ಜಿಲ್ಲೆಗಳು

ಶಿವರಾತ್ರಿ ಪ್ರಯುಕ್ತ 5 ಲಕ್ಷ ರುದ್ರಾಕ್ಷಿಯಿಂದ 21 ಅಡಿ ಶಿವಲಿಂಗ ಸ್ಥಾಪನೆ

ಶಿವರಾತ್ರಿ ಪ್ರಯುಕ್ತ ನಗರದ ಲಲಿತಮಹಲ್ ಅರಮನೆ ಬಳಿ ಇರುವ ಮೈದಾನದಲ್ಲಿ ಸ್ಥಾಪನೆ

ಮೈಸೂರು: ನಗರದ ಲಲಿತಮಹಲ್ ಅರಮನೆ ಬಳಿ ಇರುವ ಮೈದಾನದಲ್ಲಿ 5 ಲಕ್ಷಕ್ಕೂ ಅಧಿಕ ರುದ್ರಾಕ್ಷಿಗಳಿಂದ ನಿರ್ಮಿಸಿರುವ ತ್ರೀಡಿಯಿಂದ ಕಣ್ಮನ ಸೆಳೆಯುವ 21 ಅಡಿ ಎತ್ತರದ ಶಿವಲಿಂಗ ನಿರ್ಮಿಸಲಾಗಿದೆ.

ಮಹಾಶಿವರಾತ್ರಿ ಅಂಗವಾಗಿ ಫೆ.22ರವರೆಗೆ ಹರಿದ್ವಾರದಿಂದ ತಂದು ನಿರ್ಮಿಸಿರುವ ರುದ್ರಾಕ್ಷಿಯ ಬೃಹತ್ ಶಿವಲಿಂಗ ಸಾರ್ವಜನಿಕರ ಉಚಿತ ದರ್ಶನಕ್ಕೆ ನಿತ್ಯ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಲನಹಳ್ಳಿ ಸೇವಾ ಕೇಂದ್ರದಿಂದ ಹಿವಾಚ್ಛಾದಿತ ಕೈಲಾಸ ಪರ್ವತದೊಂದಿಗೆ ನಿರ್ಮಾಣಗೊಂಡಿರುವ ಶಿವಲಿಂಗ ತ್ರೀಡಿ ಎಫೆಕ್ಟ್ ಇರುವುದು ವಿಶೇಷ ಹಿಮಾಲಯದ ಪ್ರತಿಕೃತಿ ನಿರ್ಮಿಸಿ, ಅದರ ಮೇಲೆ 21 ಅಡಿ ಎತ್ತರ, 20 ಅಡಿ ಅಗಲದ ಶಿವಲಿಂಗವನ್ನು 5,16,108 ರುದ್ರಾಕ್ಷಿಗಳಿಂದ ನಿರ್ಮಿಸಲಾಗಿದ  100 100  ಅಡಿ ಪ್ರದೇಶದಲ್ಲಿ ಪಿಒಪಿ, ಮರದ ಕಟ್ಟಿಗೆ ಗೋಣಿಯನ್ನು ಬಳಸಿ ಹಿವಾಚ್ಛಾದಿತ ಕೈಲಾಸ ಪರ್ವತದ ಪ್ರತಿಕೃತಿ ಸಿದ್ಧವಾಗಿದೆ. 50 ಕ್ಕೂ ಅಧಿಕ ಮಂದಿ ವಾರಕ್ಕೂ ಹೆಚ್ಚು ಕಾಲ ಪ್ರತಿಕೃತಿ ನಿರ್ಮಾಣ ಕಾರ್ಯ ನಡೆಸಿದ್ದಾರೆ.

