ಅ. ೧೬ರಂದು ವಿಶ್ವ ಅರಿವಳಿಕೆ ಆವಿಷ್ಕಾರ ದಿನ; ಶಸ್ತ್ರ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅನಸ್ತೇಶಿಯಾಲಜಿಸ್ಟ್
– ಡಾ. ವೈದ್ಯನಾಥ್, ಅನಸ್ತೇಶಿಯಾಲಜಿಸ್ಟ್, ಮೈಸೂರು
೧೮೪೬ರ ಅ. ೧೬ರಂದು ಅರಿವಳಿಕೆ ಅಥವಾ ಅನಸ್ತೇಶಿಯವನ್ನು ಎಲ್ಲರಿಗೂ ನೀಡಬಹುದು ಎಂದು ಅಮೆರಿಕದ ಬೋಸ್ಟನ್ನಲ್ಲಿ ಪ್ರಥಮ ಬಾರಿಗೆ ಪ್ರದರ್ಶಿಸಲಾಯಿತು. ಅದರ ಅಂಗವಾಗಿ ಪ್ರತಿ ವರ್ಷ ಅ. ೧೬ರನ್ನು ವಿಶ್ವ ಅರವಳಿಕೆ ಆವಿಷ್ಕಾರ ದಿನವನ್ನಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಶಸ್ತ್ರ ಚಿಕಿತ್ಸೆ ಸಾಮಾನ್ಯ ಎನ್ನುವಂತಾಗಿರುವ ಇಂದಿನ ದಿನಗಳಲ್ಲಿ, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಅನಸ್ತೇಶಿಯಾ ಅಥವಾ ಅರಿವಳಿಕೆ ಇಂಜೆಕ್ಷನ್, ಅನಸ್ತೇಶಿಯಾಲಜಿಸ್ಟ್ (ಅರವಳಿಕೆ ತಜ್ಞ) ಬಗ್ಗೆ ತುಸುವಾದರೂ ತಿಳಿದುಕೊಂಡಿರುವುದು ಉತ್ತಮ.
ಯಾವುದೇ ಶಸ್ತ್ರ ಚಿಕಿತ್ಸೆಗೂ ಮುನ್ನ ರೋಗಿಗೆ ಅರವಳಿಕೆ ಮದ್ದು ನೀಡುವುದು ಸಾಮಾನ್ಯ. ಶಸ್ತ್ರ ಚಿಕಿತ್ಸೆ ವಿಧಾನ, ದೇಹದ ಭಾಗಗಳ ಆಧಾರದ ಮೇಲೆ ಅರಿವಳಿಕೆ ತಜ್ಞರು ತಪಾಸಣೆ ಅರವಳಿಕೆ ನೀಡುತ್ತಾರೆ. ಇದರಿಂದ ವಿಷಯ ತಜ್ಞ ವೈದ್ಯರು ಶಸ್ತ್ರ ಚಿಕಿತ್ಸೆ ಮುಂದುವರಿಸಲು ಸಹಾಯವಾಗುತ್ತದೆ.
ಶಸ್ತ್ರ ಚಿಕಿತ್ಸೆಯ ನಂತರವೂ ಅರಿವಳಿಕೆ ತಜ್ಞರು ರೋಗಿಯ ತಪಾಸಣೆ ನಡೆಸುವ ಮೂಲಕ ರೋಗಿಯ ಮೇಲ್ವಿಚಾರಣೆಯಲ್ಲಿಯೂ ಭಾಗಿಯಾಗಿರುತ್ತಾರೆ.
ಹೃದ್ರೋಗ ಸಂಬಂಧಿತ ಕ್ಯಾತ್ ಲ್ಯಾಬ್ ಪ್ರಕ್ರಿಯೆಗಳು, ಎಂಡೊಸ್ಕೋಪಿ, ಮಕ್ಕಳ ಎಂಆರ್ಐ ಸ್ಕ್ಯಾನ್, ಹೆರಿಗೆ ಸಂದರ್ಭಗಳಲ್ಲಿ ಅರವಳಿಗೆ ಮದ್ದು ಮತ್ತು ತಜ್ಞರ ಜವಾಬ್ದಾರಿ ಹೆಚ್ಚಿರುತ್ತದೆ.
ಅರಿವಳಿಕೆ ನೀಡುವ ವಿಧಾನಗಳು
ಅರಿವಳಿಕೆ ತಜ್ಞ ವೈದ್ಯರು ಸಾಮಾನ್ಯವಾಗಿ ಎರಡು- ಮೂರು ರೀತಿಯ ಅರಿವಳಿಕೆ ಆರೈಕೆಯನ್ನು ಒದಗಿಸುತ್ತಾರೆ
ಸಂಪೂರ್ಣ ಅರಿವಳಿಕೆ
ಸಂಪೂರ್ಣ ಅರಿವಳಿಕೆಯನ್ನು ರಕ್ತ ನಾಳಗಳಿಗೆ ನೀಡಲಾಗುತ್ತದೆ. ಇದು ರೋಗಿಯನ್ನು ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡುತ್ತದೆ. ಇದನ್ನು ಕುತ್ತಿಗೆ ಅಥವಾ ಎದೆಯ ಭಾಗದ ಶಸ್ತ್ರಚಿಕಿತ್ಸೆ, ಮೆದುಳಿಗೆ ಸಂಬಂಧಿತ ಶಸ್ತ್ರ ಚಿಕಿತ್ಸೆ ಹಾಗೂ ತೆರೆದ ಹೃದಯ ಶಸ್ತ್ರಚಿಕಿತ್ಸೆಯ oತಹ ಸನ್ನಿವೇಶಗಳಲ್ಲಿ ಪ್ರಯೋಗಿಸಲಾಗುತ್ತದೆ.
