Andolana originals

ಪ್ರಕೃತಿ ಜತೆ ಸಹಬಾಳ್ವೆಯ ಸಂದೇಶ ಸಾರಿದ ತಿಮ್ಮಕ್ಕ

ಪರಿಸರ ರಮೇಶ್, ಶ್ರೀರಂಗಪಟ್ಟಣ

ಅರಣ್ಯ ಸಂರಕ್ಷಣಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಹೆಸರು 

ಸಾಲುಮರದ ತಿಮ್ಮಕ್ಕ ಅವರು ಕರ್ನಾಟಕದ ಪ್ರಖ್ಯಾತ ಪರಿಸರ ಪರಿಚಾರಕಿಯಾಗಿದ್ದು, ಮಕ್ಕಳಿಲ್ಲ ಎಂಬ ನೋವನ್ನು ಮರೆಯಲು ದಂಪತಿ, ೩೮೫ಕ್ಕೂ ಹೆಚ್ಚು ಆಲದ ಕೊನೆ (ಕೊಂಬೆ)ಗಳನ್ನು ನೆಟ್ಟು ನೀರುಣಿಸಿ ಬೆಳೆಸಿದರು. ತಿಮ್ಮಕ್ಕ – ಸಾಲುಮರದ ತಿಮ್ಮಕ್ಕ ಆಗಿ ಪ್ರಸಿದ್ಧಿ ಪಡೆದಿದ್ದು ಈಗ ಇತಿಹಾಸ.

ತಮ್ಮ ೪೦ನೇ ವಯಸ್ಸಿನಲ್ಲಿ ಗಂಡನೊಡನೆ ಸೇರಿ ಮರಗಳನ್ನು ಬೆಳೆಸಲು ಪ್ರಾರಂಭಿಸಿದ ತಿಮ್ಮಕ್ಕ, ಪತಿಯ ಅಕಾಲಿಕ ಮರಣದ ನಂತರವೂ ಛಲ ಬಿಡದೆ ಗಿಡಗಳನ್ನು ಪೋಷಿಸಿ ‘ವೃಕ್ಷಮಾತೆ’ ಎಂದೇ ಪ್ರಖ್ಯಾತಿ ಪಡೆದವರು.

ಸಾಲುಮರದ ತಿಮ್ಮಕ್ಕ ಎಂಬುದು ಕರ್ನಾಟಕದ ಅರಣ್ಯ ಸಂರಕ್ಷಣಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು. ಇವರು ತಮ್ಮ ಅಸಾಧಾರಣ ಪರಿಸರ ಪ್ರೀತಿ ಮತ್ತು ಸೇವೆ ಮೂಲಕ ಜಗತ್ತಿಗೆ ಮಾದರಿಯಾಗಿದ್ದಾರೆ. ಅನಕ್ಷರಸ್ಥರಾಗಿದ್ದರೂ, ತಮ್ಮ ಬದುಕು ಮತ್ತು ಸಾಧನೆಯ ಮೂಲಕ ಪ್ರಕೃತಿಯ ಮಹತ್ವವನ್ನು ಸಾರಿದ್ದಾರೆ.

ಮರಗಳ ಮಹಾದೇವತೆ: ತಿಮ್ಮಕ್ಕ ಅವರ ಸೇವೆಯು ಕೇವಲ ಮರಗಳನ್ನು ನೆಡುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಪಕ್ಷಿಗಳಿಗೆ ಆಶ್ರಯ ನೀಡುವ ಮತ್ತು ಜನರಿಗೆ ಗಾಳಿ – ನೆರಳು ನೀಡುವ ಮಹತ್ವದ ಉದ್ದೇಶವೂ ಅವರಲ್ಲಿತ್ತು.

