ಆಂದೋಲನ ಪುರವಣಿ

ಕಿರಿಯರ ಕುರಿತು ಕೆಲವು ಕಿವಿ ಮಾತುಗಳು

– ಎಂ.ಕೀರ್ತನಾ

ಕಾಲ ಎಷ್ಟೇ ಬದಲಾಗಬಹುದು. ಆದರೆ ಕೆಲವು ವಿಚಾರಗಳು ಎಂದಿಗೂ ಬದಲಾಗುವುದಿಲ್ಲ. ಹಿರಿಯರನ್ನು ಗೌರವಿಸಬೇಕು. ಅವರು ಹೇಳಿದ್ದನ್ನೆಲ್ಲಾ
ಕೇಳಬೇಕು ಇತ್ಯಾದಿ. ಅವು ತಪ್ಪಲ್ಲ. ಎಲ್ಲವೂ ಸರಿಯೇ? ಸರಿಯಾದರೂ ಎಲ್ಲಿಯವರೆಗೆ?

ಈಗಿನ ಜನರೇಶನ್ ಹೈ ಸ್ಪೀಡ್ ಅಲ್ಲಿ ಓಡುತ್ತಿದೆ. ಹೆಣ್ಣು ಮಕ್ಕಳು ಮನೆ ಬಿಟ್ಟು ಅಲ್ಲ, ದೇಶವೇ ಬಿಟ್ಟು ಹೊರ ದೇಶಗಳಲ್ಲಿ ಒಬ್ಬಂಟಿಯಾಗಿ ದುಡಿದು ಬದುಕುವಷ್ಟು ಕಾಲ ಬದಲಾಗಿದೆ. ಈಗಿರುವಾಗ ನಾವು ಹಿರಿಯರು ಎಂದು ಕಿರಿಯರ ಮನಸ್ಥಿತಿಯನ್ನು ಅರಿಯದೆ ತಮ್ಮ ಆಲೋಚನೆಗಳನ್ನು ಅವರ ಮೇಲೆ ಏರುವುದು ಎಷ್ಟು ಸರಿ?

ಮೊದಲಿಗೆ ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಕಿರಿಯರ ಅಥವಾ ಹಿರಿಯರ ತಪ್ಪಿದೆ ಎಂದಲ್ಲ. ನಾವು ಎಲ್ಲಿ ಎಡವುತ್ತಾ ಇದ್ದೇವೆ ಎನ್ನುವುದನ್ನು.

ಉದಾಹರಣೆಗೆ ಉನ್ನತ ವ್ಯಾಸಂಗಕ್ಕಾಗಿ ಬೇರೆ ಊರಿಗೆ ಹೋಗುವ ಹೆಣ್ಣು ಮಕ್ಕಳನ್ನು ಕಟ್ಟುಪಾಡು ನೆಪದಲ್ಲಿ ಮನೆಯಲ್ಲಿಯೇ ಇರಿಸುವುದು. ಅಥವಾ ಗಂಡು ಮಕ್ಕಳು ಓದದೇ ಇದ್ದರೂ ನಡೆಯುತ್ತದೆ ಏಕೆಂದರೆ ಅವನು ಗಂಡು ಎಂದು ವಾದಿಸುವುದು. ಇಂತಹ ವಿಚಾರಗಳು ಈಗಿನ ಯುವ ಪೀಳಿಗೆಗೆ ಸಲ್ಲದು.

ಹಾಗೆ ಹಿರಿಯರು, ವಯಸ್ಸಾದವರನ್ನು ಅನಾಥ ಆಶ್ರಮಗಳಲ್ಲಿ ಬಿಡಬೇಕೆನ್ನುವ ಕಿರಿಯರ ಆಲೋಚನೆಯೂ ತಪ್ಪು. ನಾವೀಗ ಕೃತಕ ಬುದ್ಧಿಮತ್ತೆಯ ಕಾಲಮಾನದಲ್ಲಿ ಬದುಕುತ್ತಿದ್ದೇವೆ. ನಾವು ಕಂಡಿದನ್ನು, ಕಾಣುತ್ತಿರುವುದನ್ನು ನಮ್ಮ ಹಿರಿಯರು ಕಾಣದೆ ಇರಬಹುದು. ಹಾಗೆಯೇ ಅವರು ಕಂಡ ಪ್ರಪಂಚದ ಪರಿಚಯ ನಮಗಿಲ್ಲ ಎನ್ನುವುದು ಕೂಡ ವಾಸ್ತವ.

ಇನ್ನು ಕೆಲವೊಮ್ಮೆ ಹೀಗೂ ಆಗುತ್ತದೆ. ನಮ್ಮ ಮಾತು ಮಾತ್ರ ನಡೆಯಬೇಕು. ಅವರದೆಂತಹ ಕೆಲಸ ಇದ್ದರೂ ನಮ್ಮ ಸೇವೆ ಮಾಡಬೇಕು. ನಾವೇ ಸರಿ ಎನ್ನುವ ಹಿರಿಯರ ಮನೋಭಾವನೆ ಕಿರಿಯರಲ್ಲಿ ಕಿರಿಕಿರಿ ಉಂಟು ಮಾಡಿ, ಮನಸ್ತಾಪಕ್ಕೂ ಕಾರಣ ಆಗಬಹುದು. ಅದರಿಂದ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಆದರೆ ಹಿರಿಯರು ಅವರನ್ನು ಅರ್ಥ ಮಾಡಿಕೊಳ್ಳದಿರುವುದರಿಂದ ಕಿರಿಯರು ಒತ್ತಡವನ್ನು ಅನುಭವಿಸುತ್ತಿದ್ದಾರೆ. ನಾವು ಇನ್ನಷ್ಟು ಒತ್ತಡ ಹೇರದೆ ಅವರಿಗೆ ಸಮಯ ಸಿಕ್ಕಾಗಲೇ ನಗುತ್ತಾ ಅವರೊಂದಿಗೆ ಕಾಲ ಕಳೆಯುವುದು ಉತ್ತಮ ಎಂದು ಅರಿಯಬೇಕು.

