ಆಂದೋಲನ ಪುರವಣಿ

ಯೋಗ ಕ್ಷೇಮ : ಮುಟ್ಟು ಮುಂದೂಡುವ ಮುನ್ನ ವಹಿಸಿ ಎಚ್ಚರ

ಸೌಮ್ಯ ಹೆಗ್ಗಡಹಳ್ಳಿ

ಆಧುನಿಕ ಸಂದರ್ಭದಲ್ಲಿ ಹೆಂಗಳೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಮುಟ್ಟಿನ ಸಮಸ್ಯೆಯೂ ಒಂದು. ಇದೇ ವೇಳೆಯಲ್ಲಿ ದೂರದೂರಿನ ಪ್ರಯಾಣಕ್ಕೆಂದೋ, ಶುಭ ಸವಾರಂಭಗಳಲ್ಲಿ ಭಾಗವಹಿಸಲೆಂದೋ ತಿಂಗಳ ಋತು ಚಕ್ರನ್ನು ಮುಂದೂಡಲು (ಎರಡ್ಮೂರು ದಿನಗಳಿಗೆ) ಮಾತ್ರೆಗಳನ್ನು ತೆಗೆದುಕೊಳ್ಳುವುದು ಸಾಮಾನ್ಯವಾಗುತ್ತಿದೆ. ಇದು ಸರಿಯೇ? ಇದರಿಂದ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆಯೇ ಎಂಬುದರ ಬಗ್ಗೆ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ಲಲಿತಾ ಅವರು ಮಾತನಾಡಿದ್ದಾರೆ.

* ಮುಟ್ಟು ಮುಂದೂಡಲು ಮಾತ್ರೆಗಳ ಸೇವನೆ ಸೂಕ್ತವೇ?

ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಮಾತ್ರೆಗಳ ಬಳಕೆ ಮಾಡಬೇಕು. ಮುಟ್ಟಾಗುವ ೫ ದಿನಗಳ ಮುಂಚಿತವಾಗಿ ದಿನಕ್ಕೊಂದರಂತೆ ಮಾತ್ರೆಗಳನ್ನು ಬಳಸಬಹುದು. ಆದರೆ ಇದನ್ನೇ ಪುನರಾವರ್ತನೆ ಮಾಡುವುದು ಸರಿಯಲ್ಲ. ನಕಲಿ ಮಾತ್ರೆಗಳಿಂದ ದೂರವಿರಬೇಕು. ಕಡ್ಡಾಯವಾಗಿ ೧೦ ದಿನಗಳು ಮೀರಬಾರದು.


* ಈ ಬಗೆಯ ಮಾತ್ರೆ ಯಾರು ತೆಗೆದುಕೊಳ್ಳಬಹುದು?
ಇದಕ್ಕೆ ವಯಸ್ಸಿನ ಮೀತಿ ಇಲ್ಲ. ೧೮ ವರ್ಷ ಮೇಲ್ಪಟ್ಟವರು ತೆಗೆದುಕೊಳ್ಳಬಹುದು. ತೆಗೆದುಕೊಳ್ಳುವ ಮುನ್ನ ಕಡ್ಡಾಯವಾಗಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಸೂಕ್ತ.


* ಈ ಮಾತ್ರೆಗಳನ್ನು ಯಾರು ತೆಗೆದುಕೊಳ್ಳಬಾರದು?
ಮಧುಮೇಹಿಗಳು, ಹೃದುಂ ಸಂಬಂಧಿ ಸಮಸ್ಯೆ ಉಳ್ಳವರು, ಹಲವು ಬಗೆಯ ಕಾಯಿಲೆಯಿಂದ ಬಳಲುತ್ತಿರುವವರು ಈ ಮಾತ್ರಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬಾರದು. ಇದರಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಬಹಳಷ್ಟು ಎಚ್ಚರ ವಹಿಸುವುದು ಸೂಕ್ತ.


* ಮಾತ್ರೆಗಳ ಸೇವನೆಯಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು?

ಮುಟ್ಟು ತಡೆ ಮಾತ್ರೆಗಳನ್ನು ತೆಗೆದುಕೊಂಡು ಬಳಿಕ ಮುಟ್ಟಾದ ಸಂದರ್ಭಗಳಲ್ಲಿ ವಾಕರಿಕೆ, ಸುಸ್ತಾಗುವುದು, ಸಿಡುಕುವುದು ಸಹಜ. ಇದಕ್ಕೆ ಹಾರ್ಮೋನಿನಲ್ಲಿ ಆಗುವ ಬದಲಾವಣೆಗಳು ಕಾರಣ.


