Andolana originals

ಪ್ರಕೃತಿ ಜತೆ ಸಹಬಾಳ್ವೆಯ ಸಂದೇಶ ಸಾರಿದ ತಿಮ್ಮಕ್ಕ

ಪರಿಸರ ರಮೇಶ್, ಶ್ರೀರಂಗಪಟ್ಟಣ

ಅರಣ್ಯ ಸಂರಕ್ಷಣಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಹೆಸರು 

ಸಾಲುಮರದ ತಿಮ್ಮಕ್ಕ ಅವರು ಕರ್ನಾಟಕದ ಪ್ರಖ್ಯಾತ ಪರಿಸರ ಪರಿಚಾರಕಿಯಾಗಿದ್ದು, ಮಕ್ಕಳಿಲ್ಲ ಎಂಬ ನೋವನ್ನು ಮರೆಯಲು ದಂಪತಿ, ೩೮೫ಕ್ಕೂ ಹೆಚ್ಚು ಆಲದ ಕೊನೆ (ಕೊಂಬೆ)ಗಳನ್ನು ನೆಟ್ಟು ನೀರುಣಿಸಿ ಬೆಳೆಸಿದರು. ತಿಮ್ಮಕ್ಕ – ಸಾಲುಮರದ ತಿಮ್ಮಕ್ಕ ಆಗಿ ಪ್ರಸಿದ್ಧಿ ಪಡೆದಿದ್ದು ಈಗ ಇತಿಹಾಸ.

ತಮ್ಮ ೪೦ನೇ ವಯಸ್ಸಿನಲ್ಲಿ ಗಂಡನೊಡನೆ ಸೇರಿ ಮರಗಳನ್ನು ಬೆಳೆಸಲು ಪ್ರಾರಂಭಿಸಿದ ತಿಮ್ಮಕ್ಕ, ಪತಿಯ ಅಕಾಲಿಕ ಮರಣದ ನಂತರವೂ ಛಲ ಬಿಡದೆ ಗಿಡಗಳನ್ನು ಪೋಷಿಸಿ ‘ವೃಕ್ಷಮಾತೆ’ ಎಂದೇ ಪ್ರಖ್ಯಾತಿ ಪಡೆದವರು.

ಸಾಲುಮರದ ತಿಮ್ಮಕ್ಕ ಎಂಬುದು ಕರ್ನಾಟಕದ ಅರಣ್ಯ ಸಂರಕ್ಷಣಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು. ಇವರು ತಮ್ಮ ಅಸಾಧಾರಣ ಪರಿಸರ ಪ್ರೀತಿ ಮತ್ತು ಸೇವೆ ಮೂಲಕ ಜಗತ್ತಿಗೆ ಮಾದರಿಯಾಗಿದ್ದಾರೆ. ಅನಕ್ಷರಸ್ಥರಾಗಿದ್ದರೂ, ತಮ್ಮ ಬದುಕು ಮತ್ತು ಸಾಧನೆಯ ಮೂಲಕ ಪ್ರಕೃತಿಯ ಮಹತ್ವವನ್ನು ಸಾರಿದ್ದಾರೆ.

ಮರಗಳ ಮಹಾದೇವತೆ: ತಿಮ್ಮಕ್ಕ ಅವರ ಸೇವೆಯು ಕೇವಲ ಮರಗಳನ್ನು ನೆಡುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಪಕ್ಷಿಗಳಿಗೆ ಆಶ್ರಯ ನೀಡುವ ಮತ್ತು ಜನರಿಗೆ ಗಾಳಿ – ನೆರಳು ನೀಡುವ ಮಹತ್ವದ ಉದ್ದೇಶವೂ ಅವರಲ್ಲಿತ್ತು.

ಮಾತೃಸ್ಥಾನ: ತಿಮ್ಮಕ್ಕ ಅವರು ಬೆಳೆಸಿದ ಪ್ರತಿ ಸಸಿಯನ್ನೂ ತಮ್ಮ ಸ್ವಂತ ಮಕ್ಕಳಂತೆ ಕಾಳಜಿ ವಹಿಸಿ ಪ್ರಾರಂಭದಲ್ಲಿ ಮಣ್ಣಿನ ಮಡಿಕೆಗಳಲ್ಲಿ ನೀರನ್ನು ಹೊತ್ತೊಯ್ದು ಹಾಕಿದ್ದಾರೆ. ಮೇಕೆ – ಕುರಿಗಳ ದಾಳಿಯನ್ನು ತಪ್ಪಿಸಿ ಬಹಳ ಜತನದಿಂದ ಕಾಪಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಿಮ್ಮಕ್ಕ ಅವರನ್ನು ಭೇಟಿ ಮಾಡಿ ಗೌರವಿಸಿದ್ದಾರೆ.

ಸಾಲುಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ, ಪ್ರಕೃತಿಯ ಜೊತೆ ಸಹಬಾಳ್ವೆಯ ಮಹತ್ವವನ್ನು ಸಾರಿದ್ದಾರೆ. ಇವರಸರಳತೆ, ದೃಢಸಂಕಲ್ಪ ಮತ್ತು ಸೇವಾ ಮನೋಭಾವವು ಸಮಾಜದ ಎಲ್ಲರಿಗೂ ಸ್ಛೂರ್ತಿಯಾಗಿದೆ. ಪ್ರಸ್ತುತ ಇಂದು ಇವರ ಮಾದರಿ ಕೆಲಸವನ್ನು ನೋಡಿ ಸ್ಛೂರ್ತಿ ಪಡೆದು ನೂರಾರು ಜನ ಗಿಡ ಬೆಳೆಸುತ್ತಿದ್ದಾರೆ. ತಿಮ್ಮಕ್ಕ ಅವರ ಜೀವಿತಾವಧಿಯು ಪರಿಸರ ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಒಂದು ಮಹಾಕಾವ್ಯವಾಗಿದೆ. ಸಮಾಜ ಸೇವೆ ಪರಿಸರ ಸೇವೆ ಮಾಡುವವರನ್ನು ಅಪಶಕುನದ ಬೆಕ್ಕಿನ ರೀತಿ ನೋಡುವ ಇಂದಿನ ಸಮಾಜದಲ್ಲಿ ತಿಮ್ಮಕ್ಕ ಅವರ ಬದುಕು ಹಾಗೂ ಸೇವೆ ಮುಂದಿನ ಪೀಳಿಗೆಗೆ ಎಂದಿಗೂ ಹಸಿರಾದ ದಾರಿ ದೀಪವಾಗಿರುತ್ತದೆ.

” ಸಾಲುಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ, ಪ್ರಕೃತಿಯ ಜೊತೆ ಸಹಬಾಳ್ವೆಯ ಮಹತ್ವವನ್ನು ಸಾರಿದ್ದಾರೆ. ಇವರ ಸರಳತೆ, ದೃಢಸಂಕಲ್ಪಮತ್ತು ಸೇವಾ ಮನೋಭಾವವು ಸಮಾಜದ ಎಲ್ಲರಿಗೂ ಸ್ಛೂರ್ತಿಯಾಗಿದೆ.”

ಆಂದೋಲನ ಡೆಸ್ಕ್

Recent Posts

ಗೂಗಲ್ ಮಹಾತ್ಮೆ: ಗೂಗಲ್ ಮಾತ್ರ ಸತ್ಯ, ಉಳಿದೆಲ್ಲವೂ ಮಿಥ್ಯ?

ರಮಾನಂದ ಶರ್ಮ ಯಾವುದೋ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಟೆಕ್ಕಿಯೊಬ್ಬರು ವೈದ್ಯರ ಬಳಿ ಹೋಗಿದ್ದರಂತೆ. ವೈದ್ಯರು ಅವರನ್ನು ಸ್ಥೂಲವಾಗಿ ಪರೀಕ್ಷಿಸಿ, ಮೂರು…

1 hour ago

ಕೆಎಸ್‌ಐಸಿ: ೧೫ ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಅಂತ್ಯ

ತಿ.ನರಸೀಪುರ: ಪಟ್ಟಣದ ಕೆಎಸ್‌ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಽಸಿ ಕಳೆದ ೧೫ ದಿನಗಳಿಂದ ವಿವಿಧ ಸಂಘಟನೆಗಳವರು ನಡೆಸುತ್ತಿದ್ದ ಪ್ರತಿಭಟನೆ…

1 hour ago

28 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ನವೀನ್ ಡಿಸೋಜ ಕೊಡಗು ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ; ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ೬,೧೮೩ ವಿದ್ಯಾರ್ಥಿಗಳು ಮಡಿಕೇರಿ: ಮಾ.೧೮ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗ…

1 hour ago

ರಾಗಿ ಖರೀದಿ ಕೇಂದ್ರದಲ್ಲಿ ಹೆಚ್ಚುತ್ತಿರುವ ಅಕ್ರಮ: ಆರೋಪ

ನವೀನ್ ಕುಮಾರ್ ಕ್ವಿಂಟಾಲ್ ರಾಗಿಗೆ ೪ ಕೆಜಿ ಕಳೆಯುತ್ತಿರುವುದರಿಂದ ನಷ್ಟ ಎಂಬುದು ರೈತರ ಅಳಲು ಪಿರಿಯಾಪಟ್ಟಣ: ರಾಗಿ ಖರೀದಿ ಕೇಂದ್ರಗಳಲ್ಲಿ…

1 hour ago

ಇರಾನ್ ಮಹಿಳಾ ಫುಟ್ಬಾಲ್ ತಂಡಕ್ಕೆ ಹೆಚ್ಚುತ್ತಿರುವ ಭಯ ; ಆಸ್ಟ್ರೇಲಿಯಾದಲ್ಲಿ ಆಶ್ರಯಕ್ಕೆ ಹೆಚ್ಚುತ್ತಿರುವ ಕರೆ!

ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ) :  ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಏಷ್ಯಾ ಮಹಿಳಾ ಫುಟ್ಬಾಲ್ ಕಪ್ 2026ನಲ್ಲಿ ಭಾಗವಹಿಸಿದ್ದ ಇರಾನ್ ರಾಷ್ಟ್ರೀಯ ಮಹಿಳಾ…

11 hours ago

ಜಾಗತಿಕ ತೈಲ ಬೆಲೆಗಳಲ್ಲಿ ಭಾರೀ ಏರಿಕೆ ; ಬ್ಯಾರೆಲ್‌ಗೆ 120 ಡಾಲರ್ ಗಡಿ ದಾಟಿದ ತೈಲ ಬೆಲೆ

ಹೊಸದಿಲ್ಲಿ : ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್ ದಾಳಿಗಳು ಮತ್ತು ಇರಾನ್‌ಗೆ ಹೊಸ ಸುಪ್ರೀಂ ಲೀಡರ್ ನೇಮಕದ ನಂತರ ಮಧ್ಯಪ್ರಾಚ್ಯದಲ್ಲಿ ತೀವ್ರ…

11 hours ago