ಅನ್ನದಾತರ ಅಂಗಳ

ಬೇಸಿಗೆಯಲ್ಲಿ ಬೆಂಕಿ ಕುರಿತು ಇರಲಿ ಎಚ್ಚರ

ಜಿ.ಕೃಷ್ಣಪ್ರಸಾದ್

ಬೇಸಿಗೆ ಕಾಲಿಟ್ಟಿದೆ. ತೋಟಗಳಲ್ಲಿ ಹುಲ್ಲು, ಕಳೆ ಗಿಡಗಳು ಒಣಗಿ ನಿಂತಿವೆ. ಬಿಸಿಲಿನ ತಾಪ ಏರಿಕೆಯಾಗುತ್ತಿದ್ದಂತೆ ಬೆಂಕಿ ಅವಘಡಗಳ ಪ್ರಮಾಣವೂ ಹೆಚ್ಚಾಗುತ್ತಿದೆ. ಇದರಿಂದಾಗಿ ರೈತರು ಶ್ರಮಪಟ್ಟು ಬೆಳೆಸಿದ ಬೆಳೆ, ಮರ-ಗಿಡಗಳು ಕ್ಷಣಮಾತ್ರದಲ್ಲಿ ಬೆಂಕಿಗೆ ಆಹುತಿಯಾಗಿ ನಷ್ಟ ಅನುಭವಿಸುವಂತಾಗಿದೆ.

ತೋಟದಲ್ಲಿ ಒಣಗಿದ ತರಗೆಲೆಗಳಿಂದ ಬೆಂಕಿ ಹೊತ್ತಿಕೊಳ್ಳುವುದು ಸಾಮಾ ವಿದ್ಯುತ್ ತಂತಿ ಮರಗಳಿಗೆ ತಗುಲಿ ಬೆಂಕಿ ಅವಘಡ ಗಳು ಸಂಭವಿಸುತ್ತಿವೆ. ಎತ್ತರ ಬೆಳೆದ ಕಬ್ಬಿನ ಸೂಲಂಗಿ ವಿದ್ಯುತ್ ತಂತಿಗಳಿಗೆ ತಗುಲಿ ಕಬ್ಬಿನ ಗದ್ದೆಗಳು ಬೆಂಕಿಗಾವುತಿಯಾಗುತ್ತಿವೆ.

ತೋಟದ ಬೇಲಿಯಲ್ಲಿ ಹತ್ತಾರು ಜಾತಿಯ ಮರ ಗಿಡ ಬಳ್ಳಿ ಇರುತ್ತವೆ. ಉದುರಿದ ಎಲೆಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಆಕಸ್ಮಿಕವಾಗಿ ಇವಕ್ಕೆ ಬೆಂಕಿ ತಗುಲಿದರೆ ತೋಟ ಬೆಂಕಿಗಾವುತಿಯಾಗುತ್ತದೆ. ತೋಟದಲ್ಲಿ ಹುಲ್ಲು, ಕಸ ಕಡ್ಡಿ ಇದ್ದರೆ ಬೆಂಕಿ ತೋಟಕ್ಕೆ ಹರಡಿ ಗಿಡಗಳನ್ನು ಆವುತಿ ಪಡೆಯುತ್ತದೆ.

ಬೆಂಕಿ ಬರಿ ಗಿಡ ಮರಗಳನ್ನಷ್ಟೇ ಆಹುತಿ ಪಡೆಯುವುದಿಲ್ಲ. ಬೇಲಿ ಮತ್ತು ತೋಟದಲ್ಲಿ ನೆಲೆ ಮಾಡಿಕೊಂಡಿರುವ ಪಕ್ಷಿಗಳು, ಸಣ್ಣ ಪುಟ್ಟ ಪ್ರಾಣಿಗಳು ಕೂಡ ಪ್ರಾಣ ಕಳೆದುಕೊಳ್ಳುತ್ತವೆ.