ದ್ವಾದಶ ಲಿಂಗದರ್ಶನ: ಬೃಹತ್ ರುದ್ರಾಕ್ಷಿ ಶಿವಲಿಂಗದ ಜತೆಗೆ ದ್ವಾದಶ ಲಿಂಗ ದರ್ಶನ ಮಾದರಿಯನ್ನು ಪ್ರತಿಷ್ಠಾಪಿಸಲಾಗಿದೆ. ಮಹಾಶಿವರಾತ್ರಿಯಂದು ಭಾರತದಾದ್ಯಂತ ಜನರು ಹಿಮಾಲಯ, ಕೇದಾರನಾಥ, ಕಾಶಿ ವಿಶ್ವನಾಥ ಸೇರಿದಂತೆ ಸ್ಥಳೀಯ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರಂತೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಅಷ್ಟು ದೂರ ತೆರಳಲು ಸಾಧ್ಯವಾಗದ ಜನರಿಗೆ ಅಲ್ಲಿನ ಪ್ರತಿಕೃತಿಗಳನ್ನು ಮೈಸೂರಿನ ಕೆಲವೆಡೆ ವಿಭಿನ್ನವಾಗಿ ನಿರ್ಮಿಸಿ, ವಿಶೇಷ ಅನುಭವವನ್ನು ನೀಡುತ್ತಿದೆ. ಕಳೆದ ಬಾರಿ ಬೃಹತ್ ತೆಂಗಿನಕಾಯಿ ಶಿವಲಿಂಗ ನಿರ್ಮಾಣ ಮಾಡಿ ಎಲ್ಲರ ಗಮನ ಸೆಳೆದಿತ್ತು. ಕೈಲಾಸ ಪರ್ವತದ ಮಾದರಿಯ ಒಳ ಭಾಗದಲ್ಲಿ ಧ್ಯಾನ ಗುಹೆಯೂ ನಿರ್ಮಾಣಗೊಳ್ಳುತ್ತಿದ್ದು, ಅದರ ಸುತ್ತಲೂ ಜೋರ್ತಿಲಿಂಗ ಮತ್ತು ಆಧ್ಯಾತ್ಮಿಕ ಚಿಂತನೆ, ಶಿವ ಚರಿತ್ರೆಗಳು ಇವೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ರಂಗನಾಥ್ ತಿಳಿಸಿದ್ದಾರೆ.

andolanait

Recent Posts

ಹೆಚ್ಚುತ್ತಿರುವ ಯುವತಿಯರ ಆತ್ಮಹತ್ಯೆ ; ಯುವತಿಯರಿಗೆ ಕಂಗನಾ ರಣಾವತ್ ಕಿವಿಮಾತು

ದೆಹಲಿ : ಮದುವೆಯಾದ ಯುವತಿಯರು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಯುವತಿಯರಿಗೆ…

5 hours ago

ಆ.31ರೊಳಗೆ ಜಿಬಿಎ ಚುನಾವಣೆ ನಡೆಸಿ ; ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅಂತಿಮ ಗಡುವು

ಹೊಸದಿಲ್ಲಿ : ಆಗಸ್ಟ್ ೩೧ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯ…

7 hours ago

ಸಫಾರಿಗಳಲ್ಲಿ ಇನ್ಮುಂದೆ ತೆರೆದ ವಾಹನಕ್ಕೆ ಅವಕಾಶವಿಲ್ಲ : ಈಶ್ವರ ಖಂಡ್ರೆ

ಸಫಾರಿ ಕ್ಯಾಂಪರ್ ಗಳಿಗೆ ಕಬ್ಬಿಣದ ಸರಳು, ಒಡೆಯದ ಗಾಜು ಅಳವಡಿಸಲು ಖಂಡ್ರೆ ಸೂಚನೆ ಬೆಂಗಳೂರು :  ರಾಜ್ಯದ ಐದು ಹುಲಿ…

9 hours ago

ಮ.ಬೆಟ್ಟ | ಮರದ ಕೊಂಬೆ ಬಿದ್ದು ಮೂವರಿಗೆ ಗಾಯ

ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಭಕ್ತರ ಮೇಲೆ ಮರದ ಕೊಂಬೆ ಬಿದ್ದು ಮೂವರು ಗಾಯಗೊಂಡಿರುವ…

11 hours ago

ಔಷಧಿ ಮಾರಾಟಗಾರರ ಸಂಘ ಕರೆ ನೀಡಿದ್ದ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ಆನ್‍ಲೈನ್‍ನಲ್ಲಿ ಔಷಧಿಗಳ ಮಾರಾಟ ವಿರೋಧಿಸಿ ಅಖಿಲ ಭಾರತ ಔಷಧಿ ಮಾರಾಟಗಾರರ ಸಂಘ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರ…

14 hours ago

ಯಳಂದೂರು: ಬೋನಿಗೆ ಬಿದ್ದ ಚಿರತೆ

ಯಳಂದೂರು: ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆಯಾಗಿದೆ. ತಾಲ್ಲೂಕಿನ ಗುಂಬಳ್ಳಿ ಗ್ರಾಮದಲ್ಲಿ…

14 hours ago