ಆಂದೋಲನ ಪುರವಣಿ

ಇಳಿಗಾಲಕ್ಕೆ ಒಳ್ಳೆಯ ಆಹಾರ

ಮನೆಯಲ್ಲಿ ಹಿರಿಯರಿದ್ದಾರೆ ಎಂದರೆ ಅಲ್ಲಿ ಆಹಾರ ಪದ್ಧತಿಯಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಮಗುವಿನಂತೆ ಸೂಕ್ಷ್ಮ ಆರೋಗ್ಯ ಅವರದ್ದಾಗಿರುವುದಲ್ಲ, ವಯಸ್ಸಾದಂತೆ ರೋಗ ನಿರೋಧಕ ಶಕ್ತಿ ಕುಂದುವುದರಿಂದ ಆರೋಗ್ಯಕರ ಆಹಾರ ಶೈಲಿ ಕಾಪಾಡಿಕೊಳ್ಳುವುದು ಮುಖ್ಯ.

ಆಹಾರದಲ್ಲಿ ಮಿತಿ ಹಾಗೂ ಪೌಷ್ಟಿಕ ಆಹಾರ ವನ್ನು ಸೇವನೆ ಮಾಡುವುದರಿಂದ ಹಿರಿಯರು ವೃದ್ಧಾಪ್ಯ ತಲುಪಿದರೂ ಆರೋಗ್ಯ ಸಮ ತೋಲನ ಕಾಪಾಡಿಕೊಳ್ಳಬಹುದು. ಇದಕ್ಕಾಗಿ ಅವರು ಒಂದಿಷ್ಟು ಆಹಾರ ಸೇವಿಸುವುದು ಅಗತ್ಯ. ಅವುಗಳೆಂದರೆ…

ಸೇಬು: ನಿತ್ಯ ಒಂದೊಂದು ಸೇಬು ಸೇವನೆ ಮಾಡಿದರೆ ಹಿರಿಯರೂ ವೈದ್ಯರಿಂದ ದೂರವಿರಬಹುದು ಎಂಬುದು ಸುಳ್ಳಲ್ಲ. ರಕ್ತದ ಒತ್ತಡ ಮತ್ತು ಮಧುಮೇಹ ಸಮಸ್ಯೆಯನ್ನು ಸೇಬು ತನ್ನಲ್ಲಿನ ಆಂಟಿ-ಆಕ್ಸಿಡೆಂಟ್ ಮತ್ತು ಕರಗುವ ನಾರಿನ ಅಂಶದಿಂದ ಮತ್ತು ವಿಟಮಿನ್ ‘ಸಿ’ ಅಂಶದಿಂದ ನಿಯಂತ್ರಿಸುತ್ತದೆ.

ಹಸಿರು ಎಲೆ-ತರಕಾರಿಗಳು: ದಂಟಿನ ಸೊಪ್ಪು, ಪಾಲಕ್ ಸೊಪ್ಪು, ಹೂ ಕೋಸು, ಎಲೆ ಕೋಸು, ಬೊಕೋಲಿ ಇತ್ಯಾದಿ ಆಹಾರಗಳು ಹಿರಿಯರ ಮಾನಸಿಕ ಆರೋಗ್ಯ ಹೆಚ್ಚಿಸುತ್ತವೆ.

ಮೀನು: ಮೀನಿನಲ್ಲಿ ಒಮೆಗಾ-3 ಫ್ಯಾಟಿ ಅಂಶಗಳು ಹೆಚ್ಚಾಗಿರುವುದಿಂದ 60 ವರ್ಷ ಮೇಲ್ಪ ಟ್ಟವರಿಗೆ ಹೃದಯ ಮತ್ತು ಮಿದುಳಿನ ಸಮಸ್ಯೆ ಗಳನ್ನು ಪರಿಹಾರ ಮಾಡುವ ಗುಣಲಕ್ಷಣ ಹೊಂದಿವೆ.