ಬೆಂಕಿ ಅವಘಡ ನಿಯಂತ್ರಿಸಲು ಮಾರ್ಗೋಪಾಯ: 

ತೋಟಗಳಲ್ಲಿ ಕಸ ಕಡ್ಡಿ, ಕಾಚಿ ಹುಲ್ಲು, ಗಿಡಗಂಟಿ, ಯುಪಟೋರಿಯಂ, ಪಾರ್ಥೇನಿಯಂನಂಥ ಕಳೆ ಗಿಡಗಳನ್ನು ತೆಗೆದು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೊನೆ ಮಳೆಗೆ ಒಮ್ಮೆ ನೆಲ ಉತ್ತು ಹದ ಮಾಡಿದರೆ ಬೆಂಕಿಯ ಕಾಟ ಇರುವುದಿಲ್ಲ.

ಡಿಸೆಂಬರ್‌ನಲ್ಲಿ ತೋಟದ ಸುತ್ತ ೪-೫ ಅಡಿಗಳಷ್ಟು ಪಟ್ಟಿಯನ್ನು ಕಸ- ಕಡ್ಡಿ ಹುಲ್ಲು ಇರದಂತೆ ಸಿದ್ಧಮಾಡಿಟ್ಟುಕೊಳ್ಳಬೇಕು. ತೇಗ, ಹೊಂಗೆ ಮುಂತಾದ ಮರಗಳ ಉದುರಿದ ಎಲೆಗಳು ಈ ಪಟ್ಟಿಯ ಮೇಲೆ ಶೇಖರಣೆಯಾಗದಂತೆ ಗುಡಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಬೆಂಕಿ, ತೋಟದ ಒಳಗೆ ಬರುವುದು ತಪ್ಪುತ್ತದೆ. ಬೇಸಿಗೆಯಲ್ಲಿ, ತೋಟದ ಅಂಚಿನಲ್ಲಿ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಆಕಸ್ಮಿಕವಾಗಿ ತೋಟಕ್ಕೆ ಬೆಂಕಿ ಬಿದ್ದರೆ ನಂದಿಸಲು ನೀರು ಬೇಕಾಗು ತ್ತದೆ. ಬೇಲಿಯ ಅಂಚಿನಲ್ಲಿ ನೀರಿನ ಪೈಪ್‌ಲೈನ್ ಇದ್ದರೆ ನೀರಿಗಾಗಿ ಹುಡುಕಾಡುವುದು ತಪ್ಪುತ್ತದೆ.

ರಸ್ತೆ ಬದಿಯಲ್ಲಿ ತೋಟ ಇರುವವರು ‘ಬೆಂಕಿ ರೇಖೆ’ ನಿರ್ಮಿಸಿಕೊಳ್ಳಬೇಕು. ರಸ್ತೆ ಅಂಚಿನ ಒಣ ಹುಲ್ಲು, ಕಸಕಡ್ಡಿಗಳಿಗೆ ಬೆಂಕಿ ಹಾಕಿ ಸುಟ್ಟುಹಾಕುವ ಮೂಲಕ ಅಲ್ಲಿ ಬೆಂಕಿ ಹೊತ್ತುಕೊಳ್ಳದಂತೆ ಮಾಡಬೇಕು. ಕಾಡಂಚಿನ ರೈತರು ಸಂಘಟಿತ ರಾಗಿ ಬೆಂಕಿ ರೇಖೆ ನಿರ್ಮಿಸಲು ಅರಣ್ಯಾಧಿಕಾರಿಗಳಿಗೆ ಒತ್ತಾಯ ಮಾಡಬೇಕು ಅಥವಾ ತಾವೇ ಜೊತೆಗೂಡಿ ಬೆಂಕಿ ರೇಖೆಯನ್ನು ನಿರ್ಮಿಸಬೇಕು. ಇದರಿಂದ ತೋಟಗಳು ಬೆಂಕಿಗಾಹುತಿಯಾಗುವುದು ತಪ್ಪುತ್ತದೆ.

