ಮಂಡ್ಯ ಪಕ್ಕದ ಬಸರಾಳಿನ ಕಾಲೇಜು ಬೀದಿಯಲ್ಲಿ ಬದುಕುತ್ತಿರುವ ತಂಬೂರಿ ಜವರಯ್ಯನವರಿಗೆ ಈಗ ೮೨ ವರ್ಷ. ಅರವತ್ತು ವರ್ಷಗಳ ಹಿಂದೆ ಅವರನ್ನು ಪತಿಪುರುಷನೆಂದು ಸ್ವೀಕರಿಸಿದ ಮಡದಿ ಬೋರಮ್ಮನವರಿಗೆ ೭೭ ವರ್ಷ. ಇವರಿಬ್ಬರು ಸೇರಿ ತಂಬೂರಿ ಪದ ಹಾಡುತ್ತಾ ದೇಶಾಟನೆ, ಭಿಕ್ಷಾಟನೆ ಗೈಯಲು ತೊಡಗಿ ಹತ್ತಿರ ಹತ್ತಿರ ೫೦ ವರ್ಷ. ಒಂದು ಕಾಲದಲ್ಲಿ ಕೋಳಿಮೊಟ್ಟೆ ಮಾರುತ್ತಾ, ತಿಗಣೆ ಔಷಧಿ ಹೊಡೆಯುತ್ತಾ ಊರೂರು ತಿರುಗುತ್ತಾ ಓಡಾಡುತ್ತಿದ್ದ ಜವರಯ್ಯನವರ ಮಾಮೂಲಿ ಜೀವನದ ಒಂದು ದೊಡ್ಡ ಘಟನೆ ನಾಗಮಂಗಲ ತಾಲ್ಲೂಕು ಮದ್ದನಟ್ಟಿಯ ಯುವತಿ ಬೋರಮ್ಮಳನ್ನು ಮದುವೆ ಆಗಿದ್ದು. ಇನ್ನೊಂದು ಹೊಳೆ ನರಸೀಪುರ ಬಳಿಯ ಬಂಟ್ ಶೆಟ್ಟಳ್ಳಿ ರುದ್ರಮುನಿ ಸ್ವಾಮಿಯವರಿಂದ ಗುರು ದೀಕ್ಷೆ ಪಡೆದು ಹಾಡಲು ತೊಡಗಿದ್ದು. ಇವೆರಡಕ್ಕಿಂತ ಬಹಳ ದೊಡ್ಡ ಘಟನೆ ರಾಜ್ಯೋತ್ಸವ ಪ್ರಶಸ್ತಿ ಬಂದ ಹಣದಲ್ಲಿ ಸೋರುತ್ತಿದ್ದ ಮನೆಯ ದುರಸ್ತಿ ಮಾಡಿದ್ದು ಮತ್ತು ಮಡದಿ ಬೋರಮ್ಮನಿಗೆ ಚಿನ್ನದ ಓಲೆ ಮಾಡಿಕೊಟ್ಟಿದ್ದು.
ಬಡತನ ಬಡತನವೇ ಅಲ್ಲ. ಹಸಿವು ಹಸಿವೇ ಅಲ್ಲ ಎಂದು ಹಾಡುತ್ತ ಬದುಕುತ್ತಿರುವ ಈ ತತ್ವಪದದ ಜೋಡಿಗೆ ಯಾರಾದರೂ ಹಾಡುಕೇಳಿ ನಾಲ್ಕು ಒಳ್ಳೆ ಮಾತನಾಡಿದರೆ ಅದೇ ಸಂತೋಷ. ಒಳ್ಳೆ ಮಾತನಾಡಿ ಸಹಾಯವನ್ನೂ ನೀಡಿದರೆ ಅದೇ ಆ ಹೊತ್ತಿನ ಆಹಾರ.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…