Andolana originals

ಹಿಮಾಲಯಕ್ಕಿಂತಲೂ ನಂಜನಗೂಡಲ್ಲೇ ಬಿಸಿ ನೀರು ತುಟ್ಟಿ!

ಎಸ್.ಎಸ್.ಭಟ್

ಕಪಿಲಾ ತೀರದ ಸ್ನಾನಘಟ್ಟದಲ್ಲಿ ಬಕೆಟ್ ನೀರಿಗೆ ೫೦-೧೦೦ ರೂ. ಸುಲಿಗೆ ಎಂದು ಭಕ್ತಾದಿಗಳ ಆರೋಪ

ನಂಜನಗೂಡು: ಹಿಮಾಲಯದಲ್ಲಿ ಪ್ರತಿ ಬಕೆಟ್ ಬಿಸಿ ನೀರಿಗೆ ೫ ರೂ. ಅಥವಾ ೧೦ ರೂ. ಆದರೆ ಕಪಿಲಾ ತೀರದ ನಂಜನಗೂಡಿನಲ್ಲಿ ೫೦ ರೂ.ನಿಂದ ೧೦೦ ರೂ.ಗಳಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಶ್ರೀಕಂಠೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಬೆಳಗಿನಜಾವ ಸೇರಿದಂತೆ ಚಳಿಯಲ್ಲಿ ತೀರ್ಥಸ್ನಾನ ಮಾಡುವುದು ಸಂಪ್ರದಾಯ. ಅದಕ್ಕಾಗಿಯೇ ಸ್ನಾನಘಟ್ಟದಲ್ಲಿ ಶೌಚಾಲಯ, ಸ್ನಾನಗೃಹ, ಬಟ್ಟೆ ಬದಲಿಸುವ ಕೊಠಡಿಗಳನ್ನು ನಿರ್ಮಿಸಿರುವ ದೇವಾಲಯ, ಕೆಲ ವರ್ಷಗಳ ಹಿಂದಿ ಭಕ್ತರ ಬಿಸಿ ನೀರಿನ ಜಳಕಕ್ಕಾಗಿ ೨ ಬಾಯ್ಲರ್ಗಳನ್ನು ಸ್ಥಾಪಿಸಿ ಸ್ನಾನ ಮಾಡುವವರಿಗೆ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಿ, ದೇವಾಲಯದ ಖಾಯಂ ನೌಕರರಿಗೆ ಇದರ ಜವಾಬ್ದಾರಿ ನೀಡಲಾಯಿತು.

ಪ್ರಾರಂಭದಲ್ಲಿ ಒಂದು ಬಕೆಟ್‌ಗೆ ೫, ೧೦ ರೂ. ನೀಡಬೇಕಾಗಿತ್ತು. ಇದು ಗೊತ್ತಾದ ನಂತರ ಬಿಸಿ ನೀರು ಉಚಿತ ಎಂದು ಘೋಷಿಸಲಾಯಿತು. ಆದರೆ ಕ್ರಮೇಣ ಬಿಸಿ ನೀರು ದೇವಾಲಯದ ಪಾಲಿಗೆ ಉಚಿತವಾಗಿ, ಭಕ್ತರ ಜೇಬಿಗೆ ಕನ್ನವಾಗಿ ಪರಿವರ್ತನೆಯಾಯಿತು. ಒಂದು ಬಕೆಟ್ ಬಿಸಿ ನೀರು ಕೊನೆಗೆ ಸದ್ದಿಲ್ಲದೆ ೫೦ ರೂ.ನಿಂದ ೧೦೦ ರೂ. ಗೆ ಏರಿದ್ದು ಭಕ್ತರ ಪಾಲಿಗೆ ಹೊರೆಯಾಗಿದೆ.

