ಮೈಸೂರು: ನಗರದ ಐನೆಕ್ಸ್ ಹಾಗೂ ಡಿಆರ್ಸಿ ಚಿತ್ರಮಂದಿರಗಳಲ್ಲಿ ಮಂಗಳವಾರದಿಂದ ಪ್ರಾರಂಭವಾದ ದಸರಾ ಚಲನಚಿತ್ರೋತ್ಸವಕ್ಕೆ ಮೊದಲ ದಿನ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಐನೆಕ್ಸ್ನ ೨, ೩ ಮತ್ತು ೪ನೇ ಸ್ಕ್ರೀನ್ನಲ್ಲಿ ಚಿತ್ರಗಳ ಪ್ರದರ್ಶನಗೊಂಡರೆ, ಡಿಆರ್ಸಿಯ ಒಂದು ಸ್ಕ್ರೀನ್ನಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಐನೆಕ್ಸ್ನ ೨ನೇ ಸ್ಕ್ರೀನ್ನಲ್ಲಿ ಕನ್ನಡದ ಸಿನಿಮಾಗಳು, ೩ನೇ ಸ್ಕ್ರೀನ್ನಲ್ಲಿ ಭಾರತೀಯ ಸಿನಿಮಾಗಳು, ೪ನೇ ಸ್ಕ್ರೀನ್ನಲ್ಲಿ ವಿಶ್ವ ಸಿನಿಮಾಗಳು ಪ್ರದರ್ಶನವಾಗುತ್ತಿವೆ. ಡಿಆರ್ಸಿಯಲ್ಲಿ ಕನ್ನಡದ ಇತ್ತೀಚಿನ ಸಿನಿಮಾಗಳನ್ನು ವೀಕ್ಷಣೆ ಮಾಡಬಹುದಾಗಿದೆ.
೩ನೇ ಸ್ಕ್ರೀನ್ನಲ್ಲಿ ಪ್ರದರ್ಶನ ಕಂಡ ‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು.
೪ನೇ ಸ್ಕ್ರೀನ್ನಲ್ಲಿ ಪ್ರದರ್ಶನಗೊಂಡ ವಿಟ್ಟೂರೊ ಡೆ ಸಿಕಾ ನಿರ್ದೇಶನದ ಇಟಲಿ ಭಾಷೆಯ ‘ಬೈಸಿಕಲ್ ಥೀವ್ಸ್’(ಲಾಡ್ರಿ ಡಿ ಬೈಸಿಕಲ್ಲೆ) ಚಿತ್ರ ನೋಡುಗರ ಎದೆಯನ್ನು ಮೆತ್ತಗಾಗಿಸಿತು. ಇಟಲಿಯಲ್ಲಿ ಯುದ್ಧವಾದ ನಂತರದ ಜನಜೀವನದ ದುರಂತ ಬದುಕನ್ನು ಕಟ್ಟಿಕೊಡುವ ಈ ಚಿತ್ರ ಕಾಯಕ ಜೀವಿಯೊಬ್ಬನ ಬೈಸಿಕಲ್ ಕಳುವಾದ ಕಥೆ ಹೊಂದಿದೆ. ಆತನ ಮೂಲಕ ಸಾಮಾಜಿಕ, ಆರ್ಥಿಕ ಮುಗ್ಗಟ್ಟುಗಳ ದರ್ಶನವನ್ನು ಚಿತ್ರ ಮಾಡಿಸುತ್ತದೆ.
ನಾಳೆ ಪುನೀತ್ ಚಿತ್ರೋತ್ಸವ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆಯ್ದ ಚಲನಚಿತ್ರಗಳನ್ನು ಒಂದು ದಿನ ಪ್ರದರ್ಶನ ಮಾಡುವ ಮೂಲಕ ಅವರಿಗೆ ಸಿನಿಮಾ ನಮನವನ್ನು ಅರ್ಪಿಸುವ ಕೆಲಸವನ್ನು ದಸರಾ ಚಲನಚಿತ್ರೋತ್ಸವ ಉಪ ಸಮಿತಿ ಮಾಡುತ್ತಿದೆ.
ಶೇಷ್ಟ್ರ ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಗಳಿಸಿಕೊಂಡಿರುವ ‘ಬೆಟ್ಟದ ಹೂ’ ಚಿತ್ರದ ಮೂಲಕ ಉತ್ಸವ ಪ್ರಾರಂಭವಾಗಲಿದೆ. ಐನೆಕ್ಸ್ನಲ್ಲಿ ಬೆಟ್ಟದ ಹೂ, ರಾಜಕುಮಾರ, ರಣವಿಕ್ರಮ, ಯುವರತ್ನ ಪ್ರದರ್ಶನಗೊಂಡರೆ, ಡಿಆರ್ಸಿಯಲ್ಲಿ ಬೆಟ್ಟದ ಹೂವು, ಯುವರತ್ನ, ಪೃಥ್ವಿ, ಅಂಜನೀ ಪುತ್ರ ಪ್ರದರ್ಶನಗೊಳ್ಳಲಿವೆ.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಐನೆಕ್ಸ್ನಲ್ಲಿ ಬೆಳಿಗ್ಗೆ ೧೦ಕ್ಕೆ ಚಿತ್ರೋತ್ಸವವನ್ನು ಉದ್ಘಾಟನೆ ಮಾಡಲಿದ್ದಾರೆ. ಶಕ್ತಿಧಾಮದ ಮಕ್ಕಳ ಜತೆ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ.
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…