Andolana originals

ಹಿಮಾಲಯಕ್ಕಿಂತಲೂ ನಂಜನಗೂಡಲ್ಲೇ ಬಿಸಿ ನೀರು ತುಟ್ಟಿ!

ಎಸ್.ಎಸ್.ಭಟ್

ಕಪಿಲಾ ತೀರದ ಸ್ನಾನಘಟ್ಟದಲ್ಲಿ ಬಕೆಟ್ ನೀರಿಗೆ ೫೦-೧೦೦ ರೂ. ಸುಲಿಗೆ ಎಂದು ಭಕ್ತಾದಿಗಳ ಆರೋಪ

ನಂಜನಗೂಡು: ಹಿಮಾಲಯದಲ್ಲಿ ಪ್ರತಿ ಬಕೆಟ್ ಬಿಸಿ ನೀರಿಗೆ ೫ ರೂ. ಅಥವಾ ೧೦ ರೂ. ಆದರೆ ಕಪಿಲಾ ತೀರದ ನಂಜನಗೂಡಿನಲ್ಲಿ ೫೦ ರೂ.ನಿಂದ ೧೦೦ ರೂ.ಗಳಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಶ್ರೀಕಂಠೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಬೆಳಗಿನಜಾವ ಸೇರಿದಂತೆ ಚಳಿಯಲ್ಲಿ ತೀರ್ಥಸ್ನಾನ ಮಾಡುವುದು ಸಂಪ್ರದಾಯ. ಅದಕ್ಕಾಗಿಯೇ ಸ್ನಾನಘಟ್ಟದಲ್ಲಿ ಶೌಚಾಲಯ, ಸ್ನಾನಗೃಹ, ಬಟ್ಟೆ ಬದಲಿಸುವ ಕೊಠಡಿಗಳನ್ನು ನಿರ್ಮಿಸಿರುವ ದೇವಾಲಯ, ಕೆಲ ವರ್ಷಗಳ ಹಿಂದಿ ಭಕ್ತರ ಬಿಸಿ ನೀರಿನ ಜಳಕಕ್ಕಾಗಿ ೨ ಬಾಯ್ಲರ್ಗಳನ್ನು ಸ್ಥಾಪಿಸಿ ಸ್ನಾನ ಮಾಡುವವರಿಗೆ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಿ, ದೇವಾಲಯದ ಖಾಯಂ ನೌಕರರಿಗೆ ಇದರ ಜವಾಬ್ದಾರಿ ನೀಡಲಾಯಿತು.

ಪ್ರಾರಂಭದಲ್ಲಿ ಒಂದು ಬಕೆಟ್‌ಗೆ ೫, ೧೦ ರೂ. ನೀಡಬೇಕಾಗಿತ್ತು. ಇದು ಗೊತ್ತಾದ ನಂತರ ಬಿಸಿ ನೀರು ಉಚಿತ ಎಂದು ಘೋಷಿಸಲಾಯಿತು. ಆದರೆ ಕ್ರಮೇಣ ಬಿಸಿ ನೀರು ದೇವಾಲಯದ ಪಾಲಿಗೆ ಉಚಿತವಾಗಿ, ಭಕ್ತರ ಜೇಬಿಗೆ ಕನ್ನವಾಗಿ ಪರಿವರ್ತನೆಯಾಯಿತು. ಒಂದು ಬಕೆಟ್ ಬಿಸಿ ನೀರು ಕೊನೆಗೆ ಸದ್ದಿಲ್ಲದೆ ೫೦ ರೂ.ನಿಂದ ೧೦೦ ರೂ. ಗೆ ಏರಿದ್ದು ಭಕ್ತರ ಪಾಲಿಗೆ ಹೊರೆಯಾಗಿದೆ.

