ಚಿತ್ರ ಮಂಜರಿ

28 ದಿನ 30 ಚಿತ್ರಗಳ ಬಿಡುಗಡೆ: ಫೆಬ್ರವರಿಯಲ್ಲಿ ಸಿನಿಮಾ ಸುನಾಮಿ

ಕಳೆದ ವರ್ಷ ಕನ್ನಡ ಚಿತ್ರರಂಗಕ್ಕೆ ಯಶಸ್ಸಿಗಿಂತ, ಸೋಲು ಮತ್ತು ನಷ್ಟವೇ ಹೆಚ್ಚಾಗಿತ್ತು. ೨೦೨೫ರಲ್ಲಿ ಪರಿಸ್ಥಿತಿ ಸ್ವಲ್ಪ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ, ಈ ವರ್ಷದ ಆರಂಭ ಅಷ್ಟೇನೂ ಉತ್ತೇಜಕವಾಗಿಲ್ಲ. ಈ ಒಂದೂವರೆ ತಿಂಗಳಲ್ಲಿ ೩೦ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದು, ಯಾವೊಂದು ಚಿತ್ರವೂ ಯಶಸ್ವಿಯಾಗಲಿಲ್ಲ. ಶೇ.೯೦ ರಷ್ಟು ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವುದಕ್ಕೂ ಸಾಧ್ಯವಾಗಲಿಲ್ಲ.

ಫೆಬ್ರವರಿಯ ಮೊದಲೆರಡು ವಾರಗಳಲ್ಲಿ ಒಟ್ಟು ೧೪ ಚಿತ್ರಗಳು ಬಿಡುಗಡೆಯಾಗಿವೆ. ಅದರಲ್ಲೂ ಮೊದಲ ವಾರವೇ ಎಂಟು ಚಿತ್ರಗಳು ಬಿಡುಗಡೆಯಾಗಿವೆ. ಫೆಬ್ರವರಿ ೦೭ರಂದು ‘ಗಜರಾಮ’, ‘ಭಗೀರಥ’, ‘ಮಿಸ್ಟರ್ ರಾಣಿ’, ‘ತಲ್ವಾರ್’, ‘ಅಧಿಪತ್ರ’, ‘ಅನ್‌ಲಾಕ್ ರಾಘವ’, ‘ಅನಾಮಧೇಯ ಅಶೋಕ್ ಕುಮಾರ್’ ಮತ್ತು ‘ಶರಣರ ಶಕ್ತಿ’ ಚಿತ್ರಗಳು ಬಿಡುಗಡೆಯಾದವು. ಎಂಟೂ ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವಲ್ಲಿ ಸೋತಿವೆ.

ಫೆಬ್ರವರಿ ೧೪ರಂದು ‘ಸಿದ್ಲಿಂಗು ೨’, ‘ಭುವನಂ ಗಗನಂ’, ‘ರಾಜು ಜೇಮ್ಸ್‌ಬಾಂಡ್’, ‘ಜಸ್ಟೀಸ್’ ಮತ್ತು ‘ನಿಮಿತ್ತ ಮಾತ್ರ’ ಚಿತ್ರಗಳು ಬಿಡುಗಡೆಯಾಗಿವೆ. ಈ ಐದು ಚಿತ್ರಗಳಲ್ಲಿ ‘ಸಿದ್ಲಿಂಗು ೨’ ಮತ್ತು ‘ಭುವನಂ ಗಗನಂ’ ಚಿತ್ರಗಳು ತಕ್ಕ ಮಟ್ಟಿಗೆ ಇವೆ ಎಂಬ ಅಭಿಪ್ರಾಯ ಕೇಳಿ ಬಂದರೆ, ಮಿಕ್ಕ ಯಾವ ಚಿತ್ರಗಳ ಬಗ್ಗೆಯೂ ಪ್ರೇಕ್ಷಕರಿಂದ ಪ್ರತಿಕ್ರಿಯೆ ಇಲ್ಲ. ಈ ಎರಡೂ ಚಿತ್ರಗಳು ದೊಡ್ಡ ಕಲೆಕ್ಷನ್ ಏನೂ ಮಾಡುತ್ತಿಲ್ಲ.

