Andolana originals

ಕೆಮ್ಮಣ್ಣು ಮಟ್ಟಿಯಲ್ಲಿ ತೊಡೆ ತಟ್ಟಲು ಪೈಲ್ವಾನರು ಸಜ್ಜು

ವಿಜೃಂಭಿಸಲಿದೆ ನಾಡಿನ ಕಲೆ ಕುಸ್ತಿ

ಸೆ.೨೨ರಿಂದ ಒಂದು ವಾರ ಆಯೋಜನೆ 

ದಸರಾ ಮಹೋತ್ಸವದಲ್ಲಿ ರೋಚಕ ಅನುಭವ ನೀಡಲಿದೆ ಕುಸ್ತಿ ಪಂದ್ಯ 

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ನಾಡಿನ ‘ಕುಸ್ತಿ’ ಪರಂಪರೆ ವಿಜೃಂಭಿಸಲಿದೆ. ದಸರಾ ಅಂಗವಾಗಿ ಮೈಸೂರಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣ ದಲ್ಲಿ ಸೆ.೨೨ರಿಂದ ಒಂದು ವಾರ ಕಾಲ ಕುಸ್ತಿ ಪ್ರೇಮಿಗಳಿಗೆ ‘ನಾಡಕುಸ್ತಿ’, ‘ರಾಜ್ಯಮಟ್ಟದ ಪಾಯಿಂಟ್ ಕುಸ್ತಿ’ ಹಾಗೂ ‘ಪಂಜಕುಸ್ತಿ’ ಪಂದ್ಯಾವಳಿಗಳು ರೋಚಕ ಅನುಭವ ನೀಡಲಿವೆ.

‘ದಸರಾ ಕಿಶೋರ’, ‘ದಸರಾ ಕುಮಾರ’, ‘ದಸರಾ ಕಂಠೀರವ’ ಹಾಗೂ ‘ದಸರಾ ಕೇಸರಿ’ ಪ್ರಶಸ್ತಿಗಳ ಕುಸ್ತಿಯೂ ಇರಲಿವೆ. ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿ ವಿಜೇತರಿಗೆ ‘ದಸರಾ ಕುಮಾರ’, ರಾಜ್ಯ ಮಟ್ಟದ ವಿವಿಧ ವಿಭಾಗಗಳ ಕುಸ್ತಿ ಪಂದ್ಯಗಳ ವಿಜೇತರಿಗೆ ಪ್ರತಿಷ್ಠಿತ ‘ದಸರಾ ಕಂಠೀರವ’,‘ದಸರಾ ಕೇಸರಿ’ ಪ್ರಶಸ್ತಿ ನೀಡಲು ಚರ್ಚಿಸಲಾಗುತ್ತಿದೆ.

ನಾಡಕುಸ್ತಿಯ ಜತೆಗೆ ಮೈಸೂರು ವಿಭಾಗ ಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ, ರಾಜ್ಯಮಟ್ಟದ ಪುರುಷರ ಗ್ರೀಕೋ ರೋಮನ್ ಕುಸ್ತಿ, ರಾಜ್ಯಮಟ್ಟದ ಮಹಿಳೆಯರ ಕುಸ್ತಿ, ರಾಜ್ಯಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ ಪಂದ್ಯಗಳನ್ನೂ ಆಯೋಜಿಸಲು ಕುಸ್ತಿ ಉಪ ಸಮಿತಿ ಹಾಗೂ ಕ್ರೀಡಾ ಉಪ ಸಮಿತಿ ಮುಂದಾಗಿವೆ. ಈ ಬಾರಿ ವಿಶೇಷವಾಗಿ ದಸರಾ ಕಿಶೋರ ಹಾಗೂ ದಸರಾ ಕಿಶೋರಿ ಪ್ರಶಸ್ತಿಗಳ ಕುಸ್ತಿಗಳನ್ನು ನಡೆಸಲಾಗುತ್ತಿದೆ.