ಇನ್ನು ಕಿರಿಯರೂ ಕೂಡ ಹಿರಿಯರ ಮನಸ್ಸನ್ನು ಅರಿತು ಅಥವಾ ಅವರಿಗೆ ತಮ್ಮ ಪರಿಸ್ಥಿತಿಯ ಬಗ್ಗೆ ವಿವರಿಸಿ ಅರ್ಥವಾಗುವ ಸರಳ ಧಾಟಿಯಲ್ಲಿ ಹೇಳುವುದರಿಂದ ಯಾವ ಸಂಬಂಧವೂ ಹದಗೆಡುವುದಿಲ್ಲ. ಇದಕ್ಕೂ ಮೀರಿ ತಮ್ಮದೇ ಹಟ ಸಾಧಿಸುವವರೂ ಇರುತ್ತಾರೆ. ಅದಕ್ಕೆಲ್ಲ ಅವರದೇ ಧಾಟಿಯಲ್ಲಿ ಯೋಚಿಸಿ ಮುಂದೆ ಹೆಜ್ಜೆ ಇಡುವುದು ಉತ್ತಮ.

ಆಗ ಮಾತ್ರ ಹಳೆಯ ಬೇರು ಹೊಸ ಚಿಗುರು ಒಂದನ್ನೊಂದು ಜೋಪಾನ  ಮಾಡುತ್ತಾ ಸಾಗಲು ಸಾಧ್ಯ.

 

ಆಂದೋಲನ ಡೆಸ್ಕ್

Recent Posts

ಮಹದೇಶ್ವರ ಬೆಟ್ಟ ಮುಖ್ಯರಸ್ತೆ ಬದಿಯಲ್ಲಿ ಒಂಟಿಸಲಗ ದರ್ಶನ: ಭಯಭೀತರಾದ ವಾಹನ ಸವಾರರು

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಬಾಲಕನ…

5 hours ago

ಸೈಬರ್ ಕ್ರೈಂ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಕಳೆದುಹೋಗಿದ್ದ 104 ಮೊಬೈಲ್ ವಶಕ್ಕೆ

ಮಡಿಕೇರಿ: ಕೊಡಗು ಜಿಲ್ಲೆಯ ಸೈಬರ್ ಕ್ರೈಂ ಪೊಲೀಸರು ಒಂದು ತಿಂಗಳ ಕಾಲ ಕ್ಷಿಪ್ರ ಕಾರ್ಯಾಚರಣೆ ಮಾಡುವ ಮೂಲಕ ನಾಗರಿಕರು ಕಳೆದುಕೊಂಡ…

6 hours ago

ಮಕ್ಕಳಿಗೆ ಜಂತುಹುಳು ಮಾತ್ರೆ ನೀಡಿದ ಶಾಸಕ ಅನಿಲ್ ಚಿಕ್ಕಮಾದು

ಎಚ್.ಡಿ.ಕೋಟೆ: ಮಾದಾಪುರ ಗ್ರಾಮದ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಪ್ರಯುಕ್ತ ಅರಣ್ಯ ಮತ್ತು…

6 hours ago

ಕಾಯಕ ಶರಣರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಡಾ.ಬಿ.ವಿ.ನಂದೀಶ್

ಮಂಡ್ಯ: ಕಾಯಕ ಶರಣರು ಸಮಾಜಕ್ಕೆ ವಚನಗಳ ಮೂಲಕ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಯುವ ಜನತೆಯೂ ಕಾಯಕ ಶರಣರ ಆದರ್ಶ, ಮೌಲ್ಯಗಳನ್ನು…

6 hours ago

ಮಕ್ಕಳು ಅಂತರ್ಜಾಲದ ಬಳಕೆ ಕಡಿಮೆ ಮಾಡಬೇಕು: ಬಿ.ಸಿ.ಶಿವಾನಂದ ಮೂರ್ತಿ

ಮಂಡ್ಯ: ಪ್ರಸ್ತುತ ಕಾಲದಲ್ಲಿ ಮಕ್ಕಳು ಅಂತರ್ಜಾಲ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ ಇದರಿಂದ ಮಕ್ಕಳ ಮನಸ್ಥಿತಿ…

6 hours ago

ಮಂಡ್ಯ ಜಿಲ್ಲೆ ಇ-ಪೌತಿ ಖಾತಾ ಆಂದೋಲನದಲ್ಲಿ ರಾಜ್ಯಕ್ಕೆ ಪ್ರಥಮ

ಮಂಡ್ಯ: ಪೌತಿ ಖಾತೆ ಪ್ರಕ್ರಿಯೆಯನ್ನು ಮಂಡ್ಯ ಜಿಲ್ಲೆಯು ಈ ಪೌತಿ ಖಾತೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಈ ಪೌತಿ ಖಾತೆಯನ್ನು…

6 hours ago