ಆಂದೋಲನ ಪುರವಣಿ

ಬಾಡಿಗೆ ತಾಯಿ ಹುಡುಕುವ ಚಾತಕ ಹಕ್ಕಿ

ರೇಣು ಪ್ರಿಯದರ್ಶಿನಿ ಎಂ

ಚಾತಕ ಪಕ್ಷಿ ಮಳೆಯ ಮೊದಲ ಹನಿಗಾಗಿ ಬಾಯಿ ತೆರೆದು ಆಗಸಕ್ಕೆ ಮುಖವೊಡ್ಡಿ ಕುಳಿತಿರುವುದೆಂದು ಜಾನಪದ ಕಥೆಗಳು ಹೇಳುತ್ತವೆ… ಈ ಪಕ್ಷಿಯು ಮೂಲತಃ ಆಫ್ರಿಕಾ ಮತ್ತು ಏಶಿಯ ಖಂಡಗಳ ನಿವಾಸಿ. ಸಾಮಾನ್ಯವಾಗಿ ವಲಸೆ ಹಕ್ಕಿಗಳು ಚಳಿಗಾಲದಲ್ಲಿ ನಮ್ಮ ದೇಶಕ್ಕೆ ಬಂದರೆ ಈ ಪಕ್ಷಿ ಬೇಸಿಗೆಯ ಅತಿಥಿ. ತೆಳು ದೇಹದ, ಕಪ್ಪು-ಬಿಳುಪಿನ, ಮಧ್ಯಮ ಗಾತ್ರದ, ಕೋಗಿಲೆ ಜಾತಿಗೆ ಸೇರಿದ ಚಾತಕ ಹಕ್ಕಿಗೆ ತಲೆಯ ಮೇಲೆ ಕಿರೀಟದಂತೆ ಕಪ್ಪು ಜುಟ್ಟು. ಇದರ ಮೇಲ್ದೇಹ ಹೊಳೆಯುವ ಕಂದು ಮಿಶ್ರಿತ ಕಪ್ಪು ಹಾಗೂ ಕುತ್ತಿಗೆ, ಕೆಳಮೈ ಅಚ್ಚ ಬಿಳಿಯದ್ದು. ಕಪ್ಪು ಕೊಕ್ಕು, ಕಂದು ಕಣ್ಣು ಹೊಂದಿದ, ಬಲು ನಾಚಿಕೆ ಸ್ವಭಾವದ ಈ ಹಕ್ಕಿ ಹಾರುವಾಗ ಕಪ್ಪು ರೆಕ್ಕೆ ಮೇಲಿರುವ ಬಿಳಿಯ ಗುರುತು ವಿಶೇಷವಾಗಿ ಎದ್ದು ತೋರುತ್ತದೆ. ಇದರ ಕಪ್ಪಾದ ಸಪೂರ ಬಾಲದ ತುದಿ ಬಿಳಿಯಾದರೆ ಬಾಲದ ಅಡಿಯಲ್ಲಿ ಬಿಳುಪು ಪಟ್ಟಿಯಿದೆ.