ಈ ಶುಕ್ರವಾರ (ಫೆ.೨೧) ದಾಖಲೆಯ ೧೦ ಚಿತ್ರಗಳು ಬಿಡುಗಡೆಯಾಗುತ್ತಿವೆ. ಒಂದೇ ವಾರ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ. ಹಿಂದೆಯೂ ಬಿಡುಗಡೆಯಾಗಿವೆ. ಆದರೆ, ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ೧೦ ಚಿತ್ರಗಳು ಒಂದೇ ವಾರ ಬಿಡುಗಡೆಯಾಗುತ್ತಿದೆ. ‘ವಿಷ್ಣುಪ್ರಿಯ,’ ‘ಕ್ಯಾಪಿಟಲ್ ಸಿಟಿ’, ‘ಶ್ಯಾನುಭೋಗರ ಮಗಳು’, ‘ಎಲ್ಲೋ ಜೋಗಪ್ಪ ನಿನ್ನರಮನೆ’, ‘ಎದ್ದೇಳು ಮಂಜುನಾಥ ೨’, ‘ವಿದ್ಯಾ ಗಣೇಶ’, ‘ನನಗೂ ಲವ್ವಾಗಿದೆ’, ‘ಒಲವಿನ ಪಯಣ’, ‘ಗಗನ ಕುಸುಮ’, ‘ಭಾವ ತೀರಯಾನ’ ಮತ್ತು ‘ನಿಮಗೊಂದು ಸಿಹಿಸುದ್ದಿ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಯಾವ ಚಿತ್ರ ನಿಲ್ಲುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.

ಇನ್ನು, ಫೆಬ್ರವರಿ ಕೊನೆಯ ಶುಕ್ರವಾರ (ಫೆ.೨೮) ಈಗಾಗಲೇ ಆರು ಚಿತ್ರಗಳು ಬಿಡುಗಡೆಯಾಗುವುದಾಗಿ ಘೋಷಣೆಯಾಗಿವೆ. ‘೧೯೯೦’, ‘ರಾಕ್ಷಸ’, ‘ಅಪಾಯವಿದೆ ಎಚ್ಚರಿಕೆ’, ‘ಶಭಾಷ್ ಬಡ್ಡಿಮಗನೆ’, ‘ನಾಗವಲ್ಲಿ ಬಂಗಲೆ’ ಮತ್ತು ‘ಮಾಂಕ್ ದಿ ಯಂಗ್’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಆರು ಚಿತ್ರಗಳ ಜೊತೆಗೆ ಕೊನೆಯ ಕ್ಷಣದಲ್ಲಿ ಇನ್ನಷ್ಟು ಚಿತ್ರಗಳು ಬಿಡುಗಡೆಯಾಗುತ್ತವೋ, ಈಗಲೇ ಹೇಳುವುದು ಕಷ್ಟ.

ಒಟ್ಟಾರೆ ಈ ತಿಂಗಳು ೩೦ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಲಿದ್ದು, ಜನವರಿಯಲ್ಲಿ ಬಿಡುಗಡೆಯಾದ ೨೨ ಚಿತ್ರಗಳನ್ನು ಸೇರಿಸಿದರೆ, ಒಟ್ಟಾರೆ ಮೊದಲೆರಡು ತಿಂಗಳಲ್ಲಿ ೫೨ ಚಿತ್ರಗಳ ಬಿಡುಗಡೆಯನ್ನು ಕಂಡಂತಾಗುತ್ತದೆ. ಮೊದಲೆರಡು ತಿಂಗಳಲ್ಲಿ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಚಿತ್ರಗಳ ಬಿಡುಗಡೆ ಸಂಖ್ಯೆಯೇನೋ ಹೆಚ್ಚುತ್ತಲೇ ಇದೆ. ಆದರೆ, ನೋಡುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ.

ಚಿತ್ರ ಜಾಸ್ತಿ; ಪ್ರಚಾರ ಕಡಿಮೆ

ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಪ್ರಚಾರ ಮಾತ್ರ ಇಲ್ಲ. ಬಹಳಷ್ಟು ಚಿತ್ರಗಳು ಬಿಡುಗಡೆಯಾಗುತ್ತಿರುವುದೇ ಗೊತ್ತಾಗುತ್ತಿಲ್ಲ. ಚಿತ್ರರಂಗದಲ್ಲಿ ಸಕ್ರಿಯವಾಗಿರುವವರಿಗೇ ಈ ಕಷ್ಟವಾದರೆ, ಜನಸಾಮಾನ್ಯರಿಗಂತೂ ಇಂಥದ್ದೊಂದು ಚಿತ್ರವಿದೆ ಎಂಬುದು ಗಮನಕ್ಕೆ ಬರುತ್ತಿಲ್ಲ. ಈ ತಿಂಗಳು ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ ‘ಭಗೀರಥ’, ‘ಮಿಸ್ಟರ್ ರಾಣಿ’, ‘ತಲ್ವಾರ್’, ‘ಅಧಿಪತ್ರ’, ‘ಅನಾಮಧೇಯ ಅಶೋಕ್‌ಕುಮಾರ್’, ‘ಜಸ್ಟೀಸ್’, ‘ಕ್ಯಾಪಿಟಲ್ ಸಿಟಿ’, ‘ಶ್ಯಾನುಭೋಗರ ಮಗಳು’, ‘ಎಲ್ಲೋ ಜೋಗಪ್ಪ ನಿನ್ನರಮನೆ’, ‘ಎದ್ದೇಳು ಮಂಜುನಾಥ ೨’, ‘ವಿದ್ಯಾಗಣೇಶ’, ‘ನನಗೂ ಲವ್ವಾಗಿದೆ’, ‘ಒಲವಿನ ಪಯಣ’, ‘ಗಗನ ಕುಸುಮ’, ‘ಭಾವತೀರ ಯಾನ’, ‘ರಾಕ್ಷಸ’, ‘ಶಭಾಷ್ ಬಡ್ಡಿಮಗನೆ’, ‘ನಾಗವಲ್ಲಿ ಬಂಗಲೆ’ ಮುಂತಾದ ಚಿತ್ರಗಳ ಬಗ್ಗೆ ಸೂಕ್ತವಾದ ಮಾಹಿತಿಗಳೇ ಇಲ್ಲ. ಕೆಲವು ಚಿತ್ರಗಳ ಪತ್ರಿಕಾಗೋಷ್ಠಿಗಳಾಗಿವೆಯಾದರೂ, ಹೆಚ್ಚು ಪ್ರಚಾರವಿಲ್ಲ