ಸಾವಯವ ತೋಟದಲ್ಲಿ ಗಿಡಗಳ ಬುಡಕ್ಕೆ ಮುಚ್ಚಿಗೆ ಮಾಡುವುದರಿಂದ ಬೆಂಕಿಯ ಅಪಾಯ ಇನ್ನೂ ಹೆಚ್ಚು. ಹುರುಳಿ ತರಹದ ಹಸಿರೆಲೆ ಗೊಬ್ಬರಗಳನ್ನು ಗಿಡದ ಪಾತಿಯಲ್ಲಿ ಬೆಳೆಸುವುದರಿಂದ ಬೆಂಕಿಯ ಕಾಟ ತಪ್ಪಿಸಬಹುದು. ‘ತೋಟದ ಬೇಲಿಯ ಅಂಚಿನಲ್ಲಿ ಹೊಂಗೆ,ಬೇವು, ಪುವ್ವರಸಿ, ಮಹಾಗನಿಯಂಥ ಗಿಡಗಳಿರಲಿ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿಯೂ ಬದುಕಿ ಉಳಿಯುವ ಶಕ್ತಿ ಇವಕ್ಕಿರುತ್ತದೆ. ಮಾವು, ನೇರಳೆಯಂಥ ಕಸಿ ಗಿಡಗಳಿಗೆ ಬೆಂಕಿಯ ತಾಪ ತಡೆಯುವ ಶಕ್ತಿ ಕಡಿಮೆ. ಇಂಥ ಗಿಡಗಳನ್ನು ತೋಟದ ಒಳಭಾಗದಲ್ಲಿ ಬೆಳೆಸಿ ’ ಎನ್ನುತ್ತಾರೆ ಸಾವಯವ ಕೃಷಿಕ ಸಿದ್ಧಲಿಂಗಯ್ಯ ಹೊಲತಾಳು. ಎರಡು ವರ್ಷಗಳ ಹಿಂದೆ ಬೆಂಕಿಗಾಹುತಿಯಾದ ಇವರ ತೋಟದ ಬಹಳಷ್ಟು ಗಿಡಗಳು ಮತ್ತೆ ಚಿಗುರಿವೆ; ತಲೆ ಎತ್ತಿ ನಿಂತಿವೆ.

ಬೆಂಕಿ ಬಿದ್ದ ತೋಟದ ಭಾಗಕ್ಕೆ ನಿರಂತರವಾಗಿ ನೀರು ಉಣಿಸಿ, ತಂಪಾಗಿಡಿ. ಸುಟ್ಟು ಹೋದ ಗಿಡಗಳ ಟೊಂಗೆಯನ್ನು ಕತ್ತರಿಸಿ ಅದರ ತುದಿಗೆ ‘ಟ್ರೀ ಪೇಸ್ಟ್’ ಹಚ್ಚಿ. ಒಂದು ಭಾಗ ಸಗಣಿ, ಒಂದು ಭಾಗ ಹುತ್ತದ ಮಣ್ಣು ಮತ್ತು ಸ್ವಲ್ಪ ಸುಣ್ಣ ಸೇರಿಸಿ, ನೀರು ಚಿಮುಕಿಸಿಕೊಳ್ಳುತ್ತಾ ಚೆನ್ನಾಗಿ ಕಲಸಿದರೆ ‘ಟ್ರೀ ಪೇಸ್ಟ್’ ಸಿದ್ಧವಾಗುತ್ತದೆ. ಟ್ರೀ ಪೇಸ್ಟನ್ನು ಗಿಡಗಳ ಕಾಂಡಕ್ಕೂ ಸವರಿದರೆ ಗಿಡ ನಂಜಾಗುವುದು ತಪ್ಪುತ್ತದೆ. ಬಿಸಿಲಿನ ಝಳವನ್ನು ತಡೆದುಕೊಳ್ಳುತ್ತದೆ’ ಎನ್ನುತ್ತಾರೆ