ಕವಿ ಕಾಳಿದಾಸನ ‘‘ಮೇಘದೂತ’’ ಕೃತಿಯಲ್ಲಿ ಹೆಸರಿಸಲಾದ ಚಾತಕ ಪಕ್ಷಿ ಸಾಮಾನ್ಯವಾಗಿ ಕುರುಚಲು ಕಾಡು, ಬಯಲು, ಬಿದಿರು ಕಾಡು ಮತ್ತು ಒಣ ಪ್ರದೇಶದ ಮುಳ್ಳಿನ ಗಿಡಗಳಲ್ಲಿ ಅವಿತು ಕುಳಿತಿರುವುದನ್ನು ನೋಡಬಹುದು, ಆದರೆ ದಟ್ಟ ಕಾಡುಗಳಲ್ಲಿ ಮತ್ತು ಮರುಭೂಮಿಯಂತಹ ಅತಿ ಒಣ ಪ್ರದೇಶಗಳಲ್ಲಿ ಇರುವುದಿಲ್ಲ. ಸದಾ ಮರದ ಮೇಲೆೆುೀಂ ವಾಸಿಸುವ ಚಾತಕ ಹಕ್ಕಿ ಆಹಾರಕ್ಕಾಗಿ ನೆಲದ ಮೇಲೆ ಇಳಿಯುತ್ತದೆ. ಇವುಗಳು, ತಮ್ಮ ಅವಾಸ ಸ್ಥಾನಗಳಲ್ಲಿ ಸಿಗುವ ಹಲ್ಲಿ, ಮಿಡತೆ, ಜೀರುಂಡೆ, ಸಣ್ಣ ಹುಳು-ಹುಪ್ಪಟೆಗಳನ್ನು ತಿಂದರೂ ಕಂಬಳಿಹುಳುಗಳನ್ನು ಅತಿ ಅಕ್ಕರೆಯಿಂದ ಸವಿಯುವುದು ಕಂಡಾಗ ಸೋಜಿಗವೆನಿಸುವುದು. ಈ ಕಂಬಳಿ ಹುಳುಗಳನ್ನು ಮರದ ತೊಗಟೆಯ ನಡುವೆ ಇಲ್ಲವೇ ತರಗಲೆಗಳ ಸಂದಿನಿಂದ ಹೆಕ್ಕಿ, ಜೋರಾಗಿ ಕುಕ್ಕಿ, ಅದರ ಹೊಟ್ಟೆಯಲ್ಲಿನ ಕರುಳು ಒತ್ತಿ ಹೊರತೆಗೆದು, ನಂತರ ಗಾಳಿಯಲ್ಲಿ ಹಾರಿಸಿ ವಿನ್ಯಾಸವಾಗಿ ನುಂಗುವ ಪರಿ ಅದ್ಭುತ!!! ಸಾಧಾರಣವಾಗಿ ಒಂಟಿಯಾಗಿ ಕಾಣಿಸಿಕೊಳ್ಳುವ ಚಾತಕ ಹಕ್ಕಿ ಅಪಾಯದ ಮುನ್ಸೂಚನೆ ದೊರೆತಾಗ ಜೋರಾಗಿ ರೆಕ್ಕೆ ಬಡಿದು, ಆಹಾರ ದೊರೆತಾಗ ಜೋರಾಗಿ ಕೂಗಿ ಇತರ ಹಕ್ಕಿಗಳನ್ನು ಎಚ್ಚರಿಸುವುದು.

ಜನವರಿ- ಮಾರ್ಚ್ ಸಮಯದಲ್ಲಿ ಮರಿ ಮಾಡುವ ಚಾತಕ ಪಕ್ಷಿ ಕೋಗಿಲೆ ಜಾತಿಯ ಹಕ್ಕಿಗಳಂತೆ ಇತರ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆ ಇಡುವ ಪರತಂತ್ರ ಹಕ್ಕಿ. ಇದು ತನ್ನ ಮೊಟ್ಟೆಯ ಬಣ್ಣ ಹೋಲುವ ಗೀಜಗಾರಲು ಹಕ್ಕಿಯ ಗೂಡಿನಲ್ಲಿ ಮೋಸದಿಂದ ಮೊಟ್ಟೆ ಇಡುವುದು. ಸಾಧಾರಣವಾಗಿ ಬೆಳಗಿನ ಹೊತ್ತಿನಲ್ಲಿ ಪೋಷಕ ಹಕ್ಕಿಗಳು ಗೂಡಿನ ಅಂಚಿಗೆ ಸರಿದಾಗ ಅವಸರದಿಂದ ಅದಕ್ಕೆ ತಿಳಿಯದಂತೆ ತುಸು ಮೇಲಿನಿಂದ ಮೊಟ್ಟೆ ಹಾಕಿ ಹಾರಿ ಹೋಗುತ್ತವೆ. ಇದರಿಂದ ಆತಿಥೇಯ ಹಕ್ಕಿಗಳ ಮೊಟ್ಟೆ ಬಿರುಕು ಬಿಟ್ಟು, ಇಲ್ಲವೇ ಒಡೆಯುವುದು. ಇದು ಅವುಗಳನ್ನು ಹಾಳು ಮಾಡುವ ಕುತಂತ್ರವೂ ಹೌದು. ಕೆಲವು ಬಾರಿ, ಗಂಡು ಹಕ್ಕಿ ಪೋಷಕರ ಗಮನ ಬೇರೆಡೆ ಸೆಳೆಯುತ್ತಿರುವಾಗ ಹೆಣ್ಣು ಹಕ್ಕಿ ಮೊಟ್ಟೆ ಇಡುವುದು ಕಂಡು ಬಂದಿದೆ. ವ್ಯತ್ಯಾಸ ತಿಳಿಯದ ಆತಿಥೇಯ ಹಕ್ಕಿ ಇವುಗಳಿಗೂ ಕಾವು ಕೊಟ್ಟು ಮರಿ ಮಾಡುವುದು. ಆಗತಾನೆ ಹುಟ್ಟಿದ ಚಾತಕ ಹಕ್ಕಿಗಳ ಮರಿಗಳು ಎಲ್ಲ ಆಹಾರವನ್ನು ಕಬಳಿಸಿ, ದಷ್ಟ-ಪುಷ್ಟವಾಗಿ ಬೆಳೆದು, ಬಾಡಿಗೆ ತಾಯಿಯ ಮಕ್ಕಳ ಆಹಾರವನ್ನು ತಿಂದು ತೇಗುತ್ತವೆ ಮತ್ತು ಅವುಗಳ ವಿನಾಶಕ್ಕೂ ಕಾರಣವಾಗುತ್ತವೆ. ಗೀಜಗಾರಲು ಹಕ್ಕಿಗಳು ಸಾಮೂಹಿಕ ಜೀವನ ನಡೆಸುವುದರಿಂದ ಚಾತಕ ಹಕ್ಕಿಗಳ ಮರಿಗಳನ್ನು ಗುಂಪಿನ ಎಲ್ಲ ಹಕ್ಕಿಗಳು ಸೇರಿ ಪೋಷಿಸುವುವು.

