ಆಂದೋಲನ ಪುರವಣಿ

ಸಿನಿಮಾಲ್‌: ಈ ವಾರ ತೆರೆಗೆ ಲಗ್ಗೆ ಇಡುತ್ತಿರುವ 4 ಚಿತ್ರಗಳು

ತಾಜ್‌ಮಹಲ್ 2

ದೇವರಾಜ್ ಕುಮಾರ್ ನಿರ್ದೇಶಿಸಿ, ಮುಖ್ಯಪಾತ್ರದಲ್ಲಿ ನಟಿಸಿರುವ ಚಿತ್ರ ‘ತಾಜ್‌ಮಹಲ್ ೨’. ಸಮೃದ್ಧಿ, ಶೋಭರಾಜ್, ವಿಕ್ಟರಿ ವಾಸು, ಸುಧಿ, ಕಡ್ಡಿಪುಡಿ ಚಂದ್ರು ತಾರಾಗಣದಲ್ಲಿದ್ದಾರೆ. ಮನವರ್ ಸೆ ನವಲಗುಂದ ಗೀತರಚನೆ, ಸಂಭಾಷಣೆ, ವಿಕ್ರಂ ಸಿಲ್ವ ಸಂಗೀತ ಸಂೋಂಜನೆ, ವೀನಸ್ ಮೂರ್ತಿ ಛಾಯಾಗ್ರಹಣ, ವಿಜಯಕುಮಾರ್ ಸಂಕಲನ ಚಿತ್ರಕ್ಕಿದೆ.


ಫ್ಯಾಂಟಸಿ

ಪವನ್ ಡ್ರೀಂ ಫಿಲಂಸ್ ಲಾಂಛನದಲ್ಲಿ ಪವನ್‌ಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ ‘ಫ್ಯಾಂಟಸಿ’. ಆರ್.ಎಸ್.ಗಣೇಶ್ ನಾರಾಯಣ್ ಸಂಗೀತ ಸಂೋಂಜನೆ, ಪಿ.ಕೆ.ಎಚ್.ದಾಸ್ ಛಾಯಾಗ್ರಹಣ ಇರುವ ಚಿತ್ರದಲ್ಲಿ ಪ್ರಿಯಾಂಕ ಶಿವಣ್ಣ, ಅನುರಾಗ್ ಎಸ್. ಪಾಟೀಲ್, ರಾಜ ಬಲವಾಡಿ, ಹರಿಣಿ ಶ್ರೀಕಾಂತ್, ಹೇಮಂತ್ ಶ್ರೀನಿವಾಸ್, ಗೌರೀಶ್ ಅಕ್ಕಿ ನಟಿಸಿದ್ದಾರೆ.


ಮರ್ಕಟ

ಗಣೇಶ್ ರಾಂಪುರ ನಿರ್ಮಾಣದ ಚಿತ್ರ ‘ಮರ್ಕಟ’. ಇದನ್ನು ವಿಜಯ್ ರಾಜ್ ನಿರ್ದೇಶಿಸಿ, ನಿರ್ಮಿಸಿದ್ದಾರೆ. ರಾಜ್, ಗಣೇಶ್, ಪೂಜಾ, ಬದ್ರಿ, ಚರಣ್, ರುಚಿತಾ ತಾರಾಗಣದಲ್ಲಿರುವ ಚಿತ್ರಕ್ಕೆ ಕೃಷ್ಣ ಮೂರ್ತಿ ಗೀತರಚನೆ, ಕೆವಿನ್ ಎಂ. ರಾಗಸಂೋಂಜನೆ, ರಾಜಭಾಸ್ಕರ್ ಹಿನ್ನೆಲೆ ಸಂಗೀತವಿದೆ.


ಸರ್ವಸ್ಯ ನಾಟ್ಯಂ

ಡಿಎಂಕೆ ಆಡ್ ಜೋನ್ ಲಾಂಛನದಲ್ಲಿ ಮನೋಜ್ ವರ್ಮ ನಿರ್ಮಿಸಿರುವ ಚಿತ್ರ ‘ಸರ್ವಸ್ಯ ನಾಟ್ಯಂ’. ಮಂಜುನಾಥ್ ಬಿ.ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರಕ್ಕೆ ಹರ್ಷ ಚಲುವರಾಜ್ ಸಂಭಾಷಣೆ ಇದೆ. ನೂರಾರು ಮಕ್ಕಳ ಜೊತೆ, ಅನಾಥ ಮಕ್ಕಳಿಗೆ ನೃತ್ಯ ಹೇಳಿಕೊಡುವ ಶಿಕ್ಷಕನ ಪಾತ್ರದಲ್ಲಿ ಬಿಗ್‌ಬಾಸ್ ಖ್ಯಾತಿಯ ರಿಷಿ ಕುಮಾರ ಸ್ವಾಮೀಜಿ ನಟಿಸಿದ್ದಾರೆ.
 

andolana

Recent Posts

2026ರ ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಂಬಾರಿ ಸಾರಥಿ ಅಭಿಮನ್ಯುವಿಗೆ ಕೊಕ್‌

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಈ ಬಾರಿ ದಸರಾ ಗಜಪಡೆಯ ಪಟ್ಟಿಯಲ್ಲಿ ಮಹತ್ವದ…

1 hour ago

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡು ಸರ್ಕಾರದಿಂದಲೂ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

ಚೆನ್ನೈ: ಹನೂರು ಶೂಟೌಟ್ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರದಿಂದಲೂ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.…

2 hours ago

ಗ್ಯಾರೇಜ್‌ಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಗುಂಡ್ಲುಪೇಟೆ: ಪಟ್ಟಣದ ಕೇರಳ ರಸ್ತೆಯಲ್ಲಿರುವ ಗ್ಯಾರೇಜ್‌ಗೆ ಬೆಂಕಿ ತಗುಲಿ ಸಂಪೂರ್ಣ ಗ್ಯಾರೇಜ್ ಸುಟ್ಟುಹೋಗಿರುವ ಘಟನೆ ನಡೆದಿದೆ. ಪಟ್ಟಣದ ವಾಹಿದ್ ಎಂಬುವವರಿಗೆ…

2 hours ago

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 4917 ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ: ರಾಜ್ಯದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ವಿಚಾರವೂ ಚರ್ಚೆಗೆ ಬಂದಿದ್ದು, ಕೇವಲ 1951 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿರುವ ಡ್ಯಾಂನಿಂದ…

3 hours ago

ಕಾಡಾನೆಗಳ ಸೆರೆಗೆ ಕಾರ್ಯಾಚರಣೆ: ಮುಂಜಾಗ್ರತಾ ಕ್ರಮವಾಗಿ ಸೆಕ್ಷನ್ 144 ಜಾರಿ

ಕೊಡಗು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಮೂರು ಗಂಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಆದೇಶ ನೀಡಿದೆ. ಇಂದು ಬೆಳಿಗ್ಗೆ 10…

8 hours ago

ಹನೂರು ಎನ್‌ಕೌಂಟರ್: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು: ACF ಮರಿಸ್ವಾಮಿ

ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಹನೂರು ಎನ್‌ಕೌಂಟರ್ ಬಗ್ಗೆ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ACF ಮರಿಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ…

8 hours ago