ಆಂದೋಲನ ಪುರವಣಿ

ಸಿನಿಮಾಲ್‌ : ಅಂದೇ ಬರಲಿದೆ ಮಂಸೋರೆ ಚಿತ್ರ 19.20.21

ಕಳೆದ ವರ್ಷ ಮಾರ್ಚ್ 3ನೇ ತಾರೀಕಿನಂದು ಬೆಂಗಳೂರು ಅಂತಾಷ್ಟ್ರೀಯ ಚಿತ್ರೋತ್ಸವದ 13ನೇ ಆವೃತ್ತಿ ಉದ್ಘಾಟನೆ ಆಗಿತ್ತು. ಕಾಕತಾಳೀಯವಾಗಿ ಅಂದು ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನಾ’ ತೆರೆ ಕಂಡ ದಿನ. ಮುಂದಿನ ದಿನಗಳಲ್ಲಿಉದ್ಘಾಟನೆಉನ್ನು ಮಾರ್ಚ್ 3ರಂದೇ ಮಾಡುವುದಾಗಿ ಚಿತ್ರೋತ್ಸವ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದೇ ಅಲ್ಲದೆ ಅದನ್ನು ‘ವಿಶ್ವ ಕನ್ನಡ ಸಿನಿಮಾ ದಿನ’ ಎಂದು ಕರೆಯುವುದಾಗಿಯೂ ಹೇಳಿದರು.
ಈ ಬಾರಿ ಚಿತ್ರೋತ್ಸವ ಮೂರರಿಂದ ಇಪ್ಪತ್ಮೂರಕ್ಕೆ ಹೋಗಿದೆ. ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿಉನ್ನು ಸಚಿವ ಆರ್.ಅಶೋಕ್ ಅವರ ಹೆಗಲಿಗೆ ವರ್ಗಾಯಿಸಿದ್ದಾರೆ. ಅಶೋಕ್ ಅವರಂತೂ ಕನ್ನಡದ ಚಿತ್ರಗಳಿಗೆ ಆದ್ಯತೆ ಸಿಗಬೇಕು, ಹಳೆಯ ಕನ್ನಡ ಕ್ಲಾಸಿಕ್‌ಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಬೇಕು ಎಂದು ಸಲಹೆ ಮಾಡಿದ್ದಾರಂತೆ. ಅದ ಕಾರ್ಯಗತವಾಗುವ ಸೂಚನೆ ಇದೆ. ಕನ್ನಡ ಜನಪ್ರಿಯ ಚಿತ್ರಗಳ ಪನೋರಮಾ ವಿಭಾಗವೊಂದು ಈ ಬಾರಿ ಸೇರಿಕೊಂಡಿದೆ. ಅದರ ಜೊತೆಗೆ ಕನ್ನಡ ಮತ್ತು ಅಂತಾರಾಷ್ಟ್ರೀಯ ಕ್ಲಾಸಿಕ್‌ಗಳ ಮರುಯಾನವೂಇದೆ. ಕಳೆದ ವರ್ಷಕ್ಕಿಂತ ಇಪ್ಪತ್ತು ದಿನ ತಡವಾದರೂ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಕನ್ನಡ ಚಿತ್ರಗಳ ವಿಜೃಂಭಣೆ ಇರಲಿದೆ!
ಕನ್ನಡ ಸಿನಿಮಾ ದಿನ, ಮಾರ್ಚ್ 3ರಂದು ತೆರೆಗೆ ಬರಲಿರುವ ಚಿತ್ರ ‘ಕಡಲ ತೀರದ ಭಾರ್ಗವ’. ಕಡಲ ತೀರದ ಭಾರ್ಗವ ಎಂದಾಕ್ಷಣ ನಿಮಗೆ ಶಿವರಾಮ ಕಾರಂತರನೆನಪಾಗಬಹುದು. ಅವರು ಕನ್ನಡ ಚಿತ್ರಗಳು ಮಾತನಾಡುವ ಮೊದಲೇ ಮೂಕಿಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ ಸಾಹಸಿ. ‘ಡೊಮಿಂಗೋ’ ಮತ್ತು ‘ಭೂತರಾಜ್ಯ’ ಅವರು ನಿರ್ದೇಶಿಸಿದ್ದ ಮೂಕಿ ಚಿತ್ರಗಳು.
‘ಇದು ಅವರ ಜೀವನ ಕಥೆೆಯನೂ ಅಲ್ಲ. ಇದು ಕಡಲ ತೀರದಲ್ಲಿ ವಾಸಿಸುವ ಭಾರ್ಗವ ಹೆಸರಿನ ಯುವಕನ ಕಥೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕರಾದ ಪನ್ನಗ ಸೋಮಶೇಖರ್.
ಈ ಚಿತ್ರದ ಮೊದಲ ಟಿಕೆಟಿನ ಹರಾಜಿನಲ್ಲಿ ಬಂದ ಹಣವನ್ನು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡಲು ಚಿತ್ರದ ನಿರ್ಮಾಪಕರಾದ ಪಟೇಲ್ ವರುಣ್‌ರಾಜು ಹಾಗೂ ಭರತ್‌ಗೌಡ ನಿರ್ಧರಿಸಿದ್ದಾರೆ. ಅಂದು ನಡೆದ ಹರಾಜಿನಲ್ಲಿ ಈ ಟಿಕೆಟನ್ನು ಕೊಂಡವರು ಅಂದು ಬಂದಿದ್ದ ಮೋಹನ್ ರಾಜು. ಅವರು 2 ಲಕ್ಷ ರೂ. ನೀಡಿ ಈ ಚಿತ್ರದ ಮೊದಲ ಟಿಕೆಟ್ ಪಡೆದುಕೊಂಡರು. ಅವರು ಟಿಕೆಟನ್ನು ಈ ಬೆಲೆಗೆ ಕೊಂಡುಕೊಂಡದ್ದೇ ಅಲ್ಲದೆ, ‘ಕ’ಕಾರದಲ್ಲಿ ಆರಂಭವಾದ ಹೆಸರುಳ್ಳ ‘ಕೆ.ಜಿ.ಎಫ್’, ‘ಕಾಂತಾರ’ ಚಿತ್ರಗಳುಗೆದ್ದಂತೆ ‘ಕಡಲ ತೀರದ ಭಾರ್ಗವ’ ಕೂಡ ಪ್ರಚಂಡ ಯಶಸ್ಸು ಕಾಣಲಿ ಎಂದು ಹಾರೈಸಿದರು. ನಿರ್ಮಾಪಕರಲ್ಲಿ  ಪಟೇಲ್ ವರದರಾಜು ಚಿತ್ರದಲ್ಲಿ ಭಾರ್ಗವ ಪಾತ್ರವನ್ನು ನಿರ್ವಹಿಸಿದ್ದಾರೆ.
ಮಂಸೋರೆ ನಿರ್ದೇಶನದ ‘19.20.21 ಚಿತ್ರ ಕೂಡ ಮಾರ್ಚ್ 3ರಂದೇ ತೆರೆಗೆ ಬರಲಿದೆ. ಇದು ಕೂಡ ಕರಾವಳಿಯ ಕಥಾನಕ ಎನ್ನುವುದು ವಿಶೇಷ. ಮಂಸೋರೆ ಪ್ರಕಾರ ನೈಜಘಟನೆ ಆಧರಿಸಿದ ಸಿನಿಮಾವಿದು. ಕರಾವಳಿಯಲ್ಲಿ ಎರಡು ದಶಕಗಳ ಕಾಲ ಒಂದು ಸಮುದಾಯ ಅನುಭವಿಸಿದ ನೋವು, ಆ ನೋವಿನ ವಿರುದ್ಧ ನಡೆಸಿದ ಹೋರಾಟ ಈ ಸಿನಿಮಾ ಮಾಡಲು ಸ್ಪೂರ್ತಿ.

