ಮೈಸೂರು: ನಗರದ ಲಲಿತಮಹಲ್ ಅರಮನೆ ಬಳಿ ಇರುವ ಮೈದಾನದಲ್ಲಿ 5 ಲಕ್ಷಕ್ಕೂ ಅಧಿಕ ರುದ್ರಾಕ್ಷಿಗಳಿಂದ ನಿರ್ಮಿಸಿರುವ ತ್ರೀಡಿಯಿಂದ ಕಣ್ಮನ ಸೆಳೆಯುವ 21 ಅಡಿ ಎತ್ತರದ ಶಿವಲಿಂಗ ನಿರ್ಮಿಸಲಾಗಿದೆ.
ಮಹಾಶಿವರಾತ್ರಿ ಅಂಗವಾಗಿ ಫೆ.22ರವರೆಗೆ ಹರಿದ್ವಾರದಿಂದ ತಂದು ನಿರ್ಮಿಸಿರುವ ರುದ್ರಾಕ್ಷಿಯ ಬೃಹತ್ ಶಿವಲಿಂಗ ಸಾರ್ವಜನಿಕರ ಉಚಿತ ದರ್ಶನಕ್ಕೆ ನಿತ್ಯ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಲನಹಳ್ಳಿ ಸೇವಾ ಕೇಂದ್ರದಿಂದ ಹಿವಾಚ್ಛಾದಿತ ಕೈಲಾಸ ಪರ್ವತದೊಂದಿಗೆ ನಿರ್ಮಾಣಗೊಂಡಿರುವ ಶಿವಲಿಂಗ ತ್ರೀಡಿ ಎಫೆಕ್ಟ್ ಇರುವುದು ವಿಶೇಷ ಹಿಮಾಲಯದ ಪ್ರತಿಕೃತಿ ನಿರ್ಮಿಸಿ, ಅದರ ಮೇಲೆ 21 ಅಡಿ ಎತ್ತರ, 20 ಅಡಿ ಅಗಲದ ಶಿವಲಿಂಗವನ್ನು 5,16,108 ರುದ್ರಾಕ್ಷಿಗಳಿಂದ ನಿರ್ಮಿಸಲಾಗಿದ 100 100 ಅಡಿ ಪ್ರದೇಶದಲ್ಲಿ ಪಿಒಪಿ, ಮರದ ಕಟ್ಟಿಗೆ ಗೋಣಿಯನ್ನು ಬಳಸಿ ಹಿವಾಚ್ಛಾದಿತ ಕೈಲಾಸ ಪರ್ವತದ ಪ್ರತಿಕೃತಿ ಸಿದ್ಧವಾಗಿದೆ. 50 ಕ್ಕೂ ಅಧಿಕ ಮಂದಿ ವಾರಕ್ಕೂ ಹೆಚ್ಚು ಕಾಲ ಪ್ರತಿಕೃತಿ ನಿರ್ಮಾಣ ಕಾರ್ಯ ನಡೆಸಿದ್ದಾರೆ.
ದ್ವಾದಶ ಲಿಂಗದರ್ಶನ: ಬೃಹತ್ ರುದ್ರಾಕ್ಷಿ ಶಿವಲಿಂಗದ ಜತೆಗೆ ದ್ವಾದಶ ಲಿಂಗ ದರ್ಶನ ಮಾದರಿಯನ್ನು ಪ್ರತಿಷ್ಠಾಪಿಸಲಾಗಿದೆ. ಮಹಾಶಿವರಾತ್ರಿಯಂದು ಭಾರತದಾದ್ಯಂತ ಜನರು ಹಿಮಾಲಯ, ಕೇದಾರನಾಥ, ಕಾಶಿ ವಿಶ್ವನಾಥ ಸೇರಿದಂತೆ ಸ್ಥಳೀಯ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರಂತೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಅಷ್ಟು ದೂರ ತೆರಳಲು ಸಾಧ್ಯವಾಗದ ಜನರಿಗೆ ಅಲ್ಲಿನ ಪ್ರತಿಕೃತಿಗಳನ್ನು ಮೈಸೂರಿನ ಕೆಲವೆಡೆ ವಿಭಿನ್ನವಾಗಿ ನಿರ್ಮಿಸಿ, ವಿಶೇಷ ಅನುಭವವನ್ನು ನೀಡುತ್ತಿದೆ. ಕಳೆದ ಬಾರಿ ಬೃಹತ್ ತೆಂಗಿನಕಾಯಿ ಶಿವಲಿಂಗ ನಿರ್ಮಾಣ ಮಾಡಿ ಎಲ್ಲರ ಗಮನ ಸೆಳೆದಿತ್ತು. ಕೈಲಾಸ ಪರ್ವತದ ಮಾದರಿಯ ಒಳ ಭಾಗದಲ್ಲಿ ಧ್ಯಾನ ಗುಹೆಯೂ ನಿರ್ಮಾಣಗೊಳ್ಳುತ್ತಿದ್ದು, ಅದರ ಸುತ್ತಲೂ ಜೋರ್ತಿಲಿಂಗ ಮತ್ತು ಆಧ್ಯಾತ್ಮಿಕ ಚಿಂತನೆ, ಶಿವ ಚರಿತ್ರೆಗಳು ಇವೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ರಂಗನಾಥ್ ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…
ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…
ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…
ಪ್ರಶಾಂತ್ ಎನ್.ಮಲ್ಲಿಕ್ ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ…
ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…