಿವಿ, ಧಾರವಾಡ)

ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

7 hours ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

9 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

9 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

9 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

10 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

10 hours ago