ಹಿಮಾಲಯದ ಯಾವುದೇ ಸ್ಥಳಕ್ಕೇ ಹೋದರೂ ಪ್ರತಿ ಬಕೆಟ್ ಬಿಸಿ ನೀರಿಗೆ ೫ ರೂ.ನಿಂದ ೧೦ ರೂ. ಇದೆ. ಈಗ ೨೦ ರೂ.ಗೆ ಏರಿಕೆಯಾಗಿದೆ ಎಂದು ೨೫ಕ್ಕೂ ಹೆಚ್ಚು ಬಾರಿ ಚಾರ್ ಧಾಮ್ ಹಿಮಾಲಯದ ಯಾತ್ರೆ ಮಾಡಿ ಬಂದಿರುವ ನಂಜನಗೂಡು ಶಾಸ್ತ್ರೀ (ಸುಬ್ರಹ್ಮಣ್ಯ ಶಾಸ್ತ್ರೀ) ಹೇಳಿದರು.

” ಕಪಿಲಾ ಸ್ನಾನಘಟ್ಟದ ಶೌಚಾಲಯ ಸ್ನಾನದ ಬಿಸಿ ನೀರು, ಬಟ್ಟೆ ಬದಲಿಸುವ ವ್ಯವಸ್ಥೆ ಎಲ್ಲವೂ ಉಚಿತವಾಗಿದ್ದು, ಬಿಸಿ ನೀರಿಗೆ ಹಣ ವಸೂಲಿ ಮಾಡುವುದು ಗಮನಕ್ಕೆ ಬಂದ ತಕ್ಷಣ ಅದಕ್ಕೆ ತಡೆ ಹಾಕಲಾಗಿದೆ. ದೇವಾಲಯದಲ್ಲಿ ನಿತ್ಯ ಧ್ವನಿವರ್ಧಕದ ಪ್ರಕಟಣೆಯಲ್ಲಿ ಈ ಬಗ್ಗೆ ಪ್ರಚಾರ ಮಾಡುವಂತೆ ಇಂದಿನಿಂದಲೇ ಆದೇಶಿಸಲಾಗಿದೆ. ಅಲ್ಲಿ ಈ ಉಚಿತ ಸೌಲಭ್ಯದ ಕುರಿತಂತೆ ಫಲಕ ಅಳವಡಿಸಲು ಕೂಡ ತೀರ್ಮಾನಿಸಲಾಗಿದೆ. ಅಲ್ಲಿನ ಬಿಸಿ ನೀರಿಗೆ, ಶೌಚಾಲಯಕ್ಕೆ ಹಣ ಕೇಳಿದರೆ ನೇರವಾಗಿ ದೇವಾಲಯದ ಕಾರ್ಯಾಲಯಕ್ಕೆ ಬಂದು ತಿಳಿಸಬೇಕು.”

-ಸಿ.ಜಿ.ಕೃಷ್ಣ, ಇಒ, ಶ್ರೀಕಂಠೇಶ್ವರ ದೇವಾಲಯ

” ಕಪಿಲಾ ನದಿ ತೀರದಲ್ಲಿ ಬಿಸಿ ನೀರಿನ ದರ ಕಂಡು ನಮಗೆ ಆಘಾತವಾಯಿತು. ಪ್ರಶ್ನೆ ಮಾಡಲು ಹೋದರೆಜಗಳವಾಗುತ್ತದೆ. ನಾವು ಬಂದಿದ್ದು ದೇವಾಲಯಕ್ಕೆ ಎಂದು ಹಣ ನೀಡಿದೆವು. ಹಿಂದೆ ಕಾರ್ತಿಕ ಮಾಸದಲ್ಲಿ ಬಂದಾಗಲೂ ಬೇರೆಯವರಿದ್ದರು. ಆಗ ಒಂದು ಬಕೆಟ್‌ಗೆ ೧೦೦ ರೂ. ನೀಡಿದ್ದೆ. ಈ ಬಾರಿ ಪ್ರತಿ ಬಕೆಟ್‌ಗೆ ೫೦ ರೂ. ನೀಡಿ ಮಕ್ಕಳ ಸ್ನಾನ ಮಾಡಿಸಿ ಶ್ರೀಕಂಠೇಶ್ವರನ ದರ್ಶನಕ್ಕೆ ಹೋದೆವು.”