ಮೈಸೂರಿನ ಯುವ ರೈತ ಕೇಶವ್. ಇವರು ಇದೇ ವಿಧಾನ ಬಳಸಿ ಗಿಡಗಳಿಗೆ ಮರುಜೀವ ನೀಡಿದ್ದಾರೆ. ಗಿಡ ಮತ್ತೆ ಚಿಗುರಿದ ನಂತರ, ಸುಟ್ಟ ಮತ್ತು ಒಣಗಿದ ಎಲೆಗಳಿದ್ದರೆ ತೆಗೆದು ಹಾಕಿ. ಜೀವಾ ಮೃತ ಮೊದಲಾದ ದ್ರವರೂಪಿ ಗೊಬ್ಬರಗಳನ್ನು ಕೊಟ್ಟು ಗಿಡಕ್ಕೆ ಚೈತನ್ಯ ತುಂಬಿ. ಬೇಸಿಗೆ ಬೆಂಕಿಯ ಬಗ್ಗೆ ಅಸಡ್ಡೆ ತೋರದೆ , ಮುಂಜಾಗ್ರತೆ ವಹಿಸಿದರೆ ತೋಟವನ್ನು ರಕ್ಷಿಸಿಕೊಳ್ಳಬಹುದು. ಶ್ರಮಪಟ್ಟು ಕಟ್ಟಿದ ತೋಟ ಬೆಂಕಿಯ ಕೆನ್ನಾಲಿಗೆಗೆ ಸಿಲುಕದಿರಲಿ.

” ಎಲ್ಲ ಮುನ್ನೆಚ್ಚರಿಕೆಯ ನಂತರವೂ, ತೋಟ ಬೆಂಕಿಗೆ ಆಹುತಿಯಾದರೆ ಸಂಯಮದಿಂದ ಗಿಡಗಳ ಉಪಚಾರ ಮಾಡಿ. ಬಹಳಷ್ಟು ಗಿಡಗಳು ಬೆಂಕಿಯ ಆಘಾತದಿಂದ ಚೇತರಿಸಿಕೊಂಡು ಮತ್ತೆ ಚಿಗುರುತ್ತವೆ. ಎಳೆಯ ಮತ್ತು ಸೂಕ್ಷ್ಮ ಗಿಡಗಳು ಮಾತ್ರ ಮತ್ತೆ ಚಿಗುರಲಾರವು.”

ಆಂದೋಲನ ಡೆಸ್ಕ್

Recent Posts

ಕಾರು ಚಾಲಕನ ಪುತ್ರನಿಗೆ ಟಿಕೆಟ್‌ ನೀಡಿ ಗೆಲ್ಲಿಸಿಕೊಂಡು ಬಂದ ದಳಪತಿ ವಿಜಯ್‌!

ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್‌ ಅವರ ಕಾರು ಚಾಲಕನ…

3 hours ago

ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಗೆಲುವು : ಮೈಸೂರಲ್ಲಿ ಸಂಭ್ರಮಾಚರಣೆ

ಮೈಸೂರು : ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಗೆಲುವು ಲಭಿಸಿದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ…

4 hours ago

ವಿಜಯ್‌ ಭೇಟಿಯಾಗಿ ತ್ರಿಶಾ ಅಭಿನಂದನೆ

ಚೆನ್ನೈ : ನಟಿ ತ್ರಿಶಾ ಕೃಷ್ಣನ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಬೆಳಿಗ್ಗೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.…

4 hours ago

ತಮಿಳುನಾಡು| ಸಿಎಂ ಎಂ.ಕೆ.ಸ್ಟಾಲಿನ್‌ಗೆ ಸೋಲು

ಚೆನ್ನೈ: ತಮಿಳುನಾಡಿನ ಹಾಲಿ ಸಿಎಂ ಎಂ.ಕೆ.ಸ್ಟಾಲಿನ್‌ ಸ್ವ ಕ್ಷೇತ್ರದಲ್ಲೇ ಸೋಲು ಅನುಭವಿಸಿದ್ದಾರೆ. ಈ ಮೂಲಕ ಸತತ 2ನೇ ಬಾರಿಗೆ ಸರ್ಕಾರ…

7 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ: ಕೈ ಅಭ್ಯರ್ಥಿ ಸಮರ್ಥ್‌ ಶಾಮನೂರು ಜಯಭೇರಿ

ದಾವಣಗೆರೆ: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.…

8 hours ago

ಪ್ರಧಾನಿ ಮೋದಿ ದೂರದೃಷ್ಟಿಯ ನಾಯಕತ್ವಕ್ಕೆ ಎನ್‌ಡಿಎ ಭರ್ಜರಿ ಗೆಲುವು: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ವಿಕಸಿತ ಭಾರತದ ಮೇಲೆ ಜನರು ಹೊಂದಿರುವ ನಂಬಿಕೆಯಿಂದಾಗಿ ಎನ್‌ಡಿಎ…

8 hours ago