ಆಂದೋಲನ ಪುರವಣಿ

ಯೋಗ ಕ್ಷೇಮ : ವಿಟಮಿನ್ ‘ಎ’ ಕೊರತೆಯಾಗದಿರಲಿ

ಆಹಾರವೇ ಆರೋಗ್ಯದ ಗುಟ್ಟು. ಎಲ್ಲ ಜೀವಸತ್ವಗಳನ್ನು ಒಳಗೊಂಡ ಆಹಾರ ಸೇವನೆಯಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಕೆಲವು ಬಾರಿ ದೇಹದಲ್ಲಿ ಕೆಲವು ವಿಟಮಿನ್‌ಗಳ ಕೊರತೆಯಾದಾಗ ಅದು ಬೇರೆ ಬೇರೆ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ಎ,ಬಿ,ಸಿ,ಡಿ ಹೀಗೆ ದೇಹಕ್ಕೆ ಬೇಕಾದ ಜೀವಸತ್ವಗಳನ್ನು ವಿಂಗಡಣೆ ಮಾಡಲಾಗಿದೆ. ಇವುಗಳನ್ನು ಒಂದೊಂದರ ಕೊರತೆಯೂ, ಹೆಚ್ಚು ಆಗುವುದೂ ಸಮಸ್ಯೆಗಳಿಗೆ ಎಡೆಮಾಡಕೊಡುತ್ತದೆ.

ಈಗ ನಮ್ಮ ದೇಹಕ್ಕೆ ವಿಟಮಿನ್ ಎ ಎಷ್ಟು ಮುಖ್ಯ, ಅದರ ಕೊರತೆಯಿಂದ ಏನೇನು ಸಮಸ್ಯೆ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

ವಿಟಮಿನ್ ಎ ಕೊರತೆಯು ಕಣ್ಣುಗಳು, ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

* ಕಣ್ಣಿನ ಸಮಸ್ಯೆಗಳು: ದೃಷ್ಟಿ ಮಂಜಾಗುವುದು, ಕಣ್ಣುಗಳು ಒಣಗಿದಂತಾಗುವುದು, ಕುರುಡುತನ , ಕಾರ್ನಿಯಾಗೆ ಇದು ದಾರಿಯಾಗಬಹುದು. ದೀರ್ಘಕಾಲದವರೆಗೆ ದೇಹದಲ್ಲಿ ವಿಟಮಿನ್ ಎ ಕೊರತೆಯುಂಟಾದರೆ ಅದರಿಂದ ಇರುಳುಗಣ್ಣು ಸಮಸ್ಯೆ ಉಂಟಾಗುತ್ತದೆ.

*ಚರ್ಮದ ಸಮಸ್ಯೆಗಳು: ಚರ್ಮದ ಕೋಶಗಳಿಗೆ ವಿಟಮಿನ್ ಎ ಅತ್ಯವಶ್ಯಕ. ಇದರ ಕೊರತೆಯಿಂದ ಎಸ್ಜಿಮಾ ಅಥವಾ ಒಣ ಚರ್ಮದಂತಹ ಕಾಯಿಲೆ ಉಂಟಾಗಬಹುದು.

ಕೊರತೆ ನಿವಾರಣೆ ಹೇಗೆ?

ಕೆಲವು ಹಣ್ಣು, ತರಕಾರಿ, ಆಹಾರ ಪದಾರ್ಥಗಳಲ್ಲಿ ವಿಟಮಿನ್ ಎ ಹೇರಳವಾಗಿ ಇದ್ದು, ಇವುಗಳ ಸೇವನೆಯಿಂದ ಈ ಜೀವಸತ್ವವನ್ನು ಪಡೆದುಕೊಳ್ಳಬಹುದು.
ಕ್ಯಾರೆಟ್, ಸಿಹಿ ಗೆಣಸು, ಸೊಪ್ಪು, ಹಸಿರು ತರಕಾರಿಗಳು, ಮೊಟ್ಟೆ, ಬೆಣ್ಣೆ ಹಣ್ಣು, ಪಪ್ಪಾಯಿ, ಸೀಬೆಹಣ್ಣು, ಮೀನು, ಮಾಂಸಗಳಲ್ಲಿ ವಿಟಮಿನ್ ಎ ಪ್ರಮಾಣ ಇದೆ.

andolana

Recent Posts

ಯೋಗೇಶ್ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು : ಯೋಗೇಶ್ ಗೌಡ ಕೊಲೆ ಪ್ರಕರಣದ ಅಪರಾಧಿಗಳಿಗೆ ಕೊನೆಗೂ ಶಿಕ್ಷೆ ಪ್ರಕಟವಾಗಿದೆ. 17ನೇ ಆರೋಪಿ ಕಾಂಗ್ರೆಸ್ ಶಾಸಕ ವಿನಯ್…

59 mins ago

ಮೈಸೂರು | ಮನೆಯ ಮಂಚದ ಕೆಳಗೆ ಚಿರತೆ ಪ್ರಕ್ಷತ್ಯ, ಆತಂಕಕ್ಕೀಡಾದ ಮನೆಮಂದಿ

ಮೈಸೂರು : ನಗರದ ಸಿದ್ದಾರ್ಥ ನಗರದಲ್ಲಿ ಚಿರತೆಯೊಂದು ಮನೆಯೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸುರೇಶ್ ಎಂಬುವವರ ಮನೆಯಲ್ಲಿ…

1 hour ago

ಚಾರಣಿಗರ ಮೊಬೈಲ್ ಗೆ ಟ್ರ್ಯಾಕಿಂಗ್ ಆಪ್ ಅಳವಡಿಕೆ ಕಡ್ಡಾಯ: ಈಶ್ವರ ಖಂಡ್ರೆ

ಬೆಂಗಳೂರು : ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಅನುಮೋದಿತ ಚಾರಣ ಪಥಗಳಲ್ಲಿ ಇನ್ನು ಮುಂದೆ ಪ್ರಕೃತಿ ಮಾರ್ಗದರ್ಶಕ…

2 hours ago

ಅಮೆರಿಕ-ಇರಾನ್ ಎರಡನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನ ಸಿದ್ಧತೆ

ಇಸ್ಲಾಮಾಬಾದ್ : ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆ ಪಾಕಿಸ್ತಾನದಲ್ಲಿ ನಡೆಯಲಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು…

2 hours ago

ಕಾರು-ಖಾಸಗಿ ಬಸ್‌ ಡಿಕ್ಕಿ : 6 ಮಂದಿ ಸಜೀವ ದಹನ

ಯಾದಗಿರಿ : ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಹೊತ್ತಿಯುರಿದಿದ್ದು, 6 ಮಂದಿ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ…

4 hours ago

ಕುಡಿಯಲು ಶುದ್ಧ ನೀರಿಲ್ಲದೆ ಆಲಗೂಡು ಗ್ರಾಮಸ್ಥರ ಪರದಾಟ

ಸಿದ್ದೇಗೌಡ ಕೊಡಿಯಾಲ ಶ್ರೀರಂಗಪಟ್ಟಣ : ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಶ್ರೀರಂಗಪಟ್ಟಣ ವಿಧಾನಸಭಾ…

5 hours ago