ಆಂದೋಲನ ಪುರವಣಿ

ಯುವ ಡಾಟ್‌ ಕಾಮ್‌: ಮಳೆ ಮತ್ತು ಇಳೆಯ ಪ್ರೇಮ ಕಹಾನಿ

-ಅಕ್ಷತಾ ಎಸ್.,ಮಲ್ಲಮ್ಮ, ಮರಿಮಲ್ಲಪ್ಪ ಪದವಿ ಕಾಲೇಜು, ಮೈಸೂರು

ಹೇ….. ಭೂಮಿ ಏನಿಷ್ಟು ಸಂಭ್ರಮ, ನಿನ್ನನ್ನೇ ನೀನು ಮರೆತಂತೆ. ಮಳೆಯ ಸ್ಪರ್ಶವಾಗುತ್ತಿದ್ದಂತೆ ಗೆಳೆಯನ ಕಂಡ ಪ್ರೇಯಸಿಯಂತಾಗಿ ನಳನಳಿಸುವೆ. ಬೇಸಿಗೆಯಲ್ಲಿ ವಿರಹದಿಂದ ನೊಂದಿದ್ದರೂ ಮೊದಲ ಮಳೆಗೆ ಘಮಿಸುವೆ. ಹಸಿರಿನ ಸೀರೆಯನ್ನು ನಿಧಾನವಾಗಿ ಹೊದ್ದುಕೊಳ್ಳುತ್ತಾ ನಳನಳಿಸುವೆ.

ಎಲ್ಲಡೆ ಝುಳು ಝುಳು ನೀನಾದ ಮಾಡುತ್ತಾ, ಸಂತೋಷಕ್ಕೆ ಎಲ್ಲೆ ಇಲ್ಲ ಎಂದು ನಲಿಯುವೆ. ಇದೇ ನಲಿವಿನಲ್ಲಿ ಮರ, ಗಿಡ, ಬಳ್ಳಿ, ಹೂಗಳು ಬೆಳೆದು ನಿಲ್ಲುತ್ತವೆ. ಆನಂದ ಸೂಸುತ್ತವೆ.

ಅಲಂಕಾರ ಮಾಡಿಕೊಂಡು ತಾನೇ ಸುಂದರಿ ಎಂದು ಬೀಗಬೇಡಿ, ಎಷ್ಟು ಕಾಲ ಈ ಸೌಂದರ್ಯ? ಆದರೆ ಪ್ರತಿ ವರ್ಷ ನವ ಯುವತಿಯಂತೆ ಕಂಗೊಳಿಸುವವಳು ನಾನು, ಚಿರಯುವತಿ ನಾನು… ಎಂದು ಈಗಿನ ಕಾಲದ ಯುವತಿಯರನ್ನು ಚೇಡಿಸುವ ನಿನ್ನ ತಣ್ಣನೆಯ ನೋಟ ಎಲ್ಲರಿಗೂ ಅಚ್ಚರಿಯೇ.

ಮಳೆ ಬಿದ್ದಾಗ ಇಳೆಯಲ್ಲಾಗುವ ಸದ್ದು, ಹೊರ ಬರುವ ಸಂಭಾಷಣೆಯಲ್ಲಿ ಸುಮಧುರ ಸಂಗೀತವಿರುತ್ತದೆ. ಗಾಳಿ, ಗಂಧ ಜೊತೆ ಸೇರಿ ಸಂಗೀತ ಗೋಷ್ಠಿಯೇ ನೆರೆದಂತಾಗುತ್ತದೆ. ಎಲ್ಲರನ್ನೂ ತಾಯಿಯಂತೆ ಪೋಷಿಸುವ ಇಳೆ, ವರುಣನ ಮುಂದೆ ಮಾತ್ರ ಮಗುವಿನಂತೆ ಕಾಣುತ್ತಾಳೆ.

