ಆಂದೋಲನ ಪುರವಣಿ

ಸಿನಿಮಾಲ್‌ : ಅಂದೇ ಬರಲಿದೆ ಮಂಸೋರೆ ಚಿತ್ರ 19.20.21

ಕಳೆದ ವರ್ಷ ಮಾರ್ಚ್ 3ನೇ ತಾರೀಕಿನಂದು ಬೆಂಗಳೂರು ಅಂತಾಷ್ಟ್ರೀಯ ಚಿತ್ರೋತ್ಸವದ 13ನೇ ಆವೃತ್ತಿ ಉದ್ಘಾಟನೆ ಆಗಿತ್ತು. ಕಾಕತಾಳೀಯವಾಗಿ ಅಂದು ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನಾ’ ತೆರೆ ಕಂಡ ದಿನ. ಮುಂದಿನ ದಿನಗಳಲ್ಲಿಉದ್ಘಾಟನೆಉನ್ನು ಮಾರ್ಚ್ 3ರಂದೇ ಮಾಡುವುದಾಗಿ ಚಿತ್ರೋತ್ಸವ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದೇ ಅಲ್ಲದೆ ಅದನ್ನು ‘ವಿಶ್ವ ಕನ್ನಡ ಸಿನಿಮಾ ದಿನ’ ಎಂದು ಕರೆಯುವುದಾಗಿಯೂ ಹೇಳಿದರು.
ಈ ಬಾರಿ ಚಿತ್ರೋತ್ಸವ ಮೂರರಿಂದ ಇಪ್ಪತ್ಮೂರಕ್ಕೆ ಹೋಗಿದೆ. ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿಉನ್ನು ಸಚಿವ ಆರ್.ಅಶೋಕ್ ಅವರ ಹೆಗಲಿಗೆ ವರ್ಗಾಯಿಸಿದ್ದಾರೆ. ಅಶೋಕ್ ಅವರಂತೂ ಕನ್ನಡದ ಚಿತ್ರಗಳಿಗೆ ಆದ್ಯತೆ ಸಿಗಬೇಕು, ಹಳೆಯ ಕನ್ನಡ ಕ್ಲಾಸಿಕ್‌ಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಬೇಕು ಎಂದು ಸಲಹೆ ಮಾಡಿದ್ದಾರಂತೆ. ಅದ ಕಾರ್ಯಗತವಾಗುವ ಸೂಚನೆ ಇದೆ. ಕನ್ನಡ ಜನಪ್ರಿಯ ಚಿತ್ರಗಳ ಪನೋರಮಾ ವಿಭಾಗವೊಂದು ಈ ಬಾರಿ ಸೇರಿಕೊಂಡಿದೆ. ಅದರ ಜೊತೆಗೆ ಕನ್ನಡ ಮತ್ತು ಅಂತಾರಾಷ್ಟ್ರೀಯ ಕ್ಲಾಸಿಕ್‌ಗಳ ಮರುಯಾನವೂಇದೆ. ಕಳೆದ ವರ್ಷಕ್ಕಿಂತ ಇಪ್ಪತ್ತು ದಿನ ತಡವಾದರೂ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಕನ್ನಡ ಚಿತ್ರಗಳ ವಿಜೃಂಭಣೆ ಇರಲಿದೆ!
ಕನ್ನಡ ಸಿನಿಮಾ ದಿನ, ಮಾರ್ಚ್ 3ರಂದು ತೆರೆಗೆ ಬರಲಿರುವ ಚಿತ್ರ ‘ಕಡಲ ತೀರದ ಭಾರ್ಗವ’. ಕಡಲ ತೀರದ ಭಾರ್ಗವ ಎಂದಾಕ್ಷಣ ನಿಮಗೆ ಶಿವರಾಮ ಕಾರಂತರನೆನಪಾಗಬಹುದು. ಅವರು ಕನ್ನಡ ಚಿತ್ರಗಳು ಮಾತನಾಡುವ ಮೊದಲೇ ಮೂಕಿಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ ಸಾಹಸಿ. ‘ಡೊಮಿಂಗೋ’ ಮತ್ತು ‘ಭೂತರಾಜ್ಯ’ ಅವರು ನಿರ್ದೇಶಿಸಿದ್ದ ಮೂಕಿ ಚಿತ್ರಗಳು.
‘ಇದು ಅವರ ಜೀವನ ಕಥೆೆಯನೂ ಅಲ್ಲ. ಇದು ಕಡಲ ತೀರದಲ್ಲಿ ವಾಸಿಸುವ ಭಾರ್ಗವ ಹೆಸರಿನ ಯುವಕನ ಕಥೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕರಾದ ಪನ್ನಗ ಸೋಮಶೇಖರ್.
ಈ ಚಿತ್ರದ ಮೊದಲ ಟಿಕೆಟಿನ ಹರಾಜಿನಲ್ಲಿ ಬಂದ ಹಣವನ್ನು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡಲು ಚಿತ್ರದ ನಿರ್ಮಾಪಕರಾದ ಪಟೇಲ್ ವರುಣ್‌ರಾಜು ಹಾಗೂ ಭರತ್‌ಗೌಡ ನಿರ್ಧರಿಸಿದ್ದಾರೆ. ಅಂದು ನಡೆದ ಹರಾಜಿನಲ್ಲಿ ಈ ಟಿಕೆಟನ್ನು ಕೊಂಡವರು ಅಂದು ಬಂದಿದ್ದ ಮೋಹನ್ ರಾಜು. ಅವರು 2 ಲಕ್ಷ ರೂ. ನೀಡಿ ಈ ಚಿತ್ರದ ಮೊದಲ ಟಿಕೆಟ್ ಪಡೆದುಕೊಂಡರು. ಅವರು ಟಿಕೆಟನ್ನು ಈ ಬೆಲೆಗೆ ಕೊಂಡುಕೊಂಡದ್ದೇ ಅಲ್ಲದೆ, ‘ಕ’ಕಾರದಲ್ಲಿ ಆರಂಭವಾದ ಹೆಸರುಳ್ಳ ‘ಕೆ.ಜಿ.ಎಫ್’, ‘ಕಾಂತಾರ’ ಚಿತ್ರಗಳುಗೆದ್ದಂತೆ ‘ಕಡಲ ತೀರದ ಭಾರ್ಗವ’ ಕೂಡ ಪ್ರಚಂಡ ಯಶಸ್ಸು ಕಾಣಲಿ ಎಂದು ಹಾರೈಸಿದರು. ನಿರ್ಮಾಪಕರಲ್ಲಿ  ಪಟೇಲ್ ವರದರಾಜು ಚಿತ್ರದಲ್ಲಿ ಭಾರ್ಗವ ಪಾತ್ರವನ್ನು ನಿರ್ವಹಿಸಿದ್ದಾರೆ.
ಮಂಸೋರೆ ನಿರ್ದೇಶನದ ‘19.20.21 ಚಿತ್ರ ಕೂಡ ಮಾರ್ಚ್ 3ರಂದೇ ತೆರೆಗೆ ಬರಲಿದೆ. ಇದು ಕೂಡ ಕರಾವಳಿಯ ಕಥಾನಕ ಎನ್ನುವುದು ವಿಶೇಷ. ಮಂಸೋರೆ ಪ್ರಕಾರ ನೈಜಘಟನೆ ಆಧರಿಸಿದ ಸಿನಿಮಾವಿದು. ಕರಾವಳಿಯಲ್ಲಿ ಎರಡು ದಶಕಗಳ ಕಾಲ ಒಂದು ಸಮುದಾಯ ಅನುಭವಿಸಿದ ನೋವು, ಆ ನೋವಿನ ವಿರುದ್ಧ ನಡೆಸಿದ ಹೋರಾಟ ಈ ಸಿನಿಮಾ ಮಾಡಲು ಸ್ಪೂರ್ತಿ.