ಆಂದೋಲನ ಡೆಸ್ಕ್

Recent Posts

ಗುಂಡ್ಲುಪೇಟೆ | ವಿದ್ಯುತ್ ಸ್ಪರ್ಶಿಸಿ ಹುಲಿ ಸಾವು

ಗುಂಡ್ಲುಪೇಟೆ : ತಾಲೂಕಿನ ಪಡಗೂರು ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಹುಲಿಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಗ್ರಾಮದ ಅಡವಿ ಮಠದ ಸಮೀಪವಿರುವ…

9 mins ago

ಓದುಗರ ಪತ್ರ | ಪ್ರಾಣಿ, ಪಕ್ಷಿಗಳಿಗೆ ನೀರು ಕೊಡಿ

ಬೇಸಿಗೆ ಆರಂಭವಾಗುವುದೇ ತಡ ಪ್ರತಿಯೊಬ್ಬರಿಗೂ ಬಾಯಾರಿಕೆ ಹೆಚ್ಚಾಗಿ, ಜಾಸ್ತಿ ನೀರು ಕುಡಿಯಬೇಕಾಗುತ್ತದೆ. ಬಿಸಿಲಿನ ಬೇಗೆ ಹೆಚ್ಚಾಗುವುದರಿಂದ ಎಂತಹವರಿಗೂ ವಿವಿಧ ರೀತಿಯ…

39 mins ago

ಓದುಗರ ಪತ್ರ | ಸರ್ಕಾರಿ ಶಾಲೆಗಳಿಗೆ ಲ್ಯಾಪ್ ಟಾಪ್, ವೈಫೈ ಸೌಲಭ್ಯ ಕಲ್ಪಿಸಿ

ಈಗ ಶಾಲೆಯಲ್ಲಿ ಶಿಕ್ಷಕರು ಕೇವಲ ಪಠ್ಯ ಬೋಧಕರಾಗಿ ಮಾತ್ರ ಉಳಿದಿಲ್ಲ. ಬೋಧನೆಯ ಜೊತೆ ಜೊತೆಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವುದು, ಮಧ್ಯಾಹ್ನದ…

1 hour ago

ಆಂದೋಲನ ವಿಶೇಷ ; ಸೋನಂ ವಾಂಗ್ಚುಕ್ ದಿಢೀರ್ ಬಿಡುಗಡೆ ‌

• ಆರೋಪ ಸಾಬೀತು ಮಾಡಲು ಕೇಂದ್ರ ವಿಫಲ • ಸುಪ್ರೀಂ ಮುಜುಗರದಿಂದ ಪಾರು? ಪರಿಸರ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಾಡಿದ…

3 hours ago

ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆಗೆ ಸಕಲ ಸಿದ್ಧತೆ

ಮಹಾದೇಶ್‌ ಎಂ.ಗೌಡ ಹನೂರು : ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸೋಮವಾರದಿಂದ ಪ್ರಾರಂಭವಾಗಿರುವ ಯುಗಾದಿ ಜಾತ್ರಾ ಮಹೋತ್ಸವ ಮಾರ್ಚ್ 19ರವರೆಗೆ…

3 hours ago

ಮತ್ತೆ ಚಿಗುರೊಡೆದ ಎಂಡಿಎ ಹೊಸ ಬಡಾವಣೆಯ ಕನಸು

ಅಧಿಕಾರಿಗಳ ಮನವೊಲಿಕೆಗೆ ಸಮ್ಮತಿಸುತ್ತಿರುವ ಭೂ ಮಾಲೀಕರು ಕೆ.ಬಿ.ರಮೇಶನಾಯಕ ಮೈಸೂರು : ದಶಕಗಳಿಂದಲೂ ಬಡ-ಮಧ್ಯಮ ವರ್ಗದ ಜನರಿಗೆ ನಿವೇಶನ ಹಂಚಿಕೆ ಮಾಡಲು,…

4 hours ago