ಮೊಟ್ಟೆ: ಮೊಟ್ಟೆಯಲ್ಲಿ ಪ್ರೋಟೀನ್ ಅಂಶ ಯಥೇಚ್ಛವಾಗಿದ್ದು, ದೇಹದ ಮಾಂಸಖಂಡ ಗಳನ್ನು ಬಲಪಡಿಸುವುದಕ್ಕೆ ಸಹಾಯಕವಾಗಿದೆ.

ಕಾಫಿ ಸೇವನೆ: ಹಿರಿಯರಲ್ಲಿ ಹಿತಮಿತವಾದ ಕಾಫಿ ಸೇವನೆಯ ಅಭ್ಯಾಸವಿದ್ದರೆ ಹೃದಯ ಸಂಬಂಧಿ, ಉಸಿರಾಟದ ಸಮಸ್ಯೆ, ಪಾರ್ಶ್ವ ವಾಯು, ಅಲ್ಟಿಮರ್ ಕಾಯಿಲೆ ಸೇರಿದಂತೆ ಕೆಲವು ಸೋಂಕುಗಳನ್ನು ದೂರಮಾಡಬಹುದು.

ಆಂದೋಲನ ಡೆಸ್ಕ್

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏ.11 ಶನಿವಾರ

34 mins ago

ವಾಹನ ದಟ್ಟನೆ : ಸುಗಮ ಸಂಚಾರಕ್ಕೆ ರೈಲ್ವೆ ಅಂಡರ್‌ ಬ್ರಿಡ್ಜ್‌ ವಿಸ್ತರಿಸಲು ಮನವಿ

ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕಾಗಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು…

12 hours ago

ಮೈಸೂರು–ಜಲ್ಪೈಗುಡಿ ನಡುವೆ ವಿಶೇಷ ರೈಲು ಸಂಚಾರ

ಮೈಸೂರು : ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ನೈರುತ್ಯ ರೈಲ್ವೆಯು ಮೈಸೂರು- ಜಲ್ಪೈಗುರಿ ಜಂಕ್ಷನ್‌ ನಡುವೆ ವಿಶೇಷ ಎಕ್ಸ್‌ಪ್ರೆಸ್…

12 hours ago

ಯಮುನಾ ನದಿಯಲ್ಲಿ ಮುಳುಗಿದ ಪ್ರವಾಸಿಗರ ದೋಣಿ ; 6 ಮಂದಿ ಸಾವು, ಹಲವರು ನಾಪತ್ತೆ

ಮಥುರಾ : ಬೃಂದಾವನದ ಕೇಶಿ ಘಾಟ್ ಸಮೀಪ ಯಮುನಾ ನದಿಯಲ್ಲಿ ಪ್ರವಾಸಿಗರಿಂದ ತುಂಬಿದ ದೋಣಿ ಪಲ್ಟಿಯಾಗಿ ಆರು ಮಂದಿ ಸ್ಥಳದಲ್ಲೇ…

13 hours ago

ಹಡಗುಗಳ ಮೇಲಿನ ಶುಲ್ಕ ನಿಲ್ಲಿಸಿ ; ಇರಾನ್‌ಗೆ ಟ್ರಂಪ್ ಸೂಚನೆ

ಟೆಹ್ರಾನ್ : ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಶುಲ್ಕ ವಿಧಿಸುತ್ತಿದ್ದರೆ, ಅದು ತಕ್ಷಣವೇ ಅದನ್ನು ನಿಲ್ಲಿಸಬೇಕು…

13 hours ago

ನಂಜನಗೂಡು | ದೇವರಾಯಶೆಟ್ಟಿಪುರದಲ್ಲಿ ಚಿರತೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ

ಮಲ್ಕುಂಡಿ : ರಾತ್ರಿ ವೇಳೆ ರಸ್ತೆ ಮಧ್ಯೆ ಚಿರತೆ ಪ್ರತ್ಯಕ್ಷವಾಗಿರುವ ಘಟನೆ ದೇವರಾಯಶೆಟ್ಟಿಪುರ ಗ್ರಾಮದಿಂದ ಹುರ ಗ್ರಾಮಕ್ಕೆ ತೆರಳುವ ಮುಖ್ಯ…

13 hours ago