ಮಹಿಳಾ ಕುಸ್ತಿಪಟುಗಳಿಗೆ ದಸರಾ ಕಿಶೋರಿ ಸ್ಪರ್ಧೆ, ೫೭ ಕೆ.ಜಿ.ಯಿಂದ ೬೫ ಕೆ.ಜಿ.ವಿಭಾಗದಲ್ಲಿ ದಸರಾ ಕಿಶೋರ ಪ್ರಶಸ್ತಿ ಕುಸ್ತಿ ನಡೆಯಲಿದೆ. ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿ ವಿಭಾಗದಲ್ಲಿ ‘ಮೈಸೂರು ದಸರಾ ಕುಮಾರ’(೭೪ ಕೆ.ಜಿ.ಮೇಲ್ಪಟ್ಟ) ಪ್ರಶಸ್ತಿ ನೀಡಲಾಗುತ್ತದೆ. ಉಳಿದಂತೆ ‘ದಸರಾ ಕಂಠೀರವ’(೮೬ ಕೆ.ಜಿ.ಮೇಲ್ಪಟ್ಟ ), ‘ದಸರಾ ಕೇಸರಿ’(೭೪ರಿಂದ ೮೬ ಕೆ.ಜಿ.ವರೆಗೆ) ಕುಸ್ತಿಗಳು ನಡೆಯಲಿವೆ.

ನಾಡ ಕುಸ್ತಿ ಜತೆಗೆ ಮೈಸೂರು ವಿಭಾಗ ಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ, ರಾಜ್ಯಮಟ್ಟದ ಮಹಿಳೆಯರ ಕುಸ್ತಿ, ರಾಜ್ಯಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿಗಳು ನಡೆಯಲಿವೆ. ದಸರಾ ಕಂಠೀರವ, ದಸರಾ ಕೇಸರಿ, ಮೈಸೂರು ದಸರಾ ಕುಮಾರ್, ದಸರಾ ಕಿಶೋರಿ ಮತ್ತು ದಸರಾ ಕಿಶೋರ್ ಪ್ರಶಸ್ತಿಗಳಿಗೆ ಕ್ರಮವಾಗಿ ೧.೨೫ ಕೆಜಿ, ೧ ಕೆ.ಜಿ., ೦.೭೫ ಕೆ.ಜಿ., ೦.೫೦ ಕೆ.ಜಿ. ಮತ್ತು ೦.೫೦ ಕೆ.ಜಿ. ಬೆಳ್ಳಿ ಗದೆಗಳನ್ನು ನೀಡಲು ಚಿಂತಿಸಲಾಗಿದೆ. ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ನಾಡಕುಸ್ತಿ ಪರಂಪರೆ ವಿಜೃಂಭಿಸಲಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದಸರಾ ಕುಸ್ತಿ ಅಖಾಡದಲ್ಲಿ ಪಟ್ಟು ಹಾಕಲು ಹಾತೊರೆಯುತ್ತಾರೆ. ತಮಗೂ ಕುಸ್ತಿ ಮಾಡಲು ಅವಕಾಶ ಸಿಕ್ಕರೆ ಸಾಕೆಂದು ನೂರಾರು ಸ್ಥಳೀಯ ಪೈಲ್ವಾನರು ಚಡಪಡಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ನಾಡಕುಸ್ತಿ, ದೊಡ್ಡಕುಸ್ತಿ, ಮಾರ್ಫಿಟ್ ಕುಸ್ತಿಯ ಗಮ್ಮತ್ತು ಸವಿಯಲು ಕುಸ್ತಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಹಾಗಾಗಿ ನಿತ್ಯ ೩೦ಕ್ಕೂ ಹೆಚ್ಚಿನ ನಾಡಕುಸ್ತಿ ಹಾಗೂ ೪ ರಿಂದ ೫ ಮಾರ್ಫಿಟ್ ಕುಸ್ತಿಗಳನ್ನು ಆಯೋಜಿಸಲು ಚಿಂತಿಸಲಾಗಿದೆ. ಮಾರ್ಫಿಟ್ ಕುಸ್ತಿಗೆ ಉತ್ತರಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್ ಸೇರಿದಂತೆ ದೇಶದ ನಾನಾ ಭಾಗಗಳ ಸ್ಟಾರ್ ಕುಸ್ತಿಪಟುಗಳನ್ನು ಕರೆತರಲು ಚರ್ಚಿಸಲಾಗುತ್ತಿದೆ. ಒಟ್ಟಿನಲ್ಲಿ ದಸರಾ ನಾಡ ಕುಸ್ತಿಯಲ್ಲಿ ನೂರಾರು ಪೈಲ್ವಾನರು ಕೆಮ್ಮಣ್ಣು ಮಟ್ಟಿಯಲ್ಲಿ ತೊಡೆ ತಟ್ಟಲು ಕಾತರರಾಗಿದ್ದಾರೆ.