andolanait

Recent Posts

ಮೈಸೂರು ಕೇಂದ್ರೀಯ ಸಂಪರ್ಕ ಬ್ಯೂರೋ-CBC ಕಚೇರಿ ಸ್ಥಗಿತ ಬೇಡ : ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಸಚಿವ ಎಚ್‌ಡಿಕೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…

6 hours ago

ಉನ್ನಾವೋ ಅತ್ಯಾಚಾರ ಪ್ರಕರಣ : ರಾಹುಲ್‌ಗಾಂಧಿ ಭೇಟಿಯಾದ ಸಂತ್ರಸ್ತೆ ಕುಟುಂಬ

ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…

6 hours ago

ಉನ್ನಾವೊ ಪ್ರಕರಣ : ಸೆಂಗರ್‌ ಶಿಕ್ಷೆ ಅಮಾನತು ; ಸಂತ್ರಸ್ತೆ ತಾಯಿ ಹೇಳಿದಿಷ್ಟು?

ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…

7 hours ago

ಚಂದನವನದಲ್ಲಿ ಸ್ಟಾರ್‌ ವಾರ್‌ : ನಟಿ ರಕ್ಷಿತಾ ಪ್ರೇಮ್‌ ಹೇಳಿದಿಷ್ಟು?

ಬೆಂಗಳೂರು : ಮಾರ್ಕ್‌ʼ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ಕಿಚ್ಚ ಸುದೀಪ್‌ ಹೇಳಿದ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…

7 hours ago

ರೈತರಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಸರ್ಕಾರ ಬದ್ದ : ಸಚಿವ ಕೆ.ವೆಂಕಟೇಶ್

ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…

7 hours ago

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ; ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…

7 hours ago