ಪ್ರಾಂತೀಯ ಅರಿವಳಿಕೆ:
ಆಂಗ್ಲದಲ್ಲಿ ರೀಜನಲ್ ಅನಾಸ್ತೇಶಿಯ ಎನ್ನುವ ಈ ಪ್ರಕ್ರಿಯೆಯಲ್ಲಿ ಸೊಂಟದಿಂದ ಕೆಳಭಾಗ, ದೇಹದ ದೊಡ್ಡ ಭಾಗವನ್ನು ಮರಗಟ್ಟಲು ಅರವಳಿಗೆ ಪ್ರಯೋಗಿಸಲಾಗುತ್ತದೆ. ಈ ಇಂಜೆಕ್ಷನ್ ಅನ್ನು ಕ್ಯಾತಿಟರ್ ಎಂಬ ಸಣ್ಣ ಕೊಳವೆಯ ಮೂಲಕ ಬೆನ್ನು ಹುರಿಗೆ ನೀಡಲಾಗುತ್ತದೆ. ಇದರಿಂದ ರೋಗಿ ಎಚ್ಚರದಿಂದ ಇದ್ದರೂ ನಿಗದಿತ ಭಾಗದಲ್ಲಿ ನಡೆಸುವ ಶಸ್ತ್ರ ಚಿಕಿತ್ಸೆಯಿಂದ ನೋವಿನ ಅನುಭವ ಆಗುವುದಿಲ್ಲ. ಬೆನ್ನುಮೂಳೆಯ ಬ್ಲಾಕ್ಗಳು ಮತ್ತು ಎಪಿಡ್ಯೂರಲ್ಗಳನ್ನು ಒಳಗೊಂಡಂತೆ ಈ ರೀತಿಯ ಅರಿವಳಿಕೆಯನ್ನು ಹೆಚ್ಚಾಗಿ ಹೆರಿಗೆಯ ಸಮಯದಲ್ಲಿ ಮತ್ತು ಕಾಲು ಅಥವಾ ಹೊಟ್ಟೆಯ ಶಸ್ತ್ರಚಿಕಿತ್ಸೆ ವೇಳೆ ಬಳಸಲಾಗುತ್ತದೆ.
ಸ್ಥಳೀಯ ಅರಿವಳಿಕೆ
ಆಂಗ್ಲ ಭಾಷೆಯಲ್ಲಿ ಲೋಕಲ್ ಅನಾಸ್ತೇಶಿಯ ಎಂದು ಕರೆಯ ಲ್ಪಡುವ ಈ ಪ್ರಕ್ರಿಯೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ದೇಹದ ಒಂದು ಸಣ್ಣ ಪ್ರದೇಶವನ್ನು ಮಾತ್ರ ಮರಗಟ್ಟಿಸಲಾಗುತ್ತದೆ. ಉದಾಹರಣೆಗೆ ಕಣ್ಣಿನ ಕಟರಾಕ್ಟ್ ಶಸ್ತ್ರ ಚಿಕಿತ್ಸೆ,
ಸಣ್ಣ ಪುಟ್ಟ ಗೆಡ್ಡೆಗಳನ್ನು ತೆಗೆಯುವುದು, ಆಳವಾದ ಗಾಯಗಳನ್ನು ಹೊಲಿಯುವುದು ಅಥವಾ ಸಣ್ಣ ಪುಟ್ಟ ಗಂಟುಗಳು ನಿರ್ಮೂಲನೆ ಮುಂತಾದ ಕಾರ್ಯವಿಧಾನ ಗಳಿಗೆ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಅನಸ್ತೇಶಿಯಾ ತಜ್ಞರೊಂದಿಗೆ ಏನನ್ನೂ ಮುಚ್ಚಿಡಬೇಡಿ
– ಹೃದಯ ವೈಫಲ್ಯ, ಮಧುಮೇಹ ಅಥವಾ ಆಸ್ತವಾದಂತಹ ಯಾವುದೇ ವೈದ್ಯಕೀಯ ಸಮಸ್ಯೆಗಳ ಬಗ್ಗೆ ನಿಮ್ಮ ಅರಿವಳಿಕೆ ತಜ್ಞ ವೈದ್ಯರಿಗೆ ತಿಳಿಸಲು ಮರೆಯದಿರಿ.
– ನೀವು ಯಾವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂಬ ವಾಹಿತಿಯನ್ನು ತಪ್ಪದೇ ಅರವಳಿಗೆ ತಜ್ಞರೊಂದಿಗೆ ಹಂಚಿಕೊಳ್ಳಿ. ಅಲರ್ಜಿ ಇದ್ದಲ್ಲಿ ತಪ್ಪದೇ ತಿಳಿಸಿ.
– ನೀವು ಅರಿವಳಿಕೆ ಇಂಜೆಕ್ಷನ್ ಪಡೆದು ತೊಂದರೆ ಅನುಭವಿಸಿದ್ದರೆ, ಈ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ತಜ್ಞರೊಂದಿಗೆ ಹಂಚಿಕೊಳ್ಳಿ.
– ಮೈಗ್ರೇನ್, ಬೆನ್ನು ನೋವು, ಕ್ಯಾನ್ಸರ್ ನೋವು ಅಥವಾ ಫೈಬ್ರೊವ್ಯಾಲ್ಗಿಯದಂತಹ ಸಮಸ್ಯೆಗಳು ಇದ್ದರೆ ತಕ್ಷಣ ಅರವಳಿಗೆ ತಜ್ಞರನ್ನು ಭೇಟಿಯಾಗುವುದು ಸೂಕ್ತ.
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…