ಚಿತ್ರ ಮಂಜರಿ

‘ಕ್ಷೇತ್ರಪತಿ’ ವೀಕ್ಷಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು: ಕ್ಷೇತ್ರಪತಿ ಕಳೆದ ಶುಕ್ರವಾರ ಬಿಡುಗಡೆಯಾದ ಕನ್ನಡದ ಚಲನಚಿತ್ರ. ಉತ್ತರ ಕರ್ನಾಟಕದ ರೈತರ ಕಥೆಯನ್ನು ಹೇಳುವ ಚಿತ್ರ.

ಗುಳ್ಟು ನವೀನ್ ಶಂಕರ್ ಅಭಿನಯದ ಚಿತ್ರ ವಿಮರ್ಶಕರಿಂದ, ಚಿತ್ರ ಪ್ರೇಮಿಗಳಿಂದ ಪ್ರಶಂಸೆಯ ಮಾತುಗಳನ್ನು ಪಡೆದಿದೆ. ಕ್ಷೇತ್ರಪತಿ ಸಿನಿಮಾವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ವೀಕ್ಷಣೆ ಮಾಡಲಿದ್ದಾರೆ. ಸ್ವತಃ ನಾಯಕ ನಟ ನವೀನ್ ಶಂಕರ್ ಮತ್ತು ಚಿತ್ರತಂಡ ಈ ಇಬ್ಬರು ನಾಯಕರನ್ನು ಭೇಟಿ ಮಾಡಿ ಚಿತ್ರದ ತುಣುಕನ್ನು ತೋರಿಸಿದ್ದಾರೆ.

ಕ್ಷೇತ್ರಪತಿ ಸಿನಿಮಾವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ವಾರಾಂತ್ಯದಲ್ಲಿ ವೀಕ್ಷಣೆ ಮಾಡಲಿದ್ದಾರೆ. ನೀವು ಕೊಟ್ಟ ಸಮಯಕ್ಕೆ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಎಂದು ನವೀನ್ ಶಂಕರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಶ್ರೀಕಾಂತ್ ಕಟಗಿ ನಿರ್ದೇಶನದ ಈ ಸಿನಿಮಾದಲ್ಲಿ ರೈತರ ಬದುಕಿನ ಕಥೆ ಇದೆ. ರಾಜಕೀಯ ಡ್ರಾಮಾ ಮತ್ತು ಆಕ್ಷನ್ ಇದೆ. ಕೆಜಿಎಫ್`ನಲ್ಲಿ ಯಶ್ ತಾಯಿಯಾಗಿ ನಟಿಸಿದ್ದ ಅರ್ಚನಾ ಜೋಯಿಸ್, ಇಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಾಹುಲ್ ಐನಾಪುರ, ಹರ್ಷ್ ಅರ್ಜುನ್, ಕೃಷ್ಣ ಹೆಬ್ಬಾಳೆ, ಅಚ್ಯುತ್ ಕುಮಾರ್, ಶೈಲಶ್ರೀ ಅರಸ್, ನಾಟ್ಯ ರಂಗ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

andolanait

Recent Posts

ಮಡಿಕೇರಿಯಲ್ಲಿ ಬಂಟರ ಭವನ ನಿರ್ಮಾಣಕ್ಕೆ ಸಿದ್ಧತೆ

ನವೀನ್ ಡಿಸೋಜ ೧೨ ರಿಂದ ೧೫ ಕೋಟಿ ರೂ.ವೆಚ್ಚದ ಕಾಮಗಾರಿಗೆ ಇಂದು ಅಡಿಗಲ್ಲು ೦.೫೨ ಎಕರೆ ಜಾಗ  ಮಡಿಕೇರಿ: ಕೊಡಗು…

5 mins ago

ಇಂದು ಕಂದೇಗಾಲದಲ್ಲಿ ಪಾರ್ವತಾಂಬೆ ಜಾತ್ರೆ

ಮಹೇಂದ್ರ ಹಸಗೂಲಿ ರಥೋತ್ಸವ ಕಣ್ತುಂಬಿಕೊಳ್ಳಲು ಉತ್ಸುಕರಾಗಿರುವ ಜನರು; ಭಾರೀ ನೂಕು ನುಗ್ಗಲು, ಎಚ್ಚರಿಕೆ ವಹಿಸಲು ಸೂಚನೆ  ಗುಂಡ್ಲುಪೇಟೆ: ತಾಲ್ಲೂಕಿನ ಕಂದೇಗಾಲದ…

9 mins ago

ಪಿಎನ್‌ಜಿ ಬಳಕೆದಾರರಿಗೆ ಎಚ್ಚರಿಕೆ

ಹೆಚ್.ಎಸ್.ದಿನೇಶ್‌ಕುಮಾರ್ ಸಿಲಿಂಡರ್ ಹಿಂತಿರುಗಿಸದಿದ್ದರೆ ಎಫ್ಐಆರ್ ದಾಖಲು ಸಿಲಿಂಡರ್‌ಗಳ ಕಾಳಸಂತೆ ವಿರುದ್ಧ ಕ್ರಮಕ್ಕೆ ಮುಂದಾದ ಸರ್ಕಾರ; ೫ಕೆಜಿ ಸಿಲಿಂಡರ್‌ಗೂ ಇನ್ನು ಮುಂದೆ…

14 mins ago

120 ಕಿಮೀ ಯುಜಿ ಕೇಬಲ್ ಅಳವಡಿಕೆಗೆ 400 ಗುಂಡಿ

ಕೆ.ಬಿ.ರಮೇಶನಾಯಕ ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣಕ್ಕೆ ಮಂಜೂರಾದ ೪೦೦ ಕೋಟಿ ರೂ.ಅನುದಾನದಲ್ಲಿ ೯೦ ಕೋಟಿರೂ. ಯುಜಿಡಿ, ನೀರಿನ ಪೈಪ್‌ಲೇನ್‌ಗೆ ಮೀಸಲು…

19 mins ago

ಕಟಾವಿಗೆ ಬಂದಿದ್ದ ಕಬ್ಬಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ರೈತರು ಕಂಗಾಲು

ನಂಜನಗೂಡು: ಆಳೆತ್ತರ ಬೆಳೆದು ನಿಂತಿದ್ದ ಕಬ್ಬಿನ ಬೆಳೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಐದು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿರುವ…

14 hours ago