ಆಂದೋಲನ ಪುರವಣಿ

ಕಿರಿಯರ ಕುರಿತು ಕೆಲವು ಕಿವಿ ಮಾತುಗಳು

– ಎಂ.ಕೀರ್ತನಾ

ಕಾಲ ಎಷ್ಟೇ ಬದಲಾಗಬಹುದು. ಆದರೆ ಕೆಲವು ವಿಚಾರಗಳು ಎಂದಿಗೂ ಬದಲಾಗುವುದಿಲ್ಲ. ಹಿರಿಯರನ್ನು ಗೌರವಿಸಬೇಕು. ಅವರು ಹೇಳಿದ್ದನ್ನೆಲ್ಲಾ
ಕೇಳಬೇಕು ಇತ್ಯಾದಿ. ಅವು ತಪ್ಪಲ್ಲ. ಎಲ್ಲವೂ ಸರಿಯೇ? ಸರಿಯಾದರೂ ಎಲ್ಲಿಯವರೆಗೆ?

ಈಗಿನ ಜನರೇಶನ್ ಹೈ ಸ್ಪೀಡ್ ಅಲ್ಲಿ ಓಡುತ್ತಿದೆ. ಹೆಣ್ಣು ಮಕ್ಕಳು ಮನೆ ಬಿಟ್ಟು ಅಲ್ಲ, ದೇಶವೇ ಬಿಟ್ಟು ಹೊರ ದೇಶಗಳಲ್ಲಿ ಒಬ್ಬಂಟಿಯಾಗಿ ದುಡಿದು ಬದುಕುವಷ್ಟು ಕಾಲ ಬದಲಾಗಿದೆ. ಈಗಿರುವಾಗ ನಾವು ಹಿರಿಯರು ಎಂದು ಕಿರಿಯರ ಮನಸ್ಥಿತಿಯನ್ನು ಅರಿಯದೆ ತಮ್ಮ ಆಲೋಚನೆಗಳನ್ನು ಅವರ ಮೇಲೆ ಏರುವುದು ಎಷ್ಟು ಸರಿ?

ಮೊದಲಿಗೆ ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಕಿರಿಯರ ಅಥವಾ ಹಿರಿಯರ ತಪ್ಪಿದೆ ಎಂದಲ್ಲ. ನಾವು ಎಲ್ಲಿ ಎಡವುತ್ತಾ ಇದ್ದೇವೆ ಎನ್ನುವುದನ್ನು.

ಉದಾಹರಣೆಗೆ ಉನ್ನತ ವ್ಯಾಸಂಗಕ್ಕಾಗಿ ಬೇರೆ ಊರಿಗೆ ಹೋಗುವ ಹೆಣ್ಣು ಮಕ್ಕಳನ್ನು ಕಟ್ಟುಪಾಡು ನೆಪದಲ್ಲಿ ಮನೆಯಲ್ಲಿಯೇ ಇರಿಸುವುದು. ಅಥವಾ ಗಂಡು ಮಕ್ಕಳು ಓದದೇ ಇದ್ದರೂ ನಡೆಯುತ್ತದೆ ಏಕೆಂದರೆ ಅವನು ಗಂಡು ಎಂದು ವಾದಿಸುವುದು. ಇಂತಹ ವಿಚಾರಗಳು ಈಗಿನ ಯುವ ಪೀಳಿಗೆಗೆ ಸಲ್ಲದು.