ಹಿಮಾಲಯದ ಯಾವುದೇ ಸ್ಥಳಕ್ಕೇ ಹೋದರೂ ಪ್ರತಿ ಬಕೆಟ್ ಬಿಸಿ ನೀರಿಗೆ ೫ ರೂ.ನಿಂದ ೧೦ ರೂ. ಇದೆ. ಈಗ ೨೦ ರೂ.ಗೆ ಏರಿಕೆಯಾಗಿದೆ ಎಂದು ೨೫ಕ್ಕೂ ಹೆಚ್ಚು ಬಾರಿ ಚಾರ್ ಧಾಮ್ ಹಿಮಾಲಯದ ಯಾತ್ರೆ ಮಾಡಿ ಬಂದಿರುವ ನಂಜನಗೂಡು ಶಾಸ್ತ್ರೀ (ಸುಬ್ರಹ್ಮಣ್ಯ ಶಾಸ್ತ್ರೀ) ಹೇಳಿದರು.

” ಕಪಿಲಾ ಸ್ನಾನಘಟ್ಟದ ಶೌಚಾಲಯ ಸ್ನಾನದ ಬಿಸಿ ನೀರು, ಬಟ್ಟೆ ಬದಲಿಸುವ ವ್ಯವಸ್ಥೆ ಎಲ್ಲವೂ ಉಚಿತವಾಗಿದ್ದು, ಬಿಸಿ ನೀರಿಗೆ ಹಣ ವಸೂಲಿ ಮಾಡುವುದು ಗಮನಕ್ಕೆ ಬಂದ ತಕ್ಷಣ ಅದಕ್ಕೆ ತಡೆ ಹಾಕಲಾಗಿದೆ. ದೇವಾಲಯದಲ್ಲಿ ನಿತ್ಯ ಧ್ವನಿವರ್ಧಕದ ಪ್ರಕಟಣೆಯಲ್ಲಿ ಈ ಬಗ್ಗೆ ಪ್ರಚಾರ ಮಾಡುವಂತೆ ಇಂದಿನಿಂದಲೇ ಆದೇಶಿಸಲಾಗಿದೆ. ಅಲ್ಲಿ ಈ ಉಚಿತ ಸೌಲಭ್ಯದ ಕುರಿತಂತೆ ಫಲಕ ಅಳವಡಿಸಲು ಕೂಡ ತೀರ್ಮಾನಿಸಲಾಗಿದೆ. ಅಲ್ಲಿನ ಬಿಸಿ ನೀರಿಗೆ, ಶೌಚಾಲಯಕ್ಕೆ ಹಣ ಕೇಳಿದರೆ ನೇರವಾಗಿ ದೇವಾಲಯದ ಕಾರ್ಯಾಲಯಕ್ಕೆ ಬಂದು ತಿಳಿಸಬೇಕು.”

-ಸಿ.ಜಿ.ಕೃಷ್ಣ, ಇಒ, ಶ್ರೀಕಂಠೇಶ್ವರ ದೇವಾಲಯ

” ಕಪಿಲಾ ನದಿ ತೀರದಲ್ಲಿ ಬಿಸಿ ನೀರಿನ ದರ ಕಂಡು ನಮಗೆ ಆಘಾತವಾಯಿತು. ಪ್ರಶ್ನೆ ಮಾಡಲು ಹೋದರೆಜಗಳವಾಗುತ್ತದೆ. ನಾವು ಬಂದಿದ್ದು ದೇವಾಲಯಕ್ಕೆ ಎಂದು ಹಣ ನೀಡಿದೆವು. ಹಿಂದೆ ಕಾರ್ತಿಕ ಮಾಸದಲ್ಲಿ ಬಂದಾಗಲೂ ಬೇರೆಯವರಿದ್ದರು. ಆಗ ಒಂದು ಬಕೆಟ್‌ಗೆ ೧೦೦ ರೂ. ನೀಡಿದ್ದೆ. ಈ ಬಾರಿ ಪ್ರತಿ ಬಕೆಟ್‌ಗೆ ೫೦ ರೂ. ನೀಡಿ ಮಕ್ಕಳ ಸ್ನಾನ ಮಾಡಿಸಿ ಶ್ರೀಕಂಠೇಶ್ವರನ ದರ್ಶನಕ್ಕೆ ಹೋದೆವು.”

