ಆಂದೋಲನ ಪುರವಣಿ

ಇಳಿಗಾಲಕ್ಕೆ ಒಳ್ಳೆಯ ಆಹಾರ

ಮನೆಯಲ್ಲಿ ಹಿರಿಯರಿದ್ದಾರೆ ಎಂದರೆ ಅಲ್ಲಿ ಆಹಾರ ಪದ್ಧತಿಯಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಮಗುವಿನಂತೆ ಸೂಕ್ಷ್ಮ ಆರೋಗ್ಯ ಅವರದ್ದಾಗಿರುವುದಲ್ಲ, ವಯಸ್ಸಾದಂತೆ ರೋಗ ನಿರೋಧಕ ಶಕ್ತಿ ಕುಂದುವುದರಿಂದ ಆರೋಗ್ಯಕರ ಆಹಾರ ಶೈಲಿ ಕಾಪಾಡಿಕೊಳ್ಳುವುದು ಮುಖ್ಯ.

ಆಹಾರದಲ್ಲಿ ಮಿತಿ ಹಾಗೂ ಪೌಷ್ಟಿಕ ಆಹಾರ ವನ್ನು ಸೇವನೆ ಮಾಡುವುದರಿಂದ ಹಿರಿಯರು ವೃದ್ಧಾಪ್ಯ ತಲುಪಿದರೂ ಆರೋಗ್ಯ ಸಮ ತೋಲನ ಕಾಪಾಡಿಕೊಳ್ಳಬಹುದು. ಇದಕ್ಕಾಗಿ ಅವರು ಒಂದಿಷ್ಟು ಆಹಾರ ಸೇವಿಸುವುದು ಅಗತ್ಯ. ಅವುಗಳೆಂದರೆ…

ಸೇಬು: ನಿತ್ಯ ಒಂದೊಂದು ಸೇಬು ಸೇವನೆ ಮಾಡಿದರೆ ಹಿರಿಯರೂ ವೈದ್ಯರಿಂದ ದೂರವಿರಬಹುದು ಎಂಬುದು ಸುಳ್ಳಲ್ಲ. ರಕ್ತದ ಒತ್ತಡ ಮತ್ತು ಮಧುಮೇಹ ಸಮಸ್ಯೆಯನ್ನು ಸೇಬು ತನ್ನಲ್ಲಿನ ಆಂಟಿ-ಆಕ್ಸಿಡೆಂಟ್ ಮತ್ತು ಕರಗುವ ನಾರಿನ ಅಂಶದಿಂದ ಮತ್ತು ವಿಟಮಿನ್ ‘ಸಿ’ ಅಂಶದಿಂದ ನಿಯಂತ್ರಿಸುತ್ತದೆ.

ಹಸಿರು ಎಲೆ-ತರಕಾರಿಗಳು: ದಂಟಿನ ಸೊಪ್ಪು, ಪಾಲಕ್ ಸೊಪ್ಪು, ಹೂ ಕೋಸು, ಎಲೆ ಕೋಸು, ಬೊಕೋಲಿ ಇತ್ಯಾದಿ ಆಹಾರಗಳು ಹಿರಿಯರ ಮಾನಸಿಕ ಆರೋಗ್ಯ ಹೆಚ್ಚಿಸುತ್ತವೆ.

ಮೀನು: ಮೀನಿನಲ್ಲಿ ಒಮೆಗಾ-3 ಫ್ಯಾಟಿ ಅಂಶಗಳು ಹೆಚ್ಚಾಗಿರುವುದಿಂದ 60 ವರ್ಷ ಮೇಲ್ಪ ಟ್ಟವರಿಗೆ ಹೃದಯ ಮತ್ತು ಮಿದುಳಿನ ಸಮಸ್ಯೆ ಗಳನ್ನು ಪರಿಹಾರ ಮಾಡುವ ಗುಣಲಕ್ಷಣ ಹೊಂದಿವೆ.

ಮೊಟ್ಟೆ: ಮೊಟ್ಟೆಯಲ್ಲಿ ಪ್ರೋಟೀನ್ ಅಂಶ ಯಥೇಚ್ಛವಾಗಿದ್ದು, ದೇಹದ ಮಾಂಸಖಂಡ ಗಳನ್ನು ಬಲಪಡಿಸುವುದಕ್ಕೆ ಸಹಾಯಕವಾಗಿದೆ.