ಕುಸ್ತಿ ಕಲೆಗೆ ಮತ್ತೆ ಜೀವಕಳೆ: ವಿಶ್ವವಿಖ್ಯಾತ ಮೈಸೂರು ದಸರಾಗೂ ಕುಸ್ತಿಗೂ ಅವಿನಾಭಾವ ಸಂಬಂಧ. ದಸರಾ ಬಂತೆಂದರೆ ಕುಸ್ತಿಪಟುಗಳಿಗೆ ಸಂಭ್ರಮ. ದೇಶದ ಮೂಲೆ ಮೂಲೆಗಳಿಂದ ಸಾಂಸ್ಕೃತಿಕ ನಗರಿಗೆ ಆಗಮಿಸುವ ಪೈಲ್ವಾನರ ನಡುವೆ ಅಖಾಡದಲ್ಲಿ ನಡೆಯುವ ಹಣಾಹಣಿ ರೋಚಕ ಅನುಭವ ನೀಡುತ್ತದೆ. ಪ್ರತಿ ದಿನ ಸಂಜೆ ೪ ಗಂಟೆಗೆ ನಾಡಕುಸ್ತಿ ಆರಂಭವಾಗಲಿದೆ. ವಿಜೇತರಿಗೆ ಮೇಯರ್ ಕಪ್, ಸಾಹುಕಾರ್ ಚನ್ನಯ್ಯ ಕಪ್, ಮೈಸೂರು ಒಡೆಯರ್ ಕಪ್ ಪ್ರಶಸ್ತಿಯೊಂದಿಗೆ ನಗದು ಬಹುಮಾನ ನೀಡಲು ಚಿಂತಿಸಲಾಗಿದೆ.

” ಮೈಸೂರಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಸೆ.೨೨ರಿಂದ ದಸರಾ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ‘ದಸರಾ ಕಿಶೋರಿ’ ಜತೆಗೆ ‘ದಸರಾ ಕಿಶೋರ’, ‘ದಸರಾ ಕುಮಾರ’, ‘ದಸರಾ ಕಂಠೀರವ’ ಹಾಗೂ ‘ದಸರಾ ಕೇಸರಿ’ ಪ್ರಶಸ್ತಿಗಳ ಕುಸ್ತಿಗಳು ನಡೆಯಲಿದೆ. ಶೀಘ್ರದಲ್ಲಿಯೇ ನಾಡಕುಸ್ತಿ ಸಂಬಂಧ ಜೋಡಿ ಕಟ್ಟಲಾಗುತ್ತದೆ.”

ಎಲ್.ನಾಗೇಶ್, ಉಪ ವಿಶೇಷಾಧಿಕಾರಿ, ದಸರಾ ಕುಸ್ತಿ ಸಮಿತಿ

” ಮಹಿಳಾ ಕುಸ್ತಿಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಬಾರಿಯೂ ‘ದಸರಾ ಕಿಶೋರಿ’ ಪ್ರಶಸ್ತಿ ನೀಡಲು ದಸರಾ ಕುಸ್ತಿ ಉಪ ಸಮಿತಿ ಚಿಂತಿಸಿದೆ. ರಾಜ್ಯಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಗೆಲ್ಲುವವರಿಗೆ ಬೆಳ್ಳಿ ಗದೆ, ನಗದು ಬಹುಮಾನ, ಮೈಸೂರು ಪೇಟಾ ಮತ್ತು ಪ್ರಶಸ್ತಿ ಪತ್ರ ನೀಡಲು ದಸರಾ ಕುಸ್ತಿ ಉಪ ಸಮಿತಿ ಚಿಂತಿಸಿದೆ”

ಆಂದೋಲನ ಡೆಸ್ಕ್

Recent Posts

ಕಾರ್ಮಿಕರ ಮೇಲೆ ಕಾಡಾನೆ ದಾಳಿ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…

41 mins ago

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೃತ 3 ಕುಟುಂಬಗಳಿಗೆ ಶಾಸಕ ಎಂ.ಆರ್. ಮಂಜುನಾಥ್ 15 ಲಕ್ಷ ಪರಿಹಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…

49 mins ago

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

2 hours ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

5 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

5 hours ago

ಅಸಮಾಧಾನದ ಬೇಗೆ: ಸಿಎಂ ಡಿಕೆಶಿಗೆ ಹೈಕಮಾಂಡ್ ‘ಎಸಿ’

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ರಾಜ್ಯ ಕಾಂಗ್ರೆಸ್‌ನಲ್ಲಿ ಪರ್ಯಾಯ ಶಕ್ತಿ ಕೇಂದ್ರ ತಲೆ ಎತ್ತುತ್ತದೆಯೇ? ಇಂತಹದೊಂದು ಪ್ರಶ್ನೆಗೆ ತಕ್ಷಣ ಉತ್ತರ…

5 hours ago