andolanait

Recent Posts

ಕೊಡಗು‌ ಸಿದ್ದಾಪುರ ದರೋಡೆ ಪ್ರಕರಣ ಭೇದಿಸಲು ವಿಶೇಷ ಕಾರ್ಯಪಡೆ ಸಜ್ಜು

ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…

8 hours ago

ಚಿರತೆ ಮರಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…

8 hours ago

ಹುಣಸೂರಿನಲ್ಲಿ ಹಾಡಹಗಲೇ ಚಿನ್ನಭರಣ ದರೋಡೆ : ಐಜಿಪಿ ಬೋರಲಿಂಗಯ್ಯ ಹೇಳಿದ್ದೇನು?

ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್‌ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್‌…

9 hours ago

ವರುಣಾ ನಾಲೆಯಲ್ಲಿ ಮಹಿಳೆ ಶವ ಪತ್ತೆ : ಚಿನ್ನಕ್ಕಾಗಿ ಕೊಲೆ ಶಂಕೆ?

ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…

10 hours ago

ವಾಯುನೆಲೆ ಮೇಲೆ ಭಾರತದ ದಾಳಿ ಒಪ್ಪಿಕೊಂಡ ಪಾಕಿಸ್ತಾನ

ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…

10 hours ago

ಸಿನಿ ಪಯಣಕ್ಕೆ ದಳಪತಿ ವಿಜಯ್‌ ವಿದಾಯ : ಭಾವುಕರಾಗಿ ಅಭಿಮಾನಿಗಳಿಗೆ ಹೇಳಿದ್ದೇನು?

ಚೆನ್ನೈ : ದಳಪತಿ ವಿಜಯ್‌ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…

10 hours ago