ಇಷ್ಟು ಪ್ರೀತಿಯನ್ನು ವರುಣನ ಮೇಲೆ ಇಟ್ಟಿದ್ದರೂ ಸದಾಕಾಲ ತನ್ನೊಂದಿಗೆ ನಿಲ್ಲು ಎಂದು ಹೇಳುವ ಸ್ವಾರ್ಥಿಯಲ್ಲ ಇಳೆ. ಏಕೆಂದರೆ ವರುಣನ ಅಬ್ಬರ ಹೆಚ್ಚಾದರೆ ಆಗುವ ಅನಾಹುತದ ಅರಿವು ಅವಳಿಗಿದೆ. ಒಮ್ಮೊಮ್ಮೆ ವರುಣ ತಾಳ್ಮೆ ಮೀರಿ ಅಬ್ಬರಿಸಿದಾಗಲೂ ಅವನನ್ನು ಸಮಾಧಾನಿಸಿ ತನ್ನೊಡಲನ್ನು ಸೇರಿಸಿಕೊಳ್ಳುತ್ತಾಳೆ.

ಮಳೆಗಾಲ ಕಳೆದು ಬೇಸಿಗೆ ಶುರುವಾಗುತ್ತಿದ್ದಂತೆ ಮತ್ತದೇ ವಿರಹ. ಆದರೂ ಮತ್ತದೇ ದೀರ್ಘ ತಾಳ್ಮೆಯಿಂದ ಮುಂದಿನ ಮುಂಗಾರಿಗೆ ಕಾಯುತ್ತಾಳೆ. ಇದೆಲ್ಲವೂ ಪ್ರಕೃತಿಯಲ್ಲಿ ಇರುವ ಪ್ರೀತಿಯ ಜಾಲದಂತೆ ಕಾಣುವುದು ನನ್ನೊಬ್ಬಳಿಗಾ? ಎನ್ನುವ ಪ್ರಶ್ನೆಯೂ ಆಗಾಗ ಹುಟ್ಟುತ್ತದೆ.

 

andolana

Recent Posts

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 3.39 ಕೋಟಿ ಮೌಲ್ಯದ ಗಾಂಜಾ ಸೀಜ್‌

ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 3.39 ಕೋಟಿ ರೂ…

31 mins ago

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್‌ ಮ್ಯಾಚ್‌ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ: ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಮ್ಯಾಚ್‌ ಆಡಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಂತರ ನಿರ್ಧಾರ ಪ್ರಕಟಿಸುತ್ತೇವೆ ಎಂದು…

41 mins ago

ಹೋಗೇನಕಲ್‌ ಫಾಲ್ಸ್‌ಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ 50 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ: ಶಾಸಕ ಎಂ.ಆರ್.ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಗೆನಕಲ್ ಫಾಲ್ಸ್ ಗೆ ಬರುವ ಪ್ರವಾಸಿಗರ…

58 mins ago

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜುಗೆ ಸುಪ್ರೀಂನಲ್ಲೂ ಬಿಗ್‌ ಶಾಕ್‌

ನವದೆಹಲಿ: ರೌಡಿಶೀಟರ್‌ ಬಿಕ್ಲುಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಭೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ…

1 hour ago

ವರಿಷ್ಠರ ಜೊತೆ ಏನೇನು ಮಾತನಾಡಬೇಕೋ ಮಾತನಾಡಿದ್ದೇನೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ನವದೆಹಲಿ: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ಹಾಗೂ ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ನಡುವೆ ನಿನ್ನೆಯೇ…

2 hours ago

ಕಾವೇರಿ ನೀರು ಪೋಲು ಮಾಡಿದರೆ 5000 ರೂ ದಂಡ

ಬೆಂಗಳೂರು: ಈ ಬಾರಿ ಬೆಂಗಳೂರಿನ ಜನರಿಗೆ ಬೇಸಿಗೆಯಲ್ಲಿ ಕಾವೇರಿ ಕುಡಿಯುವ ನೀರಿನ ಅಭಾವ ಆಗದಂತೆ ಜಲಮಂಡಳಿ ಮುನ್ನೆಚ್ಚರಿಕೆ ವಹಿಸಿದೆ. ಬೆಂಗಳೂರು…

2 hours ago