ಕಾಫಿ ಸೇವನೆ: ಹಿರಿಯರಲ್ಲಿ ಹಿತಮಿತವಾದ ಕಾಫಿ ಸೇವನೆಯ ಅಭ್ಯಾಸವಿದ್ದರೆ ಹೃದಯ ಸಂಬಂಧಿ, ಉಸಿರಾಟದ ಸಮಸ್ಯೆ, ಪಾರ್ಶ್ವ ವಾಯು, ಅಲ್ಟಿಮರ್ ಕಾಯಿಲೆ ಸೇರಿದಂತೆ ಕೆಲವು ಸೋಂಕುಗಳನ್ನು ದೂರಮಾಡಬಹುದು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಭವಿಷ್ಯದ ಬೆಳಕಾಗಲಿ!

ಭವಿಷ್ಯದ ಬೆಳಕಾಗಲಿ! ಎಲ್ಲರ ಒಳಗೊಳ್ಳುವ ಎಲ್ಲರ ಹಿತ ಅಭ್ಯುದಯದ ಹೊಸ ದೇಶ ಕಟ್ಟುವುದಾಗಿ ಗುಡುಗುತಿದೆ ಜೆನ್ ಝೀ ಪಡೆ! ಈ…

2 hours ago

ಓದುಗರ ಪತ್ರ: ಓದುಗರ ಪತ್ರ ಚಾಮುಂಡಿಬೆಟ್ಟ: ನೋ-ಫ್ಲೈಝೋನ್ ಆಗಲಿ

ತಿರುಪತಿಯ ಮಾದರಿಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೂ ನೋ -ಫ್ಲೈಝೋನ್ ಘೋಷಣೆಗೆ ಗಂಭೀರವಾಗಿ ಪರಿಶೀಲಿಸುವಂತೆ ಸಂಸದ ಯದುವೀರ್ ಅವರು ಕೇಂದ್ರ ನಾಗರಿಕ ವಿಮಾನಯಾನ…

2 hours ago

ಓದುಗರ ಪತ್ರ: ಪ್ರೇಕ್ಷಕರ ಆಸಕ್ತಿಗೆ ತಕ್ಕಂತೆ ಕಾರ್ಯಕ್ರಮ ಆಯೋಜಿಸಿ

ಈ ವರ್ಷದ ನಾಡ ಹಬ್ಬ ದಸರಾದಲ್ಲಿ ನಡೆಯುವ ಕವಿಗೋಷ್ಠಿಗೆ, ಕವಿಗೋಷ್ಠಿಯ ಉಪಸಮಿತಿಯವರು ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ. ಪ್ರಧಾನ ಕವಿಗೋಷ್ಠಿ, ಯುವ…

2 hours ago

ಓದುಗರ ಪತ್ರ: ನಕಲಿ ಔಷಧ ಜಾಲ ಬೇರುಸಹಿತ ಕಿತ್ತೊಗೆಯಲಿ

ರಾಜ್ಯದಲ್ಲಿ ನಕಲಿ ಔಷಧಗಳ ಜಲವು ನಾಗರಿಕರ ಪ್ರಾಣದೊಂದಿಗೆ ಚೆಟವಾಡುತ್ತಿರುವುದು ತೀವ್ರ ಆತಂಕಕಾರಿ ಮತ್ತು ಅಕ್ಷಮ್ಯ. ತನಿಖೆಯಲ್ಲಿ ಸುಮಾರು ೩,೫೦೦ ಔಷಧ…

2 hours ago

ಕೊಡಗಿನಲ್ಲಿ ಮತ್ತೆ ಭಾರೀ ಮಳೆ: ತ್ರಿವೇಣಿ ಸಂಗಮ ಜಲಾವೃತ

ಮಡಿಕೇರಿ: ಮೋಡ ಬಿತ್ತನೆಯ ಚರ್ಚೆಯ ನಡುವೆಯೇ ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಾಗಿದೆ. ನಿನ್ನೆ ರಾತ್ರಿಯಿಂದ ಜಿಲ್ಲೆಯ ಹಲವೆಡೆ…

2 hours ago

ಬರಕ್ಕೆ ತತ್ತರಿಸುತ್ತಿರುವ ಕೃಷ್ಣ ಗೊಲ್ಲರು

ಡಾ.ರಘುಪತಿ ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ ಹನೂರು ದಾಟಿದರೆ ನಿಮಗೆ ದೊಡ್ಡಿ ಹೆಸರಿನ ಹಲವು ಹಳ್ಳಿಗಳು ಸಿಗುತ್ತವೆ. ಹಾಗೆಯೇ ನೂರಾರು ದನಗಳೂ,ಅದೂ…

7 hours ago