ಹಾಗೆ ಹಿರಿಯರು, ವಯಸ್ಸಾದವರನ್ನು ಅನಾಥ ಆಶ್ರಮಗಳಲ್ಲಿ ಬಿಡಬೇಕೆನ್ನುವ ಕಿರಿಯರ ಆಲೋಚನೆಯೂ ತಪ್ಪು. ನಾವೀಗ ಕೃತಕ ಬುದ್ಧಿಮತ್ತೆಯ ಕಾಲಮಾನದಲ್ಲಿ ಬದುಕುತ್ತಿದ್ದೇವೆ. ನಾವು ಕಂಡಿದನ್ನು, ಕಾಣುತ್ತಿರುವುದನ್ನು ನಮ್ಮ ಹಿರಿಯರು ಕಾಣದೆ ಇರಬಹುದು. ಹಾಗೆಯೇ ಅವರು ಕಂಡ ಪ್ರಪಂಚದ ಪರಿಚಯ ನಮಗಿಲ್ಲ ಎನ್ನುವುದು ಕೂಡ ವಾಸ್ತವ.

ಇನ್ನು ಕೆಲವೊಮ್ಮೆ ಹೀಗೂ ಆಗುತ್ತದೆ. ನಮ್ಮ ಮಾತು ಮಾತ್ರ ನಡೆಯಬೇಕು. ಅವರದೆಂತಹ ಕೆಲಸ ಇದ್ದರೂ ನಮ್ಮ ಸೇವೆ ಮಾಡಬೇಕು. ನಾವೇ ಸರಿ ಎನ್ನುವ ಹಿರಿಯರ ಮನೋಭಾವನೆ ಕಿರಿಯರಲ್ಲಿ ಕಿರಿಕಿರಿ ಉಂಟು ಮಾಡಿ, ಮನಸ್ತಾಪಕ್ಕೂ ಕಾರಣ ಆಗಬಹುದು. ಅದರಿಂದ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಆದರೆ ಹಿರಿಯರು ಅವರನ್ನು ಅರ್ಥ ಮಾಡಿಕೊಳ್ಳದಿರುವುದರಿಂದ ಕಿರಿಯರು ಒತ್ತಡವನ್ನು ಅನುಭವಿಸುತ್ತಿದ್ದಾರೆ. ನಾವು ಇನ್ನಷ್ಟು ಒತ್ತಡ ಹೇರದೆ ಅವರಿಗೆ ಸಮಯ ಸಿಕ್ಕಾಗಲೇ ನಗುತ್ತಾ ಅವರೊಂದಿಗೆ ಕಾಲ ಕಳೆಯುವುದು ಉತ್ತಮ ಎಂದು ಅರಿಯಬೇಕು.

ಇನ್ನು ಕಿರಿಯರೂ ಕೂಡ ಹಿರಿಯರ ಮನಸ್ಸನ್ನು ಅರಿತು ಅಥವಾ ಅವರಿಗೆ ತಮ್ಮ ಪರಿಸ್ಥಿತಿಯ ಬಗ್ಗೆ ವಿವರಿಸಿ ಅರ್ಥವಾಗುವ ಸರಳ ಧಾಟಿಯಲ್ಲಿ ಹೇಳುವುದರಿಂದ ಯಾವ ಸಂಬಂಧವೂ ಹದಗೆಡುವುದಿಲ್ಲ. ಇದಕ್ಕೂ ಮೀರಿ ತಮ್ಮದೇ ಹಟ ಸಾಧಿಸುವವರೂ ಇರುತ್ತಾರೆ. ಅದಕ್ಕೆಲ್ಲ ಅವರದೇ ಧಾಟಿಯಲ್ಲಿ ಯೋಚಿಸಿ ಮುಂದೆ ಹೆಜ್ಜೆ ಇಡುವುದು ಉತ್ತಮ.

ಆಗ ಮಾತ್ರ ಹಳೆಯ ಬೇರು ಹೊಸ ಚಿಗುರು ಒಂದನ್ನೊಂದು ಜೋಪಾನ  ಮಾಡುತ್ತಾ ಸಾಗಲು ಸಾಧ್ಯ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಿ

ಬಂಡೀಪುರ ಉಷ್ಟ್ರೀಯ ಉದ್ಯಾನದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧವನ್ನು ರಾಜಕೀಯ ಮುಖಂಡರ ಒತ್ತಡಕ್ಕೆ…

1 hour ago

IPL 2025: 159ಕ್ಕೆ ರಾಜಸ್ಥಾನ್‌ ಆಲೌಟ್: ಗುಜರಾತ್‌ಗೆ 58 ರನ್‌ಗಳ ಭರ್ಜರಿ ಗೆಲುವು

ಅಹಮದಾಬಾದ್‌: ಸಂಘಟಿತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಸಹಾಯದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮಣಿಸಿದ ಗುಜರಾತ್‌ ಟೈಟನ್ಸ್‌ 2025ರ 18 ಆವೃತ್ತಿಯ…

2 hours ago

ಯಡಿಯೂರಪ್ಪ ಸರ್ಕಾರವಿದ್ದರೆ ನೆಟ್ಟಾರು ಹಂತಕನಿಗೆ ಮುತ್ತಿಕ್ಕಿದವನಿಗೆ ಗುಂಡಿಕ್ಕುತ್ತಿದ್ದೆವು: ಬಿ.ವೈ.ವಿಜಯೇಂದ್ರ

ಮಂಗಳೂರು: ಪ್ರವೀಣ್ ನೆಟ್ಟಾರು ಹಂತಕ ದೇಶದ್ರೋಹಿಗೆ ಮತ್ತೊಬ್ಬ ದೇಶದ್ರೋಹಿ ಮುತ್ತಿಡುತ್ತಾನೆ. ನಮ್ಮ ಸರ್ಕಾರ, ಯಡಿಯೂರಪ್ಪ ಸರ್ಕಾರವಿದ್ದಿದ್ದರೆ ಆ ದೇಶದ್ರೋಹಿಗೆ ಅಲ್ಲೇ…

4 hours ago

ಮಂಡ್ಯ ಮೈಶುಗರ್ ಕಾರ್ಖಾನೆಗೆ ನೂತನ‌ ಎಂ‌ಡಿ ಆಗಿ ಮಂಗಲ್‌ ದಾಸ್‌ ನೇಮಕ

ಮಂಡ್ಯ: ಮಂಡ್ಯ ಮೈಶುಗರ್ ಕಾರ್ಖಾನೆಗೆ ನೂತನ ಎಂಡಿಯಾಗಿ ಮಂಗಲ್‌ ದಾಸ್‌ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.…

4 hours ago

ಏಪ್ರಿಲ್‍.16ರಿಂದ ಶುರುವಾಗಲಿದೆ ಸುದೀಪ್‍ ಅಭಿನಯದ ‘ಬಿಲ್ಲ ರಂಗ ಭಾಷಾ’

‘ಏಪ್ರಿಲ್‍ 16’ ಎಂದಷ್ಟೇ ಬರೆದು ಕಿಚ್ಚ ಸುದೀಪ್‌ ಮೂರು ಫೋಟೋಗಳನ್ನು ಕೆಲವು ದಿನಗಳ ಹಿಂದೆ ಸೋಷಿಯಲ್‍ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಏಪ್ರಿಲ್‍.16ರಂದು…

5 hours ago

ಇದು ‘ಪ್ರೀತಿಯ ಹುಚ್ಚ’ನ ಕಥೆ: ನೈಜ ಘಟನೆ ಆಧರಿಸಿದ ಚಿತ್ರ ಏಪ್ರಿಲ್.18ಕ್ಕೆ ತೆರೆಗೆ

‘ಪ್ರೀತಿಯ ಹುಚ್ಚ’ ಎಂದರೆ ಮೊದಲಿಗೆ ನೆನಪಿಗೆ ಬರುವುದು ‘ಹುಚ್ಚ’ ಚಿತ್ರದ ಸುದೀಪ್‍ ಪಾತ್ರ. ಆ ನಂತರ ‘ಚೆಲುವಿನ ಚಿತ್ತಾರ’ ಚಿತ್ರದ…

5 hours ago