-ಜಗದಾಂಬಿಕೆ, ಶಾಂತಿ ನಗರ, ಬೆಂಗಳೂರು

 

 

ಆಂದೋಲನ ಡೆಸ್ಕ್

Recent Posts

ಡಿ.ಕೆ.ಶಿವಕುಮಾರ್‌ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್‌: ಬುಧವಾರ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಬುಧವಾರ ರಾಜ್ಯದ ನೂತನ ಸಿಎಂ ಆಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ…

55 mins ago

ಓದುಗರ ಪತ್ರ: ಕ್ರಿಕೆಟ್ ಕ್ರೀಡಾಂಗಣಕ್ಕೆ ಡಾ.ಅಂಬೇಡ್ಕರ್ ಹೆಸರಿಡಿ

ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ ನಿರ್ಮಾಣಗೊಳ್ಳಲಿರುವ ದೇಶದ ಎರಡನೇ ಅತಿದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ರಾಜ್ಯ ಸರ್ಕಾರದಿಂದ ಶಂಕುಸ್ಥಾಪನೆ ನೆರವೇರಿಸಲಾಗಿದೆ.…

2 hours ago

ಓದುಗರ ಪತ್ರ: ನಾಳಿನ ನೆರಳಿಗೆ ಇಂದೇ ಗಿಡ ನೆಡೋಣ

ಈ ಬಾರಿಯ ಬೇಸಿಗೆಯ ಧಗೆ ಮಧ್ಯಾಹ್ನದ ವೇಳೆ ಯಾರೂ ಹೊರಗಡೆ ಓಡಾಡದಂತೆ ಮಾಡಿದೆ. ವಾಹನ ಸವಾರರ ಸ್ಥಿತಿಯಂತೂ ಹೇಳತೀರದು. ರಸ್ತೆ…

2 hours ago

ಓದುಗರ ಪತ್ರ: ಸಿದ್ದರಾಮಯ್ಯನವರ ಆಡಳಿತ ಮಾದರಿ

ರಾಜ್ಯದಲ್ಲಿ ಅತ್ಯಂತ ಪ್ರಬಲ ನಾಯಕರಲ್ಲಿ ಸಿದ್ದರಾಮಯ್ಯನವರೂ ಕೂಡ ಒಬ್ಬರು. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದರ ಮೂಲಕ ಅವರ ಆಡಳಿತ…

2 hours ago

ಸಿದ್ದು ರಾಜೀನಾಮೆ; ಒಂದು ಯುಗದ ಅಂತ್ಯ!

ಕೆ.ಪಿ.ನಾಗರಾಜ್, ಮೈಸೂರು ಕರ್ನಾಟಕ ರಾಜಕೀಯ ವ್ಯಾಕರಣವನ್ನೇ ಬದಲಾಯಿಸಿದ ಸಿದ್ದರಾಮಯ್ಯ ಮೈಸೂರು ರಾಜಕಾರಣ ಅಂದರೆ ಒಮ್ಮೆ ಒಡೆಯರ್ ಯುಗ, ನಂತರ ದೇವರಾಜ…

2 hours ago

ಗಾಂಧಿಯ ಸರಳತೆಯತ್ತ ನಡೆಯುತ್ತಿರುವ ಯುವಜನತೆ

ಮಹಾತ್ಮ ಗಾಂಧೀಜಿ ಅವರ ಆತ್ಮಕತೆಗೆ ನೂರು ವರ್ಷ ಸಂದಿರುವುದು ಸಂತಸದ ವಿಷಯ. ಇವತ್ತು ಗಾಂಧಿಜಿ ಅವರ ವಿಚಾರಕ್ಕೆ ಏನಾಗುತ್ತಿದೆ? ಆಚಾರಕ್ಕೆ…

4 hours ago