-ಜಗದಾಂಬಿಕೆ, ಶಾಂತಿ ನಗರ, ಬೆಂಗಳೂರು

 

 

ಆಂದೋಲನ ಡೆಸ್ಕ್

Recent Posts

ರಾಮನಗರ: ರೈಲ್ವೆ ಹಳಿ ಮೇಲೆ ಗ್ಯಾಸ್‌ ಸಿಲಿಂಡರ್‌, ಸ್ಟವ್‌ ಪತ್ತೆ

ರಾಮನಗರ: ರೈಲ್ವೆ ಹಳಿ ಮೇಲೆ ಗ್ಯಾಸ್‌ ಸಿಲಿಂಡರ್‌ ಪತ್ತೆಯಾಗಿ ಕೆಲಕಾಲ ಆತಂಕ ಸೃಷ್ಟಿಯಾಗಿರುವ ಘಟನೆ ಮದ್ದೂರು-ಚನ್ನಪಟ್ಟಣ ಮಾರ್ಗಮಧ್ಯೆಯ ಶೆಟ್ಟಿಹಳ್ಳಿ ರೈಲ್ವೆ…

1 hour ago

ತಮಿಳುನಾಡು ಚುನಾವಣೆ: ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ

ಚನ್ನೈ: ತಮಿಳುನಾಡಿನ ಜನರ ಕಲ್ಯಾಣಕ್ಕಾಗಿ, ಬಿಜೆಪಿ ಮಹಿಳಾ ಮನೆ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ., ವಾರ್ಷಿಕವಾಗಿ ಮೂರು ಉಚಿತ ಎಲ್‍ಪಿಜಿ…

2 hours ago

ಮೈಸೂರು: ವಿನೂತನ ರೀತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಬಾಬಾ ಸಾಹೇಬ್‌ ಡಾ.ಬಿ.ಆರ್.‌ಅಂಬೇಡ್ಕರ್‌ ಅವರು 135ನೇ ಜಯಂತಿಯನ್ನು ವಿನೂತನ ರೀತಿಯಲ್ಲಿ ಆಚರಣೆ ಮಾಡಲಾಯಿತು.…

3 hours ago

ನಾಳೆ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಮಂಡ್ಯ: ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ 100 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀಗುರು ಭೈರವೈಕ್ಯ ಮಂದಿರ ನಾಳೆ ಲೋಕಾರ್ಪಣೆಗೆ ಸಜ್ಜಾಗಿದೆ. ಪ್ರಧಾನಿ…

4 hours ago

ದೇಶದ ಹಲವು ರಾಜ್ಯಗಳಲ್ಲಿ ಒಂದು ವಾರ ಹೆಚ್ಚಲಿದೆ ತಾಪಮಾನ

ನವದೆಹಲಿ: ದೇಶಾದ್ಯಂತ ರಣ ಬಿಸಿಲ ಝಳ ಹೆಚ್ಚುತ್ತಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಂದು ವಾರಗಳ ಕಾಲ ತಾಪಮಾನ ಹೆಚ್ಚಾಗಲಿದೆ…

4 hours ago

ಗುರುವಾರ ಅಮೇರಿಕಾ-ಇರಾನ್‌ ಮಧ್ಯೆ 2ನೇ ಹಂತದ ಮಾತುಕತೆ

ಇಸ್ಲಾಮಾಬಾದ್:‌ ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇರಾನ್‌ ಮತ್ತು ಅಮೇರಿಕಾ ನಡುವೆ 2ನೇ ಸುತ್ತಿನ ಮಾತುಕತೆಗೆ…

4 hours ago