ತಂತ್ರವೊ- ಕುತಂತ್ರವೋ ಮರಿಗಳ ಪೋಷಣೆ ಮಾಡದ ಸೋಂಬೇರಿ ಚಾತಕ ಹಕ್ಕಿ ತನ್ನ ಮರಿಗಳನ್ನು ಬಾಡಿಗೆ ತಾಯಿಯ ನೆರವಿನಿಂದ ಬೇರೆ ಗೂಡಲ್ಲಿ ಬೆಳಸಿ ತಾನು ಪಲಾಯನವಾದ ಹೂಡುವ ತಂತ್ರ ನಿಬ್ಬೆರಗಾಗುವಂತಹದ್ದು.

andolanait

Recent Posts

ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಹತ್ಯೆ ಪ್ರಕರಣ ಸಿಸಿಬಿಗೆ ವರ್ಗಾವಣೆ

ಬೆಂಗಳೂರು: ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಅವರ ಹತ್ಯೆ ಪ್ರಕರಣವನ್ನು ಹೆಚ್ಚಿನ ತನಿಖೆ ನಡೆಸಲು ನಗರ ಪೊಲೀಸ್‌ ಆಯುಕ್ತ ಬಿ…

5 hours ago

ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಗೃಹಲಕ್ಷ್ಮಿನೂ ಆಸ್ಪತ್ರೆ ಸೇರಿದೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ: ರಾಜ್ಯದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಈ…

5 hours ago

ಸಿಎಂ ಸ್ವಕ್ಷೇತ್ರದಲ್ಲೇ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ನಾಚಿಕೆಗೇಡಿನ ಸಂಗತಿ: ಎಂ.ಕೃಷ್ಣಮೂರ್ತಿ

ಮೈಸೂರು: ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾಜಮಂಗಲ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ನಾಚಿಕೆಗೇಡಿನ…

7 hours ago

ನಾಳೆ ಕೊಡಗಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಮಡಿಕೇರಿ: ಮಡಿಕೇರಿ 66/11ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್3 ಗದ್ದಿಗೆ ಫೀಡರ್‍ನಲ್ಲಿ ಏಪ್ರಿಲ್, 22 ರಂದು ಬೆಳಗ್ಗೆ 10…

8 hours ago

ಭೀಕರ ಪ್ರವಾಹಕ್ಕೆ ತತ್ತರಿಸಿದ ಜಮ್ಮು-ಕಾಶ್ಮೀರ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತ ಉಂಟಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಭೀಕರ ಪ್ರವಾಹಕ್ಕೆ ಸಿಲುಕಿ…

8 hours ago

ಬಿಎಸ್‌ವೈ ವಿರುದ್ಧದ ಡಿನೋಟಿಫಿಕೇಷನ್‌ ಪ್ರಕರಣ: ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದ ಸುಪ್ರೀಂಕೋರ್ಟ್‌

ನವದೆಹಲಿ: ತಮ್ಮ ವಿರುದ್ಧ ದಾಖಲಾಗಿರುವ ಡಿನೋಟಿಫಿಕೇಷನ್ ಪ್ರಕರಣದ ಮರುಪರಿಶೀಲನೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ವಾದ-ವಿವಾದವನ್ನು ಆಲಿಸಿ ಕಳೆದ…

8 hours ago