* ಸಾಮಾನ್ಯ ಮುಟ್ಟಿಗೂ ಮುಂದೂಡಲ್ಪಟ್ಟ ಮುಟ್ಟಿಗೂ ಏನು ವ್ಯತ್ಯಾಸ?

ಸಾಮಾನ್ಯ ಋತು ಚಕ್ರದ ದಿನಗಳಿಗೂ ಮುಂದೂಡಿ ಮುಟ್ಟಾದ ದಿನಗಳಿಗೂ ಬಹಷ್ಟು ವ್ಯತ್ಯಾಸವಿರುತ್ತದೆ. ಕೆಲವರಲ್ಲಿ ಅತಿಯಾದ ರಕ್ತಸ್ರಾವ ಕಾಡುವುದುಂಟು, ಮತ್ತಷ್ಟು ಮಂದಿಯಲ್ಲಿ ಕಡಿಮೆ ರಕ್ತಸ್ರಾವವೂ ಆಗುವುದುಂಟು. ಈ ಕಾರಣಕ್ಕಾಗಿ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.


ಮಾತ್ರೆ ತೆಗೆದುಕೊಳ್ಳುವ ಮುನ್ನ ತಿಳಿದಿರಬೇಕಾದ ಅಂಶಗಳೇನು?

ಒಂದಷ್ಟು ಮಹಿಳೆಯರು ಸರಿಯಾದ ತಿಳುವಳಿಕೆ ಇಲ್ಲದೆ ಮುಟ್ಟು ಮುಂದೂಡುವ ಮಾತ್ರೆಗಳನ್ನು ಸೇವಿಸಿ ಅನಾರೋಗ್ಯಕ್ಕೀಡಾದ ಉದಾಹರಣೆಗಳು ಉಂಟು. ಈ ವಾತ್ರೆಗಳನ್ನು ಯಾವಾಗ ಹೇಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಪ್ರತಿಯೊಬ್ಬರ ದೇಹ ಪ್ರಕೃತಿಯೂ ಬೇರೆ ಬೇರೆ ಇರುವುದರಿಂದ ಎಲ್ಲರಿಗೂ ಒಂದೇ ಸೂತ್ರ ಅನ್ವಯವಾಗುವುದಿಲ್ಲ.

andolanait

Recent Posts

ಹಾಸನ | ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆ

ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

39 mins ago

ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ: ಎಫ್‌ಐಆರ್‌ ದಾಖಲು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…

43 mins ago

ಓದುಗರ ಪತ್ರ: ಪತ್ರಿಕಾ ವಿತರಕರಿಗೆ ಬೆಚ್ಚನೆಯ ಉಡುಪು ಒದಗಿಸಿ

ಪ್ರತಿದಿನ ಬೆಳಗಿನ ಜಾವ ದಿನ ದಿನಪತ್ರಿಕೆಗಳನ್ನು ಬಹುತೇಕ ಮಕ್ಕಳೇ ವಿತರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಚಳಿ ಇರುವುದರಿಂದ ಆರೋಗ್ಯದ ಮೇಲೆ…

1 hour ago

ಓದುಗರ ಪತ್ರ:  RTO ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿ

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಮಧ್ಯವರ್ತಿಗಳು ಹಾಗೂ ಚಾಲನಾ ತರಬೇತಿ ಶಾಲೆಗಳವರಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ…

1 hour ago

ಓದುಗರ ಪತ್ರ:  ಮೈಸೂರಿನಲ್ಲಿ ಡಾಗ್ ಪಾರ್ಕ್ ಸ್ಥಾಪಿಸಿ

ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ರಾಜ್ಯದ ಎಲ್ಲಾ ನಗರ ಪಾಲಿಕೆಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ…

2 hours ago

ಚಲನಚಿತ್ರ: ಗಲ್ಲಾ ಪೆಟ್ಟಿಗೆ ಗಳಿಕೆ, ಬಾಡಿಗೆ, ಬಡ್ಡಿ, ಉಳಿಕೆ ಇತ್ಯಾದಿ

ಕಳೆದ ವಾರ ಕೊಚ್ಚಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಕಲೆ ಮತ್ತು ಸಾಹಿತ್ಯ ಉತ್ಸವದಲ್ಲಿ ಸಿನಿಮಾ ಕುರಿತಂತೆ ಪ್ರಮುಖರು ಆಡಿರುವ…

2 hours ago