ಮಾತೃಸ್ಥಾನ: ತಿಮ್ಮಕ್ಕ ಅವರು ಬೆಳೆಸಿದ ಪ್ರತಿ ಸಸಿಯನ್ನೂ ತಮ್ಮ ಸ್ವಂತ ಮಕ್ಕಳಂತೆ ಕಾಳಜಿ ವಹಿಸಿ ಪ್ರಾರಂಭದಲ್ಲಿ ಮಣ್ಣಿನ ಮಡಿಕೆಗಳಲ್ಲಿ ನೀರನ್ನು ಹೊತ್ತೊಯ್ದು ಹಾಕಿದ್ದಾರೆ. ಮೇಕೆ – ಕುರಿಗಳ ದಾಳಿಯನ್ನು ತಪ್ಪಿಸಿ ಬಹಳ ಜತನದಿಂದ ಕಾಪಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಿಮ್ಮಕ್ಕ ಅವರನ್ನು ಭೇಟಿ ಮಾಡಿ ಗೌರವಿಸಿದ್ದಾರೆ.

ಸಾಲುಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ, ಪ್ರಕೃತಿಯ ಜೊತೆ ಸಹಬಾಳ್ವೆಯ ಮಹತ್ವವನ್ನು ಸಾರಿದ್ದಾರೆ. ಇವರಸರಳತೆ, ದೃಢಸಂಕಲ್ಪ ಮತ್ತು ಸೇವಾ ಮನೋಭಾವವು ಸಮಾಜದ ಎಲ್ಲರಿಗೂ ಸ್ಛೂರ್ತಿಯಾಗಿದೆ. ಪ್ರಸ್ತುತ ಇಂದು ಇವರ ಮಾದರಿ ಕೆಲಸವನ್ನು ನೋಡಿ ಸ್ಛೂರ್ತಿ ಪಡೆದು ನೂರಾರು ಜನ ಗಿಡ ಬೆಳೆಸುತ್ತಿದ್ದಾರೆ. ತಿಮ್ಮಕ್ಕ ಅವರ ಜೀವಿತಾವಧಿಯು ಪರಿಸರ ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಒಂದು ಮಹಾಕಾವ್ಯವಾಗಿದೆ. ಸಮಾಜ ಸೇವೆ ಪರಿಸರ ಸೇವೆ ಮಾಡುವವರನ್ನು ಅಪಶಕುನದ ಬೆಕ್ಕಿನ ರೀತಿ ನೋಡುವ ಇಂದಿನ ಸಮಾಜದಲ್ಲಿ ತಿಮ್ಮಕ್ಕ ಅವರ ಬದುಕು ಹಾಗೂ ಸೇವೆ ಮುಂದಿನ ಪೀಳಿಗೆಗೆ ಎಂದಿಗೂ ಹಸಿರಾದ ದಾರಿ ದೀಪವಾಗಿರುತ್ತದೆ.

” ಸಾಲುಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ, ಪ್ರಕೃತಿಯ ಜೊತೆ ಸಹಬಾಳ್ವೆಯ ಮಹತ್ವವನ್ನು ಸಾರಿದ್ದಾರೆ. ಇವರ ಸರಳತೆ, ದೃಢಸಂಕಲ್ಪಮತ್ತು ಸೇವಾ ಮನೋಭಾವವು ಸಮಾಜದ ಎಲ್ಲರಿಗೂ ಸ್ಛೂರ್ತಿಯಾಗಿದೆ.”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕೆ.ಕೆ.ಮಹಮದ್ ಅವರ ಹೇಳಿಕೆ ಪ್ರಬುದ್ಧ ನಡೆ

ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…

24 mins ago

ಓದುಗರ ಪತ್ರ: ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ನಾಗರಿಕ ಸ್ನೇಹಿ

ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…

27 mins ago

ಓದುಗರ ಪತ್ರ: ದ್ವೇಷ ಭಾಷಣಕ್ಕೆ  ಕಾನೂನು ಕಡಿವಾಣ ಸಾಗತಾರ್ಹ

ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…

41 mins ago

ಡಾ.ಬಿ.ಆರ್.ಅಂಬೇಡ್ಕರ್ ಎಂಬ ಅಮರ ಜಗತ್ತು…

ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ  ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…

47 mins ago

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

